ಆರಿತು ದೊಡ್ಮನೆಯ ದೀಪ… – ಧನಂಜಯ ಕೆ. ಕೊಡೆಂಕೇರಿ

ಆರಿತು ದೊಡ್ಮನೆಯ ದೀಪ ಕನ್ನಡಿಗರ ಹೃದಯ ಬೆಳಗಿದ ನಂದಾದೀಪ.ಬಾಳಿನ ಹಾದಿಯಲಿ ಕಗ್ಗತ್ತಲು ಕವಿಯಿತುಸ್ಫೂರ್ತಿಯ ಚಿಲುಮೆಯು ಬತ್ತಿಹೋಯಿತು. ನಯ ವಿನಯದ ಮಾತುಗಳು ಕೇಳಿಸುತ್ತಿಲ್ಲಆ ನಗು ಮುಖದಲ್ಲಿದ್ದ ತೇಜಸ್ಸು ಇಂದಿಲ್ಲ.ನೃತ್ಯದ ಕೈ-ಕಾಲುಗಳು ಇಂದು ನರ್ತಿಸುತ್ತಿಲ್ಲಹೃದಯದ ಹಾಡು ಹಾಡುವ ಕೋಗಿಲೆಯು ಇನ್ನಿಲ್ಲ. ಆಕಾಶದೆತ್ತರಕ್ಕೆ ಹೊಸ ಕನಸು ಬಿತ್ತಿದ ಕುವರಕನ್ನಡಿಗರ ಪ್ರೀತಿಯ ಅಪ್ಪು.ಈ ರಾಜಕುಮಾರ.ಪ್ರತಿದಿನ ಅಭಿಮಾನಿಗಳೇ ದೇವರು ಎನ್ನುತ್ತಿದ್ದವ ನೀನುಇಂದೇಕೆ ಯಾರಿಗೂ...

ಗುತ್ತಿಗಾರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ – ಸದಸ್ಯರಿಗೆ 6% ಡಿವಿಡೆಂಟ್ ಘೋಷಣೆ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಯವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ಇಂದು ನಡೆಯಿತು. ಸಂಘವು ವಾರ್ಷಿಕ 1.18 ಕೋಟಿ ಲಾಭಾಂಶ ಹೊಂದಿದ್ದು ಸದಸ್ಯರಿಗೆ ಶೇ 6 ಡಿವಿಡೆಂಟ್ ವಿತರಣೆಗೆ ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕಿಶೋರ್ ಕುಮಾರ್ ಅಂಬೆಕಲ್ಲು, ನಿರ್ದೇಶಕರುಗಳಾದ...
Ad Widget

ಕಳಂಜ: ಕ್ಷಯ ಮುಕ್ತ ಗ್ರಾಮ ನಿರ್ಮಾಣದ ಬಗ್ಗೆ ಮಾಹಿತಿ ಮತ್ತು ಟಾಸ್ಕ್ ಪೋರ್ಸ್ ಸಮಿತಿ ರಚನೆ

ಕಳಂಜ ಗ್ರಾಮ ಪಂಚಾಯತನ್ನು ಕ್ಷಯ ಮುಕ್ತ ಗ್ರಾಮ ಪಂಚಾಯತ್ ಎಂದು ಘೋಷಣೆ ಮಾಡುವ ನಿಟ್ಟಿನಲ್ಲಿ ಕ್ಷಯರೋಗದ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಮತ್ತು ಟಾಸ್ಕ್ ಪೋರ್ಸ್ ಸಮಿತಿ ರಚನಾ ಸಭೆಯನ್ನು ಕಳಂಜ ಗ್ರಾಮ ಪಂಚಾಯತಿನ ಗೌರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಗಿರೀಶ್ ಎಂ ಮತ್ತು ಸುಳ್ಯ ತಾಲೂಕು...

ಎನ್ನೆಂಸಿ: ನೇಚರ್ ಕ್ಲಬ್ ಜೀವ ವಿಜ್ಞಾನ ಪದವಿ ವಿದ್ಯಾರ್ಥಿಗಳಿಂದ ಕೃಷಿ ಕ್ಷೇತ್ರ ಅಧ್ಯಯನ ಶಿಬಿರ

ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಜೀವವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಅಕ್ಟೋಬರ್ 26ರಂದು ಕೃಷಿ ಕ್ಷೇತ್ರ ಅಧ್ಯಯನ ಪ್ರವಾಸ ಏರ್ಪಡಿಸಿ ಸುಳ್ಯ ಪರಿಸರದ ಕೆಲವು ಕೃಷಿ ಸಾಧಕರನ್ನು ಸಂದರ್ಶಿಸಿ, ಕೃಷಿ ಕ್ಷೇತ್ರ ವೀಕ್ಷಿಸಿ, ಅಲ್ಲಿನ ವಿಶೇಷತೆಗಳನ್ನು ಅವರ ಕೃಷಿ ಸಾಧನೆಗಳನ್ನು ಪರಿಚಯಿಸಿ ಕೊಡಲಾಯಿತು.ಕೃಷಿ ಕ್ಷೇತ್ರ ಅಧ್ಯಯನದಲ್ಲಿ ಮೊದಲನೆಯದಾಗಿ ಸುಳ್ಯ ತಾಲೂಕಿನ ಬೆಳ್ಳಾರೆ...

ಗುತ್ತಿಗಾರು :- ಅಮರ ಸಂಜೀವಿನಿ ಒಕ್ಕೂಟ ಗ್ರಾಮಸಭೆ

ಅಮರ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಒಕ್ಕೂಟ ಸಭೆ ಅ.28 ರಂದು ಗಿರಿಜನ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅಮರ ಸಂಜೀವಿನಿ ಒಕ್ಕೂಟದ ಅದ್ಯಕ್ಷರಾದ ರವಿಕಲಾ ಚೆಮ್ನೂರು ವಹಿಸಿದ್ದರು. ಸಭೆಯಲ್ಲಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತಾ ಹಾಗೂ NRGY ಕೋ-ಆರ್ಡಿನೇಟರ್ ನಮಿತಾ, ಗುತ್ತಿಗಾರು ಗ್ರಾಮಪಂಚಾಯತ್ ಅದ್ಯಕ್ಷರಾದ ರೇವತಿ ಆಚಳ್ಳಿ, ಶ್ರೀಮತಿ ತೇಜಕುಮಾರಿ, ಒಕ್ಕೂಟ...

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ

ಸ್ಯಾಂಡಲ್ ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ನಿಧನರಾಗಿದ್ದಾರೆ. ಜಿಮ್ ಮಾಡುವ ಸಂದರ್ಭದಲ್ಲಿ ಪುನೀತ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರಿಗೆ 46 ವರ್ಷ ವಯಸ್ಸಾಗಿತ್ತು.ವರನಟ ಡಾ| ರಾಜ್ ಕುಮಾರ್ ಅವರ ಪುತ್ರನಾದ ಪುನೀತ್ ಅವರು 1975ನೇ ಮಾರ್ಚ್ 17...

ಕೊಲ್ಲಮೊಗ್ರ : ಅರುಣೋದಯ ಜನರಲ್ ಸ್ಟೋರ್ ಶುಭಾರಂಭ

ಉದಯ ಶಿವಾಲ ಮಾಲಕತ್ವದ ಅರುಣೋದಯ ಜನರಲ್ ಸ್ಟೋರ್ ಕೊಲ್ಲಮೊಗ್ರದ ಎಸ್.ಕೆ ಕಾಂಪ್ಲೆಕ್ಸ್ ನಲ್ಲಿ ಅ.29 ರಂದು ಬೆಳಿಗ್ಗೆ ಗಣಹೋಮದೊಂದಿಗೆ ಶುಭಾರಂಭಗೊಂಡಿತು.ನಮ್ಮಲ್ಲಿ ಎಲ್ಲಾ ರೀತಿಯ ದಿನಸಿ ಸಾಮಾಗ್ರಿಗಳು ಹಾಗೂ ನಂದಿನಿ ಹಾಲು, ಮೊಸರು ಹಾಗೂ ಇತರ ಉತ್ಪನ್ನಗಳು ದೊರೆಯುತ್ತವೆ ಎಂದು ಜನರಲ್ ಸ್ಟೋರ್ ನ ಮಾಲಕರಾದ ಉದಯ ಶಿವಾಲ ತಿಳಿಸಿದ್ದಾರೆ. ವರದಿ :- ಉಲ್ಲಾಸ್ ಕಜ್ಜೋಡಿ

ಶ್ರಮದಾನದ ಮೂಲಕ ಜಿರ್ಮುಕಿ- ಬೊಮ್ಮಾರು ಕೆಸರುಮಯ ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡಲಾಗಿದೆ- ಉಪಾಧ್ಯಕ್ಷ ಧನಂಜಯ ಕುಮಾರ್ ಪ್ರತಿಕ್ರಿಯೆ

ನೆಲ್ಲೂರು ಕೆಮ್ರಾಜೆ: ಜಿರ್ಮುಕಿ- ಬೊಳ್ಳಾಜೆ ಕೆಸರು ಮಯ ರಸ್ತೆಯ ಕುರಿತ ಅಮರ ಸುದ್ದಿ ವರದಿಗೆ ಪಂಚಾಯತ್ ಉಪಾಧ್ಯಕ್ಷ ಧನಂಜಯ ಕುಮರ್ ಎರ್ಮೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸೇವಾಜೆ ಸೇತುವೆ ದುರಸ್ತಿಯ ಹಿನ್ನಲೆ ಈ ರಸ್ತೆಯ ವಾಹನ ಸಂಚಾರ ದುಪ್ಪಟ್ಟಾದ ಕಾರಣ ರಸ್ತೆ ಕೆಸರುಮಯವಾಗಿತ್ತು. ಇದರ ತಾತ್ಕಾಲಿಕ ದುರಸ್ತಿಯನ್ನು ಅ. 24 ರಂದು ಪಂಚಾಯತ್ ಅಧ್ಯಕ್ಷರು ಹಾಗೂ...

ಉಸ್ಮಾನ್ ಹಾಜಿ ಮಂಡೇಪು ನಿಧನ

ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಮಾಜಿ ಸದಸ್ಯರೂ ,ಬೆಳ್ಳಾರೆಯ ಉದ್ಯಮಿ ಬಶೀರ್ ಬಿ ಎ ಇವರ ತಂದೆ ಉಸ್ಮಾನ್ ಹಾಜಿ ಮಂಡೇಪು (81) ಅಲ್ಪಕಾಲದ ಅಸೌಖ್ಯದಿಂದ ಅಕ್ಟೋಬರ್ 29 ರಂದು ನಿಧನರಾದರು. ಮೃತರು ಪತ್ನಿ ,ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಪಂಜ: ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಮಹಾಸಭೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ 2021- 22ರ ವಾರ್ಷಿಕ ಮಹಾಸಭೆಯು ಅ.28ರಂದು ಪಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ.ಕೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಸ್ಕೌಟ್ ಆಯುಕ್ತರಾದ ಶ್ರೀ ರಾಮಶೇಷ ಶೆಟ್ಟಿ, ಜಿಲ್ಲಾ ಸಂಸ್ಥೆಯ ಗೈಡ್...
Loading posts...

All posts loaded

No more posts

error: Content is protected !!