


ಹರಿಹರ ಪಳ್ಳತ್ತಡ್ಕ ಗ್ರಾಮದ ಭೀಮಗುಳಿ ಪುಟ್ಟಣ್ಣ ಗೌಡ ರವರ ಮನೆ ಹಾಗೂ ತೋಟಕ್ಕೆ ಜೂ.07 ರಂದು ರಾತ್ರಿ ಕಾಡಾನೆ ದಾಳಿ ನಡೆಸಿದ್ದು, ಅಪಾರ ಹಾನಿ ಸಂಭವಿಸಿದೆ.
ರಾತ್ರಿ 12 ಗಂಟೆ ಸುಮಾರಿಗೆ ತೋಟಕ್ಕೆ ಬಂದ ಆನೆ ಸುಮಾರು ಅಡಿಕೆ ಮರಗಳನ್ನು ಹಾಳುಗೆಡವಿ ಬಾಳೆ ಗಿಡಗಳನ್ನು ಪುಡಿ ಮಾಡಿದ್ದು, ಆನೆ ದಾಳಿಗೆ ಮನೆಯ ಹಿಂಭಾಗದ ಅಡಿಕೆ ಮರವೊಂದು ಮನೆಯ ಛಾವಣಿಯ ಮೇಲೆ ಬಿದ್ದು ಛಾವಣಿಗೆ ಹಾನಿಯಾಗಿದ್ದು, ಎರಡು ಸಿಮೆಂಟ್ ಶೀಟ್ ಹಾಗೂ ಸುಮಾರು 30 ಹಂಚುಗಳು ಪುಡಿಯಾಗಿದ್ದು, ಮಳೆ ಬಂದರೆ ಮನೆಯೊಳಗೆ ನೀರು ನುಗ್ಗುವ ಸಂಕಷ್ಟ ತಲೆದೂರಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.(ವರದಿ : ಉಲ್ಲಾಸ್ ಕಜ್ಜೋಡಿ)