Ad Widget

ಬೆಳ್ಳಾರೆ : ಕ್ಷಯ ಮುಕ್ತ ಭಾರತ ರಂಗ ತರಬೇತಿ – ಗಣ್ಯರ ಭೇಟಿ

ಜೇಸಿಐ ಬೆಳ್ಳಾರೆ, ಜೂನಿಯರ್ ಜೆಸಿ ವಿಭಾಗ ಬೆಳ್ಳಾರೆ, ಕ್ಷಯ ಚಿಕಿತ್ಸಾ ಘಟಕ-ಆರೋಗ್ಯ ಇಲಾಖೆ ಸುಳ್ಯ ಇದರ ನೇತೃತ್ವದಲ್ಲಿ ಬೆಳ್ಳಾರೆ ಜೇಸಿ ಭವನದಲ್ಲಿ ನಡೆಯುತ್ತಿರುವ ಕ್ಷಯ ಮುಕ್ತ ಭಾರತ ಕಿರುಚಿತ್ರದ 6ನೇ ರಂಗ ತರಬೇತಿ ಶಿಬಿರಕ್ಕೆ ಬೆಳ್ತಂಗಡಿ ತಾಲೂಕು ಆಹಾರ ನಿರೀಕ್ಷಕರಾದ ವಿಶ್ವ ಕೆ ಹರಿಹರ ಪಲ್ಲತ್ತಡ್ಕ, ಸುಳ್ಯ ಸುದ್ದಿ ಪತ್ರಿಕೆ ವರದಿಗಾರ ಈಶ್ವರ ವಾರಣಾಸಿ, ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ಆರಿಫ್ ಬೆಳ್ಳಾರೆ, ರಂಗ ಕಲಾವಿದ ಶಿವರಾಮ್ ಕಲ್ಮಡ್ಕ, ಜೂನಿಯರ್ ಜೇಸಿ ಪೂರ್ವಾಧ್ಯಕ್ಷ ಶರತ್ ಕುಮಾರ್ ಮತ್ತು ಮಹೇಶ್ ಭೇಟಿ ನೀಡಿ ಕಲಾ ತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜೇಸಿ ಅಧ್ಯಕ್ಷರಾದ ಪದ್ಮನಾಭ ಕಲಾಸುಮ ಸ್ವಾಗತಿಸಿ, ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ವಂದಿಸಿದರು. ರಂಗಕರ್ಮಿ ಕೃಷ್ಣಪ್ಪ ಬಂಬಿಲ, ನಾಟಕಕಾರ ಸತೀಶ್ ಕಕ್ಕೆಪದವು, ಜೇಸಿ ಕಾರ್ಯದರ್ಶಿ ಜಗದೀಶ್ ರೈ ಪೆರುವಾಜೆ, ಖಜಾಂಜಿ ಜೇಸಿ ನಿರ್ಮಲಾ ಜಯರಾಮ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಲೋಕೇಶ್ ತಂಟೆಪ್ಪಾಡಿ ಮತ್ತು ಚೈತ್ರಾ ಲೋಕೇಶ್ ದಂಪತಿಗಳ ಪುತ್ರಿ ಅವನಿ ತಂಟೆಪ್ಪಾಡಿ ಕೃಷ್ಣವೇಷಧಾರಿಯಾಗಿ ಎಲ್ಲರ ಗಮನ ಸೆಳೆದಳು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!