ಸೋಣಂಗೇರಿ ವೃತ್ತಕ್ಕೆ ಮೋಹನ್ ಸೋನ ಹೆಸರಿಡಲು ಒತ್ತಾಯ

ಪ್ರಸಿದ್ಧ ಚಿತ್ರಕಲಾವಿದ ಮೋಹನ ಸೋನ ಅವರ ನೆನಪು ಕಾರ್ಯಕ್ರಮವು ಇಂದು ಸಂಜೆ ಸೋಣಂಗೇರಿಯಲ್ಲಿ ನಡೆಯಲಿದ್ದು, ಅವರು ಕಲಾ ಕ್ಷೇತ್ರಕ್ಕೆ ನೀಡಿದ ಸಾಧನೆಯನ್ನು ಗೌರವಿಸಿ ಸೋಣಂಗೇರಿ ವೃತ್ತಕ್ಕೆ ಮೋಹನ್ ಸೋನರವರ ಕಲಾಚಿತ್ರ ಅಳವಡಿಸಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸೋನರವರ ಅಭಿಮಾನಿಗಳು ಒತ್ತಾಯಿಸಿದರು. ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ...

ಗೂನಡ್ಕದಲ್ಲಿ ಹಟ್ಟಿಯಿಂದ ದನ ಕಳ್ಳತನ ಪ್ರಕರಣ ಕುಖ್ಯಾತ ದನಗಳ್ಳ ಆರೋಪಿಗಳನ್ನು ಬಂಧಿಸಿದ ಪೋಲಿಸ್.

ಸುಳ್ಯ ಗೂನಡ್ಕದಲ್ಲಿ ಕೆಲ ತಿಂಗಳುಗಳ ಹಿಂದೆ ವರದರಾಜ್ ಎಂಬುವವರ ಮನೆಯ ಹಟ್ಟಿಯಿಂದ ದನ ಕಳ್ಳತನ ಪ್ರಕರಣ ನಡೆದಿತ್ತು ಇದೀಗ ಪೋಲಿಸ್ ಇಲಾಖೆಯ ಅಧಿಕಾರಿಗಳು ಆರೋಪಿಗಳ ಸಹಿತ ಪಿಕಪ್ ಮತ್ತು ಒಂದು ಸ್ವಿ್ಫ್ಟ್ ಕಾರು ಸಹಿತ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದು ಸ್ಥಳ ಮಹಜರು ನಡೆಸಲು ಕರೆದೋಯ್ದು ಇದೀಗ ವಾಪಸ್ ಕರೆತರುತ್ತಿರುವುದಾಗಿ ತಿಳಿದು ಬಂದಿದೆ . ಕ್ರೈಂ ಎಸೈ...
Ad Widget

ಸೇವಾ ಕೈಂಕರ್ಯವೆಂಬ ಶ್ರೇಷ್ಠ ಮನೋಭಾವನೆ ಮೂಡಲು ಎನ್ನೆಸ್ಸೆಸ್ ರಹದಾರಿ –  ಪ್ರೊ.ಸುಬ್ಬಪ್ಪ ಕೈಕಂಬ ಅಭಿಮತ

ಸುಬ್ರಹ್ಮಣ್ಯ: ಸೇವಾ ಕೈಂಕರ್ಯವೆಂಬ ಶ್ರೇಷ್ಠ ಮನೋಭಾವನೆ ಯುವ ಜನಾಂಗದಲ್ಲಿ ಅನುರಣಿತವಾಗಲು ಎನ್ನೆಸ್ಸೆಸ್ ರಹದಾರಿ. ಯುವ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ಈಡೇರಿಸುವ ಶಕ್ತಿ ರಾಷ್ಟ್ರೀಯ ಸೇವಾ ಯೋಜನೆಯಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇದು ರಹದಾರಿ. ಸೇವೆಯು ಬದುಕಿನ ಅವಿಭಾಜ್ಯ ಅಂಗ ಎಂಬ ಪಾಠವನ್ನು ವಿದ್ಯಾರ್ಥಿ ಯುವ ಜನಾಂಗಕ್ಕೆ ಬೋಧಿಸುವ ಅನನ್ಯ ಕಾರ್ಯವನ್ನು ಎನ್‌ಎಸ್‌ಎಸ್ ನೆರವೇರಿಸುತ್ತಾ ಬಂದಿದೆ.ಬದುಕನ್ನು ಕಟ್ಟಿಕೊಳ್ಳಲು...

ಸುಳ್ಯ : ಸ್ಕೌಟ್ ಮತ್ತು ಗೈಡ್ ತರಬೇತಿ ಶಿಬಿರ ಸಮಾರೋಪ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸುಳ್ಯ ಮತ್ತು ಸ .ಪ.ಪೂ.ಕಾಲೇಜು. ಸುಳ್ಯದ ಸಹಯೋಗದಲ್ಲಿ ಅ. 9 ರಂದು ಆರಂಭಗೊಂಡ ಪಟಾಲಂ ಮತ್ತು ಷಟ್ಕಾನಾಯಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಅ.10 ರಂದು ಅಪರಾಹ್ನ 3ಗಂಟೆಗೆ ಶಿಭಿರಾಗ್ನಿ ಕಾರ್ಯಕ್ರಮದೊಂದಿಗೆ ನಡೆಯಿತು. ಜೂಲ್ ಗಳಿಂದ ಅಗ್ನಿ ಸ್ಪರ್ಶ ವಾದ ಶಿಭಿರಾಗ್ನಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ...

ಪುರಾತನ ಕಾಲದಿಂದಲೂ ಬಳಕೆ ಆಗುತ್ತಿರುವ ಲೀಚ್ ( ಜಿಗಣೆ,ಉಂಬುಳು) ಥೆರಪಿ

ಲೀಚ್ ಎಂದು ಆಂಗ್ಲಭಾಷೆಯಲ್ಲಿ ಕರೆಸಿಕೊಳ್ಳುವ ‘ಜಿಗಣೆ’ ಅಥವಾ ‘ಇಂಬಳ’ ಸಾಮಾನ್ಯವಾಗಿ ತೇವವಿರುವ ಜಾಗಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ. ಈ ಜೀವಿಯ ಆಹಾರ ಮತ್ತು ವಾಸಸ್ಥಳ ಎಲ್ಲವೂ ಜಲವೇ ಆಗಿರುವುದರಿಂದ ಇವುಗಳಿಗೆ ‘ಜಲೌಕ’ ಎಂದೂ ಕರೆಯುತ್ತಾರೆ. ವಿಷಕಾರಕ ಜಿಗಣೆ ಮತ್ತು ವಿಷರಹಿತ ಜಿಗಣೆ ಎಂದು ಎರಡು ವಿಧಗಳಿದ್ದು, ವಿಷರಹಿತ ಜಿಗಣೆಗಳನ್ನು ಚಿಕಿತ್ಸೆಗಾಗಿ ಬಳಸುತ್ತಾರೆ. ಕಾಡು ಪ್ರದೇಶಗಳಲ್ಲಿ...

ಸುಬ್ರಹ್ಮಣ್ಯ : ಎಸ್.ಎಸ್.ಪಿ.ಯು. ಕಾಲೇಜಿಗೆ ಹಿರಿಯ ವಿದ್ಯಾರ್ಥಿ ರಾಕೇಶ್ ಬೆಂಗಳೂರು ಅವರಿಂದ ರೂ 1 ಲಕ್ಷ ದೇಣಿಗೆ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಎಸ್ ಎಸ್ ಪಿಯು ಕಾಲೇಜಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಉದ್ಯಮಿ ರಾಕೇಶ್ ಬೆಂಗಳೂರು ಅವರು 1ಲಕ್ಷ ರೂ ದೇಣಿಗೆ ನೀಡಿದ್ದಾರೆ. ಅ.11 ರಂದು ಕಾಲೇಜಿಗೆ ಆಗಮಿಸಿ ಪ್ರಾಂಶುಪಾಲ ಸೋಮಶೇಖರ್ ನಾಯಕ್ ಅವರಿಗೆ ದೇಣಿಗೆಯ ಚೆಕ್ ಹಸ್ತಾಂತರಿಸಿದರು.ಕಾಲೇಜಿನಲ್ಲಿ ನಡೆಯುವ ಸ್ಪಧಾತ್ಮಕ ಪರಿಕ್ಷಾ ತರಬೇತಿ ಕಾರ್ಯಕ್ಕೆ, ಕಾಲೇನಜಿನಲ್ಲಿ ಗಾರ್ಡನಿಂಗ್,...

ಸುಬ್ರಹ್ಮಣ್ಯ : ಕಾರಿನ ಗಾಜು ಒಡೆದು  ಕಳ್ಳತನ ಮಾಡಿದಾತನನ್ನು ಬಂಧಿಸಿದ ಪೊಲೀಸರು

ಕುಕ್ಕೆ ಸುಬ್ರಹ್ಮಣ್ಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಕಳ್ಳತನ ಮಾಡಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಕಾರ್ತಿಕ್ ಹಾಗೂ ಮುರಳಿಧರ ನಾಯಕ್, ಕರುಣಾಕರ ಹಾಗೂ ಸಿಬ್ಬಂದಿಗಳ ಎರಡು ತಂಡ ರಚಿಸಿಆರೋಪಿಯನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದರು. ಇಂದು ಸುಬ್ರಮಣ್ಯ ರೋಡ್ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಪ್ರಭಾಕರ ಹೊನ್ನವಳ್ಳಿ ಎಂಬಾತನನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ...

ಅಲ್ ಅಮೀನ್ ಚಾರಿಟಬಲ್ ಟ್ರಸ್ಟ್ (ರಿ) ಪೆರಾಜೆ ಇದರ ವತಿಯಿಂದ ಮಾದಕ ವ್ಯಸನದ ವಿರುದ್ದ ಭಾರತದಾದ್ಯ ಜನಜಾಗೃತಿ ಯಾತ್ರೆ.

ಅಲ್ ಅಮೀನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾದಕ ವ್ಯಸನದ ವಿರುದ್ದ ಭಾರತದಾದ್ಯ ಜನಜಾಗೃತಿ ಯಾತ್ರೆ ದಿನಾಂಕ 12-10-23ರಂದು ಪೆರಾಜೆಯಿಂದ ಪ್ರಾರಂಭವಾಗಲಿದೆ ಎಂದು ಟ್ರಸ್ಟ್‌ ನ ಅಧ್ಯಕ್ಷರಾದ ಉನೈಸ್ ಪೆರಾಜೆ ಹೇಳಿದರು. ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಇದೀಗ ನಾಡಿನೆಲ್ಲೆಡೆ ಯುವ ಜನತೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ ಅಲ್ಲದೇ ಕೆಲವು ಕಡೆಗಳಲ್ಲಿ...

ನಾಲ್ಕೂರು : ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸ್ವಚ್ಛತಾ ಜಾಗೃತಿ ನಾಮಫಲಕ ಅಳವಡಿಕೆ

ನಾಲ್ಕೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಪರಿಸರ ಹಾಗೂ ಸ್ವಚ್ಚತಾ ಅಭಿಯಾನದ ಅಂಗವಾಗಿ ಜಾಗೃತಿ ನಾಮಫಲಕವನ್ನು ತಾಲೂಕು ಭಜನಾ ಪರಿಷತ್ ನಿರ್ದೇಶಕ ಶ್ರೀ ವಿಜಯಕುಮಾರ್ ಚಾರ್ಮತ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಹರೀಶ್ ಕೊಯಿಲ ಅನಾವರಗೊಳಿಸಿದರು. ಈ ಸಂದರ್ಭದಲ್ಲಿ ಗುತ್ತಿಗಾರು ವಲಯ ಮೇಲ್ವಿಚಾರಕ ಶ್ರೀ ಬಾಲಕೃಷ್ಣ ಗೌಡ, ವಿಪತ್ತು ಸಂಯೋಜಕ ಹರಿಶ್ಚಂದ್ರ ಕುಳ್ಳಂಪ್ಪಾಡಿ,...

ಸುಳ್ಯ : ಸಾಹಿತಿ ಶಿವರಾಮ ಕಾರಂತರ ಜನ್ಮ ದಿನಾಚರಣೆ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಂಸ್ಕೃತಿಕ ಸಂಘ ಐಕ್ಯೂಏಸಿ ವಿಭಾಗ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇವರುಗಳ ಆಶ್ರಯದಲ್ಲಿ ಖ್ಯಾತ ಸಾಹಿತಿ ಡಾ.ಕೆ.ಶಿವರಾಮ ಕಾರಂತರ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಫ್ರೊ‌.ದಾಮೋದರ ಕಣಜಾಲುರವರು ಶಿವರಾಮ ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ "ಶಿವರಾಮ...
Loading posts...

All posts loaded

No more posts

error: Content is protected !!