- Friday
- August 14th, 2026
ತೊಡಿಕಾನದಲ್ಲಿ ಬೈಕ್ ಹಾಗೂ ಕಾರು ಡಿಕ್ಕಿಯಾಗಿ ಬೈಕ್ ಸವಾರ ಜಖಂಗೊಂಡ ಘಟನೆ ಇಂದು ನಡೆದಿದೆ.ತೊಡಿಕಾನ ದೇವಸ್ತಾನದ ಮ್ಯಾನೇಜರ್ ಆನಂದ ರವರ ಕಾರು ಹಾಗೂ ಕರುಣಾಕರ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿ ಸವಾರ ಜಖಂಗೊಂಡ ಘಟನೆ ನಡೆದಿದೆ. ಗೆಳೆಯನ ದುಬಾರಿ ಬೆಲೆಯ ಬೈಕ್ (Benelli bike)ಅನ್ನು ಟ್ರಯಲ್ ನೋಡಲು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಾಯಾಳುವಿಗೆ ಸುಳ್ಯದಲ್ಲಿ ಪ್ರಥಮ ಚಿಕಿತ್ಸೆ...
ಜೀರ್ಮುಖಿ- ಬೊಮ್ಮಾರು ಸಂಪರ್ಕಿಸುವ ರಸ್ತೆಯು ಮಂದ್ರಪ್ಪಾಡಿ ಬಳಿ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಗಟ್ಟಿಗಾರು ಶಾಲೆ ಸೇರಿದಂತೆ ಈ ರಸ್ತೆ ಸುಮಾರು ೫೦ ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು ಪ್ರತೀ ವರ್ಷ ರಸ್ತೆ ಕೆಸರುಮಯವಾಗಿರುವುದರಿಂದ ಇಲ್ಲಿನ ನಿವಾಸಿಗಳು ಸಂಕಷ್ಟ ಪಡುತ್ತಿದ್ದಾರೆ. ಸೇವಾಜೆ ರಸ್ತೆಗೆ ಪರ್ಯಾಯ ಮಾರ್ಗ: ಸದ್ಯ ಸೇವಾಜೆಯಲ್ಲಿ ಸೇತುವೆಯಾಗುತ್ತಿದ್ದು ಮರ್ಕಂಜ- ಅರಂತೋಡು ರಸ್ತೆ...
ಮೋಸವ ಮಾಡಿದ ಜನರು, ಸುಳ್ಳನು ಹೇಳಿದ ಜನರು…ಕಷ್ಟದ ಕೂಪಕೆ ನನ್ನ ನೂಕಿದರು…ನನ್ನವರೇ ನನ್ನನ್ನು ನೂಕಿದರು…ನನ್ನವರು ಯಾರೆಂದು ನಾ ಅರಿಯುವ ಮುನ್ನ ಕಷ್ಟದ ಕೂಪದಲ್ಲಿ ಸಿಲುಕಿದೆನು…ನಾನು ಕಷ್ಟದ ಕೂಪದಲ್ಲಿ ಸಿಲುಕಿದೆನು… ಕನಸು ಕಾಣೋ ಕಣ್ಣು ನನ್ನದು ಕತ್ತಲಾಗಿ ಹೋಯಿತು…ನಾ ಕಂಡ ಕನಸುಗಳೆಲ್ಲಾ ನನಸಾಗದೆ ಉಳಿಯಿತು…ನನ್ನ ಬದುಕ ಹಾದಿಯಲ್ಲಿ ಕಷ್ಟಗಳೇ ತುಂಬಿತು…ಕಷ್ಟದಿಂದ ಬೆಂದ ಮನಸ್ಸು ಕಲ್ಲಾಗಿ ಹೋಯಿತು…ನಾನು ಯಾರು...
ಸುಳ್ಯ ತಾಲೂಕಿನ ಉಬರಡ್ಕ ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲು ಹಿಂದು ರುದ್ರ ಭೂಮಿ ಕೆಲವು ವರ್ಷಗಳ ಹಿಂದೆ ನಿರ್ಮಾಣವಾಗಿ ಸರಕಾರವು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಿತ್ತು.. ನೂರಾರು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದಿದ್ದರು.ಆದರೆ ಕೆಲವು ರಾಜಕೀಯ ಮುಖಂಡರು ರಾಜಕೀಯ ದುರುದ್ದೇಶದಿಂದ ಕಳೆದ ರಾತ್ರಿ ಅಪಘಾತದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ತಂದು ಶವಸಂಸ್ಕಾರ ಮಾಡಲು ಮುಂದಾದಾಗ ಅದನ್ನು ವಿರೋಧಿಸಿ ಹಿಂದೂ...
ರಾಜೀವ್ ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಪಿ.ರಾಜೀವ್ ರವರಿಗೆ ಚಾಮರಾಜನಗರ ತಾಲೂಕಿಗೆ ಕ್ಷೇತ್ರಸಂಪನ್ಮೂಲ ಅಧಿಕಾರಿಯಾಗಿ ಭಡ್ತಿಗೊಂಡು ಜೂ.27ರಂದುವರ್ಗಾವಣೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಜೀವ್ ರವರು ಮೂಲತಃಚಾಮರಾಜನಗರದವರಾಗಿದ್ದು, ಮುಖ್ಯೋಪಾಧ್ಯಾಯರಾಗಿಮರ್ಕಂಜ ಪ್ರೌಢಶಾಲೆಗೆ ನೇಮಕಗೊಂಡಿದ್ದರು.ಮರ್ಕಂಜ ಪ್ರೌಢಶಾಲೆಗೆಅಚ್ಚುತ ತೇರ್ಥಮಜಲು ರವರನ್ನು ಪ್ರಭಾರಮುಖ್ಯೋಪಾಧ್ಯಾಯರಾಗಿ ನೇಮಿಸಲಾಗಿದೆ.
ಗೂನಡ್ಕ ಬೀಜದಕಟ್ಟೆ ನಿವಾಸಿ ರಾದಮ್ಮ ಪೂಜಾರಿಯವರಿಗೆ ಪ್ರಾಕೃತಿಕ ವಿಕೋಪ ಪರಿಹಾರ ಯೋಜನೆಯಡಿಯಲ್ಲಿ ಮನೆ ದುರಸ್ತಿಗೆ ರೂ 12500 ಸಹಾಯಧನ ಚೆಕ್ಕನ್ನು ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್, ಸದಸ್ಯರುಗಳಾದ ಜಗದೀಶ್ ರೈ, ಸುಮತಿ ಶಕ್ತಿವೇಲು, ಎಸ್ ಕೆ. ಹನೀಫ್, ಗ್ರಾಮ ಕರಣಿಕರಾದ ಮಿಯಾ ಶಾಬ್...
ಉಬರಡ್ಕ ಮಿತ್ತೂರು ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲಿನಲ್ಲಿರುವ ಸಾರ್ವಜನಿಕ ಮುಕ್ತಿಧಾಮ ಹಿಂದೂ ರುದ್ರ ಭೂಮಿಯ ಗೇಟಿಗೆ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಸೇರಿ ಬೀಗ ಹಾಕಿರುವುದನ್ನು ಖಂಡಿಸಿ ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯವರು ಸುಳ್ಯ ತಾಲೂಕು ತಹಶೀಲ್ದಾರರವರಿಗೆ ಹಾಗೂ ಇ.ಒ ರವರಿಗೆ ಜು 28 ರಂದು ಮನವಿ ಸಲ್ಲಿಸಿದರು.ಕೊಡಿಯಾಲಬೈಲಿನಲ್ಲಿರುವ ಹಿಂದೂ...
ಪೆರಾಜೆ ಗ್ರಾಮದ ಕುಂಟಿಕಾನ ಕಮಲಾಕ್ಷ ಅವರು ಅಲ್ಪಕಾಲದ ಅಸೌಖ್ಯದಿಂದ ಜು. 27ರಂದು ನಿಧನರಾದರು.ಅವರಿಗೆ 70 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಜಾನಕಿ, ಪುತ್ರರಾದ ಯತೀಶ, ರಾಮಚಂದ್ರ, ಪುತ್ರಿ ಲೀಲಾವತಿ ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ - ನಾಳೆ ಪ್ರಮಾಣವಚನ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಗೃಹಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಸಂಜೆ ನಡೆದ ಶಾಸಕಾಂಗ ಸಭೆಯಲ್ಲಿ ಆಯ್ಕೆಯಾಗಿದ್ದಾರೆ. ನಾಳೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಹುದ್ದೆಗೆ ಲಿಂಗಾಯಿತ ಸಮುದಾಯದ ಪ್ರಭಲ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ ಸೋಮಪ್ಪ ಬೊಮ್ಮಾಯಿ...
Loading posts...
All posts loaded
No more posts
