ಜಾಲ್ಸೂರು ಗೂಡಂಗಡಿಯಿಂದ ಕಳವು

ಜಾಲ್ಸೂರಿನ ಗೋಳಿಕಟ್ಟೆ ನಾರಾಯಣ ಭಟ್ ಅವರ ಅಂಗಡಿಗೆ ನುಗ್ಗಿದ ಕಳ್ಳರು ದಿನಸಿ ಸಾಮಾಗ್ರಿಗಳನ್ನು ಕಳವು ಗೈದ ಘಟನೆ ಜು.20ರಂದು ವರದಿಯಾಗಿದೆ ಜಾಲ್ಸೂರು ಹಾಗೂ ಕನಕಮಜಲು ಪರಿಸರದಲ್ಲಿ ಹಲವು ಕಳವು,ದರೋಡೆ ಪ್ರಕರಣಗಳು ವರದಿಯಾಗಿದ್ದು ಪೊಲೀಸರು ಇನ್ನಷ್ಟು ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ

ನಾಯಿ‌ ಅಡ್ಡ ಬಂದು ಸ್ಕೂಟಿಯಿಂದ ಬಿದ್ದ ಸಂಪಾಜೆ ಪಿಡಿಒ

ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಪಿಂಟೋ ಅವರ ಸ್ಕೂಟಿಗೆ ಐವರ್ನಾಡು ಸಮೀಪ ನಾಯಿ ಅಡ್ಡಬಂದ ಪರಿಣಾಮ ಆಯತಪ್ಪಿ ಬಿದ್ದು ಗಾಯಗೊಂಡ ಘಟನೆ ವರದಿಯಾಗಿದೆ‌.ಜುಲೈ 18ರ ಸಂಜೆ ಬೆಳ್ಳಾರೆಯ ಮನೆಗೆ ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
Ad Widget

ಜಾಲ್ಲೂರಿನ ಗೂಡಂಗಡಿಯಿಂದ ಬಿಸ್ಕೆಟ್ ಇನ್ನಿತರ ವಸ್ತುಗಳನ್ನು ಎಗರಿಸಿದ ಕಳ್ಳರು.

ಸುಳ್ಯ ತಾಲೂಕಿನ ನಾನಾ ಕಡೆಗಳಲ್ಲಿ ಕೆಲ ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಜು.20ರ ರಾತ್ರಿ ಗೂಡಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಅಂಗಡಿ ಸಾಮಾಗ್ರಿಗಳನ್ನು ಕಳವುಗೈದ ಘಟನೆ ವರದಿಯಾಗಿದೆ. ಜಾಲ್ಲೂರಿನ ಗೋಳಿಕಟ್ಟೆಯಲ್ಲಿನ ನಾರಾಯಣ ಭಟ್ ಎಂಬವರ ಗೂಡಂಗಡಿಗೆ ರಾತ್ರಿ ವೇಳೆ ನುಗ್ಗಿದ ಕಳ್ಳರು, ಅಂಗಡಿಯಲ್ಲಿದ್ದ ಜ್ಯೂಸ್ ಬಾಟ್ಲಿಗಳು, ಬಿಸ್ಕೆಟ್ ಪ್ಯಾಕೇಟ್, ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಕಳವುಗೈದಿದ್ದಾರೆ ಎಂದು ತಿಳಿದುಬಂದಿದೆ....

ಸ್ಕೂಟಿಯಿಂದ ಬಿದ್ದು ಸಂಪಾಜೆ ಅಭಿವೃದ್ದಿ ಅಧಿಕಾರಿಗೆ ಗಾಯ, ವಿಶ್ರಾಂತಿ .

ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಪಿಂಟೋ ರವರು ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರು ಜುಲೈ 18ರ ಸಂಜೆ ಸ್ಕೂಟಿಯಲ್ಲಿ ಬೆಳ್ಳಾರೆಯ ಮನೆಗೆ ಹೋಗುತ್ತಿದ್ದ ಸಂದರ್ಭ ಐವರ್ನಾಡು ಸಮೀಪ ರಸ್ತೆಯಲ್ಲಿ ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟಿ ಅಪಘಾತಕ್ಕೀಡಾಗಿ ಸರಿತಾರವರು ರಸ್ತೆಗೆ ಬಿದ್ದ ಪರಿಣಾಮ ಅವರ ಕೈ ಮತ್ತು ಕಾಲುಗಳಿಗೆ...

“ಕಂಡದ ಗೌಜಿ ಕೆಸರ್ದ ಪರ್ಬ ” ಆಮಂತ್ರಣ ಪತ್ರಿಕೆ ಬಿಡುಗಡೆ.

ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ ಹಾಗೂ ಚೈತ್ರ ಯುವತಿ ಮಂಡಲ (ರಿ) ಅಜ್ಜಾವರ ಇದರ ಆಶ್ರಯದಲ್ಲಿ ಜುಲೈ 30ರಂದು ಅಜ್ಜಾವರ ವಿಷ್ಣುಮೂರ್ತಿ ಒತ್ತೆಕೋಲ ಗದ್ದೆಯಲ್ಲಿ ನಡೆಯಲಿರುವ ಎರಡನೇ ವರ್ಷದ ಕಂಡದ ಗೌಜಿ ಕೆಸರ್ದ್ ಪರ್ಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಮಹಿಷಮರ್ದಿನೀ ದೇವಸ್ಥಾನ ಅಜ್ಜಾವರ ಇದರ ಮುಂಭಾಗದಲ್ಲಿ ನಡೆಯಿತು. ಈ ಸಂದರ್ಭದಲ್ಲಿ...

ವಿಷ್ಣು ಯುವಕ ಮಂಡಲ.(ರಿ) ಮೇನಾಲ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ.

ಅಜ್ಜಾವರ ಗ್ರಾಮದ 4ನೇ ವಾರ್ಡ್ ಮೇನಾಲ ಮುಖ್ಯರಸ್ತೆಯ ಬದಿಯಲ್ಲಿ ಗಿಡ ಗಂಟಿಗಳು ಬೆಳೆದಿದ್ದು ಇಂದು ವಿಷ್ಣು ಯುವಕ ಮಂಡಲ ವತಿಯಿಂದ ಇರಂತಮಜಲುನಿಂದ ಕಾಟಿಪಳ್ಳ ತನಕ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು . ಈ ಸಂದರ್ಭದಲ್ಲಿ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ರೈ ಮೇನಾಲ , ಗೌರವ ಅಧ್ಯಕ್ಷರಾದ ಶ್ರೀಧರ ಮಣಿಯಾಣಿ ಮೇನಾಲ ,...

ಕಡ್ಲಾರು: ಗುರು ಅಷ್ಟೋತ್ತರ ಅರ್ಚನೆ ಮತ್ತು ಭಗವದ್ಗೀತಾ ಪಾರಾಯಣ

ದೇವಚಳ್ಳ ಗ್ರಾಮದ ವಾಲ್ತಾಜೆಯ ಕಡ್ಲಾರು ಜನಾರ್ಧನ ಆಚಾರ್ಯರ ಮನೆಯಲ್ಲಿ ಭಗವದ್ಗೀತಾ ಪಾರಾಯಣ ಮತ್ತು ಗುರು ಅಷ್ಟೋತ್ತರ ಅರ್ಚನೆ ಕಾರ್ಯಕ್ರಮವು ನಡೆಯಿತು. ಕಡ್ಲಾರು ಶ್ರೀ ಜನಾರ್ಧನ ಆಚಾರ್ಯ ಮತ್ತು ಶ್ರೀಮತಿ ಲಲಿತಾ ಜನಾರ್ಧನ ಆಚಾರ್ಯರ ಪುತ್ರಿ ಶ್ರೀಮತಿ ಭವ್ಯರ ಸೀಮಂತಾ ಕಾರ್ಯಕ್ರಮದ ಸುಸಂದರ್ಭದಲ್ಲಿ ಬಾಳಿಲದ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಮತ್ತು ತಂಡದ ಮೂಲಕ ಗುರು ಅಷ್ಟೋತ್ತರ ಅರ್ಚನೆ...

ಸುಳ್ಯ : ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ ಭಜರಂಗದಳ

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇಂದು ನಿಧನರಾದ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ಕಾರ್ಯವನ್ನು ಭಜರಂಗದಳದ ಕಾರ್ಯಕರ್ತರು ಜಯನಗರದ ಸ್ಮಶಾನದಲ್ಲಿ ನೆರವೇರಿಸಿದರು . ಈ ಸಂದರ್ಭದಲ್ಲಿ ಮುಖಂಡರಾದ ಲತೀಶ್ ಗುಂಡ್ಯ , ವರ್ಷಿತ್ ಚೊಕ್ಕಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬೈಕ್ ಗೆ ಗುದ್ದಿದ್ದ ಟಿಪ್ಪರ್ ಲಾರಿ , ಲಾರಿ ಸಮೇತ ಎಸ್ಕೆಪ್ ಆದ ಲಾರಿ ಚಾಲಕ, ಬೈಕ್ ಸವಾರ ಆಸ್ಪತ್ರೆಗೆ ದಾಖಲು.

ಸುಳ್ಯ ಬೈಕ್ ಗೆ ಟಿಪ್ಪರ್ ಲಾರಿ ಢಿಕ್ಕಿಯಾಗಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾದ ಘಟನೆ ಆಲೆಟ್ಟಿ ಗ್ರಾಮದ ಮಿತ್ತಡ್ಕ ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು ಟಿಪ್ಪರ್ ಚಾಲಕ ತನ್ನ ವಾಹನವನ್ನು ನಿಲ್ಲಿಸದೇ ಮುಂದಕ್ಕೆ ತೆರಳಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಆಲೆಟ್ಟಿಯ ಮಿತ್ತಡ್ಕ ಕೆ.ಎಫ್.ಡಿ.ಸಿ ವಿಶ್ರಾಂತಿ ಗೃಹದ...

ಸೆಲ್ಕೋ ಸೋಲಾರ್ ನಿರ್ಮಿಸಿದ ಸ್ಮಾರ್ಟ್ ಕ್ಲಾಸ್ ನಲ್ಲಿ ಚಂದ್ರಯಾನ -3 ಉಡಾವಣೆ ವೀಕ್ಷಣೆ , ವಿಧ್ಯಾರ್ಥಿಗಳ ಸಂಭ್ರಮ .

ಸುಳ್ಯದ ಪ್ರತಿಷ್ಠಿತ ಸೋಲಾರ್ ಸಂಸ್ಥೆಯದಾ ಸೆಲ್ಕೋ ಸೋಲಾರ್ ಹಾಗೂ ಮೇಂಡಾ ಫೌಂಡೇಶನ್ ವತಿಯಿಂದ ನಿರ್ಮಿಸಿದ ಸ್ಮಾರ್ಟ್ ಕ್ಲಾಸ್ ಚಂದ್ರಯಾನ-3 ಕಾರ್ಯಕ್ರಮವನ್ನು ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕಿ ಮೋಹಿನಿ ಇವರ ನೇತೃದಲ್ಲಿ ಚಂದ್ರಯಾನ-3 ಉಡಾವಣೆ ನೇರ ಪ್ರಸಾರದ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳಿಗೆ ತೋರಿಸಲಾಯಿತು. ಸೆಲ್ಕೋ ಸೋಲಾರ್ ಸಂಸ್ಥೆ ಹಾಗೂ ಮೆಂಡಾ ಫೌಂಡೇಶನ್ ಹಾಗೂ...
Loading posts...

All posts loaded

No more posts

error: Content is protected !!