ಅಲ್ಪಸಂಖ್ಯಾತರ ಸಹಕಾರಿ ಸಂಘದ ಭವಿಷ್ಯ ನಿಧಿ ಯೋಜನೆಗಳಿಗೆ ಸುಳ್ಯ ಗ್ರೀನ್ ವ್ಯೂ ಶಾಲೆಯಲ್ಲಿ ಚಾಲನೆ – ವಿದ್ಯಾರ್ಥಿ ದಿಶೆ ಯಿಂದಲೇ ಆರ್ಥಿಕ ಸಾಕ್ಷರತೆಯಿಂದ ಉಜ್ವಲ ಭವಿಷ್ಯ : ಕೆ. ಎಂ. ಮುಸ್ತಫ

ಶಿಕ್ಷಕರ ಮತ್ತು ವಿದ್ಯಾರ್ಥಿ ಗಳ ಭವಿಷ್ಯ ನಿಧಿ ಯೋಜನೆಗಳಿಗೆ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು.ಅಲ್ಪ ಸಂಖ್ಯಾತರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರಿ ಸಂಘದ ವತಿಯಿಂದ ಪ್ರಾರಂಭ ಗೊಂಡ ಈ ನೂತನ ಯೋಜನೆಗೆ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಚಾಲನೆ ನೀಡಿದರುನಂತರ ಮಾತನಾಡಿದ ಅವರು...

ಗ್ರೀನ್ ವ್ಯೂ ಶಾಲೆಯ ಸಾಧಕ ಹಳೆ ವಿದ್ಯಾರ್ಥಿ ಡಾ. ರಿಜ್ವಾನ್ ರಿಗೆ ಸನ್ಮಾನ

ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ ಯಾಗಿದ್ದು ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈ ಯಲ್ಲಿ ವೈದ್ಯ ವೃತ್ತಿಯನ್ನು ಮಾಡುತ್ತಿರುವ ಡಾ ರಿಜ್ವಾನ್ ರವರನ್ನು ಸಾಧಕ ಹಳೆ ವಿದ್ಯಾರ್ಥಿ ನೆಲೆಯಲ್ಲಿ ಸನ್ಮಾನಿಸಲಾಯಿತು.ವೈದ್ಯ ವೃತ್ತಿ ಪವಿತ್ರವಾದ ಕಾಯಕ ತನ್ನ ಸೇವಾವಧಿಯಲ್ಲಿ ಸಾವಿರಾರು ಜನರಿಗೆ ಆರೋಗ್ಯ ದಾನ ನೀಡುವ ಪುಣ್ಯ ಕಾರ್ಯ ಇದರಿಂದ ಪೋಷಕರಿಗೆ...
Ad Widget

ಜೇಸಿಐ ಸುಳ್ಯ ಪಯಸ್ವಿನಿಯಿಂದ ರಕ್ತದಾನ ಜಾಗೃತಿ ಕಾರ್ಯಾಗಾರ – ರಕ್ತದಾನಿ ಶೈಲೇಶ್ ಅಂಬೆಕಲ್ಲು ಅವರಿಗೆ “ರಕ್ತದಾನ ಸೇವಾ ರತ್ನ ಪ್ರಶಸ್ತಿ” ಪ್ರದಾನ

ಸುಳ್ಯ, ಜೂ. 16; ರಕ್ತಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ರಕ್ತದಾನದಿಂದ ಅನೇಕ ಜೀವಗಳನ್ನು ಉಳಿಸಬಹುದಾಗಿದ್ದು, ಒಬ್ಬ ವ್ಯಕ್ತಿ ನೀಡುವ ರಕ್ತವು ಮೂರು ಮಂದಿಯ ಜೀವ ಉಳಿಸಲು ಸಹಕಾರಿಯಾಗುತ್ತದೆ. ರಕ್ತದಾನವು ವ್ಯಕ್ತಿಯ ಆರೋಗ್ಯ ಸ್ಥಿತಿಯ ಅರಿವಿಗೂ ಸಹಕಾರಿ ಎಂದು ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಅವಿನಾಶ್ ಎಸ್. ಹೇಳಿದರು. ಅವರು...

ಸುಳ್ಯ ಕ್ಷೇತ್ರ ಅಲೆಟ್ಟಿ ಬಡ್ಡಡ್ಕ ರಸ್ತೆ ಅಭಿವೃದ್ಧಿಗೆ ಪಿಡಬ್ಲ್ಯೂಡಿ ಇಲಾಖೆ ಯಿಂದ ರೂ 7 ಕೋಟಿ ಅನುದಾನ – ಶಿಫಾರಸ್ಸು ಮಾಡಿದ ಆರೋಗ್ಯ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಸುಳ್ಯದ ಕಾಂಗ್ರೆಸ್ ನಾಯಕರು – ಅಭಿವೃದ್ಧಿ ವಿಚಾರದಲ್ಲಿ ಸಂಘಟಿತ ಪ್ರಯತ್ನ ದಿಂದ ಯಶಸ್ಸು : ಯು. ಟಿ. ಖಾದರ್

ಸುಳ್ಯ ತಾಲೂಕನ್ನು ಸಂಪರ್ಕಿಸುವ ಅಂತರ್ ರಾಜ್ಯ ಗಡಿ ಪ್ರದೇಶ ವಾದ ಸುಳ್ಯ ತಾಲೂಕು ಅಲೆಟ್ಟಿ - ಬಡ್ಡಡ್ಕ - ಕೂರ್ನಡ್ಕ ರಸ್ತೆಯ ಅಭಿವೃದ್ಧಿ ಬಹು ಕಾಲದ ಬೇಡಿಕೆಯಾಗಿದ್ದು ಅಲೆಟ್ಟಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸತ್ಯಕುಮಾರ್ ಆಡಿoಜ ರವರ ನೇತೃತ್ವ ದಲ್ಲಿ ಅಂದು ಸ್ಪೀಕರ್ ಆಗಿದ್ದ ಯು. ಟಿ. ಖಾದರ್ ಮತ್ತು ಅಂದಿನ ಉಸ್ತುವಾರಿ ಸಚಿವರಾದ...

ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕ ಕೋರ್ ಕಮಿಟಿ ಸಭೆ

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಸುಳ್ಯ ಸಂಯುಕ್ತ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕ ಕೋರ್ ಕಮಿಟಿ ಸಭೆ ಸುಳ್ಯ ಯೋಜನಾ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿಗಳಾದ  ಜಯವಂತ್ ಪಟಗಾರ್ ಅವರು ದೀಪ ಪ್ರಜ್ವಲನೆ ಮಾಡುವ...

ಇಂದಿನ(ಜೂನ್ 16) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ಬೆಲೆಯಲ್ಲಿ ಭರ್ಜರಿ ಜಿಗಿತ ; ಕಾಳುಮೆಣಸು, ಹಸಿ ಕೊಕ್ಕೋ ಕೊಂಚ ಇಳಿಮುಖ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 16 ಜೂನ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜೂನ್ 16) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 390 ರಿಂದ...

ಪುತ್ತೂರು: ರಕ್ತದಾನಿಗಳ ದಿನಾಚರಣೆ – ರೋಟರಿ ಕ್ಲಬ್ ವತಿಯಿಂದ 109 ಬಾರಿ ರಕ್ತದಾನ ಮಾಡಿದ ಶೈಲೇಶ್ ಅಂಬೆಕಲ್ಲು ಅವರಿಗೆ ಸನ್ಮಾನ

ಪುತ್ತೂರು ರೋಟರಿ ಬ್ಲಡ್ ಸೆಂಟರ್ ಹಾಗೂ ರೋಟರಿ ಕ್ಲಬ್ ವತಿಯಿಂದ ರೋಟರಿ ಜಿ.ಎಲ್.ಸಭಾಭವನದಲ್ಲಿ ಜೂ.14 ರಂದು ರಕ್ತ ದಾನಿಗಳ ದಿನಾಚರಣೆ ಹಾಗೂ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.‌ ಅತೀ ಹೆಚ್ಚು ಬಾರಿ ರಕ್ತದಾನ ಮಾಡುವುದರೊಂದಿಗೆ, ರಕ್ತದಾನ ಶಿಬಿರ ವನ್ನು ಸಂಘಟಿಸಿದ ದೇವಚಳ್ಳ ಗ್ರಾ.ಪಂ.ಮಾಜಿ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಅವರನ್ನು ಸನ್ಮಾನಿಸಿದರು....

ಸುಳ್ಯ : ತುಂಡಾಗಿ ಬಿದ್ದ ಮನೆಯ ಮುಂಬಾಗದಲ್ಲಿದ್ದ ತೆಂಗಿನ ಮರ – ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

ಸುಳ್ಯ ತಾಲೂಕಿನ ಪೈಚಾರು ಗ್ರಾಮದ ಶಾಫಿ ಪ್ರಗತಿ ಎಂಬುವವರ ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರವೊಂದು ತುಂಡಾಗಿ ಮನೆಯಂಗಳಕ್ಕೆ ಬಿದ್ದ ಪರಿಣಾಮ ಕೊದಲೆಳೆಯ ಅಂತರದಲ್ಲಿ ಶಾಫಿ ಅವರ ಸಹೋದರ ಹಸೈನಾರ್ ಅವರು ಪಾರಾದ ಘಟನೆ ಜೂ.15 ಸೋಮವಾರದಂದು ನಡೆದಿದೆ. ಹಸೈನಾರ್ ಅವರು ಮನೆಯ ಸ್ಲ್ಯಾಬ್ ನಿಂದ ಬೀಳುತ್ತಿದ್ದ ಮಳೆ ನೀರನ್ನು ಬಕೆಟ್ ನಲ್ಲಿ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ಈ...

ಸಫಲ ಉದ್ಯಮ ಇಲೆಕ್ಟ್ರಾನಿಕ್ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನ ಡ್ರಾ –  1 ಲಕ್ಷ ಮೊತ್ತದ ಇಲೆಕ್ಟ್ರಾನಿಕ್ ಸಾಮಾಗ್ರಿಗಳ ಗೆದ್ದ ಸೀತಾರಾಮ ಬೀನಡ್ಕ

ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನ 8ನೇ ನೇ ಡ್ರಾ ಜೂನ್ .15 ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಶೋ ರೂಂ ನಲ್ಲಿ ನಡೆಯಿತು.ಕಾರ್ಡ್ ಸಂಖ್ಯೆ S 2008 ಹೊಂದಿಕೊಂಡಿದ್ದ ಸೀತಾರಾಮ ಬೀನಡ್ಕ ಒಂದು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ವಿಜೇತ ರಾದರು. ಅದೃಷ್ಟ ಡ್ರಾ ವಿಜೇತರ...

ದೇವಚಳ್ಳ : ಸ.ಹಿ.ಪ್ರಾ ಶಾಲೆಯಲ್ಲಿ ಮಂತ್ರಿಮಂಡಲ ರಚನೆ

ಜೂ.04ನೇ ಗುರುವಾರದಂದು ಸ.ಹಿ.ಪ್ರಾ ಶಾಲೆ ದೇವಚಳ್ಳ ಇಲ್ಲಿ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲಾ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಗಳು ಮುಖ್ಯಗುರುಗಳಿಗೆ ನಾಮಪತ್ರ ಸಲ್ಲಿಸಿದರು. ನಂತರ ಅಭ್ಯರ್ಥಿಗಳು ಮತ ಪ್ರಚಾರ ಪ್ರಕ್ರಿಯೆ ಪ್ರಾರಂಭಿಸಿದರು. ಎಲ್ಲಾ ವಿದ್ಯಾರ್ಥಿಗಳು ಮತದಾನವನ್ನು ಇ.ವಿ.ಎಂ ಮೂಲಕ ತಮ್ಮ ಆಯ್ಕೆಯ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಮತದಾನ ಕೊನೆಗೊಂಡ ನಂತರ ಮತ ಎಣಿಕೆ ಮಾಡಲಾಯಿತು....
Loading posts...

All posts loaded

No more posts

error: Content is protected !!