ಮಡಪ್ಪಾಡಿ: ವಿದ್ಯುತ್ ಅದಾಲತ್ ಕಾರ್ಯಕ್ರಮ.

ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಜು. 16 ರಂದು ವಿದ್ಯುತ್ ಅದಾಲತ್ ಕಾರ್ಯಕ್ರಮ. ಇಲ್ಲಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು ಹಾಗೂ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಮೆಸ್ಕಾಂ ಅಧಿಕಾರಿಗಳು, ಗ್ರಾಮ ಪಂಚಾಯತ್ ಅದ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಮಾಜಿ ಗ್ರಾ.ಪಂ ಅಧ್ಯಕ್ಷರು, ಗ್ರಾಮಸ್ತರು ಕೆಲಸ.

ಕೆವಿಜಿ ಅಮರಜ್ಯೋತಿ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋರ್ಸ್ ಪ್ರಾರಂಭ

ಕೆ ವಿಜಿ ಅಮರಜ್ಯೊತಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋರ್ಸ್ ಜು.16 ರಂದು ಆರಂಭಿಸಲಾಯಿತು. ನುರಿತ ತಜ್ಞ, ತೆರಿಗೆ ಸಲಹೆಗಾರರ ಸನತ್ ಪೆರ್ವಾಡಿ ಅವರು ವಿದ್ಯಾರ್ಥಿಗಳಿಗೆ ಸಿಎ ಕೋಚಿಂಗ್ ತರಗತಿ ಆರಂಭಿಸಿದರು.ಸಿ ಎ ಫೌಂಡೇಶನ್ ಪರೀಕ್ಷೆಗೆ ಸಿದ್ಧಗೊಳಿಸಲು ಈ ಕೋರ್ಸ್ ಸಹಾಯವಾಗಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸುಳ್ಯ ತಾಲೂಕಿನಲ್ಲಿ ಪ್ರಪ್ರಥಮವಾಗಿ ಪಿ...
Ad Widget

ಮತದಾನ ಬಹಿಷ್ಕಾರದ ಬ್ಯಾನರ್‌ ಹರಿದವರಿಗೆ ಶಿಕ್ಷೆ ನೀಡುವಂತೆ ದೈವದ ಮುಂದೆ ಪ್ರಾರ್ಥನೆ

ಸುಳ್ಯ ತಾಲೂಕಿನ ಅರಂತೋಡು ಎಲಿಮಲೆ ರಸ್ತೆ ದುರಸ್ತಿಗೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಬ್ಯಾನರ್ ಗಳನ್ನು 26 ಕಡೆ ಹಾಕಿದ್ದರು. ಸುಳ್ಯಕ್ಜೆ ಮುಖ್ಯಮಂತ್ರಿಗಳ ಆಗಮನದ ಹಿಂದಿನ ರಾತ್ರಿ ಕಿಡಿಗೇಡಿಗಳು 6 ಕಡೆಯ ಬ್ಯಾನರ್ ಅನ್ನು ಹೊಳೆಗೆ ಎಸೆದಿದ್ದರು. ಇದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಜು.15 ರ ಒಳಗೆ ಬ್ಯಾನರ್ ತೆಗೆದಿರುವವರು ಪುನಃ ಅಳವಡಿಸದಿದ್ದರೇ ಜನರೆಲ್ಲಾ ಒಂದಾಗಿ ಊರಿನ ದೈವದ...

ಕ್ಯಾಂಪ್ಕೋ ಸಂಸ್ಥೆಯಿಂದ ಚಿಕಿತ್ಸೆಗಾಗಿ ಸಹಾಯಧನ ವಿತರಣೆ

ಸುಳ್ಯ: ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ ಯೋಜನೆಯಡಿಯಲ್ಲಿ ಫಲಾನುಭವಿಗಳಾದ ಯು. ಸಿ. ಸಹದೇವ ಅವರ ಪತ್ನಿ ಶ್ರೀಮತಿ. ಯು. ಎಸ್. ಶಾಂತಿ, ಚೆಂಬು ಇವರಿಗೆ ಅಂಜಿಯೋಪ್ಲಾಸ್ಟಿ ಗೆ ಸಂಬಂಧಿಸಿ ರೂ.50000ದ ಚೆಕ್ ನ್ನು ಸಂಸ್ಥೆಯ ನಿರ್ದೇಶಕರಾದ ಕೃಷ್ಣ ಪ್ರಸಾದ ಮಡ್ತಿಲರವರು ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಇಂದು ವಿತರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ವಲಯ ಮುಖ್ಯ ಮಾರುಕಟ್ಟೆ...

ಕಾಂತಮಂಗಲ : ಕಾರು-ಮಿನಿ ಲಾರಿ ಡಿಕ್ಕಿ

ಅಜ್ಜಾವರ ಗ್ರಾಮದ ಕಾಂತಮಂಗಲ ಜೀಜಾಭಾಯಿ ಸರ್ಕಲ್ ಬಳಿ ಆಲ್ಟೋ ಕಾರು ಹಾಗೂ ಮಿನಿ ಲಾರಿ ಮುಖಾಮುಖಿ ಡಿಕ್ಕಿಯಾದ ಘಟನೆ ಇಂದು ನಡೆದಿದೆ.

ಸುಬ್ರಹ್ಮಣ್ಯ : ಒಂದು ನಿಲ್ದಾಣ ಒಂದು ಉತ್ಪನ್ನ ಕೇಂದ್ರ ಆರಂಭ

ನೈಋತ್ಯ ರೈಲ್ವೇಯ ಮೈಸೂರು ವಿಭಾಗದ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಜು.15 ರಂದು ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯ ಅಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಳಿಗೆ ಉದ್ಘಾಟನೆ ನಡೆಯಿತು.ಕುಕ್ಕೆ ಸುಬ್ರಹ್ಮಣ್ಯ-ಮಂಗಳೂರು ರೈಲ್ವೇ ಹಿತರಕ್ಷಣಾ ವೇದಿಕೆ ಸಂಚಾಲಕ ಸುದರ್ಶನ್ ಮಳಿಗೆ ಉದ್ಘಾಟನೆ ಮಾಡಿದರು. ರೈಲು ಸ್ಟೇಷನ್ ಮಾಸ್ಟರ್ ಅಭಿನಂದನ್, ಸ್ಟೇಷನ್...

ಗೂನಡ್ಕ : ಮನೆ ಮೇಲೆ ಮರ ಬಿದ್ದು ಹಾನಿ- ಮರ ತೆರವುಗೊಳಿಸಿ ತಾತ್ಕಾಲಿಕ ವ್ಯವಸ್ಥೆ

ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಬೀಸಿದ ಬಾರಿ ಗಳಿಗೆ ಮರ ಉರುಳಿ ಸೋಮಪ್ಪ ಗೌಡ ಪೆರುಂಗೋಡಿ ಯವರ ಮನೆಗೆ ಸಂಪೂರ್ಣ ಜಖಂಗೊಂಡಿದೆ. ಭಾರಿ ಗಾತ್ರದ ಮರ ಉರುಳಿದ್ದರಿಂದ ಮನೆಯ ಮಾಡು ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಸದಸ್ಯರುಗಳಾದ ಎಸ್. ಕೆ. ಹನೀಫ್,...

ಆಟಿ – ಅನಿಷ್ಠವಲ್ಲ

ತುಳುನಾಡು ಎನ್ನುವುದು ಸಾಂಸ್ಕೃತಿಕವಾಗಿ ಸಾಂಪ್ರದಾಯಿಕವಾಗಿ ಏಕತೆಯನ್ನು ಸಾರಿದ ನಾಗ ನಡೆಯ ಪವಿತ್ರ ಭೂಮಿ. ತುಳುನಾಡು ತುಳುವರ ಆಚರಣೆಗಳು ಕೇವಲ ಧರ್ಮಕ್ಕೆ ಸೀಮಿತವಾಗಿರದೆ ಸರ್ವ ಧರ್ಮೀಯರು ಆಚರಿಸುವ ಆಚರಣೆಗಳಾಗಿವೆ, ಆಟಿ ಬಂದಾಗ ಹಿಂದೂ ಮುಸಲ್ಮಾನ ಕ್ರೈಸ್ತ ಎಲ್ಲರೂ ಕೂಡ ಒಂದು ಕಾಲ ಘಟ್ಟದಲ್ಲಿ ಆಚರಿಸದೆ ಅನುಭವಿಸಿದವರು…ಆಟಿ ಬಂದಾಗ ಅಟ್ಟ ಕಾಲಿ ಸೋಣ ಬಂದಾಗ ಪೆಲತಾರಿ ಚೋಲಿ ಎಂಬ...

ಗುತ್ತಿಗಾರು : ಅಮರ ಸಂಜೀವಿನಿ ಒಕ್ಕೂಟದಿಂದ ವಿಶ್ವ ಯುವ ಕೌಶಲ್ಯ ದಿನ ಆಚರಣೆ

ಅಮರ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಮಾಸಿಕ ಸಭೆ, ಉದ್ಯಮ ವಿಕಾಸ ಪಾಕ್ಷಿಕ ಕಾರ್ಯಕ್ರಮ ಹಾಗೂ ತರಕಾರಿ ಬೀಜ ವಿತರಣೆ ಕಾರ್ಯಕ್ರಮ, ಗುತ್ತಿಗಾರು ಗ್ರಾಮ ಪಂಚಾಯತ್, ಗುತ್ತಿಗಾರು ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಸಹಯೋಗದಲ್ಲಿ ವಿಶ್ವ ಯುವ ಕೌಶಲ್ಯ ಮಾಹಿತಿ ಕಾರ್ಯಕ್ರಮ ಜು.15 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಗಿರಿಜನ ಸಭಾಭವನದಲ್ಲಿ ನಡೆಯಿತು....

ಗುತ್ತಿಗಾರು : ಅನಾರೋಗ್ಯಗೊಂಡಿದ್ದ ಅನಾಥ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪಿಯಲ್ಲಿ ಸುಮಾರು 2 ತಿಂಗಳುಗಳಿಂದ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಮಲಗುತ್ತಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದನ್ನು ಗಮನಿಸಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಮತ್ತು ರಿಕ್ಷಾ ಯೂನಿಯನ್ ನವರು ಪಂಚಾಯತ್ ಗಮನಕ್ಕೆ ತಂದರು. ತಕ್ಷಣವೇ ಸ್ಪಂದಿಸಿದ ಪಂಚಾಯತ್ ಆಡಳಿತ ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ...
Loading posts...

All posts loaded

No more posts

error: Content is protected !!