- Tuesday
- August 25th, 2026
ಗ್ರಾಮ ಗೌಡ ಸಮಿತಿ ಐನೆಕಿದು ಇದರ ವತಿಯಿಂದ ನ.15 ರಂದು ಐನೆಕಿದು ಅಮೃತ ಸಂಭ್ರಮ ಸಮುದಾಯ ಭವನದಲ್ಲಿ ದೀಪಾವಳಿ ಆಚರಣೆ ಕಾರ್ಯಕ್ರಮ ನಡೆಯಿತು.ಊರ ಗೌಡರಾದ ನರೇಂದ್ರ ಕೂಜುಗೋಡು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಗೌಡ ಸಮಿತಿ ಐನೆಕಿದು ಇದರ ಅಧ್ಯಕ್ಷರಾದ ದಾಮೋದರ ಗೌಡ.ಕೆ.ಎಸ್ ಕೂಜುಗೋಡು ಕಟ್ಟೆಮನೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬೆಳಕಿನ ಹಬ್ಬ ದೀಪಾವಳಿಯನ್ನು ಸಾಮೂಹಿಕವಾಗಿ ಆಚರಿಸುವುದರೊಂದಿಗೆ...
ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘದ ವತಿಯಿಂದ 24 ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ನ.18 ರಂದು ಸುಳ್ಯದ ಚೆನ್ನಕೇಶವದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ತಿಳಿಸಿದ್ದಾರೆ.
ಪಂಜ ಲಯನ್ಸ್ ಕ್ಲಬ್ ಹಾಗೂ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಕಾರ್ಯ ಕ್ರಮ ನಡೆಯಿತು .ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ,ಮನೋರಂಜನಾ ಕಾರ್ಯ ಕ್ರಮ ನಡೆಯಿತು . ಕಾರ್ಯ ಕ್ರಮದ ಸಭಾಧ್ಯಕ್ಸತೆ ಯನ್ನು ಲ.ದಿಲೀಪ್ ಬಾಬ್ಲು ಬೆಟ್ಟುರವರುವಹಿಸಿದರು .ಮುಖ್ಯಅತಿಥಿಯಾಗಿ ಮುಖ್ಯ ಶಿಕ್ಷಕರಾದ ಟೈಟಾಸ್ ವರ್ಗೀಸ್ ರವರು ಉಪಸ್ಥಿತರಿದ್ದರು...
ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಇದರ ಗೌರವ ಕಾರ್ಯದರ್ಶಿಗಳಾದ ಡಾ|| ಮುರಲೀ ಮೋಹನ್ ಚೂಂತಾರು ಅವರನ್ನು ಸಮಸ್ತ ಕನ್ನಡಿಗರ ಏಕಮಾತ್ರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಮಾರ್ಗದರ್ಶಿ ಸಮಿತಿಗೆ ಸದಸ್ಯರಾಗಿ ಕಸಾಪ ಇದರ ರಾಜ್ಯಾಧ್ಯಕ್ಷರಾದ ನಾಡೋಜ ಡಾ|| ಮಹೇಶ್ ಜೋಶಿ ಅವರು ದಿನಾಂಕ: 11-11-2023 ರಂದು ಆದೇಶ ನೀಡಿ...
ಇತ್ತೀಚೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ ಪಡೆದ ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ಸುಳ್ಯದ ಉದ್ಯಮಿ ಹನೀಫ್ ಬುಶ್ರಾ ರವರ ನಿವಾಸ "ಮೆಹಫಿಲ್" ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ನಿರ್ದೇಶಕರಾದ ರಮೇಶ್ ಭಟ್ ರವರು ಶಾಲು...
ಹಿಂದೂ ಸಮಾಜದ ಒಳಿತಿಗಾಗಿ ಜಾಗೃತಿಗಾಗಿ ದುಡಿಯುವ ಕಾರ್ಯಕರ್ತರನ್ನು ಹಿಂದೂ ವಿರೋಧಿ ಸರ್ಕಾರ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಗಡಿಪಾರು ಮಾಡುವ ಆದೇಶದ ಮೂಲಕ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಹುನ್ನಾರ ನಡೆಯುತ್ತಿದ್ದು ಸರಕಾರದ ಈ ದೋರಣೆಯನ್ನು ವಿಶ್ವಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ಬಲವಾಗಿ ಖಂಡಿಸುತ್ತದೆ. ಸದಾ ಗೋಮಾತೆಯ ರಕ್ಷಣೆಯಲ್ಲಿ ತೊಡಗಿರುವ ಹಾಗೂ ಹಿಂದೂ ಸಮಾಜದ ಒಳಿತಿಗಾಗಿ...
ಯುವಕ ಮಂಡಲ (ರಿ.) ಮಡಪ್ಪಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ದಿನಾಂಕ 12/11/23 ರಂದು ಯುವಕ ಮಂಡಲ ಸಭಾಭವನ ಮಡಪ್ಪಾಡಿ ಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಧನ್ಯಕುಮಾರ್ ದೇರುಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಲಿ ಸುಳ್ಯ ಇದರ...
ಸುಳ್ಯ ಪರಿಸರದಲ್ಲಿ ಚಿತ್ರೀಕರಣಕ್ಕೆ ಆಗಮಿಸಿದ ಚಲನ ಚಿತ್ರ ತಂಡದ ಸದಸ್ಯರಾದ ಹಿರಿಯ ನಿರ್ದೇಶಕರಾಗಿ ಹಲವು ಸಿನೇಮಾಗಳಿಗೆ ಪ್ರೇರಣಾ ಶಕ್ತಿಯಾಗಿ ಸೇವೆ ಸಲ್ಲಿಸುತ್ತಿರುವ ರಮೇಶ್ ಭಟ್, ಸಂಗೀತ ನಿರ್ದೇಶಕರಾಗಿರುವ ಸುಳ್ಯದ ಮಯೂರ ಅಂಬೆಕಲ್ಲು, ನಾಯಕ ನಟರಾಗಿರುವ ತೇಜಸ್ ಕಿರಣ್ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಉದ್ಯಮಿ ಹನೀಫ್ ಬುಶ್ರ ರವರ ಗೃಹ ಕಛೇರಿ [ಮೆಹಫಿಲ್] ಯಲ್ಲಿ ಸನ್ಮಾನಿಸಲಾಯಿತು....
ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಪೈಚಾರಿನಲ್ಲಿ ನ.16ರಂದು ಅಪರಾಹ್ನ ಸಂಭವಿಸಿದೆ. ಸುಳ್ಯದಿಂದ ಪುತ್ತೂರಿಗೆ ತೆರಳುತ್ತಿದ್ದ ಸುಳ್ಯದ ರೋಷನ್ ಎಂಬವರು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರು ಪೈಚಾರಿನ ಸುಪ್ರೀಂ ಚಿಕನ್ ಸೆಂಟರ್ ಸಮೀಪ ನಿಯಂತ್ರಣ ಕಳೆದು ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಚಾಲಕ ರೋಷನ್ ಅಪಾಯದಿಂದ...
Loading posts...
All posts loaded
No more posts
