Ad Widget

ವಿಶ್ವ ದಾದಿಯರ ದಿನ ಮೇ – 12

ಪ್ರತಿ ವರ್ಷ “ಮೇ 12ರಂದು ವಿಶ್ವ ದಾದಿಯರ ದಿನ” ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನ ಖ್ಯಾತ ದಾದಿಪ್ಲಾರೆನ್ಸ್ ನೈಟಿಂಗೇಲ್ ಅವರು ಹುಟ್ಟಿದ ದಿನವೂ ಹೌದು. ಅವರು ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ “ವಿಶ್ವ ದಾದಿಯರ ದಿನ” ಎಂದು ಜಗತ್ತಿನಾದ್ಯಂತ ಮೇ 12ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. 2018ರ ಆಚರಣೆಯ ಧ್ಯೇಯ ವಾಕ್ಯವೆಂದರೆ “ಆರೋಗ್ಯ...

ದೊಡ್ಡತೋಟ-ಮರ್ಕಂಜ  : ಗಾಳಿ ಮಳೆಗೆ ಮರ ಬಿದ್ದು ವಿದ್ಯುತ್ ಕಂಬ ಮುರಿತ – ರಸ್ತೆ ಬ್ಲಾಕ್

ಸಂಜೆ ಸುರಿದ ಗಾಳಿಗೆ ಮಳೆಗೆ ದೊಡ್ಡತೋಟ ಮರ್ಕಂಜ ರಸ್ತೆಯ ಬೆಟ್ಟ ಎಂಬಲ್ಲಿ ರಸ್ತೆಗೆ ಮರ ಬಿದ್ದು, ವಿದ್ಯುತ್ ಕಂಬ ಮುರಿದ ಘಟನೆ ವರದಿಯಾಗಿದೆ.
Ad Widget

ನಡುಗಲ್ಲು: ಮರಕತ ಬಳಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರೆಗೆ!

ಇಂದು ಸಂಜೆ ಸುರಿದ ಗಾಳಿ ಮಳೆಗೆ ನಡುಗಲ್ಲು ಆಸುಪಾಸು ಮರಕತ ಮತ್ತಿತರ ಕಡೆ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ನಡೆದಿದೆ.

ಸುಳ್ಯ : ಗುಡುಗು ಸಹಿತ ಭಾರಿ ಮಳೆ-  ವಿದ್ಯುತ್ ವ್ಯತ್ಯಯ

ಸುಳ್ಯ ತಾಲೂಕಿನಾದ್ಯಂತ ಇಂದು ಸಂಜೆ ಸುರಿದ ಮಳೆಗೆ ಇಳೆ ತಂಪಾಗಿದೆ. ಗುಡುಗು ಹಾಗೂ ಗಾಳಿ ಮಳೆಗೆ ವಿವಿಧೆಡೆ ಕೃಷಿ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆ. 33 ಕೆವಿ ಮಾಡಾವು - ಕಾವು - ಸುಳ್ಯ ವಿದ್ಯುತ್ ಲೈನ್ ಫಾಲ್ಟ್ ಆಗಿದ್ದು ಸುಳ್ಯದಾದ್ಯಂತ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಡಬ: ಸಿಡಿಲು ಬಡಿದು ಓರ್ವ ಸಾವು; ಇಬ್ಬರು ಗಂಭೀರ !

ಕೆಲಸ ಮುಗಿಸಿ ಶೆಡ್ ನಲ್ಲಿ ಕುಳಿತಿದ್ದ ಕಾರ್ಮಿಕರಿಗೆ ಸಿಡಿಲು ಬಡಿದು ಓರ್ವ ಕಾರ್ಮಿಕ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ  ಇಂದು ನಡೆದಿದೆ.ಕಾರ್ಮಿಕರು ಮರಳು ತೆಗೆಯುವ ಕೆಲಸ ಮಾಡುತ್ತಿದ್ದು, ನದಿ ಬದಿಯ ಶೆಡ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಶೆಡ್‌ಗೆ ಸಿಡಿಲು ಬಡಿದಿದೆ  ಎಂದು ಹೇಳಲಾಗಿದೆ.ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ ಚೈನ್‌ಪುರ್ ಮೂಲದ...

ಅರಂಬೂರು; ಚಾಲಕನ ನಿಯಂತ್ರಣ ತಪ್ಪಿ ಅಂಗಡಿಯೊಳಗೆ ನುಗ್ಗಿದ ಬೊಲೆರೊ ಜೀಪ್

ಚಾಲಕನ ನಿಯಂತ್ರಣ ತಪ್ಪಿ ಹೊಸದಾಗಿ ನಿರ್ಮಾಣಗೊಳ್ಳುತ್ತಿದ್ದ ಅಂಗಡಿ ಕಟ್ಟಡಕ್ಕೆ ಮಡಿಕೇರಿ ಕಡೆಯಿಂದ ಬಂದ ಬೊಲೆರೊ ಜೀಪ್ ವೊಂದು ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ಆರಂಬೂರಿನಲ್ಲಿ ನಡೆದಿದೆ.  ಡಿಕ್ಕಿ ರಭಸಕ್ಕೆ ಜೀಪ್ ಜಖಂಗೊಂಡಿದೆ. ಬೊಲೆರೋ ಕಾರಿನಲ್ಲಿ ಇದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಕಲಂದರ್ ಪೆರಾಜೆ ಎಂಬುವವರ ಮ್ಹಾಲಕತ್ವದ ನಿರ್ಮಾಣ ಹಂತದಲ್ಲಿರುವ ಹೋಟೆಲ್ಗೆ ಬೊಲೆರೋ ಗುದ್ದಿರುವ...

ಪೆರಾಜೆ:  ಕೆ.ಎಸ್.ಆರ್.ಟಿ.ಸಿ. ಬಸ್ – ಕಾರಿನ ಮಧ್ಯೆ ಅಪಘಾತ

ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡು, ಆಸ್ಪತ್ರೆಗೆ ದಾಖಲಾದ ಘಟನೆ ಪೆರಾಜೆ ಸಮೀಪದ ಪಾಲಡ್ಕದಲ್ಲಿ ಸಂಜೆ ಸಂಭವಿಸಿದೆ. ಮಡಿಕೇರಿಯಿಂದ ಸುಳ್ಯಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರಿನ ಮಧ್ಯೆ ಪಾಲಡ್ಕದಲ್ಲಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ಗ್ರಾಫಿಕ್ ಡಿಸೈನಿಂಗ್ ಮತ್ತು ಕಂಟೆಂಟ್ ಮೇಕಿಂಗ್ ಮಾಹಿತಿ ಕಾರ್ಯಗಾರ

ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಗ್ರಾಫಿಕ್ ಡಿಸೈನಿಂಗ್ ಮತ್ತು ಕಂಟೆಂಟ್ ಮೇಕಿಂಗ್ ಬಗ್ಗೆ ಮಾಹಿತಿ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮ ಮೇ 09 ರಂದು ಕಾಲೇಜಿನ ದೃಶ್ಯ ಶ್ರವಣ ಸಭಾಂಗಣದಲ್ಲಿ ನಡೆಯಿತು.ಯೂ ಟ್ಯೂಬರ್ ಹಾಗೂ ಪೋಸ್ಟರ್ ಡಿಸೈನರ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿ ಮುರಳಿ ಕೃಷ್ಣ ವೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು....

ಸುಳ್ಯ; ಕೆರೆಮೂಲೆಯಲ್ಲಿ ಕಾಡಾನೆ ದಾಳಿ- ಕೃಷಿ ಹಾನಿ

ಕೆಲವು ದಿನಗಳ ಹಿಂದೆ ಸುಳ್ಯ‌ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಕೆರೆಮೂಲೆ, ಬೂಡು ಪ್ರದೇಶಕ್ಕೆ ಬಂದು ಕೃಷಿ‌ಹಾನಿಗೊಳಿಸಿರುವುದಾಗಿ ವರಿದಿಯಾಗಿದೆ. ಕೆರೆಮೂಲೆ ಭಾಗದ ಈಶ್ವರಪ್ಪ ಗೌಡ ರ ತೋಟ ಸೇರಿದಂತೆ ಪಯಸ್ವಿನಿ ನದಿಗೆ ತಾಗಿಕೊಂಡಿರುವ ಕೃಷಿಕರ ತೋಟಕ್ಕೆ ಕಾಡಾನೆಗಳು ಬಂದು ಕೃಷಿ ಹಾನಿ‌ಮಾಡಿವೆ. ಅಪಾರ ಪ್ರಮಾಣದಲ್ಲಿ‌ ಬಾಳೆ, ಅಡಿಕೆ, ಕೊಕ್ಕೊಕೃಷಿ ಹಾನಿ ಮಾಡಿವೆ.

ತಮಿಳು ಕಾರ್ಮಿಕ ಮುಖಂಡ ಶಿವಕುಮಾರ ಕೌಡಿಚ್ಚಾರ್ ವಾಹನ ಅಪಘಾತದಲ್ಲಿ ಮೃತ್ಯು

ತಮಿಳು ಕಾರ್ಮಿಕ ಮುಖಂಡ, ಕಾಂಗ್ರೆಸ್ ನಾಯಕ ಶಿವಕುಮಾರ ಕೌಡಿಚ್ಚಾರ್ ಬೆಳಗಾವಿಯಲ್ಲಿ ನಡೆದ ಭೀಕರ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೆಲಸದ ನಿಮಿತ್ತ ಬೆಳಗಾವಿಗೆ ಹೋಗಿದ್ದ ಅವರ ಬೈಕ್ ಬಾರಿಕೇಡ್ ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಹೆಚ್ಚಿನ ವಿವರ ಲಭ್ಯವಾಗಿಲ್ಲ.
Loading posts...

All posts loaded

No more posts

error: Content is protected !!