- Tuesday
- August 25th, 2026
ಇಳೆಯು ಮಳೆಯನ್ನು ಮನತುಂಬಿ ಕರೆದಿದೆ, ಇಳೆಯ ಕರೆಗೆ ಮಳೆಯು ಧರೆ ತುಂಬಾ ಸುರಿದಿದೆ...ರಾತ್ರಿ-ಹಗಲೆನ್ನದೇ ಸುರಿಯುತ್ತಿರುವ ಈ ಮಳೆಗೆ ತುಂಬಿ ಹರಿಯುತ್ತಿವೆ ನದಿ-ಹಳ್ಳಗಳೆಲ್ಲಾ, ನದಿಯ ಬಳಿ ತೆರಳುವಾಗ ಎಚ್ಚರವಹಿಸಬೇಕು ನಾವೆಲ್ಲಾ...ರಸ್ತೆಯಲ್ಲಿ ಸಾಗುವಾಗಲೂ, ಮನೆಯ ಹೊರಗಡೆ ನಡೆಯುವಾಗಲೂ ಜಾಗ್ರತೆ ವಹಿಸಲೇಬೇಕಿದೆ ಈ ಮಳೆಗಾಲದಲ್ಲಿ, ಕೆಸರು ತುಂಬಿದ ರಸ್ತೆಯಲ್ಲಿ, ಪಾಚಿ ತುಂಬಿದ ಮನೆಯಂಗಳದಲ್ಲಿ...ಮಳೆಗಾಲದಲ್ಲಿ ಆದಷ್ಟು ಹೋಗದಿರಿ ಪ್ರವಾಸವನ್ನ, ತುಂಬಿ ಹರಿಯುತ್ತಿರುವ...
ಪೈಕ ಶ್ರೀ ಶಿರಾಡಿ ದೈವಸ್ಥಾನದ ಎದುರುಗಡೆ ಬೃಹತ್ ಕಿನ್ನಿಗೋಳಿ ಮರ ಬಿದ್ದು ಸಾರ್ವಜನಿಕ ದಾರಿಗೆ ತೊಂದರೆಯಾಗಿತ್ತು. ದಾರಿಗೆ ಬಿದ್ದ ಮರದ ಗೆಲ್ಲು ಬಿದ್ದ ಗೆಲ್ಲುಗಳನ್ನು ಗುತ್ತಿಗಾರು ಶೌರ್ಯ ವಿಪತ್ತು ಘಟಕದ ಸದಸ್ಯರು ತೆರವುಗೊಳಿಸಿದರು. ಈ ಶ್ರಮದಾನದಲ್ಲಿ ಶೌರ್ಯ ವಿಪತ್ತು ಘಟಕದ ಸಂಯೋಜಕರಾದ ಲೋಕೇಶ್ವರ ಡಿ ಆರ್, ಸದಸ್ಯರುಗಳಾದ ಪಿ ಜಯರಾಮ, ಅಚ್ಯುತ ಗುತ್ತಿಗಾರು, ಸತೀಶ್ ಮೂಕಮಲೆ,...
ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ 2024 --25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭವು ಜು.02ರಂದು ನಡೆಯಿತು. ವಿದ್ಯಾರ್ಥಿ ಸರಕಾರದ ರಾಜ್ಯಪಾಲರು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಯಶೋಧರ ಎನ್ ಸಮಾರಂಭದಲ್ಲಿ ಭಾಗವಹಿಸಿ ಸಭಾಪತಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಂಪುಟ ದರ್ಜೆಯ ಸಚಿವರು ಮತ್ತು ಸಹಾಯಕ ಸಚಿವರುಗಳಿಗೆ ಶಾಲಾ ಸಂವಿಧಾನದಂತೆ ಪಂಚ ಭಾಷೆಗಳಾದ ಸಂಸ್ಕೃತ, ಕನ್ನಡ, ಇಂಗ್ಲಿಷ್,...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಪದಗ್ರಹಣ ಸಮಾರಂಭ ಹಾಗೂ ಚಾರ್ಟರ್ ನೈಟ್ ಸಮಾರಂಭವು ಜು.01 ರಂದು ಏನೆಕಲ್ ನ ಸಂತೃಪ್ತಿ ಕೃಷಿ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಡಿಸ್ಟ್ರಿಕ್ಟ್ 317 ಡಿ ದ್ವಿತೀಯ ಉಪ ರಾಜ್ಯಪಾಲ ಹೆಚ್. ಎಂ. ತಾರಾನಾಥ್ ಪದಗ್ರಹಣ ನೆರವೇರಿಸಿಕೊಟ್ಟರು. ಚಾರ್ಟರ್ ನೈಟ್ ಕಾರ್ಯಕ್ರಮವನ್ನು ಪೂರ್ವ ರಾಜ್ಯಪಾಲ...
ಸುಳ್ಯ ತಾಲೂಕು ಭೂನ್ಯಾಯ ಮಂಡಳಿ ಸದಸ್ಯರನ್ನು ಸರಕಾರ ನೇಮಕ ಮಾಡಿದೆ. ಮಾಜಿ ತಾ.ಪಂ.ಸದಸ್ಯೆ ಶ್ರೀಮತಿ ಅನಸೂಯ ಪೆರುವಾಜೆ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಜಾರಾಮ ಬೆಟ್ಟ ಹಾಗೂ ಐವರ್ನಾಡಿನ ಕಾಂಗ್ರೆಸ್ ಮುಂದಾಳು ಕರುಣಾಕರ ಮಡ್ತಿಲ, ನ್ಯಾಯವಾದಿ ಫವಾಜ್ ಕನಕಮಜಲು ಇವರುಗಳನ್ನು ಸದಸ್ಯರನ್ನು ರಾಜ್ಯ ಸರಕಾರ ಸದಸ್ಯರನ್ನಾಗಿ ನೇಮಕಗೊಳಿಸಿದ್ದು, ಪುತ್ತೂರು ಸಹಾಯಕ ಕಮಿಷನರ್ ಅಧ್ಯಕ್ಷರಾಗಿರುತ್ತಾರೆ. ತಹಶೀಲ್ದಾರ್ ಕಾರ್ಯದರ್ಶಿಯಾಗಿರುತ್ತಾರೆ.
ವೈದ್ಯರ ದಿನಾಚರಣೆ ಅಂಗವಾಗಿ ಬಳ್ಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯ ಪಿ.ರಾಮಕೃಷ್ಣ ಭಟ್ ಅವರನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಗೌರವಿಸಲಾಯಿತು. ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್, ಪ್ರಮುಖರಾದ ಚಿದಾನಂದ ಕುಳ, ಭರತ್ ನೆಕ್ರಾಜೆ, ರವಿ ಕಕ್ಕೆಪದವು, ಗಿರಿಧರ ಸ್ಕಂದ, ಸೀತಾರಾಮ - ಎಣ್ಣೆಮಜಲು, ಮಾಯಿಲಪ್ಪ ಸಂಕೇಶ, ಶಿವರಾಮ್ ಏನೆಕಲ್ಲು, ಮೋಹನ್ ದಾಸ್ ಎಣ್ಣೆಮಜಲು, ಗೋಪಾಲ್ ಎಣ್ಣೆಮಜಲು,...
ಅಜ್ಜಾವರ ಮೇನಾಲ ವಿಷ್ಣು ಯುವಕ ಮಂಡಲ ಇದರ ವತಿಯಿಂದ ಜು.1ರಂದು ವನಮಹೋತ್ಸವ ಕಾರ್ಯಕ್ರಮ ಮೇದಿನಡ್ಕದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ರೈ ಮೇನಾಲ, ವಿಷ್ಣು ಯುವಕ ಮಂಡಲ ಅಧ್ಯಕ್ಷರಾದ ರಂಜಿತ್ ರೈ ಮೇನಾಲ, ಗೌರವ ಅಧ್ಯಕ್ಷರಾದ ಶ್ರೀಧರ ಮಣಿಯಾಣಿ, ವಿಷ್ಣು ಯುವಕ ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಾಲ್,ಕೋಶಾಧಿಕಾರಿಯಾದ ಕೀರ್ತನ್...
ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ, ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ, ನಡೆದ ಸುಮಾರು ₹1,48,000 ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ ₹ 30,000/- ಸೇರಿ ಒಟ್ಟು ₹1,78,000/- ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು,...
ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನಲ್ಲಿ ಜುಲೈ 05 ರಂದು ವಾರ್ಡ್ ಸಭೆಗಳು ಹಾಗೂ ಜುಲೈ 08 ರಂದು ಗ್ರಾಮಸಭೆ ನಡೆಯಲಿದೆ. ವಾರ್ಡ್ ಸಭೆಗಳು ಜುಲೈ 05 ರಂದು ಪೂರ್ವಾಹ್ನ 10:00 ಗಂಟೆಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ, ಪೂರ್ವಾಹ್ನ 11:30ಕ್ಕೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಹಾಗೂ ಅಪರಾಹ್ನ 1:30ಕ್ಕೆ ಸ.ಕಿ.ಪ್ರಾ. ಶಾಲೆ ಕೊಡಿಯಾಲಬೈಲು ಇಲ್ಲಿ ನಡೆಯಲಿದೆ.ಗ್ರಾಮಸಭೆಯು...
ಕುಕ್ಕೆ ಸುಬ್ರಹ್ಮಣ್ಯ :ಜು.1,ಜುಲೈ ಒಂದು ಪತ್ರಿಕಾ ದಿನಾಚರಣೆ ಈ ವಿಶೇಷ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಈಗಿನ ಅಧ್ಯಕ್ಷರಾದ ವಿಶ್ವನಾಥ್ ನಡುತೋಟ ಅವರು ನಾಡಿನ ಸಮಸ್ತ ದೃಶ್ಯ, ಡಿಜಿಟಲ್ ಹಾಗೂ ಪತ್ರಿಕಾವೃತ್ತಿಬಾಂಧವರಿಗೆ ಶುಭಾಶಯ ಹೇಳಿದ್ದಾರೆ.ಪತ್ರಿಕೆ,ದೃಶ್ಯ ಮಾಧ್ಯಮಗಳು ಜನಸಾಮಾನ್ಯರಿಗೆ ಸಹಕಾರಿಯಾಗಿರಬೇಕು, ಯಾವುದೇ ವರದಿ ಮಾಡುವ ಸಂದರ್ಭದಲ್ಲಿ ಸತ್ಯತೆಯನ್ನ ಅರಿತು ನಿಷ್ಪಕ್ಷಪಾತ ವರದಿ ಮಾಡಬೇಕು, ನಾವೆಲ್ಲ ಮಾಧ್ಯಮದವರು ...
Loading posts...
All posts loaded
No more posts
