ಸುಳ್ಯ ಪುರ ಪ್ರವೇಶ ಪಡೆದ ಚೆನ್ನಕೇಶವ ದೇವರ ಬ್ರಹ್ಮರಥ – ಡಿ.31 ರಂದು ಡಾ. ಕೆ ವಿ ಚಿದಾನಂದ ಮತ್ತು ಕುಟುಂಬಸ್ಥರಿಂದ ಚೆನ್ನಕೇಶವ ದೇವರಿಗೆ ಸಮರ್ಪಣೆ .

ಸುಳ್ಯ: ಸುಳ್ಯವನ್ನು ಶಿಕ್ಷಣ ಕಾಶಿಯಾಗಿ ಕಟ್ಟಿ ಸುಳ್ಯದ ಬೆಳಕಾಗಿ ಕಂಗೊಳಿಸಿದ ಕೆ ವಿ ಜಿ ಯವರ ಹಿರಿಯ ಪುತ್ರ ಚೆನ್ನಕೇಶವ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ ವಿ ಚಿದಾನಂದ ಮತ್ತು ಮನೆಯವರು ಸುಮಾರು 1.10 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ನೂತನ ಭ್ರಹ್ಮರಥವು ದಿ. 24 ರಂದು ಹೊರಟು ಇಂದು ಚೆನ್ನಕೇಶವನ ಪುಣ್ಯ ಭೂಮಿಯಾದ...

ಬೆಳ್ಳಾರೆ : ಸಹಕಾರಿ ಸಂಘದ ಆಡಳಿತ ಬಿಜೆಪಿ ತೆಕ್ಕೆಗೆ –  ಪೇಟೆಯಲ್ಲಿ ಮೆರವಣಿಗೆ, ವಿಜಯೋತ್ಸವ

ಕೆಲ ವರ್ಷಗಳ ಬಳಿಕ ಬಿಜೆಪಿ ಮತ್ತೆ ಬಹುಮತದೊಂದಿಗೆ ಬೆಳ್ಳಾರೆ ಸಹಕಾರಿ ಸಂಘದ ಆಡಳಿತ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ಭರ್ಜರಿ ವಿಜಯೋತ್ಸವ ನಡೆಯಿತು.  ಪೇಟೆಯ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಯತೀಶ್ ಆರ್ವಾರ್,  ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ ,...
Ad Widget

ಮರ್ಕಂಜ : ಮತ್ತೆ ಪಾರಮ್ಯ ಮೆರೆದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ – ಬಿಜೆಪಿ 11, ಸ್ವತಂತ್ರ 1

ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ದಾಖಲಿಸಿದೆ. 12 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗ ಎ ಸ್ಥಾನದಿಂದ ಬಿಜೆಪಿಯ ಸರಸ್ವತಿ ಕಕ್ಕಾಡು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 11...

ಬೆಳ್ಳಾರೆ : ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು – 11ಬಿಜೆಪಿ, 1 ಕಾಂಗ್ರೆಸ್ ಗೆಲುವು

ಬೆಳ್ಳಾರೆ: ಬೆಳ್ಳಾರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ದಾಖಲಿಸಿದೆ. 12 ಸ್ಥಾನಗಳ ಪೈಕಿ ಸಹಕಾರ ಭಾರತಿ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತಕ್ಕೇರಿದೆ. ಕಾಂಗ್ರೆಸ್ ಬೆಂಬಲಿತ ಒಬ್ಬರು ಅಭ್ಯರ್ಥಿ ಮಾತ್ರ ಗೆದ್ದು ಬಿಜೆಪಿಗೆ ಆಡಳಿತ ಬಿಟ್ಡುಕೊಟ್ಟಿದೆ. ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ...

ಗುತ್ತಿಗಾರು ಸೊಸೈಟಿಯ ನಿವೃತ್ತ ಸಿಇಓ ಕೆ ಶಂಕರನಾರಾಯಣ ಶರ್ಮ ನಿಧನ

ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಸಿಇಓ ಕೆ ಶಂಕರನಾರಾಯಣ ಶರ್ಮ ರವರು ವಳಲಂಬೆಯ ಸ್ವ ಗೃಹದಲ್ಲಿ ಇಂದು ಸಂಜೆ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನಿವೃತ್ತ ಶಿಕ್ಷಕಿ ರಾಜೇಶ್ವರಿ ಹಾಗೂ ಪುತ್ರರಾದ ಎಲಿಮಲೆಯಲ್ಲಿ ಆಯುರ್ವೇದ ಕ್ಲಿನಿಕ್ ನಡೆಸುತ್ತಿರುವ ಡಾ.ಮಹೇಶ್ ಶರ್ಮ ಮತ್ತು ರವೀಶ್ ಶರ್ಮ ರನ್ನು ಅಗಲಿದ್ದಾರೆ.

ಸುಳ್ಯಕ್ಕೆ ಆಗಮಿಸಿದ ಬ್ರಹ್ಮರಥ – ಜ್ಯೋತಿ ಸರ್ಕಲ್ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿ ಬರಲಿದೆ ಬ್ರಹ್ಮರಥ

ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಮತ್ತು ಮನೆಯವರಿಂದ ಸಮರ್ಪಣೆಯಾಗಲಿರುವ ನೂತನ ಬ್ರಹ್ಮರಥ ಇದೀಗ ಸುಳ್ಯದ ಜ್ಯೋತಿ ಸರ್ಕಲ್ ಗೆ ಆಗಮಿಸಿದ್ದು, ಜ್ಯೋತಿ ಸರ್ಕಲ್ ಬಳಿಯಿಂದ ಮೆರವಣೆಗೆ ಮುಖಾಂತರ ದೇವಸ್ಥಾನದ ಮುಂಭಾಗಕ್ಕೆ ಬರಲಿದೆ. ಡಿ.24ರಂದು ಕೋಟೇಶ್ವರದಿಂದ ಹೊರಟ ರಥ ಕನಕಮಜಲು ತಲುಪುತ್ತಿದ್ದಂತೆ ಶ್ರೀ ಆತ್ಮಾರಾಮ ದೇವರಿಗೆ...

ಸುಳ್ಯ : ಚೆನ್ನಕೇಶವ ದೇವರ ನೂತನ ಬ್ರಹ್ಮರಥದ ನಿರ್ಮಾಣ ಕಾರ್ಯದಲ್ಲಿ ಸುಳ್ಯ ತಾಲೂಕಿನ ಮೂವರು ಯುವಕರು

ಸುಳ್ಯದ ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ರವರು ಸುಳ್ಯ ಚೆನ್ನಕೇಶವ ದೇವರಿಗೆ ನೂತನ ಬ್ರಹ್ಮರಥವನ್ನು ಕೊಡುಗೆಯಾಗಿ ನೀಡುತ್ತಿದ್ದು, ರಥವು ಇಂದು(ಡಿ.25) ಸುಳ್ಯಕ್ಕೆ ತಲುಪಲಿದ್ದು, ಡಿ.31 ರಂದು ಡಾ| ಕೆ.ವಿ ಚಿದಾನಂದ ಹಾಗೂ ಮನೆಯವರಿಂದ ದೇವಳದ ತಂತ್ರಿವರ್ಯರ ಸಮಕ್ಷಮದಲ್ಲಿ “ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮ” ನಡೆಯಲಿದೆ.ಈ ಬ್ರಹ್ಮರಥದ ನಿರ್ಮಾಣ ಕಾರ್ಯವು ಬ್ರಹ್ಮರಥ ಶಿಲ್ಪಿ...

ಡಿ.27: ಕೆವಿಜಿ ಇಂಜಿನಿಯರಿಂಗ್ ಕಾಲೇಜು ಹಾಗೂ ಅದಾನಿ ಸಿಮೆಂಟ್ ಸಹಯೋಗದಲ್ಲಿ ಸ್ಕಿಲ್ ಡೆವಲಪ್ ಮೆಂಟ್ ಕಾರ್ಯಕ್ರಮ

ಕೆವಿಜಿ ಇಂಜಿನಿಯರಿಂಗ್ ಕಾಲೇಜು ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಅದಾನಿ ಸಿಮೆಂಟ್ ಇವರ ಸಹಯೋಗದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಸುಳ್ಯದ ಕಟ್ಟಡ ಗುತ್ತಿಗೆದಾರರಿಗೆ 'Skill development' ಕಾರ್ಯಕ್ರಮವು ಡಿಸೆಂಬರ್ 27 ಶುಕ್ರವಾರದಂದು ಬೆಳಿಗ್ಗೆ 10.00 ಕ್ಕೆ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಅದಾನಿ ಸಿಮೆಂಟ್ ನ ಟೆಕ್ನಿಕಲ್ ಹೆಡ್ ER...

ಸುಳ್ಯದ ಹೆಸರಾಂತ ಆರ್.ಕೆ‌‌. ಇಂಟರ್ನ್ಯಾಷನಲ್ ಹಾಲಿಡೇಸ್ ವತಿಯಿಂದ ಮೆಗಾ ಪಾಸ್ಫೋರ್ಟ್ ಮೇಳ – ದೇಶ ವಿದೇಶಗಳಲ್ಲಿ ಹೊಸ ವರ್ಷ ಆಚರಣೆ ಆಯೋಜಕರಿಗೆ ಭರ್ಜರಿ ಆಫರ್

ಸುಳ್ಯದ ಹೆಸರಾಂತ ಆರ್.ಕೆ. ಇಂಟರ್ ನ್ಯಾಷನಲ್ ಹಾಲಿಡೇಸ್ Inc ವತಿಯಿಂದ ಮೆಗಾ ಪಾಸ್ಫೊರ್ಟ್ ಮೇಳ ಮತ್ತು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಮಾನಯಾನ ಟಿಕೆಟ್ ಗಳು ಲಭ್ಯವಿದ್ದು ಇದು ಹೊಸ ವರ್ಷದ ಹಿನ್ನೆಲೆಯಲ್ಲಿ ಅತೀ ಅಗ್ಗದ ದರದಲ್ಲಿ ಲಭ್ಯವಿದೆ. ಪಾಸ್ಪೋರ್ಟ್ ಮೇಳದಲ್ಲಿ ಹೊಸ ಪಾಸ್ ಪೋರ್ಟ್ , ನವೀಕರಣ , 15 ವರ್ಷ ಮೇಲ್ಪಟ್ಟ ವಯಸ್ಸು ಪ್ರತಿ...

ಸುಳ್ಯ : ಬಿಜೆಪಿ ಕಛೇರಿಯಲ್ಲಿ ಅಟಲ್ ಜಿ ಜನ್ಮದಿನಾಚರಣೆ – ಪುಷ್ಪನಮನ

ಅಟಲ್ ಜಿ ಚಾರಿಟೇಬಲ್ ಟ್ರಸ್ಟ್(ರಿ.) ಸುಳ್ಯ ಹಾಗೂ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಅಟಲ್ ಜಿ ಯವರ ಜನ್ಮದಿನಾಚರಣೆಯನ್ನು ಪುಷ್ಪ ನಮನದೊಂದಿಗೆ ಸುಳ್ಯ ನರೇಂದ್ರ ವಿಹಾರದ, ಲಾಲ್ ಕೃಷ್ಣ ಸಭಾಂಗಣದಲ್ಲಿ ಇಂದು ಡಿ, 25 ರಂದು ಆಚರಿಸಲಾಯಿತು.ಅಟಲ್ ಜಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಸುಧಾಕರ ಕಾಮತ್ ಅಡ್ಕಾರು ರವರು ವಾಜಪೇಯಿಯವರ...
Loading posts...

All posts loaded

No more posts

error: Content is protected !!