- Saturday
- August 29th, 2026
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ಸೆ.15 ರಂದು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಶಿಬಿರ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪಶುವೈದ್ಯಾಧಿಕಾರಿ...
ಸರಕಾರ 108 ಪಿಡಿಒಗಳನ್ನು ವರ್ಗಾವಣೆಗೊಳಿಸಿ ಆದೇಶ ಮಾಡಿದ್ದು ತಾಲೂಕಿನ ಮೂವರು ಪಿಡಿಒ ಗಳಿಗೆ ವರ್ಗಾವಣೆ ಆದೇಶವಾಗಿದೆ. ಅಮರ ಮುಡ್ನೂರು ಗ್ರಾಮ ಪಂಚಾಯತ್ ನಲ್ಲಿದ್ದ ಆಕಾಶ್ ಅವರಿಗೆ ಕೊಳ್ಳೆಗಾಲ ತಾಲೂಕಿನ ದೊಡ್ಡಿಂದ್ ವಾಡಿ ಪಂಚಾಯತ್ ಗೆ, ಕೊಲ್ಲಮೊಗ್ರದಲ್ಲಿದ್ದ ರವಿಚಂದ್ರ ಅಕ್ಕಪ್ಪಾಡಿ ಅವರಿಗೆ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಗೆ ಹಾಗೂ ಕಲ್ಮಡ್ಕದಲ್ಲಿದ್ದ ಪ್ರವೀಣ್ ಚಿಲ್ಪಾರ್ ಅವರಿಗೆ ಕೊಡಿಯಾಲ...
ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ "ಸಂವಿಧಾನ ಪೀಠಿಕೆ ಓದೋಣ ಬನ್ನಿ" ಕಾರ್ಯಕ್ರಮವನ್ನು ಸುಳ್ಯದ ಲ್ಯಾಂಪ್ ಸೊಸೈಟಿ ಬಳಿ ಇಂದು ಆಯೋಜಿಸಲಾಯಿತು. ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮ ನಡೆಸಲಾಯಿತು. ಮಾಸ್ಟರ್ ಎಜ್ಯುಕೇಶನ್ ಸಂಚಾಲಕ ಶಶಿಧರ ಎಂ ಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನ ಪೀಠಿಕೆ ಭೋದಿಸಿದರು. ಈ ಸಂದರ್ಭದಲ್ಲಿ ಮಾಜಿ ನಗರ ಪಂಚಾಯತ್ ಉಪಾಧ್ಯಕ್ಷ ಕೆ...
ದಾನಗಳಲ್ಲಿ ಹಲವು ವಿಧದ ದಾನಗಳಿವೆ. ಅನ್ನದಾನ, ವಸ್ತ್ರದಾನ, ವಿದ್ಯಾದಾನ ಇವೆಲ್ಲವುಗಳಿಂದಲೂ ಮುಖ್ಯವಾದ ರಕ್ತದಾನ. ರಕ್ತದಾನ ಶ್ರೇಷ್ಠವಾದ ದಾನ. ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಗಳಿಲ್ಲ. ತುರ್ತು ಸಂದರ್ಭಗಳಲ್ಲಿ ರಕ್ತ ಬೇಕಾದಲ್ಲಿ ಬದಲಿ ವ್ಯವಸ್ಥೆಯಾಗಿ ಒಬ್ಬರ ದೇಹದಿಂದ ತೆಗೆದ ರಕ್ತವನ್ನೇ ಇನ್ನೊಬ್ಬರಿಗೆ ನೀಡಬೇಕಾಗುತ್ತದೆ. ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಪ್ರಭಾರ ಪ್ರಾಚಾರ್ಯ ಕೆ ದಿನೇಶ್ ನುಡಿದರು. ಅವರು...
ಚಲಿಸುತ್ತಿದ್ದ ಪಿಕಪ್ ಗೆ ಸ್ಕೂಟಿ ಸವಾರನೊಬ್ಬ ಹಿಂಬದಿಯಿಂದ ಗುದ್ದಿ ರಸ್ತೆಗೆ ಎಸೆಯಲ್ಪಟ್ಟ ಘಟನೆ ಶುಕ್ರವಾರ ರಾತ್ರಿ ಪರಿವಾರಕಾನ ಬಳಿ ನಡೆದಿದೆ. ಅರಂಬೂರು ಕಡೆಯಿಂದ ಪಿಕಪ್ ಹಾಗೂ ಸ್ಕೂಟಿ ಒಂದೇ ಪಥದಲ್ಲಿ ಸಾಗಿ ಬರುತ್ತಿದ್ದವು. ಈ ವೇಳೆ ಪಿಕಪ್ ಹಿಂದೆ ಇದ್ದ ಕಬ್ಬಿಣದ ರಾಡ್ ಅನ್ನು ಸರಿಯಾಗಿ ಗಮನಿಸದೆ ಸ್ಕೂಟಿ ಸವಾರ ಬಂದು ಗುದ್ದಿದ್ದಾನೆ. ಈ ವೇಳೆ...
ಕಳೆದ 13 ದಿನಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದ ಹೋಟೆಲ್ ಕಾರ್ಮಿಕನ ಮೃತ ದೇಹವನ್ನು ಕೊಂಡೊಯ್ಯಲು ಸಂಬಂಧಿಕರು ಯಾರೂ ಬಾರದ ಹಿನ್ನೆಲೆಯಲ್ಲಿ ಸುಳ್ಯ ಠಾಣಾ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದಾರೆ. ರಥಬೀದಿಯಲ್ಲಿ ಕಾರ್ಯಚರಿಸುತ್ತಿದ್ದ ಸ್ವಾಮಿ ಪ್ರಸಾದ್ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಲೂಲು ಎಂಬುವವರು ಕಳೆದ 13 ದಿನಗಳ ಹಿಂದೆ ಹೃದಯಾಘಾತದಿಂದ ಕೆವಿಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು....
ಐಸ್ ಕ್ರೀಂ ಕಪ್ನಲ್ಲಿ ‘ಹಲ್ಲಿನ ಸೆಟ್ ಹಲ್ಲು ಸಿಕ್ಕಿತೆಂದು ಆರೋಪ ಪರಸ್ಪರ ಹಲ್ಲೆ – ಠಾಣೆಯಲ್ಲಿ ರಾಜಿಯಲ್ಲಿ ಇತ್ಯರ್ಥ.
ಐಸ್ ಕ್ರೀಂ ಪುಟಾಣಿ ಮಗುವಿಗೆ ಕೋಡಿಸಿದ ಸಂದರ್ಭದಲ್ಲಿ ಆ ಕಪ್ ನಲ್ಲಿ ಹಲ್ಲಿನ ಸೆಟ್ ನ ಹಲ್ಲು ಇದೆ ಎಂದು ಆರೋಪಿಸಿ ಪರಸ್ಪರ ಹಲ್ಲೆಯಾಗುತ್ತಿದ್ದನ್ನು ಗಮನಿಸಿದ ಇನ್ನೋರ್ವ ವ್ಯಕ್ತಿ ಹಲ್ಲೆ ಬಿಡಿಸಲು ಹೋಗಿ ಇಬ್ಬರಿಂದ ತಾನೇ ಹಲ್ಲೆಗೊಳಗಾಗಿದ್ದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ದರು. ಘಟನೆಯ ವಿವರ....
ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಎತ್ತಿನಹೊಳೆ ಬಸ್ ನಿಲ್ದಾಣದಲ್ಲಿ ಕಸದ ರಾಶಿ ತುಂಬಿದ್ದು ಕಾಡುಬಳ್ಳಿ ಹಬ್ಬಿದೆ. ಅಲ್ಲಿಯೇ ಒಂದು ಮೂಲೆಯಲ್ಲಿ ಕಸದ ರಾಶಿಗೆ ಬೆಂಕಿ ಹಾಕಿದ್ದು ಅನಾಗರಿಕತೆ ಎದ್ದು ಕಾಣುತ್ತಿದೆ. ಬಸ್ ನಿಲ್ದಾಣದ ಎದುರು ಭಾಗದಲ್ಲಿ ಇಂಡಸ್ಟ್ರಿ ಕಾರ್ಮಿಕರು ಸ್ವಚ್ಚತೆ ಮಾಡಿ ಸಾಮಾಜಿಕ ಕಳಕಳಿ ತೋರುತ್ತಾರೆ. ಬಸ್ ನಿಲ್ದಾಣದ ಪರಿಸ್ಥಿತಿ ಬಗ್ಗೆ ಗ್ರಾಮ ಪಂಚಾಯತ್...
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಡಬಲ್ ಇಂಜಿನ್ ಸರಕಾರದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆ ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಇದನ್ನು ಬಿಜೆಪಿಗರಿಗೆ ಸಹಿಸಲು ಆಗುತ್ತಿಲ್ಲ. ಈ ಕಾರಣಕ್ಕೆ ರೈತರ ಹೆಸರಿನಲ್ಲಿ ಬಿಜೆಪಿಯವರು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ ಹೊರತು ರೈತರ ಮೇಲಿನ ಕಾಳಜಿಯಿಂದಲ್ಲ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಹೇಳಿದೆ. ಮುಂದಿನ...
ಅರಂತೋಡು ಗ್ರಾಮ ಪಂಚಾಯತ್ ನಿಂದ ಕೂಗಳತೆ ದೂರದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಪುಟ್ ಪಾತ್ ಮಲ್ಲಿಕಾ ಹೋಟೆಲ್ ಮುಂಬಾಗದಲ್ಲಿ ಕುಸಿತಗೊಂಡಿದ್ದು, ಇಲ್ಲಿ ನಡೆದಾಡುವ ಸಾರ್ವಜನಿಕರಿಗೆ ತೊಂದರಡಯಾಗುತ್ತಿದೆ. ಹಲವು ಸಮಯಗಳಿಂದ ಮುರಿದು ಬಿದ್ದಿರುವ ಸ್ಲಾಬ್ ಅನ್ನು ಇನ್ನಾದರೂ ಎಚ್ಚೆತ್ತು ಗ್ರಾಮ ಪಂಚಾಯತ್ ಮತ್ತು ಹೆದ್ದಾರಿ ಪ್ರಾಧಿಕಾರವು ಸರಿ ಪಡಿಸುವುದೇ ಎಂದು ಕಾದು ನೋಡಬೇಕಿದೆ.
Loading posts...
All posts loaded
No more posts
