- Sunday
- August 23rd, 2026
ಅರಂತೋಡು ಮೆಸ್ಕಾಂ ಕಛೇರಿ ಎದುರು ಸಾಗರ ಪ್ರೆಶ್ ಫಿಶ್ ಮಾರ್ಕೆಟ್ ಇಂದು ಶುಭಾರಂಭಗೊಂಡಿತು. ಅರಂತೋಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಸುಮಾಧರ ಅಡ್ಕಬಳೆ , ನಾಗೇಶ್ ಕಾಡುಪಂಜ, ಹೇಮನಾಥ್ ಕಡಪಳ, ಸಂಪ್ರೀತ್ ಕಡೆಪಾಲ ಉಪಸ್ಥಿತರಿದ್ದರು. ಉತ್ತಮ ಗುಣಮಟ್ಟದ ವಿವಿಧ ಬಗೆಯ ಮೀನುಗಳು ಲಭ್ಯವಿದ್ದು, ಶುಚಿಗೊಳಿಸಿ ಕೊಡಲಾಗುವುದು ಎಂದು ಮಾಲಕರಾದ...
ಪರಿವಾರಕಾನ ದಲ್ಲಿರುವ ಸರ್ವೀಸ್ ಸ್ಟೇಷನ್ ಬಳಿ ಗುಂಡಿಯಲ್ಲಿರುವ ಮನೆಯ ಬಳಿಗೆ ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ಕಳೆದ ರಾತ್ರಿ ನಡೆದಿದೆ. ಕಾರಿನಲ್ಲಿದ್ಸ ಓರ್ವನ ಕಾಲು ಜಖಂಗೊಂಡಿದೆ ಎಂದು ತಿಳಿದುಬಂದಿದೆ.
ಬಡ ವ್ಯಾಪಾರಸ್ಥರು ಜಾತ್ರೆಗಳಲ್ಲಿ ಇತರ ಸಮಾರಂಭಗಳಲ್ಲಿ ವ್ಯಾಪಾರ ಮಾಡುವುದು, ಪಾರಂಪರಿಕ ನಡೆಸಿಕೊಂಡು ಬಂದ ಎಲ್ಲಾ ಧರ್ಮದ ಅನುಯಾಯಿಗಳು ಇದರಿಂದಲೇ ತನ್ನ ಜೀವನೋಪಾಯವನ್ನು ನಡೆಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಕುಟುಂಬ, ಸಂಸಾರದ ಹೊರೆ ಎಲ್ಲವೂ ಇದನ್ನೇ ನಂಬಿ ಬೇರೆ ವ್ಯಾಪಾರದ ದಾರಿಯನ್ನು ಹಿಡಿಯದೆ ರಾತ್ರಿ, ಹಗಲು ನಿದ್ದೆಗೆಟ್ಟು.ಕೇವಲ ಜಾತ್ರೆ ವ್ಯಾಪಾರದಿಂದಲೇ ಜೀವನ ನಡೆಸುವ ಎಲ್ಲಾ ವರ್ಗದವರು. ಪ್ರತೀ ಕಾರ್ಯಕ್ರಮದಲ್ಲಿ...
ಜನವರಿ 24 ಮಂಗಳವಾರದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ. ಕೇರ್ಪಳ, ಡಿಪೋ, ಶ್ರೀರಾಂಪೇಟೆ, ಜಬಳೆ, ಸಂಪಾಜೆ, ಕೊಲ್ಚಾರ್, ಕಾವು, ಅಜ್ಜಾವರ, ಕೇನ್ಯ, ಆರಂತೋಡು, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ...
ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಜ.೧೪ರಂದು ದೈವಸ್ಥಾನದ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು. ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೆ. ಅಶೋಕ ಪ್ರಭು ಸುಳ್ಯ ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಸುಧಾಮ ಆಲೆಟ್ಟಿ, ಕೆ.ಕೆ ಮಹಾಲಿಂಗೇಶ್ವರ ಭಟ್ ನೆಡ್ಚಿಲು , ಕೆ.ಕೆ ವೆಂಕಟ್ರಮಣ ಭಟ್ ನೆಡ್ಚಿಲು, ಜನಾರ್ಧನ ಗೌಡ ಗುಂಡ್ಯ, ನಾಲ್ಕು ಸ್ಥಾನಿಕ ಮನೆಯ ಪೂಜಾರಿಗಳಾದ...
ಶ್ರೀರಾಮ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಇದರ ಸುಳ್ಯ ಶಾಖಾ ವತಿಯಿಂದ ಸುಳ್ಯ ತಾಲೂಕಿನ ಆಯ್ದ ಅರ್ಹ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ ಜ. 20 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಕಂಪೆನಿಯ ಸಂಸ್ಥೆಯ ಝೂನಲ್ ಬಿಝಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ...
ವ್ಯಕ್ತಿತ್ವ ತುಂಬಿದ ವ್ಯಕ್ತಿಗಳಿಂದ ಒಳ್ಳೆಯ ಸಮಾಜ ಕಟ್ಟಲು ಸಾದ್ಯ ಎಂದುಒಡಿಯೂರು ಗುರದೇವದತ್ತ ಸಂಸ್ಥಾನ ಮಠದ ಸ್ವಾಮೀಜಿ ಗುರುದೇವಾನಂದ ಸ್ವಾಮೀಜಿ ಹೇಳಿದರು.ಅವರು ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಶತ ಸಂಭ್ರಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಶತ ಸಂಭ್ರಮ ಸಹಸ್ರ ಸಂಭ್ರಮಕ್ಕೆ ಮುನ್ನುಡಿಯಾಗಲಿ. ವ್ಯಕ್ತಿತ್ವ ತುಂಬಿರುವ ವ್ಯಕ್ತಿಯಿಂದ ಸಮಾಜ ಕಟ್ಟಬಹುದು ಎನ್ನುವುದಕ್ಕೆ ಸಹಕಾರಿ ಸಂಘ ಉತ್ತಮ ಉದಾಹರಣೆ ಎಂದರು. ರಾಜ್ಯ ಬಂದರು...
ಜ.21 ರಂದು ಮರ್ಕಂಜದಿಂದ ಔಷಧಿಗೆಂದು ತೆರಳಿದ ವಿವಾಹಿತ ಮಹಿಳೆ ಕೀರ್ತಿಶ್ರೀ ಗಂಡನ ಮನೆಗೂ, ತಾಯಿ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ ಎಂದು ಪತಿ ರಾಜಶೇಖರ ಪೋಲೀಸರಿಗೆ ದೂರು ನೀಡಿದ್ದರು. ಜ.22 ರಂದು ಸಂಜೆ ಮಡಿಕೇರಿಯಲ್ಲಿ ಪತ್ತೆಯಾದ ಅವಳನ್ನು ತಾಯಿ ಮನೆಗೆ ಕರೆದುಕೊಂಡು ಬರಲಾಗಿದೆ ಎಂದು ತಿಳಿದುಬಂದಿದೆ. ಔಷಧಿ ತರಲು ಹೋದವಳು ಯಾಕೆ ನಾಪತ್ತೆಯಾದಳು ಎಂಬ ಬಗ್ಗೆ ಇನ್ನಷ್ಟೇ...
ದೇವಚಳ್ಳ ಗ್ರಾಮದ ಕುಚ್ಚಾಲ ಶ್ರೀ ಮಲೆ ಉಳ್ಳಾಕ್ಲು ಸಪರಿವಾರ ದೈವಗಳ ದೇವಸ್ಥಾನದಲ್ಲಿ ಜ. 30ರಂದು ದೈವಗಳ ಪುನಃ ಪ್ರತಿಷ್ಠಾ ಮಹೋತ್ಸವ ಹಾಗೂ ಫೆ.4 ಮತ್ತು 5 ರಂದು ದೈವಗಳ ನೇಮೋತ್ಸವ ನಡೆಯಲಿದೆ. ಇದರ ಅಂಗವಾಗಿ ಊರವರು ಶ್ರಮದಾನ ನಡೆಸಿ ಸ್ವಚ್ಚತಾ ಕಾರ್ಯ ಹಾಗೂ ಚಪ್ಪರ ಹಾಕುವ ಕಾರ್ಯ ನಡೆಸಿದರು. ಆಡಳಿತ ಮಂಡಳಿ ಸದಸ್ಯರು ಹಾಗೂ ಊರ...
Loading posts...
All posts loaded
No more posts
