ಸಿ ಎ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಎನ್ ಎ ರಾಮಚಂದ್ರ ರಾಜಿನಾಮೆ ಸಲ್ಲಿಕೆ

ಸುಳ್ಯ ಪ್ರತಿಷ್ಠಿತ ಸಹಕಾರಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದ್ದಂತೆ ತಮಗೆ ಅಧ್ಯಕ್ಷ ಪದವಿ ನೀಡಬೇಕು ಎಂಬ ಒತ್ತಾಯದ ಹಿನ್ನಲೆಯಲ್ಲಿ ಅಸಮಾಧಾನಗೊಂಡ ಹಿರಿಯ ನಾಯಕರಾದ ಎನ್ ಎ ರಾಮಚಂದ್ರ ರವರು ಇದೀಗ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುದರ್ಶನ್ ರವರಿಗೆ ತಮ್ಮ ರಾಜಿನಾಮೆ ಪತ್ರವನ್ನು ಇದೀಗ ಸಲ್ಲಿಸಿದ್ದು ಕಾರಣ ಏನೆಂದು...

ಸುಳ್ಯ ಜಾತ್ರೆ : ಮಳೆಯಿಂದ ಕಂಗಾಲಾದ ಜಾತ್ರಾ ವ್ಯಾಪಾರಸ್ಥರಿಗೆ ಬಾಡಿಗೆ ರಿಯಾಯಿತಿ ನೀಡಲು ಮನವಿ

ಈ ಬಾರಿ ಸುಳ್ಯ ಜಾತ್ರೆಯಲ್ಲಿ ಪ್ರತಿದಿನವೂ ಸಂಜೆ ವೇಳೆಗೆ ಧಾರಾಕಾರ ಮಳೆ ಸುರಿಯುತ್ತಿದ್ದು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿ ಸ್ಥಳ ಬಾಡಿಗೆ ನೀಡಿ ತಾತ್ಕಾಲಿಕ ಅಂಗಡಿ ಕೋಣೆ ನಿರ್ಮಿಸಿ, ಲಕ್ಷ ಲಕ್ಷ ರೂಗಳ ಬಂಡವಾಳ ಹಾಕಿ ಜಾತ್ರೆಯ ವ್ಯಾಪಾರಕ್ಕೋಸ್ಕರ ಕುಳಿತ ವ್ಯಾಪಾರಿಗಳು ಒಂದು ಕಡೆ ಧಾರಾಕಾರ ಮಳೆಯಿಂದಾಗಿ ಅಂಗಡಿಗಳನ್ನು ತೆರೆಯಲಾಗದೆ ಕುಳಿತಿದ್ದು ಇನ್ನೊಂದು ಎಡೆ ಮಳೆಯ...
Ad Widget

ಬೆಳ್ಳಾರೆ: ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳಿಗೆ ತರಬೇತಿ ಮತ್ತು ಸ್ಪರ್ಧಾ ಕಾರ್ಯಕ್ರಮ

ತಾಲೂಕು ಪಂಚಾಯತ್ ಅಕ್ಷರ ದಾಸೋಹ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಮತ್ತು ಸ್ಪರ್ಧಾ ಕಾರ್ಯಕ್ರಮ ಜನವರಿ 7 ರಂದು ಕೆ.ಪಿ.ಎಸ್ (ಪ್ರೌಢ ಶಾಲಾ ವಿಭಾಗ)ಬೆಳ್ಳಾರೆ ಇಲ್ಲಿ ನಡೆಯಿತು.ಅಕ್ಷರ ದಾಸೋಹ ಯೋಜನೆ ಸುಳ್ಯ ಇದರ ಸಹಾಯಕ ನಿರ್ದೇಶಕರಾದ ಶ್ರೀಮತಿ ವೀಣಾ ಎಂ.ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕೆ.ಪಿ.ಎಸ್ ಪ್ರೌಢ...

ಅರಂತೋಡು : ಚಿರತೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ

ಅರಂತೋಡು ಗ್ರಾಮದ ಅಡ್ಕಬಳೆಯಲ್ಲಿ ಚಿರತೆ ದಾಳಿ ನಡೆಸಿ ಆಡು ಹಾಗೂ ಕರುವೊಂದು ಕೊಂದುಹಾಕಿತ್ತು. ಇದೀಗ ಆ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನ್ ಇಟ್ಟು ಕಾರ್ಯಾಚರಣೆ ಆರಂಬಿಸಿದೆ. ಗೂಡಿನ ಒಳಗೆ ನಾಯಿಯನ್ನು ಕಟ್ಟಿ ಹಾಕಿ ಚಿರತೆ ಗೂಡಿನ ಒಳಗೆ ಬರುವಂತೆ ಮಾಡಿ ಬಂಧಿಸಲು ಯೋಜನೆ ಹಾಕಲಾಗಿದೆ. ಅಡ್ಕಬಳೆಯಲ್ಲಿ ಚಿರತೆ ಬಂದ ಪ್ರದೇಶದಲ್ಲಿ ನಿನ್ನೆ ಅರಣ್ಯ ಇಲಾಖಾ...

ಸುಳ್ಯ : ಸ್ವಚ್ಛತಾ ಜಾಗೃತಿ ಹಾಗೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮ

ಸುಳ್ಯ ಜಾತ್ರೋತ್ಸವದ ಅಂಗವಾಗಿ ನಗರದ ರಥ ಬೀದಿಯಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಹಾಗೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಅಮರ ಸುಳ್ಯ ರಮಣೀಯ ಸುಳ್ಯ ತಂಡದ ನೇತೃತ್ವದಲ್ಲಿ ನಡೆಯಿತು. ನಗರ ಪಂಚಾಯತ್ನ ಈ ತಂಡದ ವತಿಯಿಂದ ರಥಬೀದಿಯ ಕಟ್ಟೆಯಿಂದ ಎಪಿಎಂಸಿ ತನಕ ಜಾಗೃತಿಯ ಫಲಕಗಳನ್ನು ಹಿಡಿದು ಮೆರವಣಿಗೆ ಮೂಲಕ ಸಾಗಿ ಧ್ವನಿವರ್ಧಕದ...

ಸಂಪಾಜೆ : ಮಕ್ಕಳ ಗ್ರಾಮಸಭೆ

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಬಾಭವನದಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು ತಾಲೂಕು ಅರೋಗ್ಯ ಶಿಕ್ಷಣ ಅದಿಕಾರಿ ಶ್ರೀಮತಿ ಪ್ರಮೀಳಾ ರವರು ಮಾನಸಿಕ ಅರೋಗ್ಯ ಹಾಗೂ ಪೌಷ್ಟಿಕ ಆಹಾರ ಹಾಗೂ ಮಾದಕ ವ್ಯಸನದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು ಶಾಲಾ ಪರಿಸರದಲ್ಲಿ ತಂಬಾಕು ಮಾರಾಟ ಮಕ್ಕಳಿಗೆ ಮಿಠಾಯಿ ಇನ್ನಿತರ...

ಕೊಲ್ಲಮೊಗ್ರ: ಮನೆ ಮನೆಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ವಿತರಣೆ

https://youtu.be/gODibKBQ4nE?si=2va5Uw8cTugQKhZb ಅಯೋಧ್ಯೆಯ ಪುಣ್ಯಭೂಮಿಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಕೊಲ್ಲಮೊಗ್ರ ಗ್ರಾಮದ ಮನೆ ಮನೆಗಳಿಗೆ ಭಜನೆಯ ಜತೆಗೆ ತಲುಪಿಸಿದರು. ಮಂತ್ರಾಕ್ಷತೆಯನ್ನು ಗ್ರಾಮದ ಪ್ರತಿ ಮನೆಗೆ ತಲುಪಿಸಲು ಹಲವಾರು ಹಿಂದೂ ಭಾಂಧವರು ಶ್ರೀರಾಮನ ಸೇವೆಯಲ್ಲಿ ಪಾಲ್ಗೊಂಡರು.

ಸುಳ್ಯ : ಗುಡುಗು ಸಹಿತ ಭಾರಿ ಮಳೆ – ಜಾತ್ರೆಗೆ ಆಗಮಿಸಿದ ವ್ಯಾಪಾರಸ್ಥರಿಗೆ ಸಂಕಷ್ಟ

ಸುಳ್ಯದಲ್ಲಿಂದ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಈ ಅಕಾಲಿಕ ಮಳೆ ಸುಳ್ಯ ಜಾತ್ರೆಗೆ ಆಗಮಿಸಿದ್ದ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನಾದ್ಯಂತ ಮಳೆ ಸುರಿದಿದ್ದು ಅಡಿಕೆ ಕೃಷಿಕರ ಪಾಡು ಹೇಳತೀರದಾಗಿದೆ. ಕಡಿಮೆ ಫಸಲಿನಿಂದಾಗಿ ಕಂಗೆಟ್ಟಿದ್ದ ರೈತ ಇದ್ದ ಅಡಿಕೆಯನ್ನು ಒಣಗಿಸಲು ಹರಸಾಹಸ ಪಡುವಂತಾಗಿದೆ ಇದೀಗ ಅಲ್ಲದೆ ಸುಳ್ಯದಲ್ಲಿ ಭಾರಿ ಪ್ರಸಿದ್ದಿ ಪಡೆದ ಸುಳ್ಯ ಚೆನ್ನಕೇಶವ ದೇವರ...

ಗುತ್ತಿಗಾರು : ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ಪ್ರತಿನಿಧಿಸಿದ ಗ್ರಾಮೀಣ ವಿದ್ಯಾರ್ಥಿಗಳು

ಪತಂಜಲಿ ಯೋಗ ಕೇಂದ್ರ ಬೆಂಗಳೂರು ಇವರು ಬೆಂಗಳೂರಿನ ಲಗ್ಗೆರೆ ಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗುತ್ತಿಗಾರಿನ ಅಮರ ಯೋಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳದ ಖುಷಿ ಕೊಪ್ಪತಡ್ಕ, ಶೇಯಿನಿ ಕೊರಂಬಡ್ಕ, ಜಿಶಾ ಕೊರಂಬಡ್ಕ, ಹವೀಕ್ಷ ಹರಿಹರ, ಮಣಿಪ್ರಕಾಶ್ ಕಡೋಡಿ,ರೇಷ್ಮಾ ಮಾಡಬಾಕಿಲು ಭಾಗವಹಿಸಿ ಪ್ರೋತ್ಸಾಹಕ ಬಹುಮಾನ ಪಡೆದಿದ್ದು ಇವರನ್ನು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್...

ಅರಂಬೂರು: ಕಾರು- ಬೈಕ್ ಅಪಘಾತ – ಮಗುಚಿ ಬಿದ್ದ ಕಾರು

ಸುಳ್ಯ ಸಮೀಪದ ಅರಂಬೂರು ಎಂಬಲ್ಲಿ ಕಾರು ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅರಂಬೂರಿನಲ್ಲಿ ಅಪಘಾತ ನಡೆದ ಸಂದರ್ಭದಲ್ಲಿ ಪೆರಾಜೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸ್ವೀಪ್ ಬಿಲ್ಡರ್ಸ್ ನ ತಾಜುದ್ದೀನ್ ಜಟ್ಟಿಪಳ್ಳ ರವರು ಮತ್ತು ಜಸೀರ್ ರವರು ಗಾಯಗೊಂಡವರನ್ನು ತಮ್ಮ ಪಿಕಪ್ ವಾಹನದಲ್ಲಿ ನಲ್ಲಿ ಸುಳ್ಯ...
Loading posts...

All posts loaded

No more posts

error: Content is protected !!