- Thursday
- August 13th, 2026
ಚಿಗುರು ಗೆಳೆಯರ ಬಳಗ ಪಂಬೆತ್ತಾಡಿ ಇದರ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮ ನ.24 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಗುರು ಗೆಳೆಯರ ಬಳಗದ ಅಧ್ಯಕ್ಷ ಶ್ರೀನಿವಾಸ್ ಬಿ. ವಹಿಸಿದ್ದರು. ನೂತನವಾಗಿ ನಿರ್ಮಾಣಗೊಂಡ ಮನೆಯನ್ನು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯ ಕುಮಾರ್ ಉಬರಡ್ಕ ರವರು ಪುಷ್ಪಾವತಿ ಕೋಟೆಗುಡ್ಡೆಯವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಕಲ್ಮಡ್ಕ...
ಕೆ.ವಿ.ಜಿ ಸುಳ್ಯ ಹಬ್ಬ ಸಮಾಜಸೇವಾ ಸಂಘ(ರಿ.), ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ, ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ, ಜಿಲ್ಲಾ ಅಂಧತ್ವ ನಿವಾರಣಾ ಸೊಸೈಟಿ(ರಿ.) ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರು ಹಾಗೂ ಸುಬ್ರಹ್ಮಣ್ಯ ಇವುಗಳ ಸಹಭಾಗಿತ್ವದೊಂದಿಗೆ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಳ್ಳತ್ತಡ್ಕ ಇದರ ಆಶ್ರಯದಲ್ಲಿ ವಿವಿಧ ಸಂಘಸಂಸ್ಥೆಗಳ...
ಬೆಳ್ಳಾರೆ: ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ(ರಿ)ಮಂಗಳೂರು ಇದರ ವತಿಯಿಂದ ನೀಡಲ್ಪಡುವ, ಎರಡನೆಯ ವರ್ಷದ ಚೂಂತಾರು ಲಕ್ಷ್ಮೀನಾರಾಯಣ ನಾರಾಯಣ ಭಟ್ಟ ವೈದಿಕ ಪುರಸ್ಕಾರ ಸಮಾರಂಭವು ಚೂಂತಾರಿನ ಉಪಾಸನಾ ಮನೆಯಲ್ಲಿ ಜರಗಿತು. ಪುರೋಹಿತರೂ ಪೌರೋಹಿತ್ಯ ಸಹಾಯಕರೂ ಆಗಿರುವ ಕಾಪುತಡ್ಕ ಶಂಕರನಾರಾಯಣ ಶಾಸ್ತ್ರಿ ಮತ್ತು ಶ್ರೀಮತಿ ಸವಿತಾ ಶಾಸ್ತ್ರಿ ಮತ್ತು ಪುರೋಹಿತರಾದ ಮಾಡಾವಿನ ಎಲ್ಯಡ್ಕ ಗೋಪಾಲಕೃಷ್ಣ ಭಟ್ ಮತ್ತು ಶ್ರೀಮತಿ...
ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಮತ್ತು ಮುಳ್ಳುಗುಳಿಗನ ಕಟ್ಟೆಗೆ ಹಲವಾರು ವರ್ಷಗಳಿಂದ ಪ್ರತಿದಿನ ಸಂಜೆ ದೀಪ ಇಡುತ್ತಿದ್ದ ಕಳಂಜ ಗ್ರಾಮದ ಕಳಂಜ ರಾಮಣ್ಣ ನಾಯ್ಕ ಎಂಬವರು ಹೃದಯಾಘಾತದಿಂದ ಇಂದು(ನ.25) ಮುಂಜಾನೆ ನಿಧನರಾದರು. ಇವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸರಸ್ವತಿ, ಪುತ್ರ ಯತೀಶ, ಪುತ್ರಿ ಗುಣವತಿ ಮತ್ತು ಸಹೋದರರು, ಸಹೋದರಿ ಹಾಗೂ ಕುಟುಂಬಸ್ಥರನ್ನು...
ಎಸ್.ಎಇ.ಪಿ.ಐ. ಸುಳ್ಯ ಬ್ಲಾಕ್ ಸಮಿತಿಯ ವತಿಯಿಂದ ಸುಳ್ಯದ ಬೋರುಗುಡ್ಡೆ ವಾರ್ಡಿನ ನಾವೂರು-ಜಟ್ಟಿಪಳ್ಳ, ಅನ್ಸಾರಿಯ ರಸ್ತೆಯಲ್ಲಿ ಶ್ರಮದಾನದ ಮೂಲಕ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಂತಹ ಗಿಡಗಂಟಿಗಳನ್ನು ತೆರವುಗೊಳಿಸುವುದರ ಮೂಲಕ ಸ್ವಚ್ಚತಾ ಕಾರ್ಯಕ್ರಮವು ನಡೆಯಿತು. ನವಂಬರ್ 29 ರಂದು ನಡೆಯಲಿರುವ ಅನ್ಸಾರಿಯ ಗಲ್ಫ್ ಆಡಿಟೋರಿಯಂನ ಅದ್ದೂರಿಯ ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಎಸ್ಡಿಪಿಐಯ ಸುಳ್ಯ ಬ್ಲಾಕ್ ಸಮಿತಿಯ ಅಝೀಝ್ ಕಚ್ಚು ರವರ...
ಹಿರಿಯ ಸಹಕಾರಿ ಧುರೀಣ, ಸಜ್ಜನ ಬಂಧು ದಿ. ಕೋಟೆ ವಸಂತ ಕುಮಾರ್ ರವರ ಪತ್ನಿ ಪಾರ್ವತಿ ವಸಂತ ಕುಮಾರ್ ಕೋಟೆಯವರು ನ.23ರಂದು ನಿಧನರಾದರು.ಅವರಿಗೆ 81 ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ಖ್ಯಾತ ಗಾಯಕ ಶಶಿಧರ ಕೋಟೆ, ಕೋಟೆ ಫೌಂಡೇಶನ್ ಸಂಸ್ಥಾಪಕ ಉದ್ಯಮಿ ರಘುರಾಮ ಕೋಟೆ, ಪುತ್ರಿ ಶಶಿಕಲಾ ಗಣಪಯ್ಯ ವನಸಿರಿ ಪೆರುವಾಜೆ ಹಾಗೂ ಅಪಾರ ಬಂಧು ಮಿತ್ರರನ್ನು...
ಕಳೆದ ವಿಧಾನ ಸಭಾ ಚುನಾವಣೆ ವೇಳೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅಡ್ತಲೆ ಭಾಗದ ಜನತೆ ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನಿಸಿದ ಬಳಿಕ ಆಡಳಿತ ,ಸುಮಾರು ಮೂರು ಕೋಟಿ ವೆಚ್ಚದಲ್ಲಿ ಅರಂತೋಡಿನ ವೈ. ಎಂ. ಕೆ. ಕ್ರಾಸ್ ನಿಂದ ಪಿಂಡಿಮನೆವರೆಗೆ 3.3 ಕಿ ಮೀ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿ ಮಾಡಿದೆ. ಪಿಂಡಿಮನೆಯಿಂದ ಕೊಜಂಬೆವರೆಗೆ ಒಂದು ಕೋಟಿ ವೆಚ್ಚದಲ್ಲಿ ಮರುಡಾಮರಿಕರಣ...
ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ನ.22ರಂದು ಶಾಲಾ ಸಂಸ್ಥಾಪಕ ದಿವಂಗತ ಶ್ರೀ ನೆಟ್ಟಾರು ವೆಂಕಟಸುಬ್ಬರಾವ್ ರವರ ಸ್ಮೃತಿ ದಿನಾಚರಣೆಯನ್ನು ಆಚರಿಸಲಾಯಿತು. ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಧರ್ಮದರ್ಶಿಗಳಾದ ಶ್ರೀ ಪರಮೇಶ್ವರಯ್ಯ ಕಾಂಚೋಡು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಬಾಲ್ಯದಲ್ಲಿ ವೆಂಕಟಸುಬ್ಬರಾವ್ ಅವರೊಂದಿಗಿನ ಒಡನಾಟ ಹಾಗೂ ಶಾಲೆಯ ಸ್ಥಾಪನೆಯ ಬಗ್ಗೆ ಅವರಿಗಿದ್ದ ಬದ್ಧತೆಯನ್ನು ತಿಳಿಸಿದರು. ಶಾಲೆಯ ವಿದ್ಯಾರ್ಥಿಗಳಲ್ಲಿ ಅವರಿಗಿದ್ದ ಮಮತೆ...
ಕ್ರೀಡಾಕ್ಷೇತ್ರದ ಎಲ್ಲಾ ಕ್ರೀಡೆಗಳ ವೀಕ್ಷಕ ವಿವರಣೆಯನ್ನು ನೀಡುತ್ತಿರುವ ಗುತ್ತಿಗಾರಿನ ನಿರಂತ್ ದೇವಶ್ಯ ಇವರಿಗೆ ಮ್ಯಾಕ್ಸ್ ಲೈಫ್ ಮತ್ತು ಆಕ್ಸಿಸ್ ಬ್ಯಾಂಕ್ ನೀಡುವ ಜಿಲ್ಲಾ ಕಲಾ ರತ್ನ ಪ್ರಶಸ್ತಿ ಗೆ ಭಾಜನರಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ, ದಕ್ಷಿಣಕನ್ನಡ ಜಿಲ್ಲಾ "ಕಲಾ ರತ್ನ" ಪ್ರಶಸ್ತಿಯನ್ನು ಮಂಗಳೂರಿನ ಅತ್ತಾವರದಲ್ಲಿರುವ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನ ಕೇಂದ್ರ ಕಛೇರಿಯಲ್ಲಿ...
Loading posts...
All posts loaded
No more posts
