ಮಂಡೆಕೋಲು : ಗ್ರಾ. ಪಂ. ಸದಸ್ಯ ದಿನೇಶ್ ಅಕ್ಕಪ್ಪಾಡಿ ವಿಧಿವಶ

ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಅಕ್ಕಪ್ಪಾಡಿ ಎಂಬುವವರು ವಿಧಿವಶರಾಗಿದ್ದಾರೆ.ಅವರು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಇಂದು ಅವರು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಅಡ್ಪಂಗಾಯ : ಅಯ್ಯಪ್ಪ ಮಂದಿರದಲ್ಲಿ ದುರ್ಗಾ ಪೂಜೆ – ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಧನು ಸಂಕ್ರಮಣದ ಪ್ರಯುಕ್ತ ವಿಶೇಷ ದುರ್ಗಾಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ (ರಿ) ಸನ್ನಿಧಾನ ಅಡ್ಪಂಗಾಯ ಇದರ ವತಿಯಿಂದ ಧನು ಸಂಕ್ರಮಣದ ಪ್ರಯುಕ್ತ ವಿಶೇಷ ದುರ್ಗಾಪೂಜಾ ಕಾರ್ಯಕ್ರಮ ಹಾಗೂ ಅಯ್ಯಪ್ಪ ಸ್ವಾಮಿಗೆ ಸಂಕ್ರಮಣ ಪೂಜೆಯು ಡಿ 17ನೇ ಆದಿತ್ಯವಾರದಂದು ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ನೆರೆವೇರಿತು....
Ad Widget

ಎಸ್.ಸಿ. ಸಮುದಾಯದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರಿಗೆ ಎಸ್.ಸಿ. ಪ್ರಮಾಣ ಪತ್ರ ನೀಡಲು ಆದೇಶ

ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರೆ ಅವರಿಗೆ ಪರಿಶಿಷ್ಟ ಜಾತಿಯವರೆಂದು ಪರಿಗಣಿಸಿ ಜಾತಿ ಪ್ರಮಾಣ ಪತ್ರ ನೀಡುವ ಕುರಿತು ಕೇಂದ್ರ ಸರ್ಕಾರವು ಪತ್ರದಲ್ಲಿ ನಮೂದಿಸಿರುವ ಷರತ್ತುಗಳಿಗೊಳಪಟ್ಟು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲು ರಾಜ್ಯ ಸರಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಬೌದ್ಧ ಸಂಘಟನೆಯ...

ಕುಮಾರ ಪರ್ವತ ಚಾರಣಿಗರ ನೆಚ್ಚಿನ ಗಿರಿಗದ್ದೆ ಭಟ್ರು ಇನ್ನಿಲ್ಲ

ಕುಮಾರ ಪರ್ವತ ಚಾರಣ ಮಾಡುವ ದಾರಿ ಮಧ್ಯೆ ಗಿರಿಗದ್ದೆ ಎಂಬಲ್ಲಿ ನೆಲೆಸಿದ್ದ ಮಹಾಲಿಂಗ ಭಟ್ಟರು ಸಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು . ಅವರಿಗೆ 67 ವರ್ಷ ವಯಸ್ಸಾಗಿತ್ತು. ಸುಬ್ರಹ್ಮಣ್ಯದಿಂದ 4 ಕಿಮೀ ದೂರದಲ್ಲಿ ದಾರಿ ಮಧ್ಯೆ ಸಿಗುವ ಮನೆಯೇ ಗಿರಿಗದ್ದೆ ಮಹಾಲಿಂಗ ಭಟ್ಟರದು. ಪ್ರವಾಸಿಗರಿಗೆ ಇಲ್ಲಿ ಊಟ ಹಾಗೂ ವಸತಿ ವ್ಯವಸ್ಥೆ...

ರುಡ್ ಸೆಟ್ ವತಿಯಿಂದ ಜೇನು ಸಾಕಾಣಿಕೆ ಬಗ್ಗೆ ಉಚಿತ ತರಬೇತಿ

ಧರ್ಮಸ್ಥಳದ ಸಮೀಪ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ 10 ದಿನಗಳ ಕಾಲ ಜೇನು ಸಾಕಾಣಿಕೆ ಬಗ್ಗೆ ಉಚಿತ ತರಬೇತಿ ಕಾರ್ಯಕ್ರಮ ಜ. 08 ರಿಂದ ಜ. 17 ರವರೆಗೆ ನಡೆಯಲಿದೆ.ವಯೋಮಿತಿ 18 ರಿಂದ 45 ವರ್ಷಗಳು. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು....

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಡಾ.ಕೇನಾಜೆ ನಿರ್ದೇಶನದ “ಪುರ್ಸ ಕಟ್ಟುನೆ” ಸಾಕ್ಷ್ಯಚಿತ್ರ ಆಯ್ಕೆ

2024ರ ಜನವರಿ 5 ರಿಂದ 9ರ ವರೆಗೆ ಕೇರಳದ ತ್ರಿಶೂರಿನಲ್ಲಿ ನಡೆಯುವ 7ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಡಾ.ಸುಂದರ ಕೇನಾಜೆ ಚಿತ್ರಕತೆ ಬರೆದು ನಿರ್ದೇಶನ ಮಾಡಿ ಇತ್ತೀಚಿಗೆ ಬಿಡುಗಡೆಗೊಳಿಸಿದ ತುಳು ಸಾಕ್ಷ್ಯಚಿತ್ರ "ಪುರ್ಸ ಕಟ್ಟುನೆ: ಇನಿ-ಕೋಡೆ- ಎಲ್ಲೆ" ಆಯ್ಕೆಯಾಗಿದೆ.ತುಳು ವಿಕಿಪೀಡಿಯ ಫೌಂಡೇಶನ್ ತಯಾರಿಸಿದ ಈ ಸಾಕ್ಷ್ಯಚಿತ್ರದ ನಿರ್ಮಾಣವನ್ನು ಸುಳ್ಯದವರೇ ಆದ ಭರತೇಶ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ...

ಲೋಕಯ್ಯ ಬಂಗಾರಕೋಡಿ ನಿಧನ

ಪೆರಾಜೆ ಗ್ರಾಮದ ಬಂಗಾರಕೋಡಿ ಲೋಕಯ್ಯ ಗೌಡರು ಇಂದು ನಿಧನರಾದರು. ಕೃಷಿಕರಾಗಿದ್ದ ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಚಿತ್ರ ಮಕ್ಕಳಾದ ಕಿರಣ ಮತ್ತು ರಕ್ಷಿತ್, ಸೊಸೆಯಂದಿರು ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಯುವಕ ಮಂಡಲ (ರಿ.) ಮಡಪ್ಪಾಡಿ ಆಶ್ರಯದಲ್ಲಿ ಎರಡನೆ ವರ್ಷದ ಕ್ರಿಕೆಟ್ ಪಂದ್ಯಾಟ

ಯುವಕ ಮಂಡಲ (ರಿ.) ಮಡಪ್ಪಾಡಿ ಆಶ್ರಯದಲ್ಲಿ ಎರಡನೆ ವರ್ಷದ ಕ್ರಿಕೆಟ್ ಪಂದ್ಯಾಟ ದಿನಾಂಕ 03-12-2023ರ ಭಾನುವಾರ ಬಲ್ಕಜೆ ಶಾಲಾ ಮೈದಾನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟರಾಗಿ ಮಡಪ್ಪಾಡಿ ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ಶ್ರೀ ರವಿಚಂದ್ರ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಕಿರಣ್ ಶೀರಡ್ಕ ವಹಿಸಿದ್ದರು. ಅತಿಥಿಗಳಾಗಿ ಬಲ್ಕಜೆ ಶಾಲೆ ಶಾಲಾಬಿವೃದ್ಧಿ ಸಮಿತಿಯ...

ದೇವ ಗೆಳೆಯರ ಬಳಗದಿಂದ ಶ್ರಮಸೇವೆ

ದೇವ ಗೆಳೆಯರ ಬಳಗದ ಸದಸ್ಯರು ಚಂಪಾಷಷ್ಠಿ ಪ್ರಯುಕ್ತ ಅನ್ನಸಂತರ್ಪ ಣೆಯ ಕಾರ್ಯದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿ ಶ್ರಮಸೇವೆ ಸಲ್ಲಿಸಿದರು.

ಅರಂತೋಡು : “ಯಶಸ್ಸು ಕನಸಲ್ಲ” ಎಂಬ ವಿಷಯದ ಕುರಿತು ತರಬೇತಿ ಕಾರ್ಯಾಗಾರ

ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ ಇದರ ಆಶ್ರಯದಲ್ಲಿ ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ನೇತೃತ್ವದಲ್ಲಿ ಯುವಕ-ಯುವತಿ ಮಂಡಲಗಳ ಸಹಯೋಗದೊಂದಿಗೆ ಯಶಸ್ಸು ಕನಸಲ್ಲ ಎಂಬ ವಿಷಯದ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಅರಂತೋಡು ಗ್ರಾಮ ಪಂಚಾಯತ್ ಅಮೃತ ಸಭಾಂಗಣದಲ್ಲಿ ಡಿ. 17 ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪ್ರವೀಣ್ ಕುಮಾ‌ರ್...
Loading posts...

All posts loaded

No more posts

error: Content is protected !!