ಸುಬ್ರಹ್ಮಣ್ಯ : ಇನ್ನರ್ ವೀಲ್ ಕ್ಲಬ್ ಉದ್ಘಾಟನೆ

ಸುಬ್ರಹ್ಮಣ್ಯ ಜುಲೈ 21 : ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ರವಿವಾರ ಯೇನೇಕಲ್ಲಿನ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ರೋಹಿತ್ ಬಿ.ಬಿ ಅವರು ಮಾತನಾಡುತ್ತಾ "ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ರಾಷ್ಟ್ರದ...

ಕವನ : ಪ್ರಕೃತಿ ನಿಯಮ

ಸುರಿಯುವ ಮಳೆಗೆ ತಿಳಿದೀತೆ ತಾನು ಯಾವ ನದಿಯ ಸೇರುವೆ ಎಂದು...ಹರಿಯುವ ನದಿಗೆ ತಿಳಿದೀತೆ ತಾನು ಯಾವ ಸಮುದ್ರವ ತಲುಪುವೆ ಎಂದು...ಭೋರ್ಗರೆವ ಸಮುದ್ರಕ್ಕೆ ತಿಳಿದೀತೆ ತಾನು ಯಾವ ಸಾಗರವ ಸೇರುವೆ ಎಂದು, ಯಾರೊಡಲಿಗೆ ಸೇರಿ ಲೀನವಾಗುವೆ ಎಂದು...ಒಂದು ವೇಳೆ ತಿಳಿದಿದ್ದರೂ ಸಾಗುವವು ಅವು ಏನೂ ಅರಿಯದಂತೆ, ಪ್ರಕೃತಿ ನಿಯಮವ ಮೀರದಂತೆ...- ಉಲ್ಲಾಸ್ ಕಜ್ಜೋಡಿ
Ad Widget

ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಸಹಯೋಗದಲ್ಲಿ ಸಾಮಾನ್ಯ ಜ್ಞಾನ ಪರೀಕ್ಷೆ ಯಶಸ್ವಿ

ಸುಬ್ರಹ್ಮಣ್ಯ, ಜುಲೈ 19 : ಪೊಲೀಸ್ ಇಲಾಖೆಗೆ ಸೇರಲು ಆಸಕ್ತಿ ಹೊಂದಿರುವ ಯುವಜನರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾದ ಸಾಮಾನ್ಯ ಜ್ಞಾನ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಉದ್ಘಾಟಿಸಿ ಮಾತನಾಡಿ, “ಪೊಲೀಸ್...

“ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ನಲ್ಲಿ ಗೌರಿತಾ ಕೆ.ಜಿ ದಾಖಲೆ

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜಾಕಿ ಬುಕ್ ಆಫ್ ರೆಕಾರ್ಡ್ ಆಯೋಜಿಸಿದ್ದ “ಯೋಗ ಸವಾಲುಗಳು ಎಲೈಟ್ ಚಾಂಪಿಯನ್‌ಶಿಪ್” ನಲ್ಲಿ ಗೌರಿತಾ ಕೆ.ಜಿ ಯಶಸ್ವಿ ಯಾಗಿದ್ದಾಳೆ. ಈ ಸ್ಪರ್ಧೆಯಲ್ಲಿ ವೃಕ್ಷಾಸನದಲ್ಲಿ ಹನ್ನೆರೆಡು ನಿಮಿಷಗಳ ಕಾಲ ಇರುವಂತೆ ನಿಯಮವಿದ್ದು, ಈಕೆ 16ನಿಮಿಷ 51ಸೆಕೆಂಡುಗಳ ಕಾಲ ಇರುವ ಮೂಲಕ ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು...

ಶುದ್ಧ ಷಷ್ಟಿ ಹಿನ್ನಲೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತ ಜನ ದಟ್ಟಣೆ

ಸುಬ್ರಹ್ಮಣ್ಯ ಜುಲೈ 19 : ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನೆಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಿಂಗಳಿಗೊಮ್ಮೆ ಬರುವ ಶುದ್ಧ ಷಷ್ಟಿ ಈ ದಿನ ರವಿವಾರದೊಂದಿಗೆ ಬಂದುದರಿಂದ ಅತ್ಯಧಿಕ ಭಕ್ತ ಜನರು ಕುಕ್ಕೆಗೆ ಆಗಮಿಸಿ ಶ್ರೀ ದೇವರ ದರ್ಶನ ಪ್ರಸಾದ ಸ್ವೀಕರಿಸಿದರು. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಇಂದು ಕೂಡ ಇದ್ದು...

ಸುಬ್ರಹ್ಮಣ್ಯ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

ಸುಬ್ರಹ್ಮಣ್ಯ ಜುಲೈ 19 : ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶನಿವಾರ ರಾತ್ರಿ ಏನೇಕಲ್ಲು ಕೃಷಿಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು. ಆರಂಭದಲ್ಲಿ ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ವಹಿಸಿದ್ದರು. ನಿರ್ಗಮಿತ ಅಧ್ಯಕ್ಷ ಜಯಪ್ರಕಾಶರ ಮನದಾಳದ ಮಾತುಗಳು ಹಾಗೂ ಕಾರ್ಯದರ್ಶಿ ಭವಾನಿ ಶಂಕರ್...

ಕುಕ್ಕೆ ಕ್ಷೇತ್ರದ ಗಜರಾಣಿ ‘ಯಶಸ್ವಿನಿ’ಗೆ 23ನೇ ವರ್ಷದ ಜನ್ಮದಿನದ ಸಂಭ್ರಮ

ಸುಬ್ರಹ್ಮಣ್ಯ : ನಾಗಾರಾಧನೆಯ ಮೂಲಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಯಶಸ್ವಿನಿ ಜು.18 ಶನಿವಾರ ತನ್ನ ಹುಟ್ಟಿದ ದಿನವಾಗಿ 23ನೇ ವರ್ಷಕ್ಕೆ ಪಾದಾರ್ಪಣೆ ಮಾದಿದ್ದಾಳೆ. ಹುಟ್ಟು ಹಬ್ಬದ ದಿನವಾದ ಶನಿವಾರ ಯಶಸ್ವಿನಿಯ ಹೆಸರಿನಲ್ಲಿ ಕಾಶಿಕಟ್ಟೆ ಮಹಾಗಣಪತಿ ದೇವಸ್ಥಾನದಲ್ಲಿ ಸಂಜೆ ವಿಶೇಷ ರಂಗ ಪೂಜೆ ನೆರವೇರಿಸಲಾಯಿತು. ಪೂಜೆಯ ಬಳಿಕ ಕಾಶಿಕಟ್ಟೆಯಿಂದ ಮುಖ್ಯ ರಸ್ತೆಯಲ್ಲಿ ಮೈಯಾಡಿಸುತ್ತಾ, ಸೊಂಡಿಲೆತ್ತಿ, ತಲೆಮುಟ್ಟಿ ಹರಸಿಕೊಂಡು ತೆರಳಿದ...

ಕರಾವಳಿ-ಘಟ್ಟ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ – ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಜುಲೈ 17 ಹಾಗೂ 18 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಪರಿಣಾಮವಾಗಿ ಭೂಕುಸಿತ ಸಂಭವಿಸುವ ಸಾಧ್ಯತೆ ಎದುರಾಗಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ(IMD) ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

ಸುಳ್ಯ ಹಾಗೂ ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿಗಳ ವರ್ಗಾವಣೆ

ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ್.ಎನ್ ಹಾಗೂ ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ವಿಮಲ್ ಬಾಬು ಕುಶಾಲನಗರ ಅರಣ್ಯ ತರಬೇತಿ ಕೇಂದ್ರದ ವಲಯಾರಣ್ಯಾಧಿಕಾರಿಗಳಾಗಿ ವರ್ಗಾವಣೆಗೊಂಡಿದ್ದಾರೆ. ಮಂಜುನಾಥ್ ಅವರ ಸ್ಥಾನಕ್ಕೆ ಹನೂರು ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ನಿರಂಜನ್ ಶೆಟ್ಟಿ ಆಗಮಿಸಲಿದ್ದಾರೆ. ವಿಮಲ್ ಬಾಬು ಅವರ ಸ್ಥಾನಕ್ಕೆ ಕುದುರೆಮುಖ ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ಚೇತನ್ ಹೆಚ್.ಪಿ ಆಗಮಿಸಲಿದ್ದಾರೆ.

ಏನೆಕಲ್ಲು : ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ; ಯುವಕ ಪೊಲೀಸ್ ವಶಕ್ಕೆ

ಜು.16 : ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಕಲ್ಲಾಜೆ ದೇವನಹಳ್ಳಿ ಪ್ರದೇಶದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ದೂರುದಾರರ ಅಪ್ರಾಪ್ತ ಪುತ್ರಿ ಜುಲೈ 07ರಂದು ಏನೆಕಲ್ಲು ಗ್ರಾಮದ ತನ್ನ ಸ್ನೇಹಿತೆಯ ಮನೆಗೆ ತೆರಳಿದ್ದು, ಜುಲೈ...
Loading posts...

All posts loaded

No more posts

error: Content is protected !!