Ad Widget

ಹರಿಹರ ಪಲ್ಲತ್ತಡ್ಕ : ಶ್ರೀ ಹರಿಹರೇಶ್ವರ ದೇವರ ಭಕ್ತಿ ಗೀತೆ ಬಿಡುಗಡೆ

ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವರ ಭಕ್ತಿಗೀತೆಯನ್ನು ಆ.20ರ ವರಮಹಾಲಕ್ಷ್ಮಿ ಹಬ್ಬದ ದಿನದಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ತಾರಾ ಮಲ್ಲಾರ, ಉಷಾ ಪ್ರಭಾಕರ, ಜಯಪ್ರಕಾಶ್ ಕಲ್ಲೇರಿಕಟ್ಟ, ಸಂತೋಷ್ ಗಡಿಕಲ್ಲು, ಪ್ರೀಯಾ ಕಲ್ಲೇಮಠ, ಶ್ರೀಕಾಂತ್ ಪಂಜ, ಗಣೇಶ್ ಮಂಚಿಕಟ್ಟೆ, ರಾಮಣ್ಣ ಮಂಚಿಕಟ್ಟೆ, ದಯನಂದ ಏನೆಕಲ್ಲು, ಜಯಕುಮಾರ್ ಕಲ್ಲೇರಿಕಟ್ಟ, ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿವರ್ಗ, ಭಕ್ತಾದಿಗಳು ಉಪಸ್ಥಿತರಿದ್ದರು.
ಈ ಭಕ್ತಿಗೀತೆಯ ಸಾಹಿತ್ಯವನ್ನು ಪಂಚವರ್ಣ ಖ್ಯಾತಿಯ ರಕ್ಷಿತ್ ಮಂಚಿಕಟ್ಟೆ ಬರೆದಿದ್ದು, ಕನ್ನಡ ಕೋಗಿಲೆ ಖ್ಯಾತಿಯ ಅಪೇಕ್ಷಾ.ಪೈ ಹಾಡಿದ್ದಾರೆ. ಸಂಗೀತ ನಿರ್ದೇಶನ ಮಿಥುನ್ ರಾಜ್ ವಿದ್ಯಾಪುರ, ಪ್ರೋಗ್ರಾಮಿಂಗ್ ಅಶ್ವಿನ್ ಪುತ್ತೂರು ಹಾಗೂ ದ್ವನಿ ಮುದ್ರಣವನ್ನು ಶ್ರೀ ರಾಜ್ ಮ್ಯೂಸಿಕ್ ವಲ್ಡ್ ಕಡಬ ಮಾಡಿದ್ದು , ಛಾಯಾಗ್ರಾಹಣ ಉಲ್ಲಾಸ್ ಹರಿಹರ ಪಲ್ಲತ್ತಡ್ಕ ಮಾಡಿದ್ದಾರೆ. ಜಯಂತ್ ಹರಿಹರ, ವಿನೀತ್ ಚೀಮುಳ್ಳು ಹಾಗೂ ಗಿರೀಶ್ ಕಾಂತುಕುಮೇರಿ ಸಹಕಾರ ನೀಡಿದ್ದಾರೆ.

✍ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!