Ad Widget

ವಿಶಿಷ್ಟ ಸಾಧನೆಗಾಗಿ ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖಾ ವತಿಯಿಂದ ಸನ್ಮಾನ

ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖಾ ವತಿಯಿಂದ ವಿಷೇಶ ಸಾಧನೆಗೈದ ಸುಳ್ಯ ಡಿವಿಷನ್ ನ ಮೂವರು ನಾಯಕರನ್ನು ಸನ್ಮಾನಿಸಲಾಯಿತು.

ಸಂಘಟನಾ ಕಾರ್ಯಾಚರಣೆ ಯ ಮೂಲಕ ಅನನ್ಯ ಸೇವೆಗೈದು, ಇತ್ತೀಚೆಗೆ ಝುಹ್ರೀಸ್ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ಫೈಝಲ್ ಝುಹ್ರಿ ಕಲ್ಲುಗುಂಡಿ, ಸ್ವತಃ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಅದರ ಮೂಲಕ ಒಂದು ಸಾವಿರಕ್ಕೂ ಮಿಕ್ಕ ಅಧ್ಯಯನ ತರಗತಿಗಳ ವೀಡಿಯೋಸ್ ಅಪ್ಲೋಡ್ ಮಾಡಿ ವಿಶೇಷ ಸಾಧನೆಗೈದ ಡಿವಿಷನ್ ಕೋಶಾಧಿಕಾರಿ ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ, ಹಾಗು ಸಾಮಾಜಿಕ ಜಾಲತಾಣದಲ್ಲಿ ನಾಲ್ಕು ವರ್ಷಗಳಿಂದ ‘ಮುಂಜಾನೆಯ ಸಿಂಚನ’ ಎಂಬ ವಿಶಿಷ್ಟ ಬರಹದ ಮೂಲಕ, ವಿಶೇಷ ಸಾಧನೆಗೈದ ಜೀರ್ಮುಕಿ ಜುನೈದ್ ಸಖಾಫಿ ಯವರನ್ನು ಪೈಂಬೆಚ್ಚಾಲಿನಲ್ಲಿ ನಡೆದ ಡಿವಿಷನ್ ರಿವ್ಯೂ ನಲ್ಲಿ ಸ್ಮರಣಿಕೆಯನ್ನು ನೀಡಿ ಪೈಂಬೆಚ್ಚಾಲು ಶಾಖಾ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಜಿಲ್ಲಾ ನಾಯಕರಾದ ಮುಹಮ್ಮದ್ ಅಲಿ ತುರ್ಕಳಿಕೆ, ಶಫೀಖ್ ಮಾಸ್ಟರ್ ತಿಂಗಳಾಡಿ, ಇಮ್ರಾನ್ ರೆಂಜಲಾಡಿ, ಶರೀಫ್ ಬೆಳ್ತಂಗಡಿ, ರಶೀದ್ ಮಾಸ್ಟರ್ ಮಡಂತ್ಯಾರ್, ಸಿದ್ದೀಖ್ ಗೂನಡ್ಕ ಹಾಗು ಡಿವಿಷನ್ ನಾಯಕರೂ ಕಾರ್ಯಕರ್ತರೂ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!