ಆಮ್ ಆದ್ಮಿ ದ.ಕ.ಜಿಲ್ಲಾ ಅಧ್ಯಕ್ಷರಾಗಿ ಅಶೋಕ್ ಎಡಮಲೆ

ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ಸಮಿತಿಗಳನ್ನು ಪುನರ್ ರಚಿಸಿದ್ದು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಸುಳ್ಯದ ಅಶೋಕ್ ಎಡಮಲೆ ಅವರನ್ನು ನೇಮಕ ಮಾಡಲಾಗಿದೆ. ಜ.23ರಂದು ಬೆಂಗಳೂರಿನಲ್ಲಿ ಆಮ್‌ಆದಿ ಪಾರ್ಟಿ ರಾಜ್ಯ ಉಸ್ತುವಾರಿಯಾಗಿರುವ ದೆಹಲಿ ಶಾಸಕ ದಿಲೀಪ್‌ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನೇಮಕ ಮಾಡಲಾಗಿದೆ. ಅಶೋಕ್ ಎಡಮಲೆಯವರು ಹಿಂದೆ...

ರಾಧಾ’ಸ್‌ನ 28ನೇ ವರ್ಷದ ಸಂಭ್ರಮ ರೆಡಿಮೇಡ್ ಉಡುಪುಗಳ ಖರೀದಿಗೆ 20% ಡಿಸ್ಕೌಂಟ್

ಪುತ್ತೂರು ಜವುಳಿ ಉದ್ಯಮದಲ್ಲೇ ಹೊಸತನವನ್ನು ಪರಿಚಯಿಸಿರುವ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್ ರಸ್ತೆಯ ರಾಧಾಸ್‌ನ 28ನೇ ವಾರ್ಷಿಕ ಸಂಭ್ರಮಾಚರಣೆಯನ್ನು ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಸಂಭ್ರಮಾಚರಣೆಯ ಅಂಗವಾಗಿ ಮದುವೆ ಜವುಳಿ ಸೇರಿದಂತೆ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಎಲ್ಲಾ ರೀತಿಯ ರೆಡಿಮೇಡ್ ಉಡುಪುಗಳ ಮೇಲೆ ಶೆ.20 ಡಿಸ್ಕೌಂಟ್ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದು ಇದಕ್ಕೆ ಗ್ರಾಹಕರಿಂದ...
Ad Widget

ಕವನ : ಬದುಕಿನಲ್ಲಿ ತಾಳ್ಮೆಯಿರಲಿ, ಗೆಲ್ಲುವ ವಿಶ್ವಾಸವಿರಲಿ…

ನಾವು ಬದುಕಲೇಬೇಕು ನಮ್ಮೊಂದಿಗೆ ಯಾರಿದ್ದರೂ, ಯಾರಿಲ್ಲದಿದ್ದರೂ…ನಾವು ಮುನ್ನಡೆಯಲೇಬೇಕು ನಮ್ಮ ಬದುಕಿನಲ್ಲಿ ಎಷ್ಟೇ ಕಷ್ಟವಿದ್ದರೂ, ನೋವಿದ್ದರೂ…ನಮ್ಮ ಬದುಕಿನಲ್ಲಿ ಎಷ್ಟೇ ಕಷ್ಟವಿರಬಹುದು, ಎಷ್ಟೇ ನೋವಿರಬಹುದು, ಆದರೆ ಒಂದು ಸಮಯ ಬಂದೇ ಬರುತ್ತದೆ, ಆ ಸಮಯ ನಮ್ಮ ಬದುಕಿನ ನೋವುಗಳನ್ನೆಲ್ಲಾ ಮರೆಸುತ್ತದೆ, ಕಷ್ಟಗಳನ್ನೆಲ್ಲಾ ದೂರಮಾಡುತ್ತದೆ, ನಾವು ಪಟ್ಟ ಪರಿಶ್ರಮಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ…ಜೀವನದಲ್ಲಿ ಸೋತರೂ ಮತ್ತೊಮ್ಮೆ ಗೆಲ್ಲುವ ವಿಶ್ವಾಸವಿರಲಿ, ಸವಾಲುಗಳನ್ನು...

ದುಗ್ಗಲಡ್ಕ : ಮಿತ್ರ ಕುರಲ್ ಸಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಹೆಚ್ ಎಂ ನಂದಕುಮಾರ್ ರವರಿಗೆ ಸನ್ಮಾನ

ಮಿತ್ರ ಯುವಕಮಂಡಲ (ರಿ) ಕೊಯಿಕುಳಿ ಮತ್ತು ಕುರಲ್ ತುಳು ಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ದುಗ್ಗಲಡ್ಕದಲ್ಲಿ ನಡೆದ ಮಿತ್ರ ಕುರಲ್ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಉದ್ಯಮಿ ಕೊಡುಗೈ ದಾನಿ ನಂದಕುಮಾರ್ ಹೆಚ್ಎಂ ರವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕೆವಿಜಿ ಸುಳ್ಯ ಹಬ್ಬ...

ಕೊಯ್ಕುಳಿ : ಪ್ರತಿಭಾ ದಿನೋತ್ಸವ

ಕೊಯಿಕುಳಿ ಕಿ.ಪ್ರಾ.ಶಾಲೆಯಲ್ಲಿ ಪ್ರತಿಭಾ ದಿನೋತ್ಸವ ಕಾರ್ಯಕ್ರಮ ಜ.28 ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಬಾಲಕೃಷ್ಣ ನಾಯರ್ ನೀರಬಿದಿರೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ಶೀಲಾವತಿ, ಶ್ರೀಮತಿ ವಾರಿಜ ಕೊರಗಪ್ಪ ಗೌಡ, ಗಂಗಾಧರ ನೀರಬಿದಿರೆ, ಮಾಧವ ದುಗ್ಗಲಡ್ಕ , ಮುಖ್ಯಶಿಕ್ಷಕ ಮಾಧವ ಮೂಕಮಲೆ , ಶಿಕ್ಷಕಿ ಚಂದ್ರಕಲಾ ಕೆ ಸಿ ಉಪಸ್ಥಿತರಿದ್ದರು. ಎಲ್ಲಾ ಪೋಷಕರು ಹಾಗೂ...

ಕಡೆಪಾಲ : ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಬಿಡುಗಡೆ

ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಧೈವಸ್ಥಾನ ಕಡೆಪಾಲ ಇದರ ವಾರ್ಷಿಕ ನೇಮೋತ್ಸವ ದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.ಯು. ಬಿ ಚಕ್ರಪಾಣಿ ಮತ್ತು ಬಿ.ಆರ್. ಪದ್ಮಯ್ಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಆಡಳಿತ ಮೊಕ್ತೇಸರ ಕೆ ಎಚ್ ಪದ್ಮನಾಭ, ಅಧ್ಯಕ್ಷ ಬಾಲಕೃಷ್ಣ ಕಡೆಪಾಲ, ಹೇಮನಾಥ ಕಡೆಪಾಲ, ಹೊನ್ನಪ್ಪ ದಂಡೇಕಜೆ, ಕೊರಗ ಕಡೆಪಾಲ ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು.

ಅರಂತೋಡು : ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನ

ಅರಂತೋಡು ಗ್ರಾಮ ಪಂಚಾಯಿತ್ ವತಿಯಿಂದ ಪ್ರತಿ ತಿಂಗಳ ಕೊನೆಯ ಭಾನುವಾರ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅದರಂತೆ ಜ.29 ರಂದು ಅಭಿಯಾನ ನಡೆಯಿತು. ಈ ಸ್ವಚ್ಛತಾ ಅಭಿಯಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಪ್ರಕೃತಿ ವಿಕೋಪ ನಿರ್ವಹಣೆ ತಂಡ, ಯುವ ಬ್ರಿಗೇಡ್ ‌ ಅರಂತೋಡು ಮತ್ತು ನೆಹರು ಮೆಮೋರಿಯಲ್ ಕಾಲೇಜಿನ ಬಿ ಎಸ್ ಡಬ್ಲ್ಯೂ...

ಗುತ್ತಿಗಾರು : ಅಮರ ಯೋಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಯೋಗ ಕಲಾ ನಿಧಿ ಪ್ರಶಸ್ತಿ

ಪ್ರತಿಷ್ಠಿತ ಪತಂಜಲಿ ಯೋಗ ತರಬೇತಿ ಕೇಂದ್ರ ಬೆಂಗಳೂರು ಇವರು ನಡೆಸಿದ ಯೋಗೋತ್ಸವ 2022 ಇದರಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಯೋಗ ಕಲಾನಿಧಿ ಪ್ರಶಸ್ತಿಗೆ ಆಯ್ಕೆ ಆಗಿದ್ದು ಪತಂಜಲಿ ಯೋಗ ತರಬೇತಿ ಕೇಂದ್ರದ ವತಿಯಿಂದ ನೀಡಿದ ಪ್ರಶಸ್ತಿ ಪತ್ರ ಮತ್ತು ಶಾಶ್ವತ ಫಲಕವನ್ನು ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರು ಇಲ್ಲಿ ಹಸ್ತಾಂತರ ಮಾಡಲಾಯಿತು . ಈ...

ಮಣಿಯಾನ ರುಕ್ಮಿಣಿ ನಿಧನ

ಗುತ್ತಿಗಾರು ಗ್ರಾಮದ ಮಣಿಯಾನ ಮನೆ ಗೋಳ್ಯಡ್ಕ ರುಕ್ಮಿಣಿ ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ವಾಸುದೇವ, ಸೀತಾರಾಮ, ಪುತ್ರಿ, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಕಾಂಚೋಡು ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಫೆ.11ರಿಂದ ಫೆ.14ರ ವರೆಗೆ ಜರಗಲಿದ್ದು, ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಜ.27ರಂದು ನಡೆಯಿತು. ದೇವಸ್ಥಾನದ ಆಡಳಿತ ಧರ್ಮದರ್ಶಿ ಹೆಗ್ಗಡೆ ಶ್ರೀ ಪರಮೇಶ್ವರಯ್ಯ ಕಾಂಚೋಡು ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಜಾತ್ರೋತ್ಸವ ಸಮಿತಿ ಸಂಚಾಲಕರು, ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!