Ad Widget

ಜಲಜೀವನ್ ಮಿಷನ್ ವತಿಯಿಂದ ಬೀದಿನಾಟಕ

ಪುತ್ತೂರು ಹಾಗೂ ಕಡಬ ತಾಲೂಕಿನ ಉಪ್ಪಿನಂಗಡಿ, ರಾಮಕುಂಜ,ಆಲಂಕಾರು, ಕಾಣಿಯೂರು ಮತ್ತು ಸವಣೂರು ಗ್ರಾಮ ಪಂಚಾಯತಿಗಳಲ್ಲಿ ಜಲಜೀವನ್ ಮಿಷನ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡ ಬೀದಿನಾಟಕ ಯಶಸ್ವಿಯಾಗಿ ನಡೆಯಿತು. ಎಲ್ಲಾ ಪಂಚಾಯತಿಗಳಲ್ಲೂ ಬಹಳಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು , ಪ್ರಯಾಣಿಕರು, ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಬೀದಿನಾಟಕ ವೀಕ್ಷಿಸಿ ಶ್ಲಾಘನೆ ವ್ಯಕ್ತಪಡಿಸಿದರಲ್ಲದೇ ಮಾಹಿತಿ ಪಡೆದುಕೊಂಡರು. ಸಮುದಾಯ ಸಂಸ್ಥೆಯ ಜಿಲ್ಲಾ ಐಇಸಿ ಸಂಯೋಜಕ ಮಹಾಂತೇಶ್ ಹಿರೇಮಠ ಕಾರ್ಯಕ್ರಮ ಆಯೋಜಿಸಿದ್ದರು. ಜೆಜೆಎಮ್ ಗ್ರಾಮ್ಸ್ ಸಂಸ್ಥೆಯ ಕಡಬ ತಾಲೂಕು ಸಂಘಟಕಿ ಸ್ಮಿತಾ ಸಹಕರಿಸಿದರು.

ಇನ್ನು ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಟಕದ ಕೊನೆಯಲ್ಲಿ ಮಾಯದಂತ ಮಳೆ ಬಂತಣ್ಣೋ … ಎಂದು ಕಲಾವಿದರು ಹಾಡು ಹಾಡುತ್ತಿದ್ದಂತೆ ಅಚ್ಚರಿ ಮೂಡಿಸುವಂತೆ ಮಳೆ ಬಂದೇ ಬಿಟ್ಟಿತು. ಜರ್ನಿ ಥಿಯೇಟರ್ ಕಲಾವಿದರು ಅಭಿನಯಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!