ಸೇನೆ ಸೇರಬಯಸುವವರಿಗೆ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಭಾರತೀಯ ಸೇನೆ ಹಾಗೂ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3 ಬಿ ಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ....

ಸುಳ್ಯ ಸಹಾಯಕ ಕೃಷಿ ನಿರ್ದೇಶಕರಾಗಿ ಯಶಸ್ ಮಂಜುನಾಥ್ ರಿಗೆ ಪ್ರಭಾರ

ಸುಳ್ಯ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾಗಿ ಯಶಸ್ ಮಂಜುನಾಥ್ ಅಧಿಕಾರ ವಹಿಸಿಕೊಂಡಿದ್ದಾರೆ. ಸುಳ್ಯ ಸಹಾಯಕ ಕೃ಼ಷಿ ನಿರ್ದೇಶಕರಾಗಿದ್ದ ನಾಗರಾಜ್ ರವರು ಹಾವೇರಿಯ ಕಾಗಿನೆಲೆಗೆ ವರ್ಗಾವಣೆ ಗೊಂಡಿರುವುದರಿಂದ ತೆರವಾದ ಸ್ಥಾನಕ್ಕೆ ಯಶಸ್ ಮಂಜುನಾಥ್ ಬಂದಿದ್ದಾರೆ. ಯಶಸ್ ರವರು ಪುತ್ತೂರು ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಪ್ರಭಾರದಲ್ಲಿದ್ದು, ಇದೀಗ ಸುಳ್ಯದ ಜವಾಬ್ದಾರಿ ಯನ್ನು ವಹಿಸಿದ್ದಾರೆ. ಇದರ...
Ad Widget

ಉಪ್ಪಿನಂಗಡಿ ಗ್ರಾ. ಪಂ. ಗ್ರೇಡ್ 1 ಕಾರ್ಯದರ್ಶಿಯಾಗಿ ಗೀತಾ ಶೇಖರ್ ನೇಮಕ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಯು.ಡಿ. ಶೇಖರ್ ರವರು ಅಕಾಲಿಕವಾಗಿ ಸರಕಾರಿ ಸೇವೆಯಲ್ಲಿ ಇರುವಾಗಲೇ ಮರಣ ಹೊಂದಿದ್ದು. ಅನುಕಂಪದ ಆಧಾರದ ಮೇಲೆ ಅವರ ಪತ್ನಿ ಶ್ರೀಮತಿ ಗೀತಾ ಶೇಖರ್ ರವರಿಗೆ ಸರಕಾರಿ ಹುದ್ದೆ ದೊರೆತಿದ್ದು,ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಗ್ರೇಡ್‌ 1 ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಸರಕಾರದ ಸುತ್ತೋಲೆ ಮತ್ತು ನೇಮಕಾತಿ ಪ್ರಾಧಿಕಾರಿ...

ಮೈಸೂರು : ಮೊಬೈಲ್ ಜರ್ನಲಿಸಂ ನಲ್ಲಿ ಕ್ಷಮಾ ಅಂಬೆಕಲ್ಲು ಪ್ರಥಮ ಸ್ಥಾನ

ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ನಡೆದ ಮಾಧ್ಯಮ ಹಬ್ಬದಲ್ಲಿ ಮೊಬೈಲ್ ಜರ್ನಲಿಸಂ ನಲ್ಲಿ ಕ್ಷಮಾ ಅಂಬೆಕಲ್ಲು ಪ್ರಥಮ ಸ್ಥಾನ ಗಳಿಸಿದ್ದಾರೆ. ಮೈಸೂರಿನ ಮಾತಾ ವಿಶ್ವ ವಿದ್ಯಾಪೀಠ   ಶಿಕ್ಷಣ ಸಂಸ್ಥೆಯಲ್ಲಿ   ವಿಶುವಲ್ ಕಮ್ಯುನಿಕೇಶನ್ (Int. Msc) 3 ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಕೆ ದೇವಚಳ್ಳ ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಹಾಗೂ ಅಶ್ವಿನಿ ಶೈಲೇಶ್ ದಂಪತಿಗಳ ಪುತ್ರಿ.ಮೈಸೂರು...

ಕೊಡಿಯಾಲಬೈಲು ಶಾಲೆಯನ್ನು ದತ್ತು ಸ್ವೀಕಾರಕ್ಕೆ ನಿರ್ಧರಿಸಿದ ಲಯನ್ಸ್ ಕ್ಲಬ್ – ಆ.28 ರಂದು ಶಾಲಾ ಜಾಗದಲ್ಲಿ ತೆಂಗು ಅಡಿಕೆ ಹಾಗೂ ಹಣ್ಣಿನ ತೋಟ ನಿರ್ಮಾಣಕ್ಕೆ ಚಾಲನೆ

ಸುಳ್ಯ ಲಯನ್ಸ್ ಕ್ಲಬ್ ಅನೇಕ ಜನಪರ ಸಮಾಜ ಸೇವಾ ಚಟುವಟಿಕೆಗಳೊಂದಿಗೆ ಸುಳ್ಯದ ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದು ಸಂಸ್ಥೆ 51ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಯೋಜನೆ ರೂಪಿಸುವ ದೃಷ್ಟಿಯಿಂದ ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಅಧ್ಯಕ್ಷರಾದ ಲಯನ್ ವೀರಪ್ಪ ಗೌಡ ಕಣ್ಕಲ್ ತಿಳಿಸಿದರು. ಸುಳ್ಯ ಪ್ರೆಸ್...

ಅರಂತೋಡು : ವಿದ್ಯಾರ್ಥಿಗಳಿಂದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ 

ಅರಂತೋಡಿನ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಚಂದ್ರನಂಗಳದಲ್ಲಿ ಭಾರತದ ತ್ರಿವರ್ಣ ಧ್ವಜಹಾರಿಸಿ ತ್ರಿವಿಕ್ರಮ ಸಾಧನೆಗೈದ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ)ಗೆ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ               "ಥ್ಯಾಂಕ್ಸ್ ಇಸ್ರೋ'' ಎಂದು    ವಿನೂತನ ಶೈಲಿಯಲ್ಲಿ ಬರೆದು,  ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿ  ಅವಿಸ್ಮರಣೀಯ ಸಾಧನೆಗೈದ ಭಾರತೀಯ ವಿಜ್ಞಾನಿಗಳಿಗೆ 525 ಡ್ರಾಯಿಂಗ್ ಶೀಟ್ ನಲ್ಲಿ ಬೃಹದಾಕಾರದ ತ್ರಿವರ್ಣ ಧ್ವಜ ನಿರ್ಮಾಣ...

ಪೈಕ ಬೊಮ್ಮದೇರೆ ಹೂವಪ್ಪ ಗೌಡ ನಿಧನ

ಪೈಕ- ಬೊಮ್ಮದೇರೆ ಹೂವಪ್ಪ ಗೌಡ ಆ.24 ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇವರು ಮಲೆ ದೈವ ಚಾವಡಿಯಲ್ಲಿ ಪುರುಷ ದೈವದ ಪೂಜಾರಿ ಕೆಲಸವನ್ನು ಮಾಡುತ್ತಿದ್ದರು. ಉತ್ತಮ ಕೃಷಿಕರಾಗಿದ್ದರಿ. ಮೃತರು ಪತ್ನಿ ಕೃಷ್ಣಮ್ಮ , ಪುತ್ರ ಪೂರ್ಣಾಚಂದ್ರ , ಪುತ್ರಿಯರಾದ ಶ್ರೀಮತಿ ಪುಷ್ಪಾವತಿ, ಶ್ರೀಮತಿ ಪೂರ್ಣಿಮ, ಸೊಸೆ,ಅಳಿಯಂದಿರು...

ಸುಳ್ಯ : ಲಯನ್ಸ್ ಕ್ಲಬ್ ನಲ್ಲಿ ವಿಪತ್ತು ನಿರ್ವಹಣೆಯ ಬಗ್ಗೆ ಕಾರ್ಯಾಗಾರ

ಸುಳ್ಯ ಲಯನ್ಸ್ ಕ್ಲಬ್,ಕರ್ನಾಟಕ ರಾಜ್ಯ ವೈಜಾನಿಕ ಸಂಶೋಧನ ಪರಿಷತ್ತು ಇದರ ಆಶ್ರಯದಲ್ಲಿ ದ.ಕ.ಜಿಲ್ಲೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಂಗಳೂರು ಇದರ ವತಿಯಿಂದ ವಿಪತ್ತು ನಿರ್ವಹಣೆಯ ಬಗ್ಗೆ ಕಾರ್ಯಾಗಾರ ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ವೀರಪ್ಪ ಗೌಡ ಕಣ್ಕಲ್ ವಹಿಸಿದರು. ಕಾರ್ಯಕ್ರಮವನ್ನು ಮಂಗಳೂರು 10ನೇ ಬೆಟಾಲಿಯನ್...

ಹರಿಹರಪಲ್ಲತ್ತಡ್ಕ : ಬಿಎಸ್ಎನ್ಎಲ್ ಕೇಬಲ್ ಕಳ್ಳತನ – ಸಂಪರ್ಕ ಕಡಿತ

ಹರಿಹರಪಲ್ಲತ್ತಡ್ಕ ಬಳಿ ಬಿಎಸ್ಎನ್ಎಲ್ ಕೇಬಲ್ ಅನ್ನು ಕಿಡಿಗೇಡಿಗಳು ಕಳ್ಳತನ ನಡೆಸಿದ ಘಟನೆ ಆ. 24 ರಂದು ನಡೆದಿರುವ ಘಟನೆ ನಡೆದಿದ್ದು ಇದರಿಂದಾಗಿ ಆ ಭಾಗದ ಜನರಿಗೆ ನೆಟ್ವರ್ಕ್ ಸಮಸ್ಯೆ ಉಂಟಾಗಿ 350 ಮಿಕ್ಕಿ ಗ್ರಾಹಕರು ಪರದಾಡುವಂತಾಯಿತು.  ಕೂಡಲೇ ಸ್ಪಂದಿಸಿದ ಬಿಎಸ್ಎನ್ಎಲ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಂಜೆ ವೇಳೆಗೆ ಬೇರೆ ಕೇಬಲ್ ಅಳವಡಿಸಿಕೊಟ್ಟರೆಂದು ತಿಳಿದುಬಂದಿದೆ. ಇಲಾಖೆಯ ಓ...

ಪಂಜ: ಚಂದ್ರಯಾನ-3 ಯಶಸ್ಸಿಗೆ ಸ್ಕೌಟ್ ಗೈಡ್ ಸಂಭ್ರಮ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಚಂದ್ರಯಾನ -3 ಆಗಸ್ಟ್ 23ರಂದು ಸಂಜೆ ಗಂಟೆ 6:04ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವುದರಲ್ಲಿ ಐತಿಹಾಸಿಕ ಗೆಲುವಿಗಾಗಿ, ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತೀಯ ಇಸ್ರೋ ವಿಜ್ಞಾನಿಗಳ ತಂಡದ ಐತಿಹಾಸಿಕ ಸಾಧನೆಯನ್ನು ಪ್ರಶಂಸಿಸಿ, ಆ.24 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ವತಿಯಿಂದ ಸಂಭ್ರಮವನ್ನು...
Loading posts...

All posts loaded

No more posts

error: Content is protected !!