ಸುಳ್ಯ: ಯಶಸ್ವಿಯಾಗಿ ನಡೆದ ಮತದಾನ ಪ್ರಕ್ರಿಯೆ – ಕಳೆದ ಬಾರಿಗಿಂತ ಕಡಿಮೆ ಮತದಾನ – ನಿರಾಸಕ್ತಿ ತೋರಿದ ಮತದಾರ

ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.78.94 ಮತದಾನವಾಗಿದೆ. 101856 ಪುರುಷ ಮತದಾರರು ಹಾಗೂ 104173 ಮಹಿಳಾ ಮತದಾರರು ಸೇರಿ ಒಟ್ಟು 206029 ಮತದಾರರಿದ್ದಾರೆ. ಇಂದು ನಡೆದ ಮತದಾನದಲ್ಲಿ 78.94 ಮಂದಿ ಮತದಾನ ದಾಖಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಬಾರಿ ಸುಳ್ಯ ಕ್ಷೇತ್ರದಲ್ಲಿ 83 ಶೇ. ಮತದಾನವಾಗಿತ್ತು. ಈ ಭಾರಿ ಮತದಾರರು,ಪಕ್ಷದ ಕಾರ್ಯಕರ್ತರು...

ಬೆಳ್ಳಾರೆ : ಯೋಧನ ಕಾಲಿಗೆ ನಮಸ್ಕರಿಸಿದ ಬಾಲಕ

ಬೆಳ್ಳಾರೆಯ ಕೆಪಿಎಸ್ ಸ್ಕೂಲ್ ನಲ್ಲಿರುವ ಮತದಾನ ಕೇಂದ್ರಕ್ಕೆ ಪೋಷಕರ ಜೊತೆ ಮತದಾನ ಕೇಂದ್ರಕ್ಕೆ ಬಂದ ಪುಟ್ಪ ಬಾಲಕ ಹೊರಗೆ ಮತದಾನ ಕರ್ತವ್ಯ ದಲ್ಲಿದ್ದ ಯೋಧರ ಕಾಲಿಗೆ ಬಿದ್ದು ನಮಸ್ಕರಿಸಿದ ಘಟನೆ ನಡೆದಿದೆ. ಈ ಪುಟ್ಟ ಬಾಲಕನ ದೇಶಪ್ರೇಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
Ad Widget

ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್. ವೆಂಕಟೇಶ್  ಮತದಾನ

 ಜೆಡಿಎಸ್ ಅಭ್ಯರ್ಥಿ ಹೆಚ್ ಎಲ್ ವೆಂಕಟೇಶ್ ರವರು ಜಟ್ಟಿಪಳ್ಳ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು. 

ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಮತ ಚಲಾವಣೆ

ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪರವರು ರಾಮಕುಂಜ ಮತಕೇಂದ್ರದಲ್ಲಿ ಮತಚಲಾಯಿಸಿದರು.

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮತ ಚಲಾವಣೆ

ಬಿಜೆಪಿ ಅಭ್ಯರ್ಥಿ ಭಾಗೀರಥಿ ಅವರು ಮುರುಳ್ಯ ದ ಶಾಂತಿನಗರ ಬೂತ್‌ನಲ್ಲಿ ಮತ ಚಲಾಯಿಸಿದರು.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಮತ ಚಲಾವಣೆ

ಸುಳ್ಯ : ತಾಲೂಕು ಪಂಚಾಯತ್ ಮತಗಟ್ಟೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ ಮತ ಚಲಾಯಿಸಿದರು. ತಂದೆ ಮಾಜಿ ಶಾಸಕ ಕೆ.ಕುಶಲ ಜತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಸಚಿವ ಅಂಗಾರರಿಂದ ಮತ ಚಲಾವಣೆ

ಸಚಿವ ಅಂಗಾರರವರು ದೊಡ್ಡತೋಟ ಮತ ಕೇಂದ್ರದಲ್ಲಿ ಮತ ಚಲಾಯಿಸಿದರು. ತನಗೆ ತಾನೇ ಮತ ನೀಡುವ ಮೂಲಕ  ಆರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅಂಗಾರರು ಈ ಸಲ ಬೇರೆಯವರಿಗೆ ಮತ ಚಲಾಯಿಸುತ್ತಿರುವುದು ಈ  ಚುನಾವಣೆಯ ವಿಶೇಷ.

🩸ಸುಳ್ಯ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆ🩸

ಸುಳ್ಯ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆ.ಜೀವ ರಕ್ಷಿಸುವ ರಕ್ತದಾನ ಕ್ಕಿಂತ ಮಿಗಿಲಾದ ದಾನವಿಲ್ಲ, ಹಕ್ಕು ಮತ್ತು ಕರ್ತವ್ಯದ ಮತದಾನಕ್ಕಿಂತ ಮಿಗಿಲಾದ ಸೇವೆಯಿಲ್ಲ :ಪಿ. ಬಿ. ಸುಧಾಕರ್ ರೈ ಸುಳ್ಯ ರೆಡ್ ಕ್ರಾಸ್ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನು ವರ್ತಕರ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಅಧ್ಯಕ್ಷತೆಯನ್ನು ರೆಡ್ ಕ್ರಾಸ್ ಸುಳ್ಯ...

ಉಬರಡ್ಕ ಮಿತ್ತೂರು ಉಳ್ಳಾಕ್ಲು ನಾಯರ್ ದೈವಗಳ ಕಾಲಾವಧಿ ಜಾತ್ರೋತ್ಸವ

ಸುಳ್ಯ ಸೀಮೆಯ ಉಬರಡ್ಕ ಮಿತ್ತೂರು ಗ್ರಾಮದ ಮಿತ್ತೂರು ಉಳ್ಳಾಕ್ಲು ನಾಯರ್ ದೈವಗಳ ಕಾಲಾವಧಿ ಜಾತ್ರೋತ್ಸವವು ಎ.26 ರಿಂದ ಮೇ .08 ರವರೆಗೆ ನಡೆಯಿತು.ಎ.26 ರಂದು ಬೆಳಿಗ್ಗೆ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.ಮೇ.02 ರಂದು ಸಂಜೆ ಮಿತ್ತೂರು ಮೂಲ ಸನ್ನಿಧಿಯಿಂದ ಉಳ್ಳಾಗಳ ಭಂಡಾರ ಬಂದು ವಾಲಸಿರಿಯಲ್ಲಿ ದೇವರಿಗೆ ಸ್ವಸ್ತಿಕೆ,ಬಲ್ಲಾಳರ ಕಾಣಿಕೆ,ಅಡ್ತಲೆ ಕಿರುಚಾವಡಿಗೆ ಭಂಡಾರ ಬಂದು ಉಳ್ಳಾಗಳ ದರ್ಶನ,ಪ್ರಸಾದ...

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಾಜೆಕ್ಟ್ ಎಕ್ಸ್‌ಪೋ- 2023

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ 2022 – 23 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ, ಎಕ್ಸ್‌ಪೋ-2023 ನಡೆಯಿತು. ಪ್ರದರ್ಶನದ ಉದ್ಘಾಟನೆಯನ್ನು ಕೆ.ವಿ.ಜಿ. ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ಶ್ರೀಧರ್ ಎಂ. ಕೆ. ನೆರವೇರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಿಕೊಂಡರೆ ಹೊಸ ಅವಕಾಶಗಳು ದೊರೆಯುವುದರೊಂದಿಗೆ...
Loading posts...

All posts loaded

No more posts

error: Content is protected !!