ವೀರ ಕೇಸರಿ ಸಂಘದ ಪದಾಧಿಕಾರಿಗಳ ಆಯ್ಕೆ

17 ನೇ ವರ್ಷದ ವೀರಕೇಸರಿ ಸಂಘದ ಪದಾಧಿಕಾರಿಗಳ ಆಯ್ಕೆಯ ಸಭೆಯು ಗೌರವಾಧ್ಯಕ್ಷ ಗೋಕುಲ ದಾಸ್ ಅಧ್ಯಕ್ಷತೆಯಲ್ಲಿ ಸುಳ್ಯದ ವಿಷ್ಣು ಸರ್ಕಲ್ ಕೆ.ಎನ್ ಟೈಲರ್ ರವರ ಮನೆಯಲ್ಲಿ ನಡೆಯಿತು. 2022 ನೇ ಸಾಲಿನ ಅಧ್ಯಕ್ಷರಾಗಿ ಪುರುಷೋತ್ತಮ ಮತ್ತೂಟ್, ಕಾರ್ಯದರ್ಶಿಯಾಗಿ ಮೋಹನ್ ದಾಸ್, ಕೋಶಾಧಿಕಾರಿಯಾಗಿ ಯತೀಶ್ ಪರಿವಾರಕಾನ, ಜೊತೆ ಕಾರ್ಯದರ್ಶಿಯಾಗಿ ಹರ್ಷಿತ್ ಪಿ. ಎಸ್., ಉಪಾಧ್ಯಕ್ಷರಾಗಿ ಸತೀಶ್ ಅಲೆಟ್ಟಿ,...

ಸುಬ್ರಹ್ಮಣ್ಯ ಕೆ. ಎಸ್.ಎಸ್. ಕಾಲೇಜಿನಲ್ಲಿ ಇಂಟರ್ನ್ಶಿಪ್ ತರಬೇತಿ ಬಗ್ಗೆ ಮಾಹಿತಿ ಕಾರ್ಯಾಗಾರ

ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾವಿದ್ಯಾಲಯದಲ್ಲಿ ಸೆ. 13 ರಂದು ಇಂಟರ್ನ್ಶಿಪ್ ತರಬೇತಿ ಕಾರ್ಯಕ್ರಮ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.ಈ ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಅರವಿಂದ್ ಶೆಟ್ಟಿ ಇವರು ಮಾಹಿತಿಯನ್ನು ನೀಡಿದರು. ಈ ಕಾರ್ಯಾಗಾರದಲ್ಲಿ ಮಾರ್ಕೆಟಿಂಗ್ ಪರಿಹಾರಗಳ ಸಹ ಸಂಸ್ಥಾಪಕ ಮತ್ತು ನಿರ್ದೇಶಕರಾದ ಧೀನ ಮರಿ ಪ್ರಭು, ಕಾಲೇಜಿನ ಪ್ರಾಂಶುಪಾಲರಾದ ಡಾ....
Ad Widget

ಜಯನಗರ: ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಕಬಡ್ಡಿ ಪಂದ್ಯಾಟ

ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಯನಗರ ಇದರ ಆಶಯದಲ್ಲಿ ಸುಳ್ಯ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ಕಬಡ್ಡಿ ಪಂದ್ಯಾಟ ಸೆ. 13 ರಂದು ಜಯನಗರ ಶಾಲಾ ಮೈದಾನದಲ್ಲಿ ನಡೆಯಿತು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್...

ಯುವ ತೇಜಸ್ಸು ಬಳಗದಿಂದ ಮತ್ತೊಂದು ಸಾಧನೆ -ಹೊಳೆ ದಾಟಲು ಸಾಹಸ ಮಾಡುತ್ತಿದ್ದ ಜನರಿಗೆ ಕಬ್ಬಿಣದ ಸೇತುವೆ ಭಾಗ್ಯ

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಲ್ಲಂಡ ಪರಿಸರದ ಜನರ ಬಹು ವರ್ಷದ ಸಂಪರ್ಕ ಸೇತುವೆಯ ಕನಸನ್ನು ಯುವ ತೇಜಸ್ಸು ಟ್ರಸ್ಟ್ ನಿಂದ ಪೂರ್ಣಗೊಳಿಸಿದೆ.ಕಲ್ಲಂಡ ಪ್ರದೇಶದಲ್ಲಿ ಹರಿಯುವ ಏಳೂವರೆ ಹಳ್ಳಕ್ಕೆ ಮಳೆಗಾಲದಲ್ಲಿ ಅಡಿಕೆ ಮರದ ಕಾಲು ಸಂಕವೇ ಪ್ರಮುಖ ಸಂಪರ್ಕವಾಗಿತ್ತು. ಇಲ್ಲಿನ ಗುತ್ತು,ಕಡ್ತಿ ಕುಮೆರು,ಕಕ್ಕೆನೇಜಿ,ಮಕ್ಕಿ,ಪರ್ಲ ಮೊದಲಾದ ಪ್ರದೇಶದ ಸುಮಾರು 28 ಕುಟುಂಬಗಳ ಶಾಲಾ ಮಕ್ಕಳಿಗೆ,ವೃದ್ಧರಿಗೆ, ಅನಾರೋಗ್ಯ ಪೀಡಿತರಿಗೂ...

ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 2021- 22 ನೇ ಸಾಲಿನ 103 ನೇ ಮಹಾಸಭೆಯು ಸಿರಿಸೌಧ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ವಹಿಸಿದ್ದರು. ಭಾರತ ಮಾತೆಯ ಭಾವಚಿತ್ರದ ಬಳಿ ಸಂಘದ ಹಿರಿಯ ನಿರ್ದೇಶಕರಾದ ಚಂದ್ರಶೇಖರ ಚೋಡಿಪಣೆಯವರು ದೀಪ ಪ್ರಜ್ವಲನೆಯನ್ನು ಮಾಡಿದರು. ಸಂಘದ ಎಲ್ಲಾ ನಿರ್ದೇಶಕರು ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು...

ಸಂಪಾಜೆ : ಪಯಸ್ವಿನಿ ಪ್ರಾ. ಕೃ.ಪ. ಸ. ಸಂಘದಲ್ಲಿ ಅಗಲಿದ ಮಾಜಿ ನಿರ್ದೇಶಕರಿಗೆ ಶ್ರದ್ಧಾಂಜಲಿ

ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಹಿಂದೆ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ,ಈಗ ಅಕಾಲಿಕವಾಗಿ ನಿಧನ ಹೊಂದಿದ ದಿ.ಗಾಂಧಿಪ್ರಸಾದ್ ಬಂಗಾರಕೋಡಿ ಮತ್ತು ದಿ.ರತ್ನಾಕರ ದೊಡ್ಕಜೆ ರವರಿಗೆ ಸೆ. 10 ರಂದು ಶ್ರದ್ಧಾಂಜಲಿ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಅದ್ಯಕ್ಷರಾದ ಅನಂತ್ ಊರುಬೈಲುರವರು ಮೃತ ನಿರ್ದೇಶಕರು ತಮ್ಮ ಆಡಳಿತದ...

ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷೆಯಾಗಿ ಸಂಧ್ಯಾ ಸಚಿತ್ ಕುಮಾರ್ ನೇಮಕ

ಲಯನ್ಸ್ ಜಿಲ್ಲೆ 317ಡಿ ಪ್ರಾಂತ್ಯ 8ರ ಪ್ರಾಂತೀಯ ಅಧ್ಯಕ್ಷರಾಗಿ ಲ ಸಂಧ್ಯಾ ಸಚಿತ್ ಕುಮಾರ್ ಆಯ್ಕೆಯಾಗಿದ್ದಾರೆ. ಏಪ್ರಿಲ್ 11ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆದ 14ನೇ ಜಿಲ್ಲಾ ಕನ್ವೆನ್ಸನ್ ನಲ್ಲಿ ಲಯನ್ಸ್ ಜಿಲ್ಲೆ 317ಡಿಯ 2022-23ರ ನೂತನ ರಾಜ್ಯಪಾಲರಾದ ಸಂಚಿತ್ ಶೆಟ್ಟಿರವರು ಲ|ಸಂದ್ಯಾ ಸಚಿತ್ ಕುಮಾರ್ ರವರನ್ನು ಪ್ರಾಂತ್ಯ 8ರ ಅಧ್ಯಕ್ಷರಾಗಿ ನೇಮಕಗೊಳಿಸಿದರು. ಸಂದ್ಯಾರವರು ಚೆಂಬು...

ಸುಳ್ಯ ಪಯಸ್ವಿನಿ ಜೇಸಿಸ್ ಮತ್ತು ರೋಟರಿ ಕ್ಲಬ್ ವತಿಯಿಂದ ದೇಶ ಪರ್ಯಟನೆಗೆ ಹೊರಟ ಯುವಕ ಶಾಹಿಲ್ ಜಾ ಗೆ ಸುಳ್ಯದಲ್ಲಿ ಸ್ವಾಗತ ಅಭಿನಂದನೆ

ಸುಳ್ಯ ಪಯಸ್ವಿನಿ ಜೇಸಿಸ್ ಮತ್ತು ರೋಟರಿ ಕ್ಲಬ್ ವತಿಯಿಂದ ದೇಶ ಪರ್ಯಟನೆಯ ಸೈಕ್ಲಿಂಗ್ ಅಭಿಯಾನ ಹಮ್ಮಿಕೊಂಡ 16 ವರ್ಷ ಪ್ರಾಯದ ಶಾಹಿಲ್ ಜಾ ಎಂಬ ಕಲ್ಕತ್ತ ಮೂಲದ ಯುವಕನನ್ನು ಸುಳ್ಯದಲ್ಲಿ ಸ್ವಾಗತಿಸಿ ಅಭಿನಂದಿಸಲಾಯಿತು.ಮಣ್ಣಿನ ಸಂರಕ್ಷಣೆ (ಸೇವ್ ಸಾಯಿಲ್) ಎಂಬ ಉದ್ದೇಶದಿಂದ ಸದ್ಗುರು ರವರ ಪ್ರೇರೆಪಣೆಯಿಂದ ಕಲ್ಕತ್ತಾದಿಂದ ಹೊರಟ ಯುವಕನ ಸೈಕ್ಲಿಂಗ್ ಯಾತ್ರೆ ಈಗಾಗಲೇ 8 ರಾಜ್ಯಗಳನ್ನು...

ಸೆ.17 ರಂದು ಹರಿಹರ ಪಲ್ಲತ್ತಡ್ಕದಲ್ಲಿ ಗ್ರಾಮ ವಾಸ್ತವ್ಯ

ಸುಳ್ಯ ತಾಲೂಕು ತಹಶೀಲ್ದಾರ್ ಅನಿತಾಲಕ್ಷ್ಮಿ ಅವರ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಸೆ.17 ರಂದು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು...

ಮಳೆ ಹಾನಿ ಪ್ರದೇಶದ ಹರಿಹರ ಪಲ್ಲತ್ತಡ್ಕ – ಕೊಲ್ಲಮೊಗ್ರ ಗ್ರಾಮಗಳಿಗೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಭೇಟಿ

ಮಳೆ ಹಾನಿ ಪ್ರದೇಶದ ಹರಿಹರ - ಕೊಲ್ಲಮೊಗ್ರ ಗ್ರಾಮಗಳಿಗೆ ಕರ್ನಾಟಕ ರಾಜ್ಯ ರೈತ ಸಂಘದ ದ.ಕ ಜಿಲ್ಲಾ ಘಟಕ, ಸುಳ್ಯ ತಾಲೂಕು ಘಟಕ ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳು ಸೆ. 11ರಂದು ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸಿದರು. ಮಳೆಯಿಂದ ಹಾನಿಗೊಳಗಾದ ಹರಿಹರ ಪೇಟೆಯ ಬಾಳುಗೋಡು ಸೇತುವೆಯ ಬದಿಗಳು ಹಾಗೂ ಅಂಗಡಿ ಮುಂಗಟ್ಟುಗಳ ಹಾನಿಯನ್ನು ವೀಕ್ಷಿಸಿ...
Loading posts...

All posts loaded

No more posts

error: Content is protected !!