ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಯೋಗ ದಿನಾಚರಣೆಯ ಅಂಗವಾಗಿ “ಯೋಗ ಉತ್ಸವ “

ಪುತ್ತೂರಿನ ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್ ನಲ್ಲಿ  ಜೂನ್ 21 ಶುಕ್ರವಾರದಂದು ಸಂಜೆ 6 ಗಂಟೆಗೆ ಯೋಗ ದಿನಾಚರಣೆಯ ಅಂಗವಾಗಿ  "ಯೋಗ ಉತ್ಸವ " ಕಾರ್ಯಕ್ರಮ ನಡೆಯಲಿದೆ . ಅಂತಾರಾಷ್ಟ್ರೀಯ ಯೋಗಪಟು ತೃಪ್ತಿ . ಎನ್ . ಇವರಿಂದ ಯೋಗಾಸನ ಪ್ರದರ್ಶನ ಪ್ರಾತ್ಯಕ್ಷಿಕೆ ನಡೆಯಲಿದೆ . ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ...

ಗುತ್ತಿಗಾರು : ಸಂಗೀತ ತರಗತಿ ಉದ್ಘಾಟನೆ

ಗುತ್ತಿಗಾರಿನ ಸ್ವಾತಿ ಕಾಂಪ್ಲೆಕ್ಸ್ ನಲ್ಲಿ ಪ್ರತಿದಿನ ಸಂಗೀತ ತರಗತಿ ಆರಂಭಗೊಳ್ಳಲಿದ್ದು, ಜೂ.16 ರಂದು ಸುಬ್ರಮಣ್ಯ ಭಟ್ ಎಂ. ಉದ್ಘಾಟನೆ ನೆರವೇರಿಸಿದರು.‌ ಪ್ರತಿ ಆದಿತ್ಯವಾರ ಅಪರಾಹ್ನ 2:30 ರಿಂದ ಸಂಗೀತ ತರಗತಿ ನಡೆಯಲಿದ್ದು ಸಂಗೀತ ಗುರುಗಳಾದ ಅನುಷಾಲಕ್ಷ್ಮಿ ಅಡಿಕೆಹಿತ್ತಿಲು ತರಬೇತಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ, ಶ್ರೀಮತಿ ಸುಶೀಲಾ, ಅನುಷಾಲಕ್ಷ್ಮಿ ಅಡಿಕೆಹಿತ್ತಿಲು, ಕೆ.ಶಕುಂತಲಾ ಭಟ್, ಶಿವಶಂಕರಿ ಹಾಗೂ...
Ad Widget

ತೈಲ ಬೆಲೆ ಏರಿಕೆ ಖಂಡಿಸಿ ಸುಳ್ಯ ಬಿಜೆಪಿ ಪ್ರತಿಭಟನೆ – ಶಾಸಕಿ ಮತ್ತು ನಾಯಕರಿಂದ ಸರಕಾರದ ವಿರುದ್ದ ವಾಗ್ದಾಳಿ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಬಿಟ್ಟಿ ಭಾಗ್ಯಗಳನ್ನು ನೀಡಲು ಇದೀಗ ಪೆಟ್ರೋಲ್ ಡೀಸೆಲ್ ಮೇಲೆ ದರವನ್ನು ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸವಾಗುತ್ತಿದೆ ಎಂದು ಬಿಜೆಪಿ ಮಂಡಲ ಸಮಿತಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಹೇಳಿದರು. https://youtu.be/wPCpBm-EX0w?si=iyO6awbTWUxNYO6j ಸುಳ್ಯ ಹಳೆ ಬಸ್ಸು ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕಿ...

ಕಾಂತಮಂಗಲ ಶಾಲೆಯಲ್ಲಿ ಕೊಲೆ ಹಿನ್ನಲೆ ವಿದ್ಯಾರ್ಥಿಗಳ ಗೈರು, ಪೋಷಕರ ತುರ್ತು ಸಭೆ

ಸುಳ್ಯ: ಕಾಂತಮಂಗಲ ಶಾಲೆಯ ವರಾಂಡಣದಲ್ಲಿ ವ್ಯಕ್ತಿಯೋರ್ವರ ಕೊಲೆ ಪ್ರಕರಣ ಹಿನ್ನಲೆಯಲ್ಲಿ ನಿನ್ನೆ ಶಾಲೆಗೆ ರಜೆ ಇದ್ದ ಹಿನ್ನಲೆಯಲ್ಲಿ ಇಂದು ಮುಂಜಾನೆ ಶಾಲೆ ಪ್ರಾರಂಭವಾದಗ ವಿಧ್ಯಾರ್ಥಿಗಳು ಸಂಪೂರ್ಣವಾಗಿ ಶಾಲೆಗೆ ಗೈರು ಹಾಜರಾಗಿದ್ದು ಇದೀಗ ಶಾಲಾ ಅಭಿವೃದ್ಧಿ ಸಮಿತಿಯವರು ತುರ್ತು ಸಭೆಯನ್ನು ಕರೆದಿದ್ದು ಇದೀಗ ಪೋಷಕರು ಶಾಲೆಗೆ ಆಗಮಿಸುತ್ತಿರುವುದಾಗಿ ತಿಳಿದುಬಂದಿದೆ.

ಸುಳ್ಯ ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯ ಇನ್ನರ್ ವೀಲ್ ಕ್ಲಬ್ ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು  ಆಯ್ಕೆಮಾಡಲಾಯಿತು. ಅಧ್ಯಕ್ಷೆಯಾಗಿ ಚಿಂತನಾ ಸುಬ್ರಹ್ಮಣ್ಯ, ಕಾರ್ಯದರ್ಶಿಯಾಗಿ ಡಾ.ಸವಿತ ಹೊದ್ದೆಟ್ಟಿ, ಕೋಶಾಧಿಕಾರಿಯಾಗಿ ಡಾ.ಸ್ಮಿತಾ ಹರ್ಷವರ್ಧನ್, ಉಪಾಧ್ಯಕ್ಷರಾಗಿ ಜಯಮಣಿ ಮಾಧವ, ಎಡಿಟರ್ ಪೂಜಾ ಸಂತೋಷ್, ಐಎಸ್‌ಓ ಆಗಿ ಸೌಮ್ಯ ರವಿಪ್ರಸಾದ್, ಜತೆ ಕಾರ್ಯದರ್ಶಿಯಾಗಿ ಮೀರಾ ಮುರಳೀಧರ ರೈ, ವೆಬ್ ಕಾರ್ಡಿನೇಟರ್ ಆಗಿ ಡಾ.ಪ್ರಜ್ಞಾ ಮನುಜೇಶ್ ರನ್ನು...

ಬ್ಯಾಂಕ್ ಆಫ್ ಬರೋಡಾದಲ್ಲಿದೆ 627 ಹುದ್ದೆಗಳು: ಇಂದೇ ಅರ್ಜಿ ಸಲ್ಲಿಸಿ

   ಬ್ಯಾಂಕ್ ಆಫ್ ಬರೋಡಾ (Bank of Baroda) ತನ್ನಲ್ಲಿ ಖಾಲಿ ಇರುವ 627 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕವಾಗಿದೆ.627 ಹುದ್ದೆಗಳ ಪೈಕಿ 459 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಮತ್ತು 168 ಹುದ್ದೆಗಳನ್ನು ನಿಯಮಿತ ಆಧಾರದಲ್ಲಿ...

ಹಳೆಗೇಟಿನಲ್ಲಿ ಇನೋವಾ – ಬೈಕ್  ಅಪಘಾತ – ಸವಾರನಿಗೆ ಗಾಯ

ಸುಳ್ಯ ನಗರ ಕಡೆಯಿಂದ ಬರುತ್ತಿದ್ದ ಇನ್ನೋವಾ (ka 21 c 6554 ) ಹಳೆಗೇಟು ಪೆಟ್ರೋಲ್ ಪಂಪ್  ಬಳಿಯಲ್ಲಿ   ಪೈಚಾರ್ ಕಡೆಯಿಂದ ಅತೀ ವೇಗವಾಗಿ ಬಂದ  ಸ್ಪೆಂಡರ್  ಬೈಕ್ (ka 19 ef 3453) ಡಿಕ್ಕಿ ಹೊಡೆದ ಘಟನೆ ಇದೀಗ ನಡೆದಿದೆ. ಇನ್ನೋವದ ಮುಂಭಾಗ  ಮತ್ತು ಬೈಕ್  ನಜ್ಜುಗುಜ್ಜಾಗಿದೆ. ಗಾಯಗೊಂಡ ಬೈಕ್ ಸವಾರರನ್ನು  ಆಸ್ಪತ್ರೆ ಗೆ...

ಸುಳ್ಯ : ಜನತಾದಳ ಕಾರ್ಯಾಲಯದಲ್ಲಿ ಅಭಿನಂದನಾ ಸಭೆ

ಲೋಕಸಭಾ ಚುನಾವಣೆಯಲ್ಲಿ ಎನ್ . ಡಿ. ಎ ಮೈತ್ರಿ ಅಭ್ಯರ್ಥಿ ಜನತಾದಳದ ಮುಖಂಡ ಹೆಚ್. ಡಿ ಕುಮಾರ ಸ್ವಾಮಿ ಸಚಿವರಾದ ಹಿನ್ನಲೆ ಸುಳ್ಯ ತಾಲೂಕು ಜನತಾದಳ ಕಾರ್ಯಾಲಯದಲ್ಲಿ ಕಾರ್ಯಕರ್ತರಿಂದ ಅಭಿನಂದನಾ ಸಭೆ ಕಾರ್ಯಕ್ರಮವು ಜೂ. 17 ರಂದು ನಡೆಯಿತು.ಅಭಿನಂದನಾ ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಜನತಾದಳದ ಅಧ್ಯಕ್ಷರಾದ ಸುಕುಮಾರ್ ಕೋಡ್ತು ಗುಳಿ ವಹಿಸಿದರು. ಬಳಿಕ ಮಾತನಾಡಿದ...

ಕಾಂತಮಂಗಲ : ಕೊಲೆ ಪ್ರಕರಣ ಶಂಕಿತ ಆರೋಪಿ ಪತ್ತೆ – ತೀವ್ರ ವಿಚಾರಣೆ !?

ಸುಳ್ಯದ ಕಾಂತಮಂಗಲ ಶಾಲೆಯ ಬಳಿಯಲ್ಲಿ ಮುಂಜಾನೆ ಪತ್ತೆಯಾದ ಅಪರಿಚಿತ ಶವದ ಗುರುತು ಪತ್ತೆಯಾಗುತ್ತಿದ್ದಂತೆ ಓರ್ವ ಶಂಕಿತ ಆರೋಪಿಯನ್ನು ಸುಳ್ಯ ಪೋಲಿಸ್ ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳ ಪ್ರಕಾರ ತಿಳಿದುಬಂದಿದೆ.

ಮಂಡೆಕೋಲು: ಶ್ರೀ ಮಹಾವಿಷ್ಣುಮೂರ್ತಿ ದೇಗುಲದಲ್ಲಿ ದೃಢ ಕಲಶಾಭಿಶೇಕ

ಸುಳ್ಯ: ಇತ್ತೀಚೆಗೆ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಮುಳುಗೆದ್ದ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ದೃಢ ಕಲಶಾಭಿಶೇಕ ಸೇವೆ ಸೋಮವಾರ ನಡೆಯಿತು. ದೃಢ ಕಲಶಾಭಿಶೇಕದ ವಿಧಿ ವಿಧಾನಗಳು ಕುಂಟಾರು ಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಿತು. ಭಾನುವಾರ ಸಂಜೆ 6 ಕ್ಕೆ ದೇವತಾ ಪ್ರಾರ್ಥನೆ, ಬಳಿಕ ಆಚಾರ್ಯವರಣ, ರಾಕ್ಷೋಘ್ನ ಹೋಮ, ವಾಸ್ತುಹೋಮ...
Loading posts...

All posts loaded

No more posts

error: Content is protected !!