ಗೂನಡ್ಕ : ಮರ ಬಿದ್ದು ಹಾನಿಯಾದ ಮನೆಗಳಿಗೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂಶಾಹಿದ್ ತೆಕ್ಕಿಲ್ ಭೇಟಿ, 5 ಲಕ್ಷ ಪರಿಹಾರ ತಕ್ಷಣ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ನಿನ್ನೆ ಸುರಿದ ಭಾರಿ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿಯಾದಮನೆಗಳಿಗೆ ಮೇ 09 ರಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಾಹಿದ್ತೆಕ್ಕಿಲ್ ಭೇಟಿ ನೀಡಿದರು. ದಿವಂಗತ ಅಭಿರ ನಾಗೇಶ ರವರ ಮನೆಯು ಸಂಪೂರ್ಣ ಹಾನಿಯಾಗಿದ್ದು ಸುಮಾರು 05 ಲಕ್ಷನಷ್ಟ ಉಂಟಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ...

ಸುಳ್ಯ: ಮಿತ್ತಡ್ಕ ರೋಟರಿ ಪ್ರೌಢಶಾಲೆಯಲ್ಲಿ 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ  ಪ್ರಕಟಗೊಂಡಿದ್ದು ಸುಳ್ಯ ಮಿತ್ತಡ್ಕ ರೋಟರಿ ಪ್ರೌಢ ಶಾಲೆಯ 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.ಆಳ್ವ ನಿವಾಸ ನಿಶಾಂತ್ ಆಳ್ವ ಹಾಗೂ ಸುಪರ್ಣ ಎನ್ ಆಳ್ವ ರವರ ಪುತ್ರಿ ಪ್ರಣಮ್ಯ ಎನ್ ಆಳ್ವ 620, ಶಕುಂತಳಾ ನಿಲಯ ರಾಘವೇಂದ್ರ ಎಸ್ ಶೇಟ್ ಹಾಗೂ ವಿನುತ ಆರ್ ಶೇಟ್ ರವರ ಪುತ್ರಿ...
Ad Widget

ಸುಳ್ಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ಅರುಣ್ ಕುಮಾರ್ ರವರು ಗದಗ ಶಾಖೆಗೆ ವರ್ಗಾವಣೆ

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸುಳ್ಯ  ವ್ಯವಸ್ಥಾಪಕರಾದ ಅರುಣ್  ಕುಮಾರ್ ಅವರಿಗೆ ಗದಗ ಶಾಖೆಗೆ ವರ್ಗಾವಣೆಯಾಗಿದೆ. ಅರುಣ್ ಕುಮಾರ್ ಅವರಿಗೆ  ಬೀಳ್ಕೊಡುಗೆ ಕಾರ್ಯಕ್ರಮ ಸುಳ್ಯ ಶಾಖೆಯಲ್ಲಿ ನಡೆಯಿತು.  ಸುಳ್ಯ ಸೆಲ್ಕೋ ಸೋಲಾರ್ ಶಾಖೆಯ ವ್ಯವಸ್ಥಾಪಕರಾದ ಆಶಿಕ್ ಅವರು ಕಾರ್ಯಕ್ರಮದ ಸ್ವಾಗತವನ್ನು ನೆರವೇರಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಶುಭಾಶಯ ಕೋರಿದರು. ವ್ಯವಸ್ಥಾಪಕರಾದ ಅರುಣ್ ಕುಮಾರ್  ಮಾತನಾಡಿದರು. ಸಹಾಯಕ ವ್ಯವಸ್ಥಾಪಕರಾದ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿಯ ಬಂಧನ

ಬಿಜೆಪಿಯ ಯುವ ಮೋರ್ಚಾ ಮುಖಂಡರಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.2022 ರಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದು, ಹಲವಾರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಇದೀಗ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮುಸ್ತಾಫಾ ಪೈಚಾರ್ ಅನ್ನು ಹಾಸನದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಎಸ್.ಎಸ್.ಎಲ್.ಸಿ. ಫಲಿತಾಂಶ – ಸುಳ್ಯ ಕ್ಷೇತ್ರ ವ್ಯಾಪ್ತಿಯ 18 ಶಾಲೆಗಳಿಗೆ ಶೇ.100 ಫಲಿತಾಂಶ

2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದುವ ಸುಳ್ಯ ತಾಲೂಕಿಗೆ ಶೇ.96.83 ಫಲಿತಾಂಶ ದಾಖಲಾಗಿದೆ. ಇದರಲ್ಲಿ ಸುಬ್ರಹ್ಮಣ್ಯ ಹಾಗೂ ಎಡಮಂಗಲದ ಶಾಲೆಗಳೂ ಸೇರಿವೆ. ಈ ಬಾರಿ ಸರಕಾರಿ ಶಾಲೆಗಳೂ ಉತ್ತಮ ಸಾಧನೆ ಮಾಡಿದ್ದೂ ಆರು ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿದೆ.‌ ಅನುದಾನಿತ ಶಾಲೆಗಳ ಪೈಕಿ ಎರಡು ಶಾಲೆಗಳು ಶೇ.100 ಫಲಿತಾಂಶ ಪಡೆದಿದೆ. ಅನುದಾನ...

ಗುತ್ತಿಗಾರು : ಬೆಸ್ಡ್ ಕುರಿಯಕೋಸ್  ಪ್ರೌಢಶಾಲೆಗೆ ಶೇ.100 ಫಲಿತಾಂಶ

ಗುತ್ತಿಗಾರಿನ ಬೆಸ್ಡ್ ಕುರಿಯಕೋಸ್ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ದಾಖಲಿಸಿದೆ.  ಒಟ್ಟು 27 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.  ಹಿತ ಗೋಳ್ಯಾಡಿ  617 ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಮಡಪ್ಪಾಡಿ ಗ್ರಾಮದ ಗೋಳ್ಯಾಡಿ ದಿನೇಶ್ ಮತ್ತು ವಸಂತ ಮಾಲಾ ಅವರ ಪುತ್ರಿ.

ಸುಳ್ಯ : ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಣಮ್ಯ ಎನ್ ಆಳ್ವ ತಾಲೂಕಿಗೆ ಪ್ರಥಮ – ವರ್ಷ ಬೇಕಲ್ ಹಾಗೂ ಆಯುಷ್ ರಾವ್ ದ್ವಿತೀಯ – ನಮಿತ ಮರಿಯಾ , ಹಿತ ಗೋಳ್ಯಾಡಿ ತೃತೀಯ

ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 620 ಅಂಕ ಪಡೆದ ಸುಳ್ಯದ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಪ್ರಣಮ್ಯ ಎನ್. ಆಳ್ವ ತಾಲೂಕಿಗೆ ಪ್ರಥಮ ಸ್ಥಾನಿಯಾಗಿ, ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದಿದ್ದಾರೆ. ಈಕೆ ಬಂದಡ್ಕಡ ನಿಶಾಂತ್ ಆಳ್ವ ಹಾಗೂ ಸುಪರ್ಣ ಆಳ್ವ ದಂಪತಿಗಳ ಪುತ್ರಿ. 619 ಅಂಕ ಪಡೆದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವರ್ಷ ಬೇಕಲ್ ಹಾಗೂ...

ಜೀವಿತ ಮೋಟ್ನೂರು ಗೆ ಎಸ್.ಎಸ್.ಎಲ್.ಸಿ.ಯಲ್ಲಿ ಡಿಸ್ಟಿಂಕ್ಷನ್

ಮೊರಾರ್ಜಿ ದೇಸಾಯಿ ಮಚ್ಚಿನ ಫ್ರೌಢಶಾಲೆಯ ವಿದ್ಯಾರ್ಥಿನಿ ಜೀವಿತ ಮೊಟ್ನೂರು  588 ಅಂಕ ಪಡೆದು ಉನ್ನತ ಶ್ರೇಣಿ ಯಲ್ಲಿ ಉತ್ತಿರ್ಣಳಾಗಿರುತ್ತಾಳೆ. ಈಕೆ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಅಭಿಲಾಷ ಹಾಗೂ ಶಿವಪ್ರಕಾಶ್ ಮೋಟ್ನೂರು ದಂಪತಿಗಳ ಪುತ್ರಿ

8 ತಂಡಗಳ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟ

ಕೇನ್ಯ : ಈಗಲ್ ಆಟಾಕರ್ಸ್ ನೇಲ್ಯಡ್ಕ ಇದರ ಆಶ್ರಯದಲ್ಲಿ  ನಡೆದ ಕೇನ್ಯ, ಬಲ್ಪ, ಮೊಗ್ರ ಗ್ರಾಮಗಳ 8 ತಂಡಗಳ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ಸಿದ್ದಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಬೀದಿಗುಡ್ಡೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಪುರುಷ್ ವಾರಿಯರ್ಸ್ ನೇಲ್ಯಡ್ಕ ದ್ವಿತೀಯ, ಶಕ್ತಿ ಎಂಟರ್ಪ್ರೈಸಸ್ ತೃತೀಯ ಹಾಗೂ ಶ್ರೀ ವಿಷ್ಣು ಫ್ರೆಂಡ್ಸ್ ಕೇನ್ಯ ಚತುರ್ಥ ಸ್ಥಾನ...

ವಸಂತ ಬಂಗೇರ ನಿಧನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಂತಾಪ

ದ.ಕ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ನಿಧನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ನುಡಿನಮನಗಳನ್ನು ಸಲ್ಲಿಸಲಾಯಿತು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಮ್ ಶಹೀದ್ ತೆಕ್ಕಿಲ್ ನುಡಿ ನಮನ ಸಲ್ಲಿಸಿ ಮಾತನಾಡಿ ರಾಜ್ಯ ಕಂಡ ಅಭೂತಪೂರ್ವ ರಾಜಕಾರಿಣಿ ನೇರ ನಡೆ ನುಡಿಯ ನಿಷ್ಠಾವಂತ ರಾಜಕಾರಣಿ,...
Loading posts...

All posts loaded

No more posts

error: Content is protected !!