ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(03.08.2020 ಸೋಮವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 360ಹಳೆ ಅಡಿಕೆ 305 - 390ಡಬಲ್ ಚೋಲ್ 305 - 390 ಫಠೋರ 220 - 295ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಕೊಡಗಿನಾದ್ಯಂತ ಬಾರಿ ಮಳೆ ಜನಜೀವನ ಅಸ್ತವ್ಯಸ್ತ

ಇಂದು ಕೊಡಗಿನಾದ್ಯಂತ ಆಟಿ ಹಬ್ಬದ ದಿನ ವಾಗಿದ್ದು, ಸಂಜೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸತತವಾಗಿ ಎರಡು ಗಂಟೆಗಳ ಕಾಲ ಸುರಿದ ಭಾರಿ ಗಾಳಿ ಮಳೆಗೆ ನಗರದ ಹಲವಾರು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ಹರಿದಾಡಿದವು.ಬಹಳ ಹಿಂದಿನ ಕಾಲದಿಂದಲೇ ಬಂದಿರುವ ಆಟಿ ತಿಂಗಳನ್ನು ನೆನಪಿಸುವ ರೀತಿಯಲ್ಲಿ ಇಂದು ಸಂಜೆ 4 ಗಂಟೆಯಿಂದ ಸುಮಾರು 6 ಗಂಟೆಯ...
Ad Widget

ನಾಳೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸುಳ್ಯ ವಿಧಾನಸಭಾ ಕ್ಷೇತ್ರ ಭೇಟಿ

ವಿಧಾನ ಪರಿಷತ್ ಸದಸ್ಯ  ಪ್ರತಾಪ್ ಸಿಂಹ ನಾಯಕ್ ಆ.3 ರಂದು  ಸುಳ್ಯ ವಿಧಾನಸಭಾ ಕ್ಷೇತ್ರ ಭೇಟಿ ಮಾಡಲಿದ್ದಾರೆ. ಅಂದು ಮಧ್ಯಾಹ್ನ ಗಂ12.00 ಕ್ಕೆ ಕಡಬ ದುರ್ಗಾಂಬಿಕ ದೇವಸ್ಥಾನದ ಬಳಿ  ಪ್ರತಾಪ್ ಸಿಂಹ ನಾಯಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂ 3.00 ಕ್ಕೆ ಸುಳ್ಯ ಬಿಜೆಪಿ  ಕಛೇರಿಗೆ ಭೇಟಿ ನೀಡಲಿದ್ದಾರೆ ಎಂದು ಸುಳ್ಯ ಬಿಜೆಪಿ ಪ್ರಕಟಣೆ ತಿಳಿಸಿದೆ.

ವಿ ಹೆಚ್ ಪಿ ಬಜರಂಗದಳದ “ವೀರಾಂಜನೇಯ ಶೇಣಿ ಶಾಖೆ” ರಚನೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಇದರ ನೂತನ ಶಾಖೆಯು ಶೇಣಿಯ ನಾರಾಯಣ ರೈ ಇವರ ಮನೆಯಲ್ಲಿ ಇಂದು ಉದ್ಘಾಟನೆಗೊಂಡಿತು. ನೂತನ ಶಾಖೆಗೆ " ವೀರಾಂಜನೇಯ ಶಾಖೆ ಶೇಣಿ" ಎಂಬ ಹೆಸರನ್ನಿಡಲಾಯಿತು. ಈ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷರಾದ ಸೋಮೇಶ್ವರ ಪೈಕ, ಬಜರಂಗದಳದ ಜಿಲ್ಲಾ ಸಹ ಸಂಚಾಲಕರಾದ ಲತೀಶ್ ಗುಂಡ್ಯ,...

ಅಜ್ಜಾವರದಲ್ಲಿ ವಿಕಾಯ ತಂಡದ ವತಿಯಿಂದ ಶ್ರಮದಾನ

ಅಜ್ಜಾವರ ನಿವಾಸಿ ಜಮೀಲಾ ಎಂಬವರಿಗೆ ನಿರ್ಮಿಸುತ್ತಿರುವ ಮನೆಯ ಅಡಿಪಾಯ ಕೆಲಸದಲ್ಲಿ ಇಂದು ಸುಳ್ಯ ವಲಯಕ್ಕೊಳಪಟ್ಟ ಅಜ್ಜಾವರ ವಿಖಾಯ ತಂಡವು ಶ್ರಮದಾನ ಮಾಡುವ ಮೂಲಕ ಸಹಕಾರಿಯಾದರು. ಈ ಸಂದರ್ಭದಲ್ಲಿ ಅಜ್ಜಾವರ ಓಲ್ಡ್ ಸ್ಟೂಡೆಂಟ್ ಫೆಡರೇಷನ್ ಅಧ್ಯಕ್ಷರಾದ ಶಾಫಿ ಕರ್ಲಪ್ಪಾಡಿ,SKSSF ಅಜ್ಜಾವರ ಶಾಖೆಯ ಅಧ್ಯಕ್ಷ ರಫೀಕ್ ಮುಸ್ಲಿಯಾರ್,ಕಾರ್ಯದರ್ಶಿ ಇಲ್ಯಾಸ್ ತೋಟಮ್,ಸುಳ್ಯ ವಲಯ ವಿಖಾಯ ಚೇರ್ಮೆನ್ ಷರೀಫ್ ಸಿ,ಎ, ಅಜ್ಜಾವರ...

ಪಂಜದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್

ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಂಜ ಪೇಟೆಯ ಹಾಗೂ ಮುಖ್ಯ ರಸ್ತೆಗಳ ಬದಿಯ ಸ್ವಚ್ಚತಾ ಕಾರ್ಯ ಇಂದು ನಡೆಯಿತು. ಬೆಳಗ್ಗಿನ ಉಪಹಾರ ವನ್ನು ಸೌಧಾಮಿನಿ ಮೋನಪ್ಪ ರವರು ನೀಡಿ ಸಹಕರಿಸಿದರು. ಮಧ್ಯಾಹ್ನದ ಊಟದ ವ್ಯವಸ್ಥೆಗೆ ಪ್ರಗತಿ ಚಿಕನ್ ಸೆಂಟರ್ ನ ಮಾಲೀಕರಾದ ಉದಯ್ ಕುಮಾರ್ ಹುದೇರಿ ಮತ್ತು ರಾಧಾಕೃಷ್ಣ ಪೈಸಾರಿ ನೀಡಿ ಸಹಕರಿಸಿದರು. ಸ್ವಚ್ಚತಾ...

ಬಾಳಿಲ ಮುಖ್ಯ ಶಿಕ್ಷಕರಾಗಿ ಯಶೋಧರ ನಾರಾಲು

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ಕನ್ನಡ ಶಿಕ್ಷಕರಾಗಿರುವ ಯಶೋಧರ ನಾರಾಲು ಅಧಿಕಾರ ವಹಿಸಿಕೊಂಡಿದ್ದಾರೆ. ಮುಖ್ಯ ಶಿಕ್ಷಕರಾಗಿದ್ದ ಎಂ.ಎಸ್. ಶಿವರಾಮ ಶಾಸ್ತ್ರಿಯವರು ಜು. ೩೧ ರಂದು ನಿವೃತ್ತಿಹೊಂದಿದ್ದರು. ಯಶೋಧರ ನಾರಾಲುರವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಜ್ಜಾವರ, ಪದವಿ ಪೂರ್ವ ಶಿಕ್ಷಣವನ್ನು ಸುಳ್ಯ ಸರಕಾರಿ ಜೂನಿಯರ್ ಕಾಲೇಜು, ಪದವಿ (ಬಿ.ಎ) ಶಿಕ್ಷಣವನ್ನು ಎನ್.ಎಂ.ಸಿ.ಯಲ್ಲಿ ಪೂರೈಸಿದರು....

ಬೆಳ್ಳಾರೆ: ಸೇವಾ ಭಾರತಿ ವತಿಯಿಂದ ಗುರುಪೂಜಾ ಕಾರ್ಯಕ್ರಮ

ಬೆಳ್ಳಾರೆ ಸೇವಾಭಾರತಿ ವತಿಯಿಂದ ಗುರು ಪೂರ್ಣಿಮೆಯ ಪ್ರಯುಕ್ತ ಗುರುಪೂಜೆ ಹಾಗೂ ಕಡಬ ಸರಸ್ವತಿ ವಿದ್ಯಾ ಸಂಸ್ಥೆಯ ಅಧ್ಯಾಪಕಿ ಉಷಾ ಅವರಿಗ ಅಭಿವಂದನಾ ಕಾರ್ಯಕ್ರಮ ‌ನಡೆಯಿತು. ಕಡಬದ ಸರಸ್ವತಿ ವಿದ್ಯಾಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು . ಬೆಳ್ಳಾರೆ, ಪೆರುವಾಜೆಯ ಸೇವಾ ಭಾರತಿ ಕಾರ್ಯಕರ್ತರು, ಸಂಘ ಸಂಸ್ಥೆಗಳ ಗಣ್ಯರು, ಹಿರಿಯರು, ಮಾತೆಯರು ಗುರುವಂದನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಾಜಿ ಸಚಿವ ರಮಾನಾಥ ರೈ ಭೇಟಿ ಮಾಡಿದ ಸುಳ್ಯದ ಕಾಂಗ್ರೆಸ್ ಮುಖಂಡರು

ಮಾಜಿ ಸಚಿವ ಬಿ ರಮಾನಾಥ ರೈ ರವರನ್ನು ಸುಳ್ಯ ಕಾಂಗ್ರೆಸ್ ಪಕ್ಷದ ಮುಖಂಡರು ಆಗಸ್ಟ್ 1ರಂದು ಸಂಜೆ ಸುಳ್ಯ ಗ್ರಾಂಡ್ ಪರಿವಾರ್ ಉಡುಪಿ ಗಾರ್ಡನ್ ಹೋಟೆಲ್ ನಲ್ಲಿ ಭೇಟಿಯಾದರು.ಮಾಜಿ ಸಚಿವ ರಮಾನಾಥ ರೈ ಪಕ್ಷದ ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಸುಳ್ಯ ಮಾರ್ಗವಾಗಿ ಬಂಟ್ವಾಳ ಕ್ಕೆ ಹಿಂತಿರುಗುವ ವೇಳೆ ಸುಳ್ಯದ ಪಕ್ಷದ ಮುಖಂಡರುಗಳು...

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ ಭವ್ಯ ಶ್ರೀರಾಮ ಮಂದಿರ – ಶ್ರೀರಾಮ ಮಂದಿರ ಧಾರ್ಮಿಕ ಸೌಹಾರ್ದತೆಯ ಸಂಕೇತವಾಗಿದೆ

📝📝.........ಭಾಸ್ಕರ ಜೋಗಿಬೆಟ್ಟುಪ್ರಚಾರ ಪ್ರಸಾರ ಪ್ರಮುಖ್, ವಿಶ್ವ ಹಿಂದೂ  ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ  ಸುತ್ತಲೂ ಭಜನೆಗಳು ಆರಂಭವಾಗಿದೆ , ಪ್ರತಿಯೊಂದು ಕಡೆ ಮನೆಗಳು ದೀಪಾಲಂಕರದಿಂದ ಕೂಡಿದೆ. ಕೇಸರಿ ಬಾವುಟಗಳು ರಾರಾಜಿಸುತ್ತಿವೆ ,ಭಕ್ತರ ಮನ ಮನದಲ್ಲಿ ರಾಮ ನಾಮ ಕೇಳಿ ಬರುತ್ತಿದೆ. ರಸ್ತೆಯ , ಮನೆಯ , ಕಂಪೌಂಡ್ ತಡೆಗೋಡೆಯ ಮೇಲೆ ಶ್ರೀ ರಾಮ ಚಂದ್ರನ ಚಿತ್ರವನ್ನು ಬಿಡಿಸಲಾಗಿದ್ದು...
Loading posts...

All posts loaded

No more posts

error: Content is protected !!