ಮೈಸೂರು ವಿಭಾಗದ ಸಕಲೇಶಪುರ-ಬಂಟ್ವಾಳ ವಿಭಾಗದಲ್ಲಿ ಆಂತರಿಕ ಸುರಕ್ಷತಾ ಪರಿಶೀಲನೆ

ನೈರುತ್ಯರೈಲ್ವೆಯ ಮುಖ್ಯ ಕಚೇರಿ ಸುರಕ್ಷತಾ ತಂಡದ ವತಿಯಿಂದ ಮೈಸೂರು ವಿಭಾಗದ ಸಕಲೇಶಪುರ-ಬಂಟ್ವಾಳ ವಿಭಾಗದಲ್ಲಿ ಮೇ.21 ಮತ್ತು 22 ರಂದು ಆಂತರಿಕ ಸುರಕ್ಷತಾ ಪರಿಶೀಲನೆ ನಡೆಸಲಾಯಿತು. ಈ ತಪಾಸಣೆಯನ್ನು ಮುಖ್ಯ ಕಚೇರಿಯ ಹಿರಿಯ ಅಧಿಕಾರಿಗಳು ಮುನ್ನಡೆಸಿದರು. ಇವರಲ್ಲಿ ಎಂ.ರಾಮಕೃಷ್ಣ, ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಇ.ಹರಿಕೃಷ್ಣನ್, ಮುಖ್ಯ ಸಿಬ್ಬಂದಿ ಮತ್ತು ಸಂಚಾರ ವ್ಯವಸ್ಥಾಪಕ, ಮುಖ್ಯ ಕಚೇರಿಯ ಇತರೆ ಸುರಕ್ಷತಾ ಅಧಿಕಾರಿಗಳು ಹಾಗೂ ಮೈಸೂರು ವಿಭಾಗದ ಎಲ್ಲಾ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಪರಿಶೀಲನೆಯ ವೇಳೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳು, ಹಳಿ ವಕ್ರತೆಗಳು, ಸ್ವಿಚ್ ವಿಸ್ತರಣೆ ಜಾಯಿಂಟ್‌ಗಳು, ಪ್ರಮುಖ ಮತ್ತು ಸಣ್ಣ ಸೇತುವೆಗಳು, ಪಾಯಿಂಟ್‌ಗಳು ಮತ್ತು ಕ್ರಾಸಿಂಗ್‌ಗಳು, ಪ್ರಮುಖ ಮತ್ತು ಸಣ್ಣ ನಿಲ್ದಾಣಗಳು, ಸುರಂಗ ಮಾರ್ಗಗಳು, ವೈದ್ಯಕೀಯ ಪರಿಹಾರ ವಾಹನ(Medical Relief Van), ವಿದ್ಯುತ್ ಉಪಕರಣಗಳು, ಸಿಬ್ಬಂದಿ ಲಾಬಿಗಳು, ರನ್ನಿಂಗ್ ರೂಂಗಳು, ರಿಲೇ ರೂಂಗಳು ಹಾಗೂ ಟ್ರ್ಯಾಕ್ ಯಂತ್ರ ಸಿಬ್ಬಂದಿಯ ಶಿಬಿರ ಕೋಚ್ಗಳು ಸೇರಿದಂತೆ ಸಕಲೇಶಪುರ-ಬಂಟ್ವಾಳ ವಿಭಾಗದ ವಿವಿಧ ಮಹತ್ವದ ಸ್ಥಳಗಳಲ್ಲಿ ಸಮಗ್ರ ಪರಿಶೀಲನೆ ನಡೆಸಲಾಯಿತು. ಈ ಸುರಕ್ಷತಾ ಪರಿಶೀಲನೆಯಲ್ಲಿ ಹಳಿಗಳ ಸ್ಥಿತಿ, ಯಾರ್ಡ್ ವಿನ್ಯಾಸ, ಬ್ಯಾಟರಿ ಕೊಠಡಿಗಳು, ಸಿಗ್ನಲಿಂಗ್ ವ್ಯವಸ್ಥೆಗಳು, ನಿಲ್ದಾಣ ಪ್ಯಾನೆಲ್‌ಗಳು, ಟ್ರಾಕ್ಷನ್ ಉಪಕೇಂದ್ರಗಳು, ಸೆಕ್ಷನಿಂಗ್ ಮತ್ತು ಪ್ಯಾರಲೆಲಿಂಗ್ ಪೋಸ್ಟ್‌ಗಳು ಸೇರಿದಂತೆ ವಿವಿಧ ಸುರಕ್ಷತಾ ಸಂಬಂಧಿತ ವ್ಯವಸ್ಥೆಗಳು ಮತ್ತು ಸ್ಥಾಪನೆಗಳನ್ನೂ ಪರಿಶೀಲಿಸಲಾಯಿತು. ಈ ಪರಿಶೀಲನೆಯ ಪ್ರಮುಖ ಉದ್ದೇಶವು ನಿಲ್ದಾಣಗಳು ಮತ್ತು ವಿಭಾಗದ ವಿವಿಧ ಸ್ಥಳಗಳಲ್ಲಿ ನಿಗದಿತ ಸುರಕ್ಷತಾ ನಿಯಮಗಳು ಹಾಗೂ ಕಾರ್ಯಾಚರಣಾ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ರೈಲ್ವೆ ಕಾರ್ಯಾಚರಣೆಯಲ್ಲಿ ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಬಲಪಡಿಸುವುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading