Ad Widget

ಮೇ.28 : ರಂಗಮನೆಯಲ್ಲಿ ಗಾನ ನೃತ್ಯ ಅಕಾಡೆಮಿಯ ಆರೋಹಣ 2022 ಕಾರ್ಯಕ್ರಮ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಮೇ 28 ರಂದು ಸಂಜೆ 4.00 ಕ್ಕೆ  ಗಾನ ನೃತ್ಯ ಅಕಾಡೆಮಿ ಮಂಗಳೂರು ಮತ್ತು ಸುಳ್ಯ ಶಾಖೆಯ ವತಿಯಿಂದ ” ಆರೋಹಣ 2022″ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನಿರ್ದೇಶಕಿ ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ಗಾನ ನೃತ್ಯ ಅಕಾಡೆಮಿಯ ವಿದ್ಯಾರ್ಥಿ ಬಳಗದಿಂದ  ಭರತನಾಟ್ಯ ಶಾಸ್ತ್ರೀಯ ಮತ್ತು ವೈವಿಧ್ಯಮಯ ಲಘು ಶಾಸ್ತ್ರೀಯ ನೃತ್ಯಗಳ ಪ್ರದರ್ಶನ ನಡೆಯಲಿದೆ.  ಹಾಡುಗಾರಿಕೆ ವಿ| ವಿದ್ಯಾಶ್ರೀ ರಾಧಾಕೃಷ್ಣ, ನಟುವಾಂಗ ವಿ| ಅಂಕಿತಾ ರೈ ಹಾಗೂ ವಿ| ಮಂಜುಶ್ರೀ ರಾಘವನ್, ಮೃದಂಗ  ವಿ| ಕಣ್ಣನ್ ಕಾಞಂಗಾಡು, ಕೊಳಲು ಅಭಿಷೇಕ್ ಎಂ.ಬಿ. ಮಂಗಳೂರು ಇವರು ಹಿಮ್ಮೇಳವನ್ನು ನಿರ್ವಹಿಸಲಿದ್ದಾರೆ ಎಂದು ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ, ಖಜಾಂಜಿ ರಾಧಾಕೃಷ್ಣ ಭಟ್ ಹಾಗೂ ರಂಗಮನೆಯ ನಿರ್ದೇಶಕ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!