“ಕಂಡದ ಗೌಜಿ ಕೆಸರ್ದ ಪರ್ಬ ” ಆಮಂತ್ರಣ ಪತ್ರಿಕೆ ಬಿಡುಗಡೆ.

ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ ಹಾಗೂ ಚೈತ್ರ ಯುವತಿ ಮಂಡಲ (ರಿ) ಅಜ್ಜಾವರ ಇದರ ಆಶ್ರಯದಲ್ಲಿ ಜುಲೈ 30ರಂದು ಅಜ್ಜಾವರ ವಿಷ್ಣುಮೂರ್ತಿ ಒತ್ತೆಕೋಲ ಗದ್ದೆಯಲ್ಲಿ ನಡೆಯಲಿರುವ ಎರಡನೇ ವರ್ಷದ ಕಂಡದ ಗೌಜಿ ಕೆಸರ್ದ್ ಪರ್ಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಮಹಿಷಮರ್ದಿನೀ ದೇವಸ್ಥಾನ ಅಜ್ಜಾವರ ಇದರ ಮುಂಭಾಗದಲ್ಲಿ ನಡೆಯಿತು. ಈ ಸಂದರ್ಭದಲ್ಲಿ...

ವಿಷ್ಣು ಯುವಕ ಮಂಡಲ.(ರಿ) ಮೇನಾಲ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ.

ಅಜ್ಜಾವರ ಗ್ರಾಮದ 4ನೇ ವಾರ್ಡ್ ಮೇನಾಲ ಮುಖ್ಯರಸ್ತೆಯ ಬದಿಯಲ್ಲಿ ಗಿಡ ಗಂಟಿಗಳು ಬೆಳೆದಿದ್ದು ಇಂದು ವಿಷ್ಣು ಯುವಕ ಮಂಡಲ ವತಿಯಿಂದ ಇರಂತಮಜಲುನಿಂದ ಕಾಟಿಪಳ್ಳ ತನಕ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು . ಈ ಸಂದರ್ಭದಲ್ಲಿ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ರೈ ಮೇನಾಲ , ಗೌರವ ಅಧ್ಯಕ್ಷರಾದ ಶ್ರೀಧರ ಮಣಿಯಾಣಿ ಮೇನಾಲ ,...
Ad Widget

ಕಡ್ಲಾರು: ಗುರು ಅಷ್ಟೋತ್ತರ ಅರ್ಚನೆ ಮತ್ತು ಭಗವದ್ಗೀತಾ ಪಾರಾಯಣ

ದೇವಚಳ್ಳ ಗ್ರಾಮದ ವಾಲ್ತಾಜೆಯ ಕಡ್ಲಾರು ಜನಾರ್ಧನ ಆಚಾರ್ಯರ ಮನೆಯಲ್ಲಿ ಭಗವದ್ಗೀತಾ ಪಾರಾಯಣ ಮತ್ತು ಗುರು ಅಷ್ಟೋತ್ತರ ಅರ್ಚನೆ ಕಾರ್ಯಕ್ರಮವು ನಡೆಯಿತು. ಕಡ್ಲಾರು ಶ್ರೀ ಜನಾರ್ಧನ ಆಚಾರ್ಯ ಮತ್ತು ಶ್ರೀಮತಿ ಲಲಿತಾ ಜನಾರ್ಧನ ಆಚಾರ್ಯರ ಪುತ್ರಿ ಶ್ರೀಮತಿ ಭವ್ಯರ ಸೀಮಂತಾ ಕಾರ್ಯಕ್ರಮದ ಸುಸಂದರ್ಭದಲ್ಲಿ ಬಾಳಿಲದ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಮತ್ತು ತಂಡದ ಮೂಲಕ ಗುರು ಅಷ್ಟೋತ್ತರ ಅರ್ಚನೆ...

ಸುಳ್ಯ : ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ ಭಜರಂಗದಳ

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇಂದು ನಿಧನರಾದ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ಕಾರ್ಯವನ್ನು ಭಜರಂಗದಳದ ಕಾರ್ಯಕರ್ತರು ಜಯನಗರದ ಸ್ಮಶಾನದಲ್ಲಿ ನೆರವೇರಿಸಿದರು . ಈ ಸಂದರ್ಭದಲ್ಲಿ ಮುಖಂಡರಾದ ಲತೀಶ್ ಗುಂಡ್ಯ , ವರ್ಷಿತ್ ಚೊಕ್ಕಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬೈಕ್ ಗೆ ಗುದ್ದಿದ್ದ ಟಿಪ್ಪರ್ ಲಾರಿ , ಲಾರಿ ಸಮೇತ ಎಸ್ಕೆಪ್ ಆದ ಲಾರಿ ಚಾಲಕ, ಬೈಕ್ ಸವಾರ ಆಸ್ಪತ್ರೆಗೆ ದಾಖಲು.

ಸುಳ್ಯ ಬೈಕ್ ಗೆ ಟಿಪ್ಪರ್ ಲಾರಿ ಢಿಕ್ಕಿಯಾಗಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾದ ಘಟನೆ ಆಲೆಟ್ಟಿ ಗ್ರಾಮದ ಮಿತ್ತಡ್ಕ ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು ಟಿಪ್ಪರ್ ಚಾಲಕ ತನ್ನ ವಾಹನವನ್ನು ನಿಲ್ಲಿಸದೇ ಮುಂದಕ್ಕೆ ತೆರಳಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಆಲೆಟ್ಟಿಯ ಮಿತ್ತಡ್ಕ ಕೆ.ಎಫ್.ಡಿ.ಸಿ ವಿಶ್ರಾಂತಿ ಗೃಹದ...

ಸೆಲ್ಕೋ ಸೋಲಾರ್ ನಿರ್ಮಿಸಿದ ಸ್ಮಾರ್ಟ್ ಕ್ಲಾಸ್ ನಲ್ಲಿ ಚಂದ್ರಯಾನ -3 ಉಡಾವಣೆ ವೀಕ್ಷಣೆ , ವಿಧ್ಯಾರ್ಥಿಗಳ ಸಂಭ್ರಮ .

ಸುಳ್ಯದ ಪ್ರತಿಷ್ಠಿತ ಸೋಲಾರ್ ಸಂಸ್ಥೆಯದಾ ಸೆಲ್ಕೋ ಸೋಲಾರ್ ಹಾಗೂ ಮೇಂಡಾ ಫೌಂಡೇಶನ್ ವತಿಯಿಂದ ನಿರ್ಮಿಸಿದ ಸ್ಮಾರ್ಟ್ ಕ್ಲಾಸ್ ಚಂದ್ರಯಾನ-3 ಕಾರ್ಯಕ್ರಮವನ್ನು ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕಿ ಮೋಹಿನಿ ಇವರ ನೇತೃದಲ್ಲಿ ಚಂದ್ರಯಾನ-3 ಉಡಾವಣೆ ನೇರ ಪ್ರಸಾರದ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳಿಗೆ ತೋರಿಸಲಾಯಿತು. ಸೆಲ್ಕೋ ಸೋಲಾರ್ ಸಂಸ್ಥೆ ಹಾಗೂ ಮೆಂಡಾ ಫೌಂಡೇಶನ್ ಹಾಗೂ...

ಸುಳ್ಯ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಪರಾಮರ್ಶೆ ಸಭೆಯಲ್ಲಿ ನಂದಕುಮಾರ್ , ಜಿ ಕೃಷ್ಣಪ್ಪ ಬಣಗಳ ಮಧ್ಯೆ ಪರಸ್ಪರ ಹಲ್ಲೆ ಮಾತಿನ ಚಕಮಕಿ, ಪೋಲಿಸ್ ಆಗಮನ !

ಕಡಬ: ಸುಳ್ಯ ಮಿಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆಯಲ್ಲಿ ಜಿ .ಕೃಷ್ಣಪ್ಪ ಮತ್ತು ನಂದಕುಮಾರ್ ಬಣದ ನಡುವೆ ಬಡಿದಾಡಿಕೊಂಡ ಘಟನೆ ಜು.14ರಂದು ನಡೆದಿದೆ. ಕಾಂಗ್ರೇಸ್ ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದಿದ್ದು, ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್. ಸಮಿತಿಯ ಮುಖಂಡರು ಆಗಮಿಸಿದ್ದರು. ಈ ಸಭೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ...

ನೆರೆಯ ರಾಜ್ಯ ಕೇರಳಕ್ಕೆ ಅಕ್ರಮ ಗೋ ಸಾಗಾಣೆ ಓರ್ವನ ಬಂಧನ !

ಪರವಾನಗಿ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕೇರಳ ನೋಂದಾವಣಿಯ ವಾಹನವನ್ನು ಅಡಗಟ್ಟಿ ವಶಕ್ಕೆ ಪಡೆದುಕೊಂಡ ಘಟನೆ ಇದೀಗ ಸುಳ್ಯದಲ್ಲಿ ವರದಿಯಾಗಿದೆ. ಮೂರು ಜಾನುವಾರುಗಳನ್ನು ಟೆಂಪೋದಲ್ಲಿ ತುಂಬಿಕೊಂಡು ಹೋಗುತ್ತಿರುವ ವಿಚಾರ ತಿಳಿದ ಪೊಲೀಸರು ಸುಳ್ಯದ ಜಾಲ್ಸೂರು ಬಳಿ ವಾಹನವನ್ನು ಅಡ್ಡಗಟ್ಟಿದ್ದು ಎರಡು ಜಾನುವಾರು ಹಾಗೂ ರತೀಶ್ ಎಂಬಾತನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಳ್ಯ...

ಕೊಲ್ಲಮೊಗ್ರು:ಮುಳ್ಳುಬಾಗಿಲು ಎಂಬಲ್ಲಿ ತೋಟಗಳಿಗೆ ಆನೆ ದಾಳಿ.

3 ದಿನಗಳ ಹಿಂದೆ ಹರಿಹರ ಪಲ್ಲತ್ತಡ್ಕ ಎಕ್ಸ್ ಚೇಂಜ್ ಬಳಿಯ ತೆಂಗಿನ ಮರಗಳನ್ನು ಹಾಳುಗೆಡವಿದ ಆನೆ ಮತ್ತೆಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು, ಕೊಪ್ಪಡ್ಕದಲ್ಲಿ ತೋಟಗಳಿಗೆ ಆನೆ ದಾಳಿ ಮಾಡಿದ ಘಟನೆ ಜು.12 ರಂದು ರಾತ್ರಿ ನಡೆದಿದೆ. ಮುಳ್ಳುಬಾಗಿಲು ಸುರೇಂದ್ರ ಎಂಬುವವರ ತೋಟದಲ್ಲಿ ಬಾಳೆ ಗಿಡಗಳನ್ನು ಹಾಳುಗೆಡವಿದ್ದು ನಂತರ ಮಾಧವ ಕೊಪ್ಪಡ್ಕ ಎಂಬುವವರ ತೋಟಕ್ಕೆ ಬಂದ ಆನೆ ಅಲ್ಲಿ...

ಸುಳ್ಯ ಕ್ರೈಮ್ ಎಸೈ ಆಗಿ ಸರಸ್ವತಿ ಬಿ ಟಿ ಆಗಮನ .

ಸುಳ್ಯ ಪೋಲೀಸ್ ಠಾಣೆಗೆ ಕ್ರೈಮ್ ಎಸೈ ಆಗಿ ಸರಸ್ವತಿ ಬಿ ಟಿ ಆಗಮಿಸಿದ್ದಾರೆ ಈ ಹಿಂದೆ ಸುಳ್ಯ ಠಾಣೆಯಲ್ಲಿ ರತನ್ ಕುಮಾರ್ ರವರು ಕ್ರೈಮ್ ಎಸೈ ಆಗಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ವಿಟ್ಲ ಠಾಣೆಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಸುಳ್ಯ ಪೋಲೀಸ್ ಠಾಣೆಗೆ ನೂತನ ಕ್ರೈಮ್ ಎಸೈ ಆಗಿ ಸರಸ್ವತಿ ಬಿ ಟಿ ಆಗಮಿಸಿದ್ದಾರೆ ಇವರು ಮೂಲತಃ ಕುಶಾಲನಗರದವರಾಗಿದ್ದು...
Loading posts...

All posts loaded

No more posts

error: Content is protected !!