Ad Widget

ಕಾಣಿಯೂರು: ವಿನೂತನ ಹುಟ್ಟು ಹಬ್ಬಕ್ಕೆ ಸಾಕ್ಷಿಯಾದ ಚಾರ್ವಾಕದ ಯುವಕ

ಕಡಬ ತಾಲೂಕಿನ ಕಾಣಿಯೂರಿನ ಚಾರ್ವಾಕದ ಯುವಕ ರಾಜೇಶ್ ತನ್ನ ಹುಟ್ಟು ಹಬ್ಬವನ್ನು ವಿನೂತನ ರೀತಿಯಲ್ಲಿ ಆಚರಿಸಿಕೊಂಡು ಬಡ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಪ್ರತಿಯೊಬ್ಬರೂ ಹುಟ್ಟು ಹಬ್ಬವನ್ನು ಒಂದು ರೀತಿಯಲ್ಲಿ ಮೋಜು ಮಸ್ತಿಯೊಂದಿಗೆ ಆಚರಿಸುತ್ತಾರೆ. ಆದರೆ ಅದಕ್ಕೆ ಅಪವಾದವೆಂಬಂತೆ ಚಾರ್ವಾಕದ ಯುವಕ ಶ್ರೀ ದುರ್ಗಾ ಅರ್ಥ್ ಮೂವರ್ಸ್ ಮಾಲೀಕ ರಾಜೇಶ್ ಚಾರ್ವಾಕ ತೀರ ಬಡಕುಟುಂಬದ ಶೇಖರ ಪೂಜಾರಿ ಅವರ ಮನೆಯ ಸಣ್ಣ ಜಮೀನಿನಲ್ಲಿ 350 ಅಡಿಕೆ ಗುಂಡಿ ತೆಗಿಸಿ ಸ್ವತಃ ಗಿಡ ನಾಟಿ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರ ಪ್ರಯತ್ನಕ್ಕೆ ತನ್ನ ಸ್ನೇಹಿತರಾದ ದೇವಿಪ್ರಸಾದ್ ಕಲ್ಪಡ, ಪುನೀತ್ ಕಲ್ಪಡ, ಆಶಿಕ್ ಕಂಪ, ದಾಮೋದರ ಸವಣೂರು, ಚೇತನ್ ಪ್ರಸಾದ್ ಚಾರ್ವಾಕ, ದಿನೇಶ್, ಶ್ರೇಯಸ್, ಮಹೇಶ್, ಶರತ್, ಯೋಗೀಶ್, ಕೃಪಾಂಕ, ವಿಖ್ಯಾತ ಅಗಳಿ ಸಾಕ್ಷಿಯಾಗಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!