- Tuesday
- June 9th, 2026
ಸುಬ್ರಹ್ಮಣ್ಯ ಏಪ್ರಿಲ್ 15 : “ಸುಬ್ರಹ್ಮಣ್ಯದ ಆಟೋ ಚಾಲಕರು ದೂರದ ಊರುಗಳಿಂದ ಕುಕ್ಕೆ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರಥಮ ಮಾಹಿತಿದಾರರಾಗಿರುತ್ತಾರೆ. ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಬರುವ ಭಕ್ತಾದಿಗಳಿಗೆ ಕುಕ್ಕೆ ಕ್ಷೇತ್ರದ ಬಗ್ಗೆ ವಿವರವಾದ ಮಾಹಿತಿ ನೀಡಿ ಅವರಿಗೆ ನೀಡುವ ಸೇವೆ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಆಟೋ ಚಾಲಕರ ಮಕ್ಕಳು ವಿಮಾನದ ಪೈಲೆಟ್ ಆಗಬೇಕು. ಅವರು...
ಅಮರ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡಕಜೆಯಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ನಾಗರಿಕರು ಪರದಾಡುವಂತಾಗಿದ್ದು, ಸ್ಥಳೀಯರ ಕೋರಿಕೆ ಮೇರೆಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಕುರಿತು ಅವಲೋಕಿಸಿದರು. ನೀರಿನ ಟ್ಯಾಂಕಿಯಿಂದ ಬರುವ ಪೈಪ್ ತುಂಡಾಗಿರುವುದು ಮತ್ತು...
ನವೋದಯ ಮತ್ತು ವಿವಿಧ ವಸತಿ ಶಾಲಾ ಪ್ರವೇಶ ಪರೀಕ್ಷೆಗೆ ಕಳೆದ 18 ವರ್ಷಗಳಿಂದ ತರಬೇತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ 2026-27ನೇ ಸಾಲಿನ ಬೇಸಿಗೆ ರಜೆಯ ನವೋದಯ ತರಬೇತಿ ಶಿಬಿರ ಆರಂಭಗೊಂಡಿತು. ಒಂದು ತಿಂಗಳು ನಡೆಯುವ ಈ ತರಬೇತಿ ಶಿಬಿರದಲ್ಲಿ 4 ಅಥವಾ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ನವೋದಯ...
ಸುಳ್ಯದ ನಾವೂರಿನಲ್ಲಿರುವ ಕಲ್ಕುಡ ದೈವಸ್ಥಾನದಲ್ಲಿ ನೂತನವಾಗಿ ಶಿಲಾಮಯ ಗುಡಿ ನಿರ್ಮಾಣದ ಕಾರ್ಯವು ಜರುಗುತ್ತಿದ್ದು, ಇದರ ದಾರಂದ ಮುಹೂರ್ತ ಕಾರ್ಯವು ಎ.15ರಂದು ಬೆಳಿಗ್ಗೆ ನೆರವೇರಿತು.ದೈವಸ್ಥಾನದ ಆಡಳಿತ ಧರತಮದರ್ಶಿಗಳಾದ ಪಿ.ಕೆ ಉಮೇಶ್ ಅವರು ದೈವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ ಶಿಲ್ಪಿ ವಿಜಯ ಅವರ ನೇತೃತ್ವದಲ್ಲಿ ಶಿಲಾಮಯ ಗುಡಿಗೆ ದಾರಂದ ಮುಹೂರ್ತ ನಡೆಯಿತು.ಈ ಸಂದರ್ಭದಲ್ಲಿ ಕಲ್ಕುಡ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ...
ಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ಅಧ್ಯಯನ ತರಗತಿ ಎ 12ರಂದು ನಡೆಯಿತು.ಮುಸ್ಸಂಜೆ ನಮಾಝಿನ ನಂತರ ಸ್ವಲಾತ್ ಮಜ್ಲಿಸ್ ಪ್ರವಾದಿ ಪ್ರೇಮಿಗಳ ಮನ ಪುಳಕಗೊಳ್ಳುವಂತೆ ಮಾಡಿತು.ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಮಸೀದಿಯ ಖತೀಬ್ ಹಾಗೂ ಪಳ್ಳಿಮಜಲು ಸಿರಾಜುಲ್ ಹುದಾ ಸೆಕೆಂಡರಿ ಮದರಸದ ಅಧ್ಯಾಪಕ ಮುಹಮ್ಮದ್ ಸವಾದ್ ಮದನಿ ಅಜ್ಜಾವರ ಸ್ವಲಾತ್ ಕಾರ್ಯ ವಿಧಾನಗಳಿಗೆ...
ಬೆಳ್ಳಾರೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಬಿ. ಯಎಂ. ಕಾಂಪ್ಲೆಕ್ಸ್ನಲ್ಲಿ ಉಮರ್ ಮಣಿಮಜಲು ಹಾಗೂ ಜಮಾಲ್ ಬೆಳ್ಳಾರೆಯವರ ಪಾಲುದಾರಿಕೆಯ ಹೋಟೆಲ್ ವೆಲ್ಕಂ ಎ.13ರಂದು ಶುಭಾರಂಭಗೊಂಡಿತು.ಈ ಅತ್ಯಾಪ್ತ ತಾಣದಲ್ಲಿ ಚಹಾ, ಕಾಫಿ, ತಿಂಡಿ,ಚಿಕನ್ ಬಿರಿಯಾನಿ, ಚಿಕನ್ ಮಂದಿ ಹಾಗೂ ತಾಜಾ ಜ್ಯೂಸ್ ಐಟಂಗಳು ದೊರೆಯುತ್ತವೆ ಎಂದು ಪಾಲುದಾರರು ತಿಳಿಸಿದ್ದಾರೆ. (ವರದಿ : ಎಂ.ಎ. ಮುಸ್ತಫಾ ಬೆಳ್ಳಾರೆ)
ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏ.15ರಂದು ಪೂರ್ವಾಹ್ನ “ವಿಷುಕಣಿ ಪೂಜೆ” ನೆರವೇರಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಕಾನತ್ತೂರು, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ವಿಷುಕಣಿ ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)
ದಿನಾಂಕ : 15 ಏಪ್ರಿಲ್ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 15) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 260-305-460-482/485ಹಳೆ ಅಡಿಕೆ...
ಅಸಾಧಾರಣ ಸಾಂಸ್ಕೃತಿಕ ಪ್ರತಿಭೆ ಸುಳ್ಯದ ಮನುಜ ನೇಹಿಗನಿಗೆ ದ್ವಿತೀಯ ಪಿ.ಯು ಪರೀಕ್ಷೆಯ ಕಲಾ ವಿಭಾಗದಲ್ಲಿ ಶೇ.93.50 ಅಂಕ ಬಂದಿರುತ್ತದೆ. ಆಳ್ವಾಸ್ ಪ.ಪೂ.ಕಾಲೇಜಿನ ವಿದ್ಯಾರ್ಥಿಯಾಗಿರುವ ಮನುಜ ನೇಹಿಗ ವರ್ಷವಿಡೀ ತನ್ನ ತಂದೆ ಸುಳ್ಯ ರಂಗಮನೆಯ ರೂವಾರಿ ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ ಚಾರುವಸಂತ, ನಾಯಿಮರಿ ನಾಟಕ, ದೇವವೃದ್ಧರು , ಕರ್ಣಾಸ್ತಮಾನ ಮುಂತಾದ ನಾಟಕಗಳ ಪ್ರದರ್ಶನ, ಅಭಿನಯ,...
ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂವಿಧಾನ ಶಿಲ್ಪಿ, ಸಾಮಾಜಿಕ ಸಮಾನತೆಯ ಹರಿಕಾರ ಡಾ. ಬಿ.ಆರ್ ಅಂಬೇಡ್ಕರ್ 135ನೇ ಜಯಂತಿ ಆಚರಣೆಯನ್ನು ಇಂದು ಸುಳ್ಯದಲ್ಲಿ ಸುಮಾರು 15 ವರ್ಷಗಳಿಂದ ನಿರ್ಮಾಣ ಕಾರ್ಯ ಕುಂಠಿತ ಗೊಂಡು ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ವಠಾರದಲ್ಲಿ ಇಂದು ಆಯೋಜಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರುರವರು ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ...
Loading posts...
All posts loaded
No more posts
