- Thursday
- August 27th, 2026
ಸುಬ್ರಹ್ಮಣ್ಯದಲ್ಲಿ ವ್ಯಾಪಾರ ಮಾಡುತ್ತಿದ್ದ ಸಂದರ್ಭ ಪೋಲೀಸರೊಬ್ಬರು ಹಣಕ್ಕಾಗಿ ಬೇಡಿಕೆ ಇಟ್ಟು ಹಲ್ಲೆ ನಡೆಸಿದ್ದಾರೆಂದು ಕಡಬದ ಯುವಕನೋರ್ವ ಆಸ್ಪತ್ರೆಯಲ್ಲಿ ದಾಖಲಾಗಿ ಪೋಲೀಸ್ ದೂರು ನೀಡಿದ ಘಟನೆ ಡಿ.1 ರಂದು ನಡೆದಿದೆ. ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಸಿಬ್ಬಂದಿಯೋರ್ವರು ಹಣ ನೀಡುವಂತೆ ಒತ್ತಾಯಿಸಿ, ಪೋಲಿಸ್ ವಸತಿ ಗೃಹಕ್ಕೆ ಕರೆದೊಯ್ದು ಚಿತ್ರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಕುಟ್ರುಪ್ಪಾಡಿ ಗ್ರಾಮದ ಭೀಮಗುಂಡಿ...
ಸುಳ್ಯ ರಥಬೀದಿಯಲ್ಲಿರುವ ಕಟ್ಟೆಕಾರ್ ಕಾಂಪ್ಲೆಕ್ಸ್ ನಲ್ಲಿ ಜನತಾದಳದ (ಜಾ) ಕಚೇರಿ ಉದ್ಘಾಟನೆ ನ.28 ರಂದು ನಡೆಯಿತು.ಕಚೇರಿಯನ್ನು ರಾಜ್ಯ ಜೆ ಡಿ ಎಸ್ ವಕ್ತಾರ ಎಂ ಬಿ ಸದಾಶಿವ ಉದ್ಘಾಟಿಸಿ ಶುಭ ಹಾರೈಸಿದರು. ಜೆ ಡಿ ಎಸ್ ಜಿಲ್ಲಾದ್ಯಕ್ಷ ಜಾಕೆ ಮಾದವ ಗೌಡ ದೀಪ ಪ್ರಜ್ವಲಿಸಿದರು. ನಂತರ ಸುಳ್ಯ ಶ್ರೀ ರಾಮ ಪೇಟೆಯ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್...
ಆಧುನಿಕ ಸುಳ್ಯದ ನವ್ಯ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರ ಹುಟ್ಟು ಹಬ್ಬವನ್ನು 'ಸುಳ್ಯ ಹಬ್ಬ' ವನ್ನಾಗಿ ಆಚರಿಸಲಾಗುತ್ತಿದ್ದು ಇದರ ಆಮಂತ್ರಣ ಬಿಡುಗಡೆ ನ.30ರಂದು ಕೆ.ವಿ.ಜಿ. ಸುಳ್ಯ ಹಬ್ಬ ಕಚೇರಿಯಲ್ಲಿ ನಡೆಯಿತು.ಡಿ.25 ಮತ್ತು ಡಿ.26ರಂದು ಕಾರ್ಯಕ್ರಮ ನಡೆಯಲಿದ್ದು, ಡಿ.25ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ, ಡಿ.26ರಂದು ಕೆ.ವಿ.ಜಿ. ಕಾನೂನು ಕಾಲೇಜಿ ಆವರಣದಲ್ಲಿ ಕಾರ್ಯಕ್ರಮ ನಡೆಯುವುದು.ಈ ಸಂದರ್ಭದಲ್ಲಿ ಕೆ.ವಿ.ಜಿ....
ಸುಳ್ಯದಲ್ಲಿ ಡಿ.16, 17 ಮತ್ತು 18ರಂದು ಬೃಹತ್ ಕೃಷಿ ಮೇಳ ನಡೆಯಲಿದ್ದು ಸಿದ್ಧತೆಗಳ ಅವಲೋಕನಕ್ಕಾಗಿ ಪೂರ್ವ ಭಾವಿ ಸಭೆಯು ಸುಳ್ಯದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆಯಿತು.ಕೃಷಿ ಮೇಳದ ಅಧ್ಯಕ್ಷತೆಯನ್ನು ಪ್ರಣವ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದ್ರ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಕಾರ್ಯಕ್ರಮದ ರೂಪುರೇಷೆ ಮುಂದಿಟ್ಟರು.ಕಾರ್ಯಕ್ರಮದಲ್ಲಿ ಕೃಷಿ ಮೇಳದ ವಿವಿಧ ಸಮಿತಿಗಳ ಸಂಚಾಲಕರುಗಳಾದ ಸೋಮಪ್ಪ ನಾಯ್ಕ...
ಮಾವಿನಕಟ್ಟೆ ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್, ಗ್ರಾಮ ಪಂಚಾಯತ್ ದೇವಚಳ್ಳ, ಆರೋಗ್ಯ ಉಪಕೇಂದ್ರ ಎಲಿಮಲೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರೋಟರಿ ಕ್ಯಾಂಸ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ, ರಕ್ತವರ್ಗೀಕರಣ ಹಾಗೂ ಮಾಹಿತಿ ಶಿಬಿರ ಹಾಗೂ 100 ಬಾರಿಗೆ ರಕ್ತದಾನ ಮಾಡುತ್ತಿರುವ ಶೈಲೇಶ್ ಅಂಬೆಕಲ್ಲು ಅವರಿಗೆ ಸನ್ಮಾನ ಕಾರ್ಯಕ್ರಮ...
ಜೀವನ ಅಂದ ಮೇಲೆ ಅಲ್ಲಿ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಬಂದು ಹೋಗುತ್ತಿರುತ್ತವೆ. ನಮ್ಮ ಜೀವನದಲ್ಲಿ ಕಷ್ಟ, ನೋವುಗಳು ಬಂದಾಗ “ಅಯ್ಯೋ ನಮ್ಮ ಜೀವನದಲ್ಲಿ ಕೆಟ್ಟ ದಿನಗಳು ಶುರುವಾಯ್ತು” ಅಂತ ಅಂದ್ಕೊಳ್ತೀವಿ, ಒಳ್ಳೆಯ ದಿನಗಳಿಗೋಸ್ಕರ ಕಾಯ್ತೀವಿ. ಅದೇ ರೀತಿ ನಮ್ಮ ಜೀವನ ಸಂತಸದಿಂದ ತುಂಬಿದ್ದರೆ “ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಶುರುವಾಗಿದೆ” ಅಂತ ಅಂದ್ಕೊಳ್ತೀವಿ....
ಐನೆಕಿದು ಗ್ರಾಮದ ಕೆದಿಲ ದಿ.ತಮ್ಮಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ಕಮಲರವರು ಡಿ.1ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ನವೀನ್ ಕೆದಿಲ, ಶಶಿಧರ ಕೆದಿಲ,ಪುತ್ರಿಯರಾದ ಹರಿಣಿ, ಪ್ರೇಮಾ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು,ಕುಟುಂಬಸ್ಥರು ಹಾಗೂ ಅಪಾರ ಬಂಧುಗಳನ್ನು ಆಗಲಿದ್ದಾರೆ.
https://youtu.be/wYY_jBF9TQ0 ಸುಬ್ರಹ್ಮಣ್ಯದ ಕುಲ್ಕುಂದ ಸಮೀಪ ರಿಕ್ಷಾ ಕ್ಕೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾದ ಘಟನೆ ನ.30ರಂದು ನಡೆದಿದೆ. ಸವಾರ ಜಗದೀಶ್ ಕಿಲಾರ್ಕಜೆ ಅಪಾಯದಿಂದ ಪಾರಾಗಿದ್ದಾರೆ. ಇದು ಹೊಸ ರಿಕ್ಷವಾಗಿದ್ದು, ರಸ್ತೆಗಿಳಿದು 6 ದಿನಗಳಾಗಿತ್ತು. ರಿಕ್ಷಾದಲ್ಲಿ ಯಾರು ಪ್ರಯಾಣಿಕರು ಈ ಸಂದರ್ಭ ಇರಲಿಲ್ಲವಾದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ರಿಕ್ಷಾ ಸಂಪೂರ್ಣ...
ಕುಡಿದು ಜೀಪು ಚಲಾಯಿಸಿದ ಪರಿಣಾಮ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಹಾಗೂ ಕಾರಿಗೆ ಡಿಕ್ಕಿಯಾಗಿ ವಾಹನಗಳು ಜಖಂಗೊಂಡ ಘಟನೆ ಅಂಬಟೆಡ್ಕ ಬಳಿ ಇಂದು ರಾತ್ರಿ ನಡೆದಿದೆ.ಸುಳ್ಯದ ಮುಖ್ಯ ರಸ್ತೆಯಿಂದ ರಥಬೀದಿಯಾಗಿ ಬಂದ ಜೀಪು ಚೆನ್ನಕೇಶವ ದೇವಾಸ್ಥಾನದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗೆ ಗುದ್ದಿದೆ. ನಂತರ ಅಲ್ಲಿಂದ ಅಂಬಟಡ್ಕಲ್ಲಿರುವ ನವರತ್ನ ಹೊಟೇಲ್ ಎದುರು ನಿಲ್ಲಿಸಿದ್ದ ಗ್ರಾಹಕರ ನಾಲ್ಕು...
Loading posts...
All posts loaded
No more posts
