Ad Widget

ಕೊಲ್ಲಮೊಗ್ರು :- ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಕೊಟ್ಟಿಗೆಯ ಛಾವಣಿ ದುರಸ್ತಿ

ಕೊಲ್ಲಮೊಗ್ರು ಗ್ರಾಮದ ವೇದಾವತಿ ತೋಟದಮಜಲು ಎಂಬುವವರ ಕೊಟ್ಟಿಗೆಯ ಛಾವಣಿ ಜು.06 ರಂದು ಭಾರೀ ಮಳೆಗೆ ಮುರಿದು ಹೋಗಿದ್ದು, ಮನೆಯವರು ಸೇವಾ ಪ್ರತಿನಿಧಿ ಮುಖಾಂತರ ವಿಪತ್ತು ನಿರ್ವಹಣಾ ಘಟಕಕ್ಕೆ ಮಾಹಿತಿ ನೀಡಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಜು.08 ರಂದು ಮುರಿದು ಹೋಗಿದ್ದ ಕೊಟ್ಟಿಗೆಯ ಛಾವಣಿಯನ್ನು ಸರಿಪಡಿಸಿ ಪ್ಲಾಸ್ಟಿಕ್ ಹೊದಿಸಿ ದುರಸ್ತಿಪಡಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್.ಟಿ.ಎನ್ ಹಾಗೂ ಸದಸ್ಯರುಗಳಾದ ಕುಶಾಲಪ್ಪ ಜಾಲುಮನೆ, ಅಶೋಕ ಮಿತ್ತೋಡಿ, ಮುತ್ತಪ್ಪ ಕಟ್ಟ, ಚಂದ್ರಶೇಖರ ಕೋನಡ್ಕ, ಜಯಮಾಲಾ ತಂಬಿನಡ್ಕ, ಲೀಲಾವತಿ ತಂಬಿನಡ್ಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!