- Monday
- June 29th, 2026
ಕರ್ತವ್ಯಕ್ಕೆ ಅಡ್ಡಿಪಡಿಸಿ ಅರಣ್ಯ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಸರ್ಕಾರಿ ಸ್ವತ್ತನ್ನು ನಾಶಪಡಿಸಿ ಜೀವ ಬೆದರಿಕೆ ಒಡ್ಡಿದ್ದ ಆರೋಪದ ಆರೋಪಿಯನ್ನು ಸುಳ್ಯ ನ್ಯಾಯಾಲಯ ದೋಷಮುಕ್ತಗೊಳಿಸಿದೆ.ಪ್ರಕರಣದ ವಿವರ : ದಿನಾಂಕ 07/09/2016 ರಂದು ಅಲೆಟ್ಟಿ ಗ್ರಾಮದ ನಾರ್ಕೋಡು ಎಂಬಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆರೋಪಿ ಆಶಿಶ್ ಕುಮಾರ್ ಚಾಲಕನಿಗೆ ಖಾಲಿ ಟಿಪ್ಪರ್ ಲಾರಿಯನ್ನು ನಿಲ್ಲಿಸಲು ಸೂಚಿಸಿದ್ದು, ಆರೋಪಿ...
ಹರಿಹರ ಪಲ್ಲತ್ತಡ್ಕ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಜೂ.04 ರಂದು ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಯಿತು.ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರುಗಳಾದ ಕೃಪಾ.ಪಿ.ಎಸ್, ಮೇದಪ್ಪ.ಎ, ವೆಂಕಟೇಶ್ ನಾಯಕ್, ವನಿತಾ.ಜಿ, ವೀಣಾ.ಎ, ಜಯಶ್ರೀ, ಸೌಮ್ಯ ಕೋನಡ್ಕ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ
ಭಾರತೀಯ ಕಿಶಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್ ಹಲ್ಲೆ ನಡೆಸಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಸುಳ್ಯದ ರೈತ ಮುಖಂಡರು ಜೂ.7ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಾಜಾಕ್ಷ ಭೂತಕಲ್ಲು ಮಾತನಾಡಿ, ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್ ರವರು ಮೇ. 30 ರಂದು ಮಾಧ್ಯಮದೊಂದಿಗೆ ಬೆಂಗಳೂರು ಗಾಂಧಿಭವನದಲ್ಲಿ ಸಮಾನ ಮನಸ್ಕರ...
ಸಂಪಾಜೆ ವಲಯದ, ದಬ್ಬಡ್ಕ ಉಪ ವಲಯದಲ್ಲಿ ಬೀಜ ಬಿತ್ತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಊರಿನ ನಾಗರಿಕರು ಪಾಲ್ಗೊಂಡು, ಅರಣ್ಯದ ಒಳಗಡೆ ವಿವಿಧ ಜಾತಿಯ ಬೀಜ ಗಳನ್ನು ಬಿತ್ತಲಾಯಿತು. ಈ ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿ ಮಧು ಸೂದನ್, ಉಪ ವಲಯ ಅರಣ್ಯ ಅಧಿಕಾರಿ ನಿಸಾರ್ ಮೊಹಮ್ಮದ್, ಅರಣ್ಯ ರಕ್ಷಕರಾದ ಕಾರ್ತಿಕ್. ಡಿ ಮತ್ತು ಚಂದ್ರಪ್ಪ,...
ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂನ್.06ರಂದು ಆಚರಿಸಲಾಯಿತು. ಪರಿಸರ ದಿನದ ಪ್ರಯುಕ್ತ ಪರಿಸರ ಸಂರಕ್ಷಣೆಯ ಸಲುವಾಗಿ ಗಿಡಗಳನ್ನು ನೆಡಲಾಯಿತು.
ನಮ್ಮ ತುಳುನಾಡಿನಲ್ಲಿ ತರವಾಡು ಮನೆಗೆ ಭಾರಿ ಮಹತ್ವವಿದೆ . ತರವಾಡು ಮನೆಯಿಲ್ಲದ ಕುಟುಂಬವಿರದು. ತರವಾಡು ಮನೆಯು ತನ್ನ ಕುಟುಂಬದ ಮನೆಗಳ ದೈವಗಳ ಕಾರ್ಯ ದೇವರ ಕಾರ್ಯಗಳ ಮುಂದುವರಿಕೆಗೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ತರವಾಡು ಮನೆಯ ಯಜಮಾನನು ತನ್ನದೆ ಆದ ಗೌರವವನ್ನು ಹೊಂದಿದ್ದು , ಕುಟುಂಬ ಸದಸ್ಯರನ್ನು ಪ್ರೀತಿ , ಸಹನೆ , ತಾಲ್ಮೆಯಿಂದ ಸಮರ್ಪಕವಾಗಿ ನಿಭಾಯಿಸುವ...
ರಾಜ್ಯದಲ್ಲೇ ಪ್ರಥಮ ಬಾರಿಗೆ ವಿಕಲಚೇತನರು ಸೇರಿ ಹುಟ್ಟು ಹಾಕಿದ ಸಹಕಾರಿ ಸಂಘ ಸುಳ್ಯದಲ್ಲಿ ಆರಂಭಗೊಂಡಿತ್ತು. ಕುರುಂಜಿಭಾಗ್ ಬಳಿ ಆರಂಭಗೊಂಡಿದ್ದ ಸಂಸ್ಥೆಯ ಪ್ರಧಾನ ಕಛೇರಿ ಜೂ 6 ರಂದು ಸ್ಥಳಾಂತರಗೊಂಡು ಜ್ಯೋತಿ ಸರ್ಕಲ್ ಬಳಿಯ ಕರಾವಳಿ ಟವರ್ ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಭರತ್ ಬಲ್ನಾಡ್ ಕಟ್ಟೆಮನೆ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರ ಸಂಚಾಲಕ ಹಾಗೂ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿರುವ ಅಶೋಕ್ ಎಡಮಲೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಹುದ್ದೆಗಳಿಗೆ ಹಾಗು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆಯನ್ನು ರಾಜ್ಯ ಸಂಚಾಲಕರಿಗೆ ಸಲ್ಲಿಸಿದ್ದಾರೆ ಆದರೆ ರಾಜಿನಾಮೆ ಅಂಗೀಕಾರ ಆಗಿಲ್ಲ ಎಂದು ತಿಳಿದುಬಂದಿದೆ. ರಾಜೀನಾಮೆ ನೀಡಿರುವುದು...
ಗೋದಾಮು ಕಟ್ಟಡಕ್ಕೆ ಬೆಂಕಿ ತಗುಲಿದ ಪರಿಣಾಮ ವೃದ್ಧ ಕೃಷಿಕರೋರ್ವರು ಸಜೀವ ದಹನವಾದ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನೂಜಾಲ ನಿವಾಸಿ ಮಹಾಲಿಂಗೇಶ್ವರ ಭಟ್ ಮೃತ ದುರ್ದೈವಿ. ಅಡಿಕೆ ಹಾಗೂ ಕೃಷಿ ಉತ್ಪನ್ನಗಳ ದಾಸ್ತಾನಿರಿಸಿದ್ದ ಕಟ್ಟಡಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎನ್ನಲಾಗುತ್ತಿದ್ದು, ವೃದ್ಧನ ಸಂಪೂರ್ಣ ಸುಟ್ಟ ಮೃತದೇಹ ಅವುಗಳೆಡೆ...
Loading posts...
All posts loaded
No more posts
