ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ತಕರ ಹಾಗೂ ಕೊರೊನ ಕಾರ್ಯಪಡೆ ಸಮಿತಿ ಸಭೆ ಮೇ ೨೦ ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಪಂಚಾಯತ್ ಅಧ್ಯಕ್ಷ ದಿವಾಕರ ಮುಂಡೋಡಿ, ಪಿಡಿಒ ಗುರುಪ್ರಸಾದ್ ಹಾಗೂ ದೇವಚಳ್ಳ ಪಂಚಾಯತ್ ವ್ಯಾಪ್ತಿಯ ವರ್ತಕರು, ಕಾರ್ಯಪಡೆ ಸಮಿತಿ ಸದಸ್ಯರು ಭಾಗವಹಿಸಿದ್ದರು.
ಸಭೆಯಲ್ಲಿ ಇನ್ನು ಮುಂದೆ ವರ್ತಕರು ಅಂಗಡಿಗಳನ್ನು ಸಂಜೆ ೬ ಗಂಟೆವರೆಗೆ ತೆರೆಯುವುದಾಗಿ ನಿರ್ಣಯಿಸಲಾಯಿತು. ಅಲ್ಲದೇ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಪಂಚಾಯತ್ ಅನುಮತಿ ತೆಗೆದುಕೊಳ್ಳುವಂತೆ ನಿರ್ಣಯ ಕೈಗೊಳ್ಳಲಾಯಿತು.
- Saturday
- September 21st, 2024