ಸಂಪಾಜೆ: 28 ನೇ ವರ್ಷದ ಗೌರಿ ಗಣೇಶೋತ್ಸವ

ಸಂಪಾಜೆ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಭವನದಲ್ಲಿ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಸಂಪಾಜೆ ಹಾಗೂ ಪಯಸ್ವಿನಿ ಯುವಕ ಸಂಘ(ರಿ) ಸಂಪಾಜೆ ಕೊಡಗು ಸಂಯುಕ್ತ ಆಶ್ರಯದಲ್ಲಿ 28 ನೇ ವರ್ಷದ ಗೌರಿ ಗಣೇಶೋತ್ಸವ ಆಚರಣೆ. ಬೆಳಗ್ಗೆ 7 ಗಂಟೆಗೆ ಗೌರಿಷ್ಠಾಪನೆಯ ನಂತರ ಪೂಜಾ ವಿಧಿ ವಿಧಾನಗಳು ನಡೆದ ನಂತರ ಪುರುಷರ ಹಾಗೂ ಮಹಿಳೆ ಕೆಸರು ಗದ್ದೆ...

ಸುಳ್ಯ: ಕಾಲೇಜು ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : 9 ಮಂದಿ ಬಂಧನ – ಬಿಡುಗಡೆ

ಕಾಲೇಜಿನಲ್ಲಿ ಅನ್ಯಧರ್ಮದ ವಿದ್ಯಾರ್ಥಿಗಳು ಪರಸ್ಪರ ಪ್ರೀತಿಸುತ್ತಿದ್ದರೆನ್ನುವ ಕಾರಣಕ್ಕೆ ಅನ್ಯಕೋಮಿನ ವಿದ್ಯಾರ್ಥಿಯ ಮೇಲೆ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಒಂಬತ್ತು ಮಂದಿಯನ್ನು ಅರೆಸ್ಟ್ ಮಾಡಿದ್ದರು. ನ್ಯಾಯಾಲಯ ಎಲ್ಲಾ ಅರೋಪಿಗಳನ್ನು ಜಾಮೀನು ಮುಖಾಂತರ ಬಿಡುಗಡೆ ಮಾಡಿದೆ. ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ...
Ad Widget

ಯಕ್ಷಗಾನ ಮದ್ದಳೆ ಕಲಾವಿದರಾದ ತಂಟೆಪ್ಪಾಡಿ ಶಂಭಟ್ಟರ ನೆನಪಿನ ಗ್ರಂಥ ಬಿಡುಗಡೆ

ಸುಳ್ಯ ತಾಲೂಕಿನ ತಂಟೆಪ್ಪಾಡಿ ಮನೆಯಲ್ಲಿ ಆ.31ರಂದು ಖ್ಯಾತ ಯಕ್ಷಗಾನ ಮದ್ದಳೆ ಕಲಾವಿದರಾದ ತಂಟೆಪ್ಪಾಡಿ ಶಂಭಟರ ನೆನಪಿನ ಗ್ರಂಥ ಬಿಡುಗಡೆ ಸಮಾರಂಭ ಜರುಗಿತು. ಈ ನೆನಪಿನ ಗ್ರಂಥವನ್ನು ಹಿರಿಯ ಸಾಹಿತಿ ಮತ್ತು ಖ್ಯಾತ ಕವಿಗಳಾದ ಶ್ರೀ ಸುಬ್ರಾಯ ಚೊಕ್ಕಾಡಿ ಇವರು ಲೋಕಾರ್ಪಣೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಲಾ ಪೋಷಕರು ಹಾಗೂ ಹವ್ಯಕ ವಿಭಾಗದ ಗುರಿಕಾರರಾಗಿರುವ ಶ್ರೀ ಮುಂಡುಗಾರು ಸುಬ್ರಮಣ್ಯ...

ಸುಳ್ಯ: ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ 54 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಆ.31 ರಿಂದ ಸೆ.4 ರ ವರೆಗೆ ಸುಳ್ಯ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ದೇವತಾರಾಧನಾ ಸಮಿತಿ ಇವುಗಳ ಆಶ್ರಯದಲ್ಲಿ 54 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ಪುರೋಹಿತ್ ಆದಿನಾರಾಯಣ ರವರ ನೇತೃತ್ವದಲ್ಲಿ ಗಣಪತಿ ಹವನ ನಡೆದು ಗಣಪತಿ ಮೂರ್ತಿಯ ಪ್ರತಿಷ್ಠೆ ನೆರವೇರಿಸಲಾಯಿತು. ನಂತರ ಸ್ವಾತಂತ್ರ್ಯ ವೀರ ಸಾವರ್ಕರ್ ವೇದಿಕೆಯಲ್ಲಿ...

ಯೇನೆಕಲ್ಲು : 15ನೇ ವರ್ಷದ ಶ್ರೀ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಯೇನೆಕಲ್ಲು ಇದರ ಆಶ್ರಯದಲ್ಲಿ 15ನೇ ವರ್ಷದ ಶ್ರೀ ಗಣೇಶೋತ್ಸವ ಆ. 31 ಮತ್ತು ಸೆ.1ರಂದು ಯೇನೆಕಲ್ಲಿನ ಬಾಲಾಡಿ ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ನಡೆಯಿತು. ಎ. 31ರಂದು ಗಣಪತಿ ಹೋಮ, ಗಣೇಶನ ವಿಗ್ರಹ ಪ್ರತಿಷ್ಠಾಪನೆ ನಡೆಯಿತು. ಸಂಜೆ ಗಂಟೆ 6.00 ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಸೆ.1ರಂದು...

ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

ಸರ್ಕಾರಿ ಪದವಿ ಕಾಲೇಜು ಸುಳ್ಯದಲ್ಲಿ ಆ.30 ರಂದು ನಡೆದ ಶಾಲಾ ವಿದ್ಯಾರ್ಥಿಗಳ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ. ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಂ.ಪಿ.ಸಿ ಅರಂತೋಡು ಇಂದಿನ ಮುಖ್ಯ ಶಿಕ್ಷಕರಾದ ನಿವೃತ್ತ ನಿವೃತ್ತರಾಗಿ ಆಗಮಿಸಿದ ಆನಂದ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣ ಸಂಯೋಜಕಿ ಹಾಗೂ ಕಾರ್ಯಕ್ರಮಗಳ...

ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಕುಜುಂಬಾರು ಅವರಿಗೆ ಬೀಳ್ಕೊಡುಗೆ

ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1996 ರಲ್ಲಿ ಖಾಯಂ ಗುಮಾಸ್ತರಾಗಿ ಕರ್ತವ್ಯಕ್ಕೆ ಸೇರಿ 2016 ರಿಂದ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಬಡ್ತಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಆ.31 ರಂದು ನಿವೃತ್ತಿ ಹೊಂದಿದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಕುಜುಂಬಾರು ಅವರಿಗೆ ಆ.30 ರಂದು ಪ್ರಾ.ಕೃ.ಪ.ಸ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸುಬ್ರಹ್ಮಣ್ಯ ಐನೆಕಿದು...

ಅಗ್ನಿಪಥ್ ಆಯ್ಕೆ ಶಿಬಿರಕ್ಕೆ ತೆರಳುವವರಿಗೆ ಸಚಿವ ಅಂಗಾರ ರಿಂದ ಬಸ್ ವ್ಯವಸ್ಥೆ

ಹಾವೇರಿಯಲ್ಲಿ ನಡೆಯಲಿರುವ ಅಗ್ನಿಪಥ್ ಆಯ್ಕೆ ಶಿಬಿರದಲ್ಲಿ ಭಾಗವಹಿಸಿದ ಸುಳ್ಯ ಕ್ಷೇತ್ರದ ಅಗ್ನಿವೀರ್ ಆಕಾಂಕ್ಷಿಗಳಿಗೆ ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಡನಾಡು ಜಲ ಸಾರಿಗೆ ಅಧಿಕಾರಿಗಳು ಮತ್ತು ಸುಳ್ಯ ಕ್ಷೇತ್ರದ ಶಾಸಕರಾದ ಶ್ರೀ ಎಸ್ ಅಂಗಾರರವರು ಪ್ರಯಾಣಿಸಲು ಬಸ್ಸಿನ ವ್ಯವಸ್ಥೆ ಮಾಡಿದ್ದು ಸುಳ್ಯದಿಂದ ಹಾವೇರಿಗೆ ಎರಡು ಬಸ್ಸಿನಲ್ಲಿ 105 ಯುವಕರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ...

ಆ.30 ರಂದು ಪುಷ್ಪಾವತಿ ಮಣಿಯಾಣಿ ಕಲ್ಲುಮುಟ್ಲು ಅವರ ಶ್ರದ್ಧಾಂಜಲಿ ಕಾರ್ಯಕ್ರಮ

ಸುಳ್ಯದ ಅಂಬಟೆಡ್ಕ ಗಿರಿದರ್ಶಿನಿ ಕಲಾ ಮಂದಿರದಲ್ಲಿ ಸುಳ್ಯ ಕಲ್ಲುಮುಟ್ಲು ನಿವಾಸಿ ದಿ.ಸುಬ್ಬಯ್ಯ ಮಣಿಯಾಣಿ ಯವರ ಪತ್ನಿ ಶ್ರೀಮತಿ ಪುಷ್ಪಾವತಿ ಮಣಿಯಾಣಿ ಕಲ್ಲುಮುಟ್ಲು ರವರು ಆ.19 ರಂದು ನಿಧನರಾಗಿದ್ದು ಅವರ ಉತ್ತರ ಕ್ರಿಯಾಧಿ ಸದ್ಗತಿ ಶ್ರದ್ಧಾಂಜಲಿ ಕಾರ್ಯಕ್ರಮ ಆ.30 ರಂದು ನಡೆಯಿತು.ಮೃತರ ಜೀವನಗಾಥೆಯ ಕುರಿತು ಸಾಮಾಜಿಕ ಧುರೀಣ ಲ| ಎಂ.ಬಿ.ಸದಾಶಿವ, ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ...

ಅರಂಬೂರು : ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ 36 ನೇ ವರ್ಷದ ಶ್ರೀ ಗಣೇಶೋತ್ಸವ

ಅರಂಬೂರು: ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ 36 ನೇ ವರ್ಷದ ಶ್ರೀ ಗಣೇಶೋತ್ಸವ ವು ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ಬೆಳಗ್ಗೆ ಪುರೋಹಿತ ಕೃಷ್ಣ ಭಟ್ ಇಡ್ಯಡ್ಕ ಮತ್ತು ಅಭಿರಾಮ್ ಭಟ್ ಸರಳಿಕುಂಜ ರವರ ನೇತೃತ್ವದಲ್ಲಿ ಗಣಪತಿ ಹವನದೊಂದಿಗೆ ಆರಂಭಗೊಂಡಿತು. ಬಳಿಕ ಗಣಪತಿ ಮೂರ್ತಿಯ ಪ್ರತಿಷ್ಠಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಮಂದಿರದ ಗೌರವಾಧ್ಯಕ್ಷ ಬಿ.ಶ್ರೀಪತಿ...
Loading posts...

All posts loaded

No more posts

error: Content is protected !!