ಅರಂಬೂರು ತವೀದ್ ಮಚ್ಚೀಸ್ ಮೀನು ಅಂಗಡಿ ಶುಭಾರಂಭ

ಸುಳ್ಯ ಅರಂಬೂರು ಮಹಾಲಕ್ಷ್ಮಿ ವಾಣಿಜ್ಯ ಸಂಕೀರ್ಣದಲ್ಲಿ ತವೀದ್ ಸುಳ್ಯ ರವರ ಮಾಲಕತ್ವದ ತವೀದ್ ಮಚ್ಚೀಸ್ ಮೀನು ಅಂಗಡಿ ಅ.26ರಂದು ಶುಭಾರಂಭಗೊಂಡಿತು. ಮೀನು ವ್ಯಾಪಾರ ಕೇಂದ್ರದಲ್ಲಿ ಸಮುದ್ರದ ವಿವಿಧ ತರಹದ ತಾಜಾ ಮೀನುಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಮಂಗಳೂರಿನ ಮೀನು ಬಂದರಿನಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ನಮ್ಮಲ್ಲಿ ಇದೆಯೆಂದು ಮಾಲಕರು ತಿಳಿಸಿದ್ದಾರೆ. ನೂತನ ಸಂಸ್ಥೆಯನ್ನು...

ಎಲಿಮಲೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಎಲಿಮಲೆ ಪ್ರೌಢ ಶಾಲಾ ಬಳಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಉದ್ಘಾಟನೆ ಇಂದು ನೆರವೇರಿತು. ಊರಿನ ಹಿರಿಯರಾದ ಸುಬ್ರಮಣ್ಯ ಭಟ್ ಚಳ್ಳ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀಮತಿ ನೀಲಮ್ಮ ಮಣಿಯೂರು ರಿಬ್ಬನ್ ಕತ್ತರಿಸಿ ರಸ್ತೆ ಸಂಚಾರಕ್ಕೆ ಚಾಲನೆ ನೀಡಿದರು. ಶೈಲೇಶ್ ಅಂಬೆಕಲ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಮುಖ್ಯ ಗುರುಗಳಾದ ಚಂದ್ರಶೇಖರ್ ಪೇರಾಲ್, ಡಿ...
Ad Widget

ಕರ್ನಾಟಕ ರಾಜ್ಯ ಫೈಝೀಸ್ OSFOJANA ವತಿಯಿಂದ ರಬೀಹ್ ಕ್ಯಾಂಪೇನ್ ಕಾರ್ಯಕ್ರಮ

ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರ್ಯೆ ಪರಿಹಾರಎಂಬ ಧ್ಯೇಯ ವಾಕ್ಯದೊಂದಿಗೆಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ಯ ಅಂಗವಾಗಿ ರಬಿವುಲ್ ಅವ್ವಲ್ ತಿಂಗಳಲ್ಲಿರಾಜ್ಯದ 30 ಸ್ಥಳಗಳಲ್ಲಿ ರಬೀಹ್ ಕ್ಯಾಂಪೇನ್ ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ7ನೇ.ದಿನದ ಕಾರ್ಯಕ್ರಮವನ್ನು ಅಕ್ಟೋಬರ್ 25 ರಂದುಸುಳ್ಯ ಸುನ್ನೀ ಮಹಲ್ ನಲ್ಲಿ ಮೌಲಿದ್ ಪಾರಾಯಣ ಮತ್ತು ದುವಾ ಮಜ್ಲಿಸ್ ಕಾರ್ಯಕ್ರಮ ಗಳೊಂದಿಗೆ ನಡೆಯಿತು.ಮುಹಮ್ಮದ್ ಅಶ್ರಫ್ ಮುಸ್ಲಿಯಾರ್...

ಬೆಳ್ಳಾರೆಯಲ್ಲಿ ಅಭಿನವ ಡಿಜಿಟಲ್ ಸೇವಾ ಎಂಟರ್ ಪ್ರೈಸಸ್ ಶುಭಾರಂಭ

ಬೆಳ್ಳಾರೆಯ ಮುಖ್ಯ ರಸ್ತೆಯಲ್ಲಿರುವ ಶ್ರೀದೇವಿ ಹೈಟ್ಸ್ ನ 1ನೇ ಮಹಡಿಯಲ್ಲಿ ದೀಕ್ಷಿತ್ ಪೋನಡ್ಕರವರ ಮಾಲಕತ್ವದಲ್ಲಿ ಅಭಿನವ ಡಿಜಿಟಲ್ ಸೇವಾ ಎಂಟರ್ ಪ್ರೈಸಸ್ ಸಂಸ್ಥೆ ಅ.26ರಂದು ಶುಭಾರಂಭಗೊಂಡಿತು. ಬೆಳಗ್ಗೆ 7 ಗಂಟೆಗೆ ಗಣಹೋಮ ನೆರವೇರಿತು.ಬೆಳ್ಳಾರೆ ಆರಕ್ಷಕ ಠಾಣೆಯ ಎಸ್.ಐ. ಆಂಜನೇಯ ರೆಡ್ಡಿ ದೀಪ ಬೆಳಗಿಸಿ ಉದ್ಘಾಟನೆಗೈದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆಯ ಉಮೇಶ್ ಮಣಿಕ್ಕಾರ, ಉದ್ಯಮಿಗಳಾದ...

ಹವ್ಯಕ ಭಾಷೆ ಘಮಲು ಹರಡುತ್ತಿದೆ ‘ಐಡಿಯಾ ಬಾಸ್ಕೆಟ್’

ಕೊರೊನಾ ಲಾಕ್‌ಡೌನ್ ನಲ್ಲಿ ಹಲವು ಐಡಿಯಾಗಳು ಹೊರಗೆ ಬಂದಿದ್ದು, ಹಲವು ಪ್ರತಿಭೆಗಳು ಹೊರ ಜಗತ್ತಿಗೆ ಪರಿಚಯವಾಗಿವೆ. ಇದೇ ಹಿನ್ನಲೆಯಲ್ಲಿ ಜನ್ಮ ತಾಳಿದ್ದೇ "ಐಡಿಯಾ ಬಾಸ್ಕೆಟ್' ಎಂಬ ಹವ್ಯಕ ಯೂಟ್ಯೂಬ್ ವಾಹಿನಿ. ಅಳಿಯುತ್ತಿರುವ ಹವ್ಯಕ ಭಾಷೆಯ ಘಮಲನ್ನು ಮತ್ತೆ ಹರಡಿಸಲು ತಯಾರಾದ ಈ ವಾಹಿನಿಯ ಕರ್ತೃ ಡಾ| ಆದಿತ್ಯ ಭಟ್ ಚಣಿಲ.ವೃತ್ತಿಯಲ್ಲಿ ವೈದ್ಯ ವಿದ್ಯಾರ್ಥಿಯಾಗಿರುವ ಆದಿತ್ಯ ಕೊರೊನಾ...

ಶೇಣಿ- ಹೊಸಮಜಲು ರಸ್ತೆಗೆ ಗುದ್ದಲಿ ಪೂಜೆ

ಶೇಣಿ ಹೊಸಮಜಲು ರಸ್ತಯ ಗುದ್ದಲಿ ಪೂಜೆ ಅ.25ರಂದು ನಡೆಯಿತು. ಗುದ್ದಲಿ ಪೂಜೆಯನ್ನು ಶಾಸಕ ಎಸ್. ಅಂಗಾರ ನೆರವೇರಿಸಿದರು.ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ ಸದಸ್ಯ ರಾಧಾಕೖಷ್ಣ ಬೊಳ್ಳೂರು, ಗ್ರಾ.ಪಂ ಮಾಜಿ ಸದಸ್ಯರಾದ ರತೀನ್ ಚೂಂತಾರು, ನಾರಾಯಣ ಆಚಾರ್ಯ, ನಿರ್ಮಲಾ ರೈ ಹಾಗೂ ಊರವರು ಉಪಸ್ಥಿತರಿದ್ದರು.

ಮಲ್ಲಿಕಾ – ಪ್ರವೀಣ್ ನಿಶ್ಚಿತಾರ್ಥ

ಸುಳ್ಯ ತಾಲೂಕು ಮಡಪ್ಪಾಡಿ ಗ್ರಾಮದ ಬೊಮೆಟ್ಟಿ ವೀರಪ್ಪ ಗೌಡ ಮತ್ತು ಶ್ರೀಮತಿ ರಾಜೇಶ್ವರಿ ರವರ ಪುತ್ರಿ ಮಲ್ಲಿಕಾ ಳ ವಿವಾಹ ನಿಶ್ಚಿತಾರ್ಥವು ಹೊಸದುರ್ಗ ತಾಲೂಕಿನ ಪರಮೇಶ್ವರಪ್ಪ ಮತ್ತು ಶ್ರೀಮತಿ ಗಂಗಮ್ಮ ರವರ ಪುತ್ರ ಪ್ರವೀಣ್ ರೊಂದಿಗೆ ಮಡಪ್ಪಾಡಿಯ ಬೊಮೆಟ್ಟಿ ಮನೆಯಲ್ಲಿ ನಡೆಯಿತು.

ಸುಳ್ಯ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಸಭೆ

ಸುಳ್ಯ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಸಭೆ ಇಂದು ಘಟಕದ ಅಧ್ಯಕ್ಷ ಆನಂದ ಬೆಳ್ಳಾರೆ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಬ್ಲಾಕ್ ಮಾಧ್ಯಮ ವಕ್ತಾರ ನಂದರಾಜ್ ಸಂಕೇಶ್, ಕಾರ್ಯದರ್ಶಿ ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ತಾಲೂಕು ಘಟಕದ ಪುನರ್ ರಚನೆ, ಸಂಘಟನೆ ಬಲಿಷ್ಠ...

ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ ಸಭೆ

ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ ಸಭೆ ಸೋಮಶೇಖರ್ ಕೊಯಿಂಗಾಜೆ ಯವರ ಅಧ್ಯಕ್ಷತೆಯಲ್ಲಿ ಸಂಪಾಜೆ ಸೊಸೈಟಿ ಸಭಾಂಗಣದಲ್ಲಿ ನಡೆಯಿತು . ಸಭೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರರಾಗಿ ನೇಮಕವಾದ ಶವಾದ್ ಗೂನಡ್ಕ ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹಮದ್ ಕುಂಞ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಚುನಾವಣಾ ಉಸ್ತುವಾರಿ ಜಗದೀಶ್ ರೈ, ಮಾಜಿ...

ಅ.27 : ಎಸ್ ಡಿಪಿಐ ವತಿಯಿಂದ ಜಾಗೋ ಕಿಸಾನ್ ಅಭಿಯಾನದ ಪ್ರಯುಕ್ತ ಪಾದಯಾತ್ರೆ ಮತ್ತು ಬೃಹತ್ ಪ್ರತಿಭಟನಾ ಸಭೆ

ಸುಳ್ಯ:- ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಜಾರಿಗೊಳಿಸಿದ ಸ್ವತಂತ್ರ ಭಾರತದ ಅತ್ಯಂತ ಕರಾಳ ಕೃಷಿ ಕಾನೂನಿನ ವಿರುದ್ಧವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದೇಶವ್ಯಾಪಿ ಅಕ್ಟೋಬರ್ ತಿಂಗಳಿನಲ್ಲಿ "ಜಾಗೋ ಕಿಸಾನ್" ಕೃಷಿ ಸಂಹಾರ ಬಿಜೆಪಿಯ ಹುನ್ನಾರ ಎಂಬ ಹೆಸರಿನಲ್ಲಿ ಅಭಿಯಾನ ಕೈಗೊಂಡಿದ್ದು ಇದರ ಭಾಗವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ...
Loading posts...

All posts loaded

No more posts

error: Content is protected !!