ಕುಲ್ಕುಂದ : ಶ್ರೀ ಬಸವೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 19 ಮತ್ತು 20 ರಂದು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ಮಾ.24 ರಂದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷರಾದ ಗಿರಿಧರ ಸ್ಕಂದ, ಪದ್ಮಯ್ಯ ಜಾಡಿಮನೆ, ಗಿರೀಶ್ ಆಚಾರ್ಯ ಕುಲ್ಕುಂದ, ಯತೀಶ್ ಪಳ್ಳಿಗದ್ದೆ, ಜಯಣ್ಣ ಪಳ್ಳಿಗದ್ದೆ, ಜಯಂತ್ ಕುದುರೆಮಜಲು, ಕವಿತಾ ಗಣೇಶ್, ಸೀನಪ್ಪ...

2018ರಲ್ಲಿ ಬಾಲಕಿಯನ್ನು ಬಲಿ ಪಡೆದ ಬಸ್ – ಚಾಲಕನಿಗೆ 1ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಅರಂತೋಡು ಗ್ರಾಮದ ಬಿಳಿಯಾರು ಎಂಬಲ್ಲಿ 2018 ಫೆ.12 ರಂದು ಕೆವಿಜಿಯ ಐಪಿಎಸ್ ಶಾಲೆಯ ಒಂದನೆಯ ತರಗತಿ ವಿದ್ಯಾರ್ಥಿನಿ ಆಗ್ನೆಯ ಬಾಲು ಬಸ್ಸಿನ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಶಾಲಾ ಬಸ್ಸು ಚಾಲಕ ಧನಂಜಯ ಎಂಬುವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಂದಿನ ತನಿಖಾಧಿಕಾರಿ ಸರ್ಕಲ್ ಇನ್ ಸ್ಪೆಕ್ಟರ್...
Ad Widget

ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಗೆ ಜಲಸಂಜೀವಿನಿ ಪಂಚಾಯತ್ ಪುರಸ್ಕಾರ

ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 2022-23ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ಜಲಸಂಜೀವಿನಿ ಪಂಚಾಯತ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಮಾ.24 ರಂದು ಬೆಂಗಳೂರಿನಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ ಬಾಳುಗೋಡು, ಉಪಾಧ್ಯಕ್ಷರಾದ ವಿಜಯ ಕುಮಾರ್ ಅಂಙಣ, ಗ್ರಾಮ ಪಂಚಾಯತ್...

ಪೆರುವಾಜೆ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರ ಭೇಟಿ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗುರುಪ್ರಸಾದ್ ರವರು ಮಾ.24 ರಂದು ಭೇಟಿ ನೀಡಿದರು.ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಸದಸ್ಯರಾದ ವೆಂಕಟಕೃಷ್ಣ ರಾವ್,ದೇವಸ್ಥಾನದ ಸಿಬ್ಬಂದಿ ವಸಂತ ಆಚಾರ್ಯ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ವಳಲಂಬೆ : 38ನೇ ವರ್ಷದ ಸಾಮೂಹಿಕ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ – ಮಾ.25 ರಂದು ರಾಜ್ಯ ದೈವ ಹಾಗೂ ಪುರುಷ ದೈವದ ನೇಮ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24 ರ ಬೆಳಗ್ಗೆ ಗಣಪತಿ ಹೋಮ, ಬೆಳಿಗ್ಗೆ ಶತ ರುದ್ರಾಭಿಷೇಕ, 38 ನೇ ವರ್ಷದ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವರ ಪೂಜೆ ನಡೆಯಿತು. ಕಂದ್ರಪ್ಪಾಡಿ ಮತ್ತು ತಳೂರಿನಿಂದ ಪುರುಷದೈವ ಮತ್ತು ರಾಜ್ಯ ದೈವದ ಭಂಡಾರ ಆಗಮಿಸಿದ್ದು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸ್ವಾಗತಿಸಿದರು.ಸಂಜೆ ಭಜನಾ ಕಾರ್ಯಕ್ರಮ, ಹಾಗೂ ರಾತ್ರಿ...

ನಿವೃತ್ತ ಅಂಚೆಪಾಲಕ ಜಯರಾಮ ಗೌಡ ನಿಧನ

ನಾಲ್ಕೂರು ಗ್ರಾಮದ ಹಾಲೆಮಜಲು ನಿವೃತ್ತ ಅಂಚೆ ಪಾಲಕರಾದ ಜಯರಾಮ ಗೌಡ (75) ಇಂದು ನಿದನಾರಾದರು. ಮೃತರು ಪತ್ನಿ ತಾರಾ, ಮಕ್ಕಳಾದ ಪುನಿತ್ ಹಾಲೆಮಜಲು, ಶ್ರಿಮತಿ ಪವಿತ್ರ ಹರೀಶ ನೆಡ್ಚಿಲು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕನಕಮಜಲು : ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವಂಕಟ್ಟು ಮಹೋತ್ಸವದ ವೈಭವದ ಹಸಿರುವಾಣಿ ಮೆರವಣಿಗೆ

ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಅಂಗವಾಗಿ ವೈಭವದ ಹಸಿರುವಾಣಿ ಮೆರವಣಿಗೆಯು ಮಾ.24ರಂದು ಬೆಳಿಗ್ಗೆ ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಿಂದ ಹೊರಟು ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವದ ಸನ್ನಿಧಿಗೆ ವಿವಿಧ ವಾಹನಗಳ ಮೂಲಕ, ಕೇರಳ ಚೆಂಡೆ, ನಾಸಿಕ್...

ಎ.09-16 ರಂಗಮನೆಯಲ್ಲಿ ‘ಚಿಣ್ಣರಮೇಳ’, ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗುವರಾಜ್ಯ ಮಟ್ಟದ ಮಕ್ಕಳ ರಂಗ ಶಿಬಿರ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಎ.09 ರಿಂದ 16ರ ವರೆಗೆ ನಡೆಯುವ ಚಿಣ್ಣರಮೇಳ 2023 ರಾಜ್ಯಮಟ್ಟದ ಮಕ್ಕಳ ರಂಗ ಶಿಬಿರವು ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾದ ವಿಶೇಷ ಶಿಬಿರವಾಗಿರುತ್ತದೆ.ರಂಗಮಾಂತ್ರಿಕ ಡಾ|| ಜೀವನ್ ರಾಂ ಸುಳ್ಯರ ನಿರ್ದೇಶನದಲ್ಲಿ ಕರ್ನಾಟಕದ ಅನುಭವೀ ಸಂಪನ್ಮೂಲ ವ್ಯಕ್ತಿಗಳಾಗಿರುವ ಅರವಿಂದ ಕುಡ್ಲ, ನೀನಾಸಂ ಸಂಗೀತ ಭಿಡೆ , ನೀನಾಸಂ...

ಮಾ.25 ಅರಂತೋಡಿನಲ್ಲಿ ಅಮೃತ ಉದ್ಯಾನವನ ,ಅಮೃತ ಮುಕ್ತಿಧಾಮ ಹಾಗೂ ಅಮೃತ ಸಭಾಂಗಣ ಉದ್ಘಾಟನಾ ಕಾರ್ಯಕ್ರಮ

ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ನೂತನವಾಗಿ ನಿರ್ಮಿಸಿದ ಅಮೃತ ಸಭಾಂಗಣ ,ಅಮೃತ ಮುಕ್ತಿಧಾಮ ಹಾಗೂ ಅಮೃತ ಉದ್ಯಾನವನ ಉದ್ಘಾಟನಾ ಕಾರ್ಯಕ್ರಮ ಮಾ.25 ರಂದು (ನಾಳೆ) ನಡೆಯಲಿದೆ. ನೂತನ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಬಂದರು ಮೀನುಗಾರಿಕೆ ಮತ್ತು ಒಳನಾಡುಜಲ ಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ...

Rotwiller ನಾಯಿ ಕಾಣೆಯಾಗಿದೆ

ಮಾ.24 ರಂದು ಕನಕಮಜಲಿನ ಕುದ್ಕುಳಿ ಭಾಗದಿಂದ Rotwiller ನಾಯಿ ಕಾಣೆಯಾಗಿರುತ್ತದೆ. ನಾಯಿ ಕುತ್ತಿಗೆಯಲ್ಲಿ ನೀಲಿ ಬಣ್ಣದ ಬೆಲ್ಟ್ ಹಾಕಿರುತ್ತದೆ. ನಾಯಿ ಕಂಡುಬಂದಲ್ಲಿ 9606690193, 94800 46734, 63645 21063 ಗೆ ಕರೆ ಮಾಡಬೇಕಾಗಿ ವಿನಂತಿ.
Loading posts...

All posts loaded

No more posts

error: Content is protected !!