ದ್ವಾದಶ ರಾಶಿಗಳ ದಿನ ಭವಿಷ್ಯ


ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197
ದಿನಾಂಕ:13/04/2026 ಸೋಮವಾರ
*01,🐏ಮೇಷರಾಶಿ🐏*
📃,ಸಾಮಾಜಿಕ ಕಾರ್ಯಕ್ರಮದಲ್ಲಿ, ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ ಮತ್ತು ನಿಮಗೆ ಹೊಸ ಹುದ್ದೆಯನ್ನು ನೀಡಬಹುದು, ಆದರೆ ಕೆಲವು ವಿರೋಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ. ಹಣಕಾಸಿನ ವ್ಯವಹಾರಗಳು ಕೂಡಿ ಬರುತ್ತವೆ. ದೀರ್ಘಾವಧಿಯ ಸಾಲ ಸ್ವಲ್ಪ ಮಟ್ಟಿಗೆ ಪರಿಹಾರವಾಗುತ್ತದೆ. ಹೊಸ ಉದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ. ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ,
ಗಮನಿಸಿ:- ಇಂದು ಮನೆಯಲ್ಲಿ ಶುಭ ಕಾರ್ಯಗಳ ಪ್ರಸ್ಥಾಪವಿರುತ್ತದೆ,
ಪರಿಹಾರ:-ಶ್ರೀ ಗಣಪತಿ ದೇವರಿಗೆ ಗರಿಕೆ ನೀಡಿ,
*02,🐂ವೃಷಭರಾಶಿ🐂*
📃,ಈ ದಿನ ಯಾವುದಾದರು ಒಂದು ಕ್ಷೇತ್ರ ದರ್ಶನ ಮಾಡುವಿರಿ, ಕುಟುಂಬದ ವಿಚಾರಗಳಿಗೆ ಸಮಯವನ್ನು ಕೊಡುತ್ತೀರ ಹಾಗು ಕುಟುಂಬದ ವಿಚಾರಗಳಿಗೆ ಹಣ ಖರ್ಚು ಮಾಡುತ್ತೀರಾ, ಕೆಲಸದ ಒತ್ತಡದಿಂದ ಮೈಕೈ ನೋವು ಬರುವ ಸಾಧ್ಯತೆ ಇದೆ. ಬಂಧುಗಳು ಕಷ್ಟದಲ್ಲಿದ್ದಾರೆಂದು ಸಹಾಯ ಮಾಡಲು ಹೋಗಿ ನೀವೇ ಸಮಸ್ಯೆಗೆ ಸಿಲುಕಿಕೊಳ್ಳುವಿರಿ,
ಗಮನಿಸಿ:- ಇಂದು ನೀವು ಸ್ನೇಹಿತರು ಮತ್ತು ಬಂಧುಗಳ ಲೇವಾದೇವಿ ವ್ಯವಹಾರದಲ್ಲಿ ಮೂಗು ತೂರಿಸಬೇಡಿ,
ಪರಿಹಾರ:-ದುರ್ಗಾ ದೇವಿ ಪ್ರಾರ್ಥನೆಯಿಂದ ಶುಭವಾಗುವುದು,
*03,👥ಮಿಥುನ ರಾಶಿ👥*
📃,ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ, ಸಹೋದರರೊಂದಿಗಿನ ಸ್ಥಿರಾಸ್ತಿ ಸಮಸ್ಯೆಗಳು ದೂರವಾಗುತ್ತವೆ.ಹೊಸ ವ್ಯವಹಾರಕ್ಕೆ ಸಂಬಂಧಿಸಿದಂತೆ ಆತ್ಮೀಯ ಸ್ನೇಹಿತರಿಂದ ಸಲಹೆಗಳು ದೊರೆಯುತ್ತವೆ.ಹೊಸ ಆಹ್ವಾನಗಳು ಬರುತ್ತವೆ.ವ್ಯಾಪಾರ ವಿಸ್ತರಣೆ ಕಾರ್ಯಗಳನ್ನು ವೇಗಗೊಳಿಸುತ್ತೀರಿ,
ಗಮನಿಸಿ:- ಇಂದು ಉದ್ಯೋಗಗಳಲ್ಲಿನ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ,
ಪರಿಹಾರ:-ಶ್ರೀ ಹನುಮಾನ್ ಚಾಲೀಸಾ ಪಠಿಸಿ,
*04,🦀ಕಟಕ ರಾಶಿ🦀*
📃,ಈ ದಿನ ನಿಮಗೆ ಶುಭ ಸುದ್ದಿಯೊಂದಿಗೆ ಆರಂಭವಾಗಲಿದೆ ನಿಮ್ಮ ಸಕಾರಾತ್ಮಕ ಚಿಂತನೆಯು ನಿಮ್ಮ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ಮಕ್ಕಳ ಅಧ್ಯಯನ ಪರೀಕ್ಷೆ ಮತ್ತು ಸ್ಪರ್ಧೆಗಳ ಬಗ್ಗೆ ಸಂಪೂರ್ಣ ಗಮನ ಕೊಡಿ. ನಿಮ್ಮ ಮುಂದಿನ ಕನಸುಗಳ ಬಗ್ಗೆ ಯಾರಿಗೂ ಹೇಳಬೇಡಿ. ಕಚೇರಿಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ವಿನೋದದಿಂದ ಸಮಯವನ್ನು ಕಳೆಯಬಹುದು,
ಗಮನಿಸಿ:-ಈ ದಿನ ಯಾರಾದರೂ ನಿರ್ಗತಿಕರಿಗೆ ಸಹಾಯ ಮಾಡಿ,
ಪರಿಹಾರ:-ತಂದೆ ತಾಯಿಯ ಆಶೀರ್ವಾದವನ್ನು ತಪ್ಪದೆ ಪಡೆಯಿರಿ,
*05,🦁ಸಿಂಹ ರಾಶಿ🦁*
📃,ಇಂದು ನಿಮಗೆ ಸ್ವಲ್ಪ ಚಿಂತೆಯ ದಿನವಾಗಲಿದೆ. ನಿಮ್ಮ ಶತ್ರುಗಳು ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ತಡೆಯಲು ಪ್ರಯತ್ನಿಸಬಹುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ, ಆದರೆ ನೀವು ಕೆಲವು ಹೂಡಿಕೆಗೆ ಸಂಬಂಧಿಸಿದ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ನೀವು ಧಾರ್ಮಿಕ ಪ್ರವಾಸಕ್ಕೆ ಹೋಗಲು ತಯಾರಿ ನಡೆಸುತ್ತಿದ್ದರೆ, ಅದು ಒಳ್ಳೆಯದು,
ಗಮನಿಸಿ:- ಇಂದು ನೀವು ಕುಟುಂಬದ ಯಾವುದೇ ಸದಸ್ಯರೊಂದಿಗೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಬಹುದು,
ಪರಿಹಾರ:- ಶ್ರೀ ದುರ್ಗಾ ಸ್ತೋತ್ರ ಪಠಿಸಿ ಶುಭವಾಗುವುದು,
*06,👩‍🦳ಕನ್ಯಾ ರಾಶಿ👩‍🦳*
📃,ವ್ಯವಹಾರಕ್ಕೆ ಸಂಬಂಧಿಸಿದಂತೆ ಜನರೊಂದಿಗೆ ಸಂಪರ್ಕ ಬೆಳೆಸುವುದು ಉತ್ತಮ. ನೀವು ಇಂದು ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಆರೋಗ್ಯ ಗಮನಿಸಿ, ಪಾಲುದಾರಿಕೆ ವ್ಯವಹಾರ ಉದ್ಯೋಗದಲ್ಲಿ ಅಭಿವೃದ್ಧಿ ತೋರಿದರು ತಾಳ್ಮೆಯಿಂದ ವ್ಯವಹರಿಸಿ, ದೂರ ಪ್ರಯಾಣ ಸಂಭವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸುವ ಕಾಲ, ಗಮನಿಸಿ:- ಇಂದು ಮಹಿಳಾ ಕಾರ್ಮಿಕರಿಗೆ ಹೆಚ್ಚು ಲಾಭ ಸಿಗಲಿದೆ,
ಪರಿಹಾರ:-ಆಂಜನೇಯ ಸ್ವಾಮಿಯನ್ನು ಪೂಜಿಸಿ,
*07,⚖️ತುಲಾ ರಾಶಿ⚖️*
📃,ಅನ್ಯಾಯವನ್ನು ಕಂಡು ಸಹಿಸಲಾರದ ನೀವು ನಿಮ್ಮ ಎದುರಾಳಿಯನ್ನು ಎದುರಿಸಲು ಹೆಚ್ಚಿನ ಆತ್ಮಸ್ಥೈರ್ಯದಿಂದ ಹೋರಾಟ ಮಾಡುವಿರಿ ಮತ್ತು ಅದರಲ್ಲಿ ಜಯವನ್ನು ಸಂಪಾದಿಸುವಿರಿ, ಜನರು ಸಮಸ್ಯೆಗಳೊಡನೆ ನಿಮ್ಮನ್ನು ಸಮೀಪಿಸಿದರೆ ಅವರನ್ನು ನಿರ್ಲಕ್ಷಿಸಿ. ಇಂದು ನೀವು ನಿಮ್ಮ ಕನಸುಗಳ ಕೆಲಸವನ್ನು ಮಾಡಬಹುದು,
ಗಮನಿಸಿ:-ಇಂದುಸಾಮಾನ್ಯಕ್ಕಿಂತ ಸ್ವಲ್ಪ ಮುಂಚಿತವಾಗಿ ಮಲಗಲು ಪ್ರಯತ್ನಿಸಿ,
ಪರಿಹಾರ:-ಶ್ರೀ ಕಾಲಭೈರವ ಸ್ವಾಮಿಯನ್ನು ಪೂಜಿಸಿ,
*08,🦂ವೃಶ್ಚಿಕ ರಾಶಿ🦂*
📃,ಸಂಬಂಧಿಕರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಆರೋಗ್ಯ ಸಮಸ್ಯೆಗಳು ಸ್ವಲ್ಪ ನೋವುಂಟು ಮಾಡುತ್ತವೆ. ಕೈಗೆತ್ತಿಕೊಂಡ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ. ಆರ್ಥಿಕ ಪರಿಸ್ಥಿತಿ ನಿಧಾನವಾಗುತ್ತದೆ. ಹಠಾತ್ ಪ್ರಯಾಣದಿಂದ ದೈಹಿಕ ಶ್ರಮ ಉಂಟಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನಿರೀಕ್ಷಿತ ಕಿರಿಕಿರಿಗಳು ಉಂಟಾಗುತ್ತವೆ.
ನಿಮ್ಮ ಪೋಷಕರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ,
ಗಮನಿಸಿ:- ಇಂದು ವ್ಯಾಪಾರಸ್ಥರಿಗೆ ಶುಭ ದಿನವಾಗಲಿದೆ,
ಪರಿಹಾರ:-ತಾಯಿ ಶ್ರೀ ಲಲಿತಾ ತ್ರಿಪುರ ಸುಂದರಿಯನ್ನು ಪ್ರಾರ್ಥಿಸಿ,
*09,🏹ಧನುಸ್ಸು ರಾಶಿ🏹*
📃,ಮಿತ್ರರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ವೃತ್ತಿ ಮತ್ತು ವ್ಯಾಪಾರಗಳು ವಿಶೇಷವಾಗಿ ಕಾರ್ಯ ನಿರ್ವಹಿಸುತ್ತದೆ. ನಿರುದ್ಯೋಗಿಗಳಿಗೆ ಹಿರಿಯರ ಕೃಪೆಯಿಂದ ಹೊಸ ಅವಕಾಶಗಳು, ದೊರೆಯುತ್ತವೆ ಕೈಗೊಂಡ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ,
ಗಮನಿಸಿ:- ಇಂದು ನಿಮ್ಮ ಗೌರವ ಪ್ರತಿಷ್ಟೆಗಳು ಹೆಚ್ಚಾಗುತ್ತದೆ,
ಪರಿಹಾರ:-ಶ್ರೀದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ,
*10,🐊ಮಕರ ರಾಶಿ🐊*
📃,ಇಂದು ಧರ್ಮದ ಕಡೆಗೆ ಒಲವು ತೋರುತ್ತೀರಿ.ಗೃಹ ಸಂತೋಷ ಹೆಚ್ಚಲಿದೆ. ಅನಾರೋಗ್ಯದ ಸಮಸ್ಯೆಗಳು ಬಾಧಿಸುತ್ತವೆ.ಪ್ರಮುಖಕಾರ್ಯಗಳನ್ನು, ಮುಂದೂಡುವುದು ಉತ್ತಮ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿವಿಶೇಷವಾಗಿ ಭಾಗವಹಿಸುತ್ತೀರಿ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ವ್ಯವಹಾರದ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು,
ಗಮನಿಸಿ:- ಇಂದು ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ,
ಪರಿಹಾರ:-ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ,
*11,⚱️ಕುಂಭ ರಾಶಿ⚱️*
📃,ಹಣಕಾಸಿನ ಪರಿಸ್ಥಿತಿ ಅಸ್ತವ್ಯಸ್ತವಾಗಿರುತ್ತದೆ. ಸಹೋದರರೊಂದಿಗೆ ವಿವಾದ ಉಂಟಾಗುತ್ತದೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಕೈಗೊಂಡ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ,
ಗಮನಿಸಿ:- ಇಂದು ಉದ್ಯೋಗದಲ್ಲಿ ಅಧಿಕಾರಿಗಳ ಒತ್ತಡ ಹೆಚ್ಚಾಗುತ್ತದೆ,
ಪರಿಹಾರ:-ನಿಮ್ಮ ಕುಲದೇವರ ದರ್ಶನ ಮಾಡಿ,
*12,🐬ಮೀನ ರಾಶಿ🐬*
📃,ಬೆಲೆಬಾಳುವ ವಸ್ತ್ರಆಭರಣಗಳನ್ನು ಇಂದು ನೀವು ಖರೀದಿಸಬಹುದು. ನಿರುದ್ಯೋಗ ಪ್ರಯತ್ನಗಳಲ್ಲಿ ಧನಾತ್ಮಕ ಫಲಿತಾಂಶಗಳಿರುತ್ತವೆ ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಕೈಗೊಂಡ ಕೆಲಸದಲ್ಲಿ ಕಾರ್ಯಸಿದ್ಧಿ ಉಂಟಾಗುತ್ತದೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ. ಕೆಲವು ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ,
ಗಮನಿಸಿ:-ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳಿರುತ್ತವೆ,
ಪರಿಹಾರ:- ನವಗ್ರಹ ಪ್ರಾರ್ಥನೆ ಮಾಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading