- Thursday
- August 20th, 2026
ಪೆರುವಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಸೆ. 19 ರಂದು ನಡೆಯಿತು.ಸಭಾ ಅಧ್ಯಕ್ಷತೆಯನ್ನು ಜಗನ್ನಾಥ ಪೂಜಾರಿ ವಹಿಸಿದ್ದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಭೆಗೆ ಬಂದ ಸುತ್ತೋಲೆ, ಸಾರ್ವಜನಿಕರ ಅರ್ಜಿಗಳನ್ನು ಸಭೆಯ ಗಮನಕ್ಕೆ ತಂದರು.ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮಾರಾಟ ಕಂಡುಬಂದಲ್ಲಿ ಅದಕ್ಕೆ ದಂಡ ವಿಧಿಸುವ ಸೂಚನೆಗೆ ಸಭೆಯಲ್ಲಿ ವಿಚಾರ ಪ್ರಸ್ತಾಪವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗಡಿಗೆ ಬರುವುದನ್ನು...
ಸುಳ್ಯ ರೋಟರಿ ಕ್ಲಬ್ ವತಿಯಿಂದ ವಿದ್ಯಾಸಿರಿ ಯೋಜನೆಯಡಿ ಕಲಿಕಾ ಆಸರೆ ಕಿಟ್ ವಿತರಣೆ,ವೃತ್ತಿ ಮಾರ್ಗದರ್ಶನ ತರಬೇತಿ ಉದ್ಘಾಟನೆ ಹಾಗೂ ಶಾಲಾ ಕೃತಿ ಸಂಪುಟಕ್ಕೆ ಫೈಲ್ ವಿತರಣೆ ರೋಟರಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ರೋ.ಚಂದ್ರಶೇಖರ ಪೇರಾಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ರಾಜ್ಯಪಾಲ ರೋ.ಪ್ರಕಾಶ್ ಕಾರಂತ್ ಕಾರ್ಯಕ್ರಮ ಉದ್ದೇಶಿಸಿ...
ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಸೆ. 17ರಂದು ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ 'ಕೀಲಾರು ಶಿಕ್ಷಕರ ನಿಧಿ' ವತಿಯಿಂದ ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಯಶೋಧಾ ಎಂ. ಎಸ್. ಹಾಗೂ ಶ್ರೀಮತಿ ಪಾರ್ವತಿ ಎಂ. ರವರಿಗೆ ಸನ್ಮಾನ ಸಮಾರಂಭ ನಡೆಸಲಾಯಿತು. ಸಂಪಾಜೆ ಎಜ್ಯುಕೇಶನಲ್ ಸೊಸೈಟಿ ಸಂಚಾಲಕರಾದ ಎಂ. ಶಂಕರನಾರಾಯಣ ಭಟ್ ರವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ...
ಪೆರಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸೆ.20ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಬಿ.ಹೊನ್ನಪ್ಪರವರು ವಹಿಸಿದ್ದರು. 2021_2022ರ ವರದಿಯನ್ನು ನಿರ್ದೇಶಕ ಚಂದ್ರಶೇಖರ.ಪಿ.ಹೆಚ್. ವಾಚಿಸಿದರು.ಕಳೆದ ವಾರ್ಷಿಕ ಸಭೆಯ ವರದಿಯನ್ನು ನಿರ್ದೇಶಕ ವಿಷ್ಣುಪ್ರಸಾದ್ ರವರು ಓದಿದರು. ಕಾರ್ಯನಿರ್ವಾಹಣಾಧಿಕಾರಿ ಇಂದಿರಾ.ಕೆ.ಎಸ್. ಸಭೆಯ ನೋಟಿಸ್ ಓದಿದರು. ಈ ಸಂದರ್ಭದಲ್ಲಿ ಹಾಲಿನ ಡೈರಿಗೆ ಅತಿ ಹೆಚ್ಚು ಹಾಲು...
ಒಡಿಯೂರು ಶ್ರೀ ವಿವಿದೋದೇಶ ಸೌಹಾರ್ದ ಸಹಕಾರಿ(ನಿ) ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಇದರ ವತಿಯಿಂದ ಮೃತರ ಕುಟುಂಬಕ್ಕೆ ವಿಮಾ ಮೊತ್ತ ವಿತರಣೆ ನಡೆಯಿತು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಶ್ರೀ ಸದಾಶಿವ ಸಂಘದ ಸದಸ್ಯರಾದ ಶ್ರೀಧರ ಕುಡೆಕಲ್ಲು ಇವರ ಕುಟುಂಬಕ್ಕೆ ಜೀವ ವಿಮೆ ಮೊತ್ತ 50000 ರೂ...
ಅರಂತೋಡು ದುರ್ಗಾ ಮಾತಾ ಮಹಿಳಾ ಮಂಡಲದ ವತಿಯಿಂದ ಸಂಗೀತ ತರಬೇತಿ ಉದ್ಘಾಟನೆ ಸೆ.16 ರಂದು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅರಂತೋಡು ಗ್ರಾ ಪಂ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ನೆರವೇರಿಸಿದರು. ಅಧ್ಯಕ್ಷತೆಯನ್ನು ದುರ್ಗಾಮಾತಾ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ಸುಳ್ಯ ಸಾಹಿತ್ಯ ಸಂಗೀತ ಕಲಾ ಕೇಂದ್ರದ...
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸುಳ್ಯ ಶಾಖಾ ವತಿಯಿಂದ ಸೆ.16 ರಿಂದ ಸೆ.18 ತನಕ ಸಹಜ ಸಮಾಧಿ ಧ್ಯಾನ ಶಿಬಿರ ಕಾರ್ಯಕ್ರಮ ಶಿವಕೃಪಾ ಕಲಾಮಂದಿರ ದಲ್ಲಿ ನಡೆಯಿತು. ಶಿಬಿರದಲ್ಲಿ ಒತ್ತಡ ರಹಿತ ಶಾಂತವಾದ ಮನಸ್ಸು, ಸಂತೋಷ, ಉತ್ಸಾಹ, ಕ್ರಿಯಾಶೀಲ ಆರೋಗ್ಯಕರ ವಾದ ಬದುಕು ನಡೆಸಲು ಧ್ಯಾನ ಹೇಗೆ ಅವಶ್ಯ ಎಂದು ತಿಳಿಸಲಾಯಿತು. ಈ ಸಂದರ್ಭದಲ್ಲಿ ತರಬೇತುದಾರರಾದ...
ರಬ್ಬರು ಮಂಡಳಿಯ ಸದಸ್ಯರಾಗಿ ಸುಳ್ಯದ ಯುವ ಮುಖಂಡರಾದ ಮುಳಿಯ ಕೇಶವ ಭಟ್ ಅವರನ್ನು ಕೇಂದ್ರ ಸರಕಾರ ನಾಮನಿರ್ದೇಶನ ಮಾಡಿ ಆದೇಶಿಸಿದೆ. ಕೇರಳದ ಕೊಟ್ಟಾಯಂ ನಲ್ಲಿ ಪ್ರಧಾನ ಕಛೇರಿ ಹೊಂದಿದೆ. ಇವರು ಸುಳ್ಯ ತಾ.ಪಂ.ಮಾಜಿ ಅಧ್ಯಕ್ಷರಾಗಿ, ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದಲ್ಲಿ 10 ವರ್ಷ ನಿರ್ದೇಶಕರಾಗಿ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿ, ಬಿಜೆಪಿ...
ಡಾ. ಪ್ರಭಾಕರ ಶಿಶಿಲ ಅವರ ಏಳನೆಯ ಕಥಾ ಸಂಕಲನವಾದ "ಅಲಿಮಾಳ ಆಡು" ಕಥಾ ಸಂಕಲನವನ್ನು ನಿಂತಿಕಲ್ ಕೆ.ಎಸ್.ಗೌಡ ವಿದ್ಯಾಸಂಸ್ಥೆಯಲ್ಲಿ ಸೆ. 14 ರಂದು ವಿದ್ಯಾಸಂಸ್ಥೆಯ ಸಂಚಾಲಕ ಕುಮಾರಸ್ವಾಮಿ ಅವರಿಂದ ಬಿಡುಗಡೆಗೊಳಿಸಲಾಯಿತು. ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು ಇದು ಧರ್ಮ ಸಮನ್ವಯದ ಆಶಯವುಳ್ಳ ಅಪೂರ್ವ ಕಥಾ ಸಂಕಲನ. ಕೃತಿಕಾರ ಶಿಶಿಲರು ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ...
ಸೇವಾಜೆ ಸ.ಕಿ.ಪ್ರಾ.ಶಾಲೆಯಲ್ಲಿ ಸೆ.19ರಂದು ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಮ್ಮ ಮನೆಯಿಂದ ತಂದಂತಹ ತರಕಾರಿ ಹಣ್ಣುಗಳನ್ನು ಇರಿಸಿ ಅವುಗಳಲ್ಲಿ ಕಾರ್ಬೋಹೈಡ್ರೆಟ್, ವಿಟಮಿನ್, ಪ್ರೋಟಿನ್, ಲಿಪಿಡ್, ಖನಿಜ, ನಾರು ಮತ್ತು ನೀರಿನ ಅಂಶವನ್ನು ಹೊಂದಿರುವ ಪದಾರ್ಥಗಳನ್ನಾಗಿ ವಿಂಗಡಿಸಿ ಮಕ್ಕಳಿಗೆ ಪೌಷ್ಟಿಕ ಹಾಗೂ ಸಮತೋಲನ ಆಹಾರಗಳ ಬಗ್ಗೆ ವಿವರಿಸಲಾಯಿತು. ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ...
Loading posts...
All posts loaded
No more posts
