ಅಂಬಟೆ ಅಡ್ಕ – ಕುಲೈತೋಡಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಲ್ಮಡ್ಕ ಗ್ರಾಮದ ಅಂಬಟೆ ಅಡ್ಕ- ಕುಲೈತೋಡಿ ರಸ್ತೆ ಕಾಂಕ್ರೀಟೀಕರಣಗೊಂಡಿದ್ದು ಶಾಸಕಿ ಭಾಗೀರಥಿ ಮುರುಳ್ಯ ಇಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಸ್.ಅಂಗಾರ, ಕಲ್ಮಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಗ್ರಾ.ಪಂ.ಉಪಾಧ್ಯಕ್ಷರು , ಸದಸ್ಯರು ಹಾಗೂ ಕಲ್ಮಡ್ಕ ಮುಪ್ಪೇರ್ಯ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.

ಗಾಣಿಗ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ

ಸಮುದಾಯದ ಬೇಡಿಕೆಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ : ಗಾಣಿಗ ಸಮ್ಮಿಲನದಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಗಾಣದ ಪ್ರತಿಷ್ಟಾ ಕಾರ್ಯಕ್ರಮದಲ್ಲಿ ಈ ಹಿಂದೆ ಭಾಗವಹಿಸಿದ್ದೆ, ಇದೀಗ ನಡೆಯುತ್ತಿರುವ ಗಾಣಿಗ ಸಮ್ಮಿಲನ ಕಾರ್ಯಕ್ರಮವನ್ನು ನೋಡಿದಾಗ ನನಗೆ ಭಹಳ ಸಂತೋಷವಾಗುತ್ತಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಇಂದು ಸುಳ್ಯದಲ್ಲಿ ನಡೆದ ಗಾಣಿಗ ಸಮ್ಮೀಲನ ಕಾರ್ಯಕ್ರಮದ ಉದ್ಘಾಟನೆಯ...
Ad Widget

ಸುಳ್ಯ : ಕಸ ತಂದು ರಸ್ತೆ ಬದಿಯಲ್ಲಿ ಎಸೆದವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ- ಅದರಲ್ಲಿದೆ ಪಕ್ಷದ ಅಭ್ಯರ್ಥಿಯ ಭಾವಚಿತ್ರವಿರುವ ಕರಪತ್ರ

ಅಜ್ಜಾವರ - ನಾರ್ಕೊಡು ರಸ್ತೆಯ ಬದಿಯ ಅರಣ್ಯ ಪ್ರದೇಶದಲ್ಲಿ ಯಾರೋ ಕಸ ತಂದು ಸುರಿದಿದ್ದು ಕ್ರಮ ಕೈಗೊಳ್ಳಲು ಜನ ಆಗ್ರಹಿಸಿದ್ದಾರೆ. ಈ ಕಸದ ರಾಶಿಯಲ್ಲಿ ಸುಳ್ಯದ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾಳ್ಕರ್ ಅವರ ಭಾವಚಿತ್ರ ವಿರುವ ಪೇಪರ್ ಪೋಸ್ಟರ್ ಗಳು ಪತ್ತೆಯಾಗಿದೆ. ಅಜ್ಜಾವರದಿಂದ ಮೇದಿನಡ್ಕ ನಾರ್ಕೊಡು ಗೆ ತೆರಳುವ ರಸ್ತೆಯ ಬದಿಯಲ್ಲಿ...

ಸುಬ್ರಹ್ಮಣ್ಯ : ಕೆ.ಎಸ್.ಎಸ್.ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಸುಬ್ರಹ್ಮಣ್ಯದ ನೂತನ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆಯು ಸೆ. 30ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀವತ್ಸ, ಸದಸ್ಯರು ವ್ಯವಸ್ಥಾಪನಾ ಸಮಿತಿ ಕುಕ್ಕೆ ಶ್ರೀ ದೇವಾಲಯ ಸುಬ್ರಹ್ಮಣ್ಯ ಇವರು ವಹಿಸಿದ್ದರು. 2023-24 ನೇ ಸಾಲಿನ ವಿದ್ಯಾರ್ಥಿ ಪರಿಷತ್ತನ್ನು ದೀಪ ಬೆಳಗಿಸುವುದರ ಮೂಲಕ ಶ್ರೀ ಕೇಶವ ಬಂಗೇರ, ಕನ್ನಡ ಉಪನ್ಯಾಸಕರು ನಾರಾಯಣಗುರು ಕಾಲೇಜು...

ಕುಮಾರ ಪರ್ವತ ಚಾರಣ ಆರಂಭ – ನಿರ್ಬಂಧ ತೆರವು

ಕುಕ್ಕೆ ಸುಬ್ರಹ್ಮಣ್ಯ ದಿಂದ ಕುಮಾರ ಪರ್ವತಕ್ಕೆ ಪ್ರತಿ ವರ್ಷ ಚಾರಣಿಗರ ಸಂಖ್ಯೆ ಜಾಸ್ತಿಯಾಗುತ್ತದೆ ಇರುತ್ತದೆ. ಈ ವರ್ಷ ಮೇ ತಿಂಗಳಿನಿಂದ ಅರಣ್ಯ ಇಲಾಖೆಯವರು ಚಾರಣಕ್ಕೆ ಪ್ರವಾಸಿಗರಿಗೆ /ಚಾರಣಿಗರಿಗೆ ನಿರ್ಬಂಧ ಗೋಳಿಸಿದ್ದರು. ಇದೀಗ ನಿರ್ಬಂಧ ಮುಕ್ತಗೊಳಿಸಿ ಚಾರಣಿಗರಿಗೆ ಅರಣ್ಯ ಇಲಾಖೆಯವರು ಅವಕಾಶ ನೀಡಿರುತ್ತಾರೆ. ಸೆ.29 ರಂದೇ ಬೃಹತ್ ಸಂಖ್ಯೆಯಲ್ಲಿ ಸುಮಾರು 750ಕ್ಕೂ ಅಧಿಕ ಚಾರಣಿಗರು ಜಮಾಯಿಸಿದ್ದರು. ವಿವಿಧ...

ಗಾಣಿಗ ಮಠಾಧೀಶರಾದ ಪೂರ್ಣಾನಂದ ಪುರಿ ಮಹಾಸ್ವಾಮೀಜಿ ಸುಳ್ಯಕ್ಕೆ – ನಾಳೆ ಗಾಣಿಗ ಸಮ್ಮಿಲನ

ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಇದರ ಆಶ್ರಯದಲ್ಲಿ ಅ.1ರಂದು ಸುಳ್ಯದಲ್ಲಿ ಗಾಣಿಗ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಜರುಗಲಿರುವ ಗಾಣಿಗ ಸಮ್ಮಿಲನ 2023 ಕಾರ್ಯಕ್ರಮದ ಭಾಗಿಯಾಗಲು ಗಾಣಿಗ ಮಠಾಧಿಶರಾದ ಶ್ರೀ ಶ್ರೀ ಶ್ರೀ ಪೂರ್ಣಾನಂದ ಪುರಿ ಮಹಾಸ್ವಾಮೀಜಿ ಗಳು ಸುಳ್ಯಕ್ಕೆ ಆಗಮಿಸಿದ್ದಾರೆ. ಸ್ವಾಮಿಜಿಯವರನ್ನು ಸಂಘದ ಪದಾಧಿಕಾರಿಗಳು ಭೇಟಿ...

ಕಾಂಗ್ರೆಸ್ ಸರಕಾರ ಇದ್ದರೂ ನಗರ ಪಂಚಾಯತ್ ಮುಖ್ಯಾಧಿಕಾರಿ ಬಿಜೆಪಿ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ: ವೆಂಕಪ್ಪ ಗೌಡ ಆರೋಪ

ಅಕ್ಟೊಬರ್ 2 ರಂದು ಸುಳ್ಯ ನಗರ ಪಂಚಾಯತ್ ವತಿಯಿಂದ ನಡೆಯುವ ಗಾಂಧೀಜಯಂತಿ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅಥಿತಿಗಳ ಪಟ್ಟಿಯಲ್ಲಿ ಒಬ್ಬ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ವಿನಯಕುಮಾರ ಕಂದಡ್ಕರ ಹೆಸರನ್ನು ಪಂಚಾಯತ್ ಅಧಿಕಾರಿಗಳು ಹಾಗು ಆಡಳಿತಾಧಿಕಾರಿಗಳು ಅಚ್ಚು ಹಾಕಿಸಿದ್ದಾರೆ ,ಇದನ್ನು ಪ್ರಶ್ನಿಸಿದಾಗ ನಮ್ಮ ಮುಖ್ಯಧಿಕಾರಿ ಹೇಳುತ್ತಾರೆ ಅವರನ್ನು ನಿಕಟಪೂರ್ವ ಅಧ್ಯಕ್ಷರ ನೆಲೆಯಲ್ಲಿ ಅಥಿತಿ ಮಾಡಿದ್ದೇವೆ ಎಂದು,...

ಯುವಜನ ಸಂಯುಕ್ತ ಮಂಡಳಿ ಯುವಜನ ಸೇವಾ ಸಂಸ್ಥೆ ವತಿಯಿಂದ ನ.7. ಗಾಂಧಿಜಯಂತಿ ಆಚರಣೆ ಮತ್ತು ಗಾಂಧಿಸ್ಮೃತಿ ಪ್ರಶಸ್ತಿ ಪ್ರದಾನ – ಆಮಂತ್ರಣ ಪತ್ರಕೆ ಬಿಡುಗಡೆ

ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ತಾಲೂಕು ಮತ್ತು ಯವಜನ ಸೇವಾ ಸಂಸ್ಥೆ(ರಿ.) ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ 2023 ರ ಗಾಂಧಿಜಯಂತಿ ಆಚರಣೆ ಮತ್ತು ಗಾಂಧಿಸ್ಕೃತಿ ಪ್ರಶಸ್ತಿ ಪ್ರಧಾನ' ಕಾರಕ್ರಮವನ್ನು ಸಂಘಟಿಸಿದ್ದು, ನವಂಬರ್ 7 ಶನಿವಾರದಂದು ಹರಿಹರ ಪಲ್ಲತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನ ಕಲಾಮಂದಿರದಲ್ಲಿ ನಡೆಯಲಿದೆ ಎಂದು ದೀಪಕ್ ಕುತ್ತಮೊಟ್ಟೆ ತಿಳಿಸಿದರು. ಅವರು ಪ್ರೆಸ್...

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ, ಕಡಬಕ್ಕೆ ಅ.೬ರಂದು ಶೌರ್ಯ ರಥಯಾತ್ರೆ ಆಗಮನ ಶೌರ್ಯ ಸಂಗಮ ಕಾರ್ಯಕ್ರಮ.

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ, ಕಡಬಕ್ಕೆ ಅ.೬ರಂದು ಶೌರ್ಯ ರಥಯಾತ್ರೆ ಆಗಮನವಾಗಲಿದ್ದು ಶೌರ್ಯ ಸಂಗಮ ಕಾರ್ಯಕ್ರಮವು ಸುಳ್ಯ ಚೆನ್ನಕೇಶವ ದೇವಾಲಯದ ಬಳಿಯಲ್ಲಿ ಜರುಗಲಿದೆ ಎಂದು ವೆಂಕಟ್ ವಳಲಂಬೆ ತಿಳಿಸಿದರು.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮದು ಶೌರ್ಯ ಪರಾಕ್ರಮಗಳ ಇತಿಹಾಸ, ಸಾವಿರಾರು ವರ್ಷಗಳಿಂದ ಈ ರಾಷ್ಟ್ರದ ಮೇಲೆ ಪರಕೀಯರ ಆಕ್ರಮಣಗಳು...

ಅ.03: ಸುಳ್ಯದಲ್ಲಿ ಗಾಂಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಜಿಲ್ಲಾ ಮಟ್ಟದ ಸಮಾವೇಶ – ಡಾ. ಡಿ. ವೀರೇಂದ್ರ ಹೆಗ್ಗಡೆ ಭಾಗಿ

ಅಕ್ಟೋಬರ್ ೦3 ರಂದು ನಡೆಯಲಿರುವ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಜಾಥ ಮತ್ತು ಜಿಲ್ಲಾ ಮಟ್ಟದ ಸಮಾವೇಶ ಸುಳ್ಯದ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಮುದಾಯ ಭವನದಲ್ಲಿ ಜರುಗಲಿದೆ ಎಂದು ಜಿಲ್ಲಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ತಿಳಿಸಿದರು. ಸೆ 30 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಕ್ಟೋಬರ್ 2  ಮಹಾತ್ಮ...
Loading posts...

All posts loaded

No more posts

error: Content is protected !!