ಯಕ್ಷಯೋಧ ಮಿತ್ರವೃಂದ ಕೋಟೆಮುಂಡುಗಾರು ವತಿಯಿಂದ ಯೋಧನಮನ ಕಾರ್ಯಕ್ರಮ

ಯುಗಪುರುಷ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾನುಗ್ರಹದೊಂದಿಗೆ ಆದರಣೀಯ ಡಿ.ಹರ್ಷೇಂದ್ರ ಕುಮಾರ್ ಅವರ ಶುಭಾಶಯಗಳೊಂದಿಗೆ ಯಕ್ಷಯೋಧ ಮಿತ್ರವೃಂದ ಕೋಟೆಮುಂಡುಗಾರು ವತಿಯಿಂದ ಯೋಧನಮನ ಕಾರ್ಯಕ್ರಮ ನ.01ರಂದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ಜರುಗಿತು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಎಂ. ಕೂಸಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಭಾಕಾರ್ಯಕ್ರಮ ಮುಖ್ಯ ಅತಿಥಿ ಅಭ್ಯಾಗತರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು....

ಅಮರಸುದ್ದಿ ಕಚೇರಿಯಲ್ಲಿ ಗಣಹೋಮ

ಅಮರ ಸುದ್ದಿ ಕಚೇರಿಯಲ್ಲಿ ನ.1.ರಂದು ಗಣಹೋಮ ನಡೆಯಿತು. ಈ ಸಂದರ್ಭ ಪ್ರಧಾನ ಸಂಪಾದಕರಾದ ಮುರಳೀಧರ ಅಡ್ಡನಪಾರೆ ಹಾಗೂ ಕುಟುಂಬಸ್ಥರು, ಹಿರಿಯ ವರದಿಗಾರ ಪದ್ಮನಾಭ ಅರಂಬೂರು, ಕಾರ್ಯನಿರ್ವಾಹ ಸಂಪಾದಕ ಸುದೀಪ್ ರಾಜ್ ಕೋಟೆಮೂಲೆ, ಕಚೇರಿ ನಿರ್ವಾಹಕ ಕೀರ್ತನ್ ಕುಕ್ಕುಡೇಲು, ವರದಿಗಾರರಾದ ಜಗದೀಶ್ ಮುಂಡುಗಾರು, ಲಿಪಿ ಸಂಯೋಜಕಿ ಸೌಮ್ಯ ಬಳ್ಳಕ್ಕಾನ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Ad Widget

ಸುಳ್ಯ : ಅಕ್ರಮ ಗೋಸಾಗಾಟ ಶಂಕೆ, ಪಿಕ್ ಅಪ್ ಪೊಲೀಸ್ ವಶಕ್ಕೆ

ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಹಿಂದೂ ಕಾರ್ಯಕರ್ತರು ಅಕ್ರಮ ಗೋ ಸಾಗಾಟದ ಶಂಕೆಯ ಹಿನ್ನೆಲೆ ವಿಟ್ಲ ಮೂಲದ ಅಬ್ದುಲ್ ಕುಂಞಿ ಅವರಿಗೆ ಸೇರಿದ ಪಿಕ್ ಅಪ್ ಅನ್ನು ತಡೆದು ಸುಳ್ಯ ಪೋಲೀಸರಿಗೊಪ್ಪಿಸಿದ್ದಾರೆ‌. ಸದ್ಯ ಹಸುವನ್ನು ಸಾಕಲು ಮಂಡೆಕೋಲು ವಸಂತ ಎಂಬವರಿಂದ ಖರೀದಿಸಿದ್ದೆ ಎಂದು ಅಬ್ದುಲ್ ಕುಂಞ ಹೇಳಿಕೆ ನೀಡಿದ್ದು ಸುಳ್ಯ ಪೊಲೀಸರು ದನ ಸಾಗಾಟಕ್ಕೆ ಪರ್ಮಿಶನ್...

ಜಯಾನಂದ ಸಂಪಾಜೆಗೆ ಜಿಲ್ಲಾ ರಾಜೋತ್ಸವ ಪ್ರಶಸ್ತಿ

ಅರಂತೋಡು: ಯಕ್ಷಗಾನ ಕ್ಷೇತ್ರದಲ್ಲಿ ಅನುಪಮ ಸಾಧನೆ ಗೈದ ಹಿನ್ನೆಲೆಯಲ್ಲಿ ಜಯಾನಂದ ಸಂಪಾಜೆ ಸೇರಿದಂತೆ ಒಟ್ಟಾರೆ 58 ಮಂದಿ ಸಾಧಕರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾಗಿದ್ದಾರೆ. ರಾಜ್ಯೋತ್ಸವದ ದಿನದಂದು ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬಹು ವರ್ಷದ ಯಕ್ಷಗಾನದ ಅನುಭವ ಹೊಂದಿರುವ ಜಯಾನಂದ ಅವರು ಹಲವು ಪ್ರಸಂಗಗಳಲ್ಲಿ ತನ್ನದೇ ಆದ ವಿಶಿಷ್ಟ...

ದ.ಕ ಜಿಲ್ಲಾ ಬಿ.ಜೆ.ಪಿ ಎಸ್.ಸಿ. ಮೋರ್ಚಾದ ಸಭೆ- ಸಚಿವ ಎಸ್ ಅಂಗಾರ ಭಾಗಿ

ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಎಸ್ ಸಿ ಮೋರ್ಚಾ ದ ಜಿಲ್ಲಾ ಕಾರ್ಯಕಾರಿಣಿ ಸಭೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ನಡೆಯಿತು. ಈ ಸಂದರ್ಭ ಸಚಿವ ಎಸ್.ಅಂಗಾರ ದ.ಕ.ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಎಸ್. ಸಿ. ಮೋರ್ಚಾ ಅಧ್ಯಕ್ಷ ವಿನಯ್ ನೇತ್ರ ದಡ್ಡಲ್ ಕಾಡು, ಪ್ರಧಾನ ಕಾರ್ಯದರ್ಶಿಗಳಾದ ಅಣ್ಣಿ ಎಳ್ತಿಮಾರ್, ಭೋಜರಾಜ್ ಅಮೀನ್ ಪ್ರಮುಖರಾದ...

ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ನಿಂತಿಕಲ್ಲು: ಲಕ್ಕೀ ಡ್ರಾ ಸ್ಕೀಮ್ ಆನ್ಲೈನ್ ನೋಂದಣಿ

ಈ ಕೆಳಗಿನ ಲಿಂಕ್ ಮೂಲಕ ಸ್ಕೀಮ್ ಗೆ ಆನ್ಲೈನ್ ನೋಂದಣಿ ಮಾಡಿಕೊಳ್ಳಿ👇 https://blackwindsolar.com/ ನಿಂತಿಕಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ಸಂಸ್ಥೆಯು ವಿನೂತನ ಆಫರ್ ನೀಡುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಇದೀಗ ಸಂಸ್ಥೆಯು 'ಲಕ್ಕೀ ಡ್ರಾ' ಎಂಬ ಹೊಸ ಸ್ಕೀಮ್ ಆರಂಭಿಸುತ್ತಿದೆ. ಈ ಯೋಜನೆಯು ನ.09ರಿಂದ...

ಪತ್ರಕರ್ತರ ಸಮುದಾಯ ಭವನದ ಕಾಮಗಾರಿಗೆ ಡಾ.ಕೆ.ವಿ.ಚಿದಾನಂದರಿಂದ ಚಾಲನೆ

ಸುಳ್ಯ ತಾಲೂಕು ಪಂಚಾಯತ್ ವತಿಯಿಂದ ಅಂಬೆಟಡ್ಕದಲ್ಲಿ ನೀಡಿರುವ 5 ಸೆಂಟ್ಸ್ ಜಾಗದಲ್ಲಿ ನಿರ್ಮಾಣವಾಗಲಿರುವ ಪತ್ರಕರ್ತರ ಸಮುದಾಯ ಭವನ ‘ಪ್ರೆಸ್ ಕ್ಲಬ್ ‘ ಕಟ್ಟಡದ ಕಾಮಗಾರಿ ಇಂದು ಚಾಲನೆ ನೀಡಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ದೀಪ ಬೆಳಗಿಸಿ, ಅಡಿಪಾಯಕ್ಕೆ ಶಿಲೆ ಇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಎಲ್ಲರ ಸಹಕಾರದಲ್ಲಿ ಪತ್ರಕರ್ತರ...

ಅಯ್ಯನಕಟ್ಟೆ ತಿರುವಿನಲ್ಲಿ ಕಾದಿದೆ ಅಪಾಯ-ಅನಾಹುತ ಎದುರಾಗುವ ಮುಂಚೆ ಎಚ್ಚೆತ್ತುಕೊಂಡರೆ ಜೋಕೆ

ಅಯ್ಯನಕಟ್ಟೆ ಬಳಿಯ ಚೊಕ್ಕಾಡಿ-ಸುಳ್ಯ ತಿರುವಿನಲ್ಲಿ ರಸ್ತೆಯ ದುಸ್ಥಿತಿಯಿಂದ ಅಪಾಯ ಎದುರಾಗುವ ಭೀತಿ ಉಂಟಾಗಿದೆ. ಅಸಮರ್ಪಕ ಮೋರಿ ವ್ಯವಸ್ಥೆಯಿಂದ ರಸ್ತೆಯ ಎರಡೂ ಬದಿಗಳಲ್ಲಿ ಗುಂಡಿಗಳಾಗಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳು ಎಚ್ಚರವಹಿಸದಿದ್ದರೆ ಅಪಾಯ ಎದುರಾಗುವುದು ಖಂಡಿತ. ಈ ರಸ್ತೆ ಚೊಕ್ಕಾಡಿ ಮೂಲಕ ಸುಳ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಈ ಹಿಂದೆಯೇ ಇಲ್ಲಿ ರಸ್ತೆಯ ಸಮಸ್ಯೆ ಎದುರಾಗಿತ್ತಾದರೂ...

ಕಡಬ : ಎನ್.ಎಸ್.ಯು.ಐ ಕಾರ್ಯಕರ್ತರ ಸಭೆ

ಎನ್ ಎಸ್ ಯು ಐ ಸುಳ್ಯ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಕಡಬ ತಾಲೂಕಿನಲ್ಲಿ ಎನ್ ಎಸ್ ಯು ಐ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆ ಅ.30 ರಂದು ನಡೆಯಿತು. ಬಸ್ ಪಾಸ್ ಸಮಸ್ಯೆ, ವಿದ್ಯಾರ್ಥಿಗಳ ವಿವಿಧ ಶೈಕ್ಷಣಿಕ ಸಮಸ್ಯೆಗಳು, ಸಂಘಟನೆಯನ್ನು ಬಲಪಡಿಸುವ ಹಾಗೂ ಮುಂದಿನ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು.ಈ ಸಂದರ್ಭದಲ್ಲಿ ಎನ್...

ಗುತ್ತಿಗಾರು ರಾಜಾರಾಮ್ ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ವಿಶೇಷ ಆಫರ್

ಗುತ್ತಿಗಾರಿನ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ರಾಜಾರಾಮ್ ಗಾರ್ಮೆಂಟ್ ನಲ್ಲಿ ದೀಪಾವಳಿ ಪ್ರಯುಕ್ತ ಬಟ್ಟೆ ಖರೀದಿಗೆ ವಿಶೇಷ ಬಹುಮಾನಗಳನ್ನು ಘೋಷಿಸಲಾಗಿದೆ.ಇಲ್ಲಿ ಎಲ್ಲಾ ಕಂಪೆನಿಗಳ ಸಿದ್ಧ ಉಡುಪುಗಳು ಇದ್ದು ಮಕ್ಕಳ, ಪುರುಷರ ಮಹಿಳೆಯರ ಉಡುಪುಗಳಿದ್ದು ವಸ್ತ್ರಗಳನ್ನು ಖರೀದಿಸಿದಲ್ಲಿ ಲಕ್ಕಿ ಡ್ರಾ ಮೂಲಕ ವಿಶೇಷ ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನವಾಗಿ ಮಿಕ್ಸಿ, ದ್ವಿತೀಯ ಬಹುಮಾನವಾಗಿ ಪ್ಯಾನ್, ತೃತೀಯ ಬಹುಮಾನವಾಗಿ...
Loading posts...

All posts loaded

No more posts

error: Content is protected !!