ಮಾಣಿಲ ಶ್ರೀ ಕ್ಷೇತ್ರದಲ್ಲಿ ನಾದ ಪಯಸ್ವಿನಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ

ಶ್ರೀ ದುರ್ಗಾ ಮಹಾಲಕ್ಷ್ಮೀ ದೇವಸ್ಥಾನ ಶ್ರೀಧಾಮ ಮಾಣಿಲದಲ್ಲಿ ಶ್ರೀಶರನ್ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ನಾದ ಪಯಸ್ವಿನಿ ಭಜನಾ ತಂಡ (ರಿ) ಹೊಸಗದ್ದೆ ಸುಳ್ಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮವನ್ನು ಜನಾರ್ಧನ.ಜಿ.ಜಯನಗರ, ಭವನ್ ನಾರಜೆ, ಅನಿಲ್ ಕುದ್ಪಾಜೆ, ಮನೋಜ್ ಕುದ್ಪಾಜೆ, ನಮಿತಾ ಕುದ್ಪಾಜೆ, ರಶ್ಮಿತಾ ಕುದ್ಪಾಜೆ, ಆತ್ಮಿಕ.ಜಿ.ಜಯನಗರ, ಅಂಕಿತ ಕುದ್ಪಾಜೆ, ಯಶ್ವಿನಿ.ಬಿ.ಯಸ್...

ವಿಮೆಗೊಳಪಡದ ಜಾನುವಾರುಗಳು ಮೃತಪಟ್ಟರೆ ಪರಿಹಾರ ಲಭ್ಯ – ನಿತಿನ್ ಪ್ರಭು.

ಕರ್ನಾಟಕ ಸರ್ಕಾರ ಮತ್ತು ಹಾಲು ಉತ್ಪಾದಕರ ಒಕ್ಕೂಟ ಇವುಗಳ ವಿವಿಧ ಯೋಜನೆಗಳಲ್ಲಿ ವಿಮೆಗೆ ಒಳಪಟ್ಟಿರುವ ರೈತರ ಜಾನುವಾರುಗಳು ಮರಣ ಹೊಂದಿದ್ದಲ್ಲಿ ವಿಮಾ ಮೊತ್ತವು ರೈತರಿಗೆ ಸಲ್ಲಿಕೆಯಾಗಿರುತ್ತದೆ. ಆದರೆ ಯಾವುದೇ ವಿಮಾ ಯೋಜನೆಗಳಲ್ಲಿ ವಿಮೆಗೆ ಒಳಪಡದ ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ ರೈತರಿಗೆ ಯಾವುದೇ ಸಹಾಯಧನ ಅಥವಾ ಪರಿಹಾರ ದೊರಕುವುದಿಲ್ಲ. ಆದ್ದರಿಂದ 2023-24ನೇ ಸಾಲಿನಲ್ಲಿ ಅನುಗ್ರಹ ಯೋಜನೆಯಡಿಗೆ...
Ad Widget

ಈಶ್ವರಮಂಗಲ ತೆರಳುತ್ತಿದ್ದ ವ್ಯಾನ್ ಪಾಲ್ತಾಡಿನಲ್ಲಿ ಪಲ್ಟಿ – ಪ್ರಯಾಣಿಕರಿಗೆ ಗಾಯ

ಬೆಳ್ಳಾರೆ ಸಮೀಪದ ಪಾಲ್ತಾಡಿನಲ್ಲಿ ವ್ಯಾನೊಂದು ಇದೀಗ ಪಲ್ಟಿಯಾದ ಘಟನೆ ವರದಿಯಾಗಿದೆ.ವ್ಯಾನಿನಲ್ಲಿ ಸುಮಾರು 15ಕ್ಕು ಹೆಚ್ಚಿನ ಜನರು ವ್ಯಾನ ನಲ್ಲಿ ಮಣಿಕ್ಕಾರದಿಂದ ಈಶ್ವರಮಂಗಲ ಕಡೆಗೆ ಹೋಗುತ್ತಿತ್ತೆನ್ನಲಾಗುತ್ತಿದ್ದು ಗಾಯಗೊಂಡವನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.ವ್ಯಾನ್ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರ ಕೆಲ ಕಾಲ ಸಂಪೂರ್ಣ ಸ್ಥಗಿತಗೊಂಡಿದ್ದು ಪಲ್ಟಿಯಾದ ವ್ಯಾನ್ ನ್ನು ಕ್ರೈನ್ ಮೂಲಕ...

ಹಿಂದೂ ಜಾಗರಣ ವೇದಿಕೆ ಹಾಗೂ ಸಾರ್ವಜನಿಕ ಆಯುಧ ಪೂಜಾ ಸೇವಾ ಸಮಿತಿಯ ಜಂಟಿ ಆಶ್ರಯದಲ್ಲಿ ಆಯುಧ ಪೂಜೆ ಮತ್ತು ಧಾರ್ಮಿಕ ಸಭೆ.

ದೇಶದ ಸಂಸ್ಕೃತಿ ಮತ್ತು ಆಚಾರ ವಿಚಾರಗಳಲ್ಲಿ ಹಿಂದೂ ಧರ್ಮದ ಸತ್ವವಿದೆ- ಚಿನ್ಮಯ್ . ಮಂಡೆಕೋಲು: ದೇಶದ ಸಂಸ್ಕೃತಿ ಮತ್ತು ಆಚಾರ ವಿಚಾರಗಳಲ್ಲಿ ಹಿಂದೂ ಧರ್ಮದ ಸತ್ವವಿದೆ. ಇಂತಹ ಉದಾತ್ತವಾದ ಹಿಂದೂ ಧರ್ಮವನ್ನು ನಾಶಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಎಂದು ಹಿಂದು ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಮಿತಿ ಸದಸ್ಯ ಚಿನ್ಮಯ್ ಈಶ್ವರಮಂಗಲ ಹೇಳಿದರು. ಅವರು...

ಬೆಳ್ಳಾರೆ: ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯಲ್ಲಿ ಆಯುಧಪೂಜೆ

ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯಲ್ಲಿ ಅ.22ರಂದು ಆಯುಧಪೂಜೆ ಕಾರ್ಯಕ್ರಮ ನಡೆಯಿತು. ಆಯುಧಪೂಜೆಯ ಅಂಗವಾಗಿ ಪೂರ್ವಾಹ್ನ ಗಣಹೋಮ ನೆರವೇರಿತು. ಈ ಸಂದರ್ಭದಲ್ಲಿ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯ ಮಾಲಕರಾದ ವಸಂತ್ ಕುಮಾರ್ ನಾಲ್ಗುತ್ತು, ಗಗನ್ ನಾಲ್ಗುತ್ತು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ದೇವಚಳ್ಳ :  ಅಗ್ನಿಪಥ್ ಗೆ ಆಯ್ಕೆಯಾದ ಅಭಿಷೇಕ್ ತಳೂರು ಹಾಗೂ ಕಾರ್ತಿಕ್ ಚಿದ್ಗಲ್ ಅವರಿಗೆ ಸನ್ಮಾನ

  ದೇವಚಳ್ಳ ಗ್ರಾಮದಿಂದ ಭಾರತೀಯ ಭೂ ಸೇನೆಯ ಅಗ್ನಿಪಥ್ ಗೆ ಆಯ್ಕೆಯಾದ ಅಭಿಷೇಕ್ ಮೆತ್ತಡ್ಕ ಹಾಗೂ ಕಾರ್ತಿಕ್ ಚಿದ್ಗಲ್ ರಿಗೆ ದೇವಚಳ್ಳ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನ ಕಾರ್ಯಕ್ರಮ ಇಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು  ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ನಿವೃತ್ತ ಹವಾಲ್ದಾರ್ ಚಂದ್ರಶೇಖರ ಅಚ್ರಪ್ಪಾಡಿ,...

ಅರಂತೋಡು ಶಾಲಾ ಅಭಿವೃಧಿ ಸಮಿತಿಯಿಂದ ಸ್ಪೀಕರ್ ಯು.ಟಿ.ಖಾದರ್ ಭೇಟಿ.

ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಆಚರಿಸಿದ ಶಾಲಾ ಅಭಿವೃಧಿ ಸಮಿತಿಯಿಂದ ಸ್ಪೀಕರ್ ಯು ಟಿ ಖಾದರ್ ರವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿ ಆಂಗ್ಲ ಮಾಧ್ಯಮ ತರಗತಿ ಮಂಜೂರಾತಿ ಗೊಳಿಸುವ ಬಗ್ಗೆ ಮನವಿ ಸಲ್ಲಿಸಲಾಯಿತು.ಮತ್ತು ಶಾಲೆ ಯನ್ನು ಅಭಿವೃಧಿ ಪಡಿಸುವ ಕುರಿತು ಮನವಿ ನೀಡಿದರು. ಅರಂತೋಡು ಶಾಲೆ ಯ ಬಗ್ಗೆ ಮೆಚ್ಚುಗೆ ವ್ಯಕ್ತ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ಯೋಜನಾ ಕಚೇರಿಯಲ್ಲಿ ಆಯುಧ ಪೂಜಾ ಕಾರ್ಯಕ್ರಮ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ಯೋಜನಾ ಕಚೇರಿಯಲ್ಲಿ ಶನಿವಾರ ಆಯುಧ ಪೂಜಾ ಕಾರ್ಯಕ್ರಮ ಆಭಿರಾಮ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ಯೋಜನಾ ಕಚೇರಿಯ ಯೋಜನಾ ಅಧಿಕಾರಿ ನಾಗೇಶ್,ಕಚೇರಿ ವ್ಯವಸ್ಥಾಪಕರಾದ ಆತಿಷ್,ಮೇಲ್ವಿಚಾರಕರರು,ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಎಪಿಎಲ್ ಪಡಿತರ ಚೀಟಿಯ ಫಲಾನುಭವಿಗಳಿಗೆ ಪಡಿತರ ಒದಗಿಸುವ ಕುರಿತು ಸಚಿವರಿಗೆ ಸುಳ್ಯ ಶಾಸಕರಿಂದ ಮನವಿ

ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಮತ್ತು ಕಡಬ ತಾಲೂಕಿನ ಎಪಿಎಲ್ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಸುಮಾರು ಮೂರು ತಿಂಗಳಿನಿಂದ ಪಡಿತರ ಪೂರೈಕೆಯಾಗದಿರುವ ಬಗ್ಗೆ ಪಡಿತರ ಆನ್ಲೈನ್ ತಂತ್ರಾಂಶದಲ್ಲಿ Willingness ಆಯ್ಕೆಯನ್ನು ಬ್ಲಾಕ್ ಮಾಡಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಹೆಚ್ಚಿನ ಫಲಾನುಭವಿಗಳಿಗೆ ಇದರಿಂದ ತೊಂದರೆಯಾಗುತ್ತಿದ್ದು, ಸದರಿ ಪಡಿತರವನ್ನು ಸೂಕ್ತ ರೀತಿಯಲ್ಲಿ ಫಲಾನುಭವಿಗಳಿಗೆ...

ಕೋಡಿಯಾಲ ಮೂವಪೆ ಅಂಗನವಾಡಿ ಅಹಾರ ಸಾಮಾಗ್ರಿ ಕಳವು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು.

ಸುಳ್ಯ ತಾಲೂಕು ಕೋಡಿಯಾಲ ಗ್ರಾಮದ ಮೂವಪೆ ಅಂಗನವಾಡಿ ಕೇಂದ್ರದ ಅಂಗನವಾಡಿ ಕೇಂದ್ರದಲ್ಲಿ ಅಹಾರ ಸಾಮಾಗ್ರಿಗಳನ್ನು ಕಳವುಗೈದ ಪ್ರಕರಣ ಬೆಳಕಿಗೆ ಬಂದಿದೆ. ಕಾರ್ಯಕರ್ತೆ ಶ್ರೀಮತಿ ಮೋಹಿನಿ ಎಂ ಎಂಬವರ ದೂರಿನಂತೆ, ದಿನಾಂಕ 19-10-2023 ರಂದು ಸಂಜೆಯಿಂದ ಮರುದಿನ ದಿನಾಂಕ 20-10-2023 ರಂದು ಬೆಳಿಗ್ಗಿನ ಅವಧಿಯಲ್ಲಿ ಯಾರೊ ಕಳ್ಳರು ಸದರಿ ಅಂಗನವಾಡಿ ಕೇಂದ್ರದ ಚಾವಣಿಯ ಹಂಚನ್ನು ಸರಿಸಿ ಒಳಪ್ರವೇಶಿಸಿ,...
Loading posts...

All posts loaded

No more posts

error: Content is protected !!