ಅಡ್ಡನಪಾರೆ : ರಕ್ಷಾಬಂಧನ ಕಾರ್ಯಕ್ರಮ

ರಾಷ್ಟ್ರೀಯ ಸ್ವಯಂ ಸೇವಿಕಾ ಸಮಿತಿ ಅಡ್ಡನಪಾರೆ ಇದರ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಆ.09 ರಂದು ನಡೆಯಿತು. ಅನಿತಾ ನವೀನ್ ಪೈಕ ಬೌದ್ಧಿಕ್ ನೀಡಿ ರಕ್ಷಾ ಬಂಧನದ ಮಹತ್ವ ವಿವರಿಸಿದರು. ಧರ್ಮದ ರಕ್ಷಣೆಯ ಬಗ್ಗೆ ಹಿರಿಯರ ಕೊಡುಗೆಗಳ ನೆನಪಿಸಿದರು. ಶೋಭಾವತಿ ಅಡ್ಡನಪಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಸ್ಪರ ರಾಖಿ ಕಟ್ಟಿ ಶುಭಹಾರೈಸಿದರು.ರಾಷ್ಟ್ರೀಯ ಸ್ವಯಂ ಸೇವಿಕಾ ಸಮಿತಿಯ ಸಂಘಟನೆಗಾಗಿ...

ಅರಂಬೂರು : 15ನೇ ವರ್ಷದ ವರಮಹಾಲಕ್ಷ್ಮಿ ಪೂಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಹಾಗೂ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅರಂಬೂರು, ಶ್ರೀ ಮೂಕಾಂಬಿಕಾ ಭಜನಾ ಮಂದಿರ ಅರಂಬೂರು ಇದರ ಸಹಯೋಗದೊಂದಿಗೆ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಶುಭಾಶಿರ್ವಾದಗಳೊಂದಿಗೆ ಹಾಗೂ ಪುರೋಹಿತ ಅಭಿರಾಮ್ ಭಟ್ ಸರಳಿಕುಂಜರ ನೇತೃತ್ವದಲ್ಲಿ ಅರಂಬೂರು ಶ್ರೀ ಗೋಪಾಲಕೃಷ್ಣ...
Ad Widget

ಕೊಲ್ಲಮೊಗ್ರು : ಬಿ.ಎಸ್.ಎನ್.ಎಲ್ ನೆಟ್ ವರ್ಕ್ ಟವರ್ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು ; ಗ್ರಾಮಸ್ಥರಿಂದಲೇ ಹೊಸ ಬ್ಯಾಟರಿ ಅಳವಡಿಕೆ

(ವರದಿ : ಉಲ್ಲಾಸ್ ಕಜ್ಜೋಡಿ)ಕಳೆದ ಕೆಲವು ಸಮಯಗಳಿಂದ ಕೊಲ್ಲಮೊಗ್ರು ಗ್ರಾಮದಲ್ಲಿರುವ ಬಿ.ಎಸ್.ಎನ್.ಎಲ್ ಟವರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ, ಪರಿಣಾಮವಾಗಿ ಗ್ರಾಮಸ್ಥರಿಗೆ ನೆಟ್ ವರ್ಕ್ ಸಮಸ್ಯೆ ಉಂಟಾಗುತ್ತಿತ್ತು. ನೆಟ್ ವರ್ಕ್ ಸಮಸ್ಯೆಯನ್ನು ಸರಿಪಡಿಸಲು ಜನರೇಟರ್ ಗೆ ಬ್ಯಾಟರಿ ಅಳವಡಿಕೆ ಮಾಡಬೇಕಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಬಿ.ಎಸ್.ಎನ್.ಎಲ್ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಅವರು ಹೊಸ ಬ್ಯಾಟರಿ ಅಳವಡಿಕೆ ಮಾಡಲಿಲ್ಲ ಎಂದು...

ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಒಕ್ಕೂಟದ ಅಧ್ಯಕ್ಷರಾಗಿ ಪ್ರೊ.ಶ್ರೀಲತಾ ಕಮಿಲ ಆಯ್ಕೆ

ಮಂಗಳೂರು ವಿಶ್ವವಿದ್ಯಾನಿಲಯದ 2025-26ನೇ ಸಾಲಿನ ಅರ್ಥಶಾಸ್ತ್ರ ಒಕ್ಕೂಟದ ಅಧ್ಯಕ್ಷರಾಗಿ ಪ್ರೊ.ಶ್ರೀಲತಾ ಕಮಿಲ ಆಯ್ಕೆಯಾಗಿರುತ್ತಾರೆ. ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ  ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಯುವಕನ ತುರ್ತು ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ

ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಯುವಕನ ತುರ್ತು ಚಿಕಿತ್ಸೆಗೆ ಸಾರ್ವಜನಿಕರ ಸಹಾಯಹಸ್ತ ಬೇಕಿದೆ. ಅರಂತೋಡು ಗ್ರಾಮದ ಕಿರ್ಲಾಯ ಎಂಬಲ್ಲಿ ವಾಸವಿರುವ ಲೋಲಜಾಕ್ಷ.ಎ.ಕೆ ಮೇಲಡ್ತಲೆ ಅವರಿಗೆ ಆ.05 ರಂದು ಮಿದುಳಿನ ರಕ್ತಸ್ರಾವದಿಂದಾಗಿ ಪ್ರಜ್ಞೆ ಕಳೆದುಕೊಂಡು ಮಂಗಳೂರಿನ ಯೇನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಹೆಚ್ಚಿನ ಚಿಕೆತ್ಸೆಗೆ ತಕ್ಷಣಕ್ಕೆ ಐದು ಲಕ್ಷ ರೂಪಾಯಿಗಳ ಅವಶ್ಯಕತೆ ಇರುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ. ಕೂಲಿ...

ಬೆಳ್ಳಾರೆಯ ಶಾಹಿನ್ ಮಾಲ್ ನಲ್ಲಿ ಶಿಲ್ಪಾ ಜ್ಯುವೆಲ್ಲರ್ಸ್ ಶುಭಾರಂಭ

ಬೆಳ್ಳಾರೆಯ ಮುಖ್ಯರಸ್ತೆಯಲ್ಲಿರುವ ಶಾಹಿನ್ ಮಾಲ್ ನಲ್ಲಿ ಶ್ರೀಮತಿ ಶಿಲ್ಪಾ ಪ್ರಶಾಂತ್ ಮತ್ತು ಕೆ.ಎಸ್ ಪ್ರಶಾಂತ್ ಕುಮಾರ್ ಮಾಲಕತ್ವದ ಚಿನ್ನ, ಬೆಳ್ಳಿ, ವಜ್ರ ಆಭರಣಗಳ ಮಳಿಗೆ ಶಿಲ್ಪಾ ಜ್ಯುವೆಲ್ಲರ್ಸ್ ಆ.8ರಂದು ಶುಭಾರಂಭಗೊಂಡಿತು. ಶಾಹಿನ್ ಮಾಲ್ ಮಾಲಕರಾದ ಎಸ್.ಎಂ ಅಬ್ದುಲ್ ಹಮೀದ್ ಹಾಜಿ ರಿಬ್ಬನ್ ಕತ್ತರಿಸಿ, ಪ್ರಶಾಂತ್ ಕುಮಾರ್ ರವರ ತಾಯಿ ಶ್ರೀಮತಿ ಸರೋಜಿನಿ ಸದಾಶಿವ ಆಚಾರ್ಯ ಕಡಬ...

ಕುಕ್ಕೆ ದೇವಳದಲ್ಲಿ ಶ್ರದ್ಧಾ ಭಕ್ತಿಯ ವರಮಹಾಲಕ್ಷ್ಮಿ ಪೂಜೆ

ಸುಬ್ರಹ್ಮಣ್ಯ : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಒಳಪಟ್ಟ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಕಾರದ ಆದೇಶದ ಪ್ರಕಾರವಾಗಿ ವರಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು. ಸಹಸ್ರಾರು ಭಕ್ತರು ವೃತದಲ್ಲಿ ಭಾಗವಹಿಸಿ ಲಕ್ಷ್ಮಿ ಕೃಪೆಗೆ ಪಾತ್ರರಾದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶೃಂಗೇರಿ ಮಠದಲ್ಲಿ ವರಮಹಾಲಕ್ಷ್ಮಿ ಪೂಜೆಯು ಪುರೋಹಿತ...

ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಆ.08 ರಂದು ಹರಿಹರ ಪಳ್ಳತ್ತಡ್ಕ, ಬಾಳುಗೋಡು ಹಾಗೂ ಐನೆಕಿದು ಗ್ರಾಮಗಳ ಸಹಭಾಗಿತ್ವದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಗೀತಾ ವಿಶ್ವನಾಥ್ ಬಿಳಿಮಲೆ, ಕಾರ್ಯದರ್ಶಿ ಶ್ರೀಮತಿ ಮನೋರಮಾ, ಕೋಶಾಧಿಕಾರಿ ಶ್ರೀಮತಿ ವಿಜಯ ಕೂಜುಗೋಡು, ಗೌರವಾಧ್ಯಕ್ಷರಾದ...

ಬದುಕಿಗೆ ಸ್ಫೂರ್ತಿ ನೀಡುವ “ಜೀವನಯಾನ” ಕವನ ಸಂಕಲನ

✍️ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ

ಮನುಷ್ಯ ತನ್ನ ಜೀವನದಲ್ಲಿ ಹೇಗೆ ತನ್ನ ಬದುಕನ್ನು ರೂಪಿಸಿಕೊಳ್ಳಬೇಕು ಎಂಬುವುದು ಒಬ್ಬ ಕವಿಹೃದಯವಿರುವ ವ್ಯಕ್ತಿಯಲ್ಲಿ ವಿಶಾಲವಾದ ಮನೋಸ್ಥೈರ್ಯ ಹಾಗೂ ಆಶಾವಾದವನ್ನು ಹುಟ್ಟುಹಾಕುತ್ತದೆ. ಬದುಕು ಮೂರು ದಿನದ ಸಂತೆಯಾದರೂ ನಗುನಗುತ್ತಾ ಕಳೆಯುವುದೇ ಒಂದು ಉತ್ಸಾಹ ತುಂಬಿದ ಬದುಕಿಗೆ ಪ್ರೇರಣೆ. ತಾನೂ ಬದುಕಿ ಇತರರನ್ನೂ ಜೀವನೋತ್ಸಾಹದ ಹಾದಿಯಲ್ಲಿ ಬೆಸೆಯುವುದು ಜೀವತುಂಬಿದ ಬದುಕು ಎನಿಸುವುದು. ಇಂತಹ ಬದುಕಿಗೆ ಸ್ಫೂರ್ತಿಯ ಚಿಲುಮೆ...

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಿ.ಡಾ| ಕುರುಂಜಿ ಪುಣ್ಯತಿಥಿ ಆಚರಣೆ

ಆಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣ ಬ್ರಹ್ಮ, ಕೆ.ವಿ.ಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿ. ಡಾ| ಕುರುಂಜಿ ವೆಂಕಟ್ರಮಣ ಗೌಡರ 12ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ನುಡಿ ನಮನ ಕಾರ್ಯಕ್ರಮವು ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆ.07ರಂದು ನಡೆಯಿತು. ಕಾಲೇಜಿನ ರಷಶಾಸ್ತ್ರ ಮತ್ತು ಭೈಷಜ್ಯ ಕಲ್ಪನದ ವಿಭಾಗ ಮುಖ್ಯಸ್ಥರೂ, ಕೆವಿಜಿ ಆಯುರ್ವೇದ ಫಾರ್ಮಸಿ...
Loading posts...

All posts loaded

No more posts

error: Content is protected !!