- Tuesday
- August 25th, 2026
ವಿದ್ಯುತ್ ಲೈನ್ ಗಳಿಗೆ ತಾಗುತ್ತಿರುವ ಮರದ ರೆಂಬೆ , ಹಬ್ಬಿರುವ ಬಳ್ಳಿಗಳನ್ನು ತೆರವು ಕಾರ್ಯ ನಡೆಯಿತು. ಆದಿತ್ಯವಾರಗಳಂದು ನಡೆದ ಶ್ರಮದಾನದಲ್ಲಿ ಉಬರಡ್ಕ ಗ್ರಾಮದ ಹುಳಿಯಡ್ಕ, ಕುತ್ತಮೊಟ್ಟೆ, ಯಾವಟೆ ಹಾಗೂ ಹೂಪಾರೆ ಭಾಗದ ಬಳಕೆದಾರರು ಮೆಸ್ಕಾಂ ಸಿಬ್ಬಂದಿಗಳ ಜತೆ ಸಹಕಾರ ನೀಡಿದರು.
ಎಣ್ಮೂರು ಸರಕಾರಿ ಪ್ರೌಢ ಶಾಲೆಯಲ್ಲಿ ಜೂ.29ರಂದು ನೂತನ ಎಸ್ಡಿಎಂಸಿ ರಚಿಸಲಾಯಿತು. ಅಧ್ಯಕ್ಷರಾಗಿ ಶ್ರೀ ಮೇದಪ್ಪ ಗೌಡ ಅಲೆಂಗಾರ ಆಯ್ಕೆಯಾದರು. ಎಸ್ಡಿಎಂಸಿ ಸದಸ್ಯರಾಗಿ ಶ್ರೀ ಶರ್ಮಾ ಕುಮಾರ್, ಶ್ರೀ ಮೇದಪ್ಪ ಗೌಡ ಎಂ, ಶ್ರೀ ಸುವರ್ಣ ಜಾಕೆ, ಶ್ರೀ ಪುರುಷೋತ್ತಮ ಆಚಾರ್ಯ, ಶ್ರೀಮತಿ ನಯನಾ ರೈ, ಶ್ರೀಮತಿ ನಳಿನಾಕ್ಷಿ, ಶ್ರೀಮತಿ ನೆಬಿಸಾ, ಶ್ರೀಮತಿ ನಳಿನಿ ಆಯ್ಕೆಯಾದರು. ಮುಖ್ಯ...
https://youtu.be/lwYVo8S4pMs?si=fK7ylWkvHO7o5x-- ದ.ಕ.ಸಂಸದರಾಗಿ ಆಯ್ಕೆಯಾದ ಕ್ಯಾ.ಬ್ರಜೇಶ್ ಚೌಟರವರು ಇಂದು ಸುಳ್ಯಕ್ಕೆ ಭೇಟಿ ನೀಡಿದರು. ಪಕ್ಷದ ಕಛೇರಿಗೆ ಆಗಮಿಸಿದ ಅವರನ್ನು ಮಂಡಲ ಸಮಿತಿ ಹಾಗೂ ಪ್ರಮುಖ ನಾಯಕರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್. ಅಂಗಾರ, ಶಾಸಕಿ ಭಾಗೀರಥಿ ಮುರುಳ್ಯ, ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರ.ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಪ್ರಮುಖರಾದ ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ,...
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯು 2020 ರಲ್ಲಿ ಪ್ರಸ್ತುತಪಡಿಸಿದ ‘ಸಾಹೇಬ್ರು ಬಂದವೇ’ ನಾಟಕದಲ್ಲಿ ಮೋನಿಕಾ ಪಾತ್ರದಲ್ಲಿ ಅಭಿನಯಿಸಿದ್ದ ಸುಸ್ಮಿತಾ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ನೀನಾಸಂ ರಂಗಶಿಕ್ಷಣ ತರಬೇತಿಗೆ ಪ್ರಸ್ತಕ( 2024-25) ಸಾಲಿಗೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ತಿಳಿಸಿದ್ದಾರೆ.ಪ್ರತಿಯೊಬ್ಬ...
ಗುತ್ತಿಗಾರು ಗ್ರಾಮದ ಪೈಕ ಮನೆ ದಿ.ಪೈಕ ಸುಬ್ಬಯ್ಯ ಗೌಡರ ಧರ್ಮಪತ್ನಿ ಸಾವಿತ್ರಿ ಇವರು ಜೂ. 30 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ದಯಾನಂದ, ಹರಿಶ್ಚಂದ್ರ, ಪುತ್ರಿ ಭಾರತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಸುಳ್ಯ ಶಾಲೆಯ ವಿದ್ಯಾರ್ಥಿಗಳಿಗೆ ಕೋಟೆ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಉಚಿತ ಬ್ಯಾಗ್ ವಿತರಣಾ ಕಾರ್ಯಕ್ರಮ ಇಂದು ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಿ ಕಣ್ಣಿನ ತಪಾಸಣೆ ಶಿಬಿರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ರೈಟ್ ಟು ಲಿವ್ ಕೋಟೆ ಫೌಂಡೇಶನ್ ನ ವೀರೇಶ್ ಸೊಂಡೆ,...
ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ , ಪರಿವೃತ್ತ ಪದ್ಮಸಾನ ದಲ್ಲಿ 01 ಗಂಟೆ 08 ನಿಮಿಷ 10 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.ಇವರು ವಾಲ್ತಾಜೆ ಶ್ರೀ ಪ್ರಶಾಂತ್ ವಾಲ್ತಾಜೆ ಮತ್ತು ಶ್ರೀಮತಿ ಚೈತ್ರ ರವರ ಪುತ್ರಿ. ಅಮರ...
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 99 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರೀ ಸದಾಶಿವ ದೇವಸ್ಥಾನ ನಾಗಪಟ್ಟಣ ಇಲ್ಲಿ ರಾಹುಲ್ ಗಾಂಧಿಯವರ ಹೆಸರಿನಲ್ಲಿ ಶಿವಪೂಜೆ ಹಾಗೂ...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಮತ್ತು ಚಾರ್ಟರ್ ನೈಟ್ ಸಮಾರಂಭವು ಜುಲೈ 01 ಸೋಮವಾರದಂದು ಏನೇಕಲ್ಲು ಸಂತೃಪ್ತಿ ಕೃಷಿ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿರುವುದು.ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಡಿಸ್ಟ್ರಿಕ್ಟ್ 317ಡಿ ದ್ವಿತೀಯ ಉಪರಾಜ್ಯಪಾಲರಾದ ಹೆಚ್. ಎಂ. ತಾರಾನಾಥ್ ನೆರವೇರಿಸಿಕೊಡಲಿರುವರು. ಚಾರ್ಟರ್ ನೈಟ್ ಕಾರ್ಯಕ್ರಮವನ್ನು...
Loading posts...
All posts loaded
No more posts
