Ad Widget

ಹರಿಹರ ಪಲ್ಲತ್ತಡ್ಕ : ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟನೆ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಮಾ.14 ರಿಂದ 20 ರವರೆಗೆ ನಡೆಯಲಿರುವ ಉಚಿತ ಯೋಗ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಮಾ.14 ರಂದು ನಡೆಯಿತು. ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿದರು. ಲಯನ್ಸ್...

ಹರಿಹರ ಪಲ್ಲತ್ತಡ್ಕ : ಬಡ ಕುಟುಂಬದ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠ ನಿವಾಸಿಗಳಾದ ಶಿವರಾಮ ಹಾಗೂ ಅವರ ಸಹೋದರಿ ರತ್ನಾವತಿ ಅವರು ಅಶಕ್ತರಾಗಿದ್ದು, ಅವರು ವಾಸಿಸುವ ಮನೆ ಶಿಥಿಲಗೊಂಡು ವಾಸಿಸಲು ಯೋಗ್ಯವಿಲ್ಲದೇ ಇದ್ದು, ಇದನ್ನು ಗಮನಿಸಿದ ಹರಿಹರ ಪಲ್ಲತ್ತಡ್ಕದ ಸಚಿನ್ ಕ್ರೀಡಾ ಸಂಘ ಪ್ರಮುಖ ದಾನಿಗಳ ಸಹಕಾರದಿಂದ ಅವರಿಗೆ ನೂತನ ಮನೆ ನಿರ್ಮಿಸಿ ಕೊಡಲು ನಿರ್ಧರಿಸಿದ್ದು, ಮಾ.13 ರಂದು ಭೂಮಿ ಪೂಜೆ ನೆರವೇರಿಸಲಾಯಿತು....
Ad Widget

ಹರಿಹರ ಪಲ್ಲತಡ್ಕ; ನಿವೇದಿತಾ ಸಂಚಾಲನ ಸಮಿತಿ ರಚನೆ

ಹರಿಹರ ಪಲ್ಲತ್ತಡ್ಕ ಗ್ರಾಮದ ನಿವೇದಿತಾ ಸಂಚಾಲನ ಸಮಿತಿ ಸಭೆ ನಡೆಯಿತು. ಸಂಚಾಲಕರಾಗಿ ಶ್ರೀಮತಿ ಲತಾ ಹಿಮ್ಮತ್, ಸಹ ಸಂಚಾಲಕರಾಗಿ ಶ್ರೀಮತಿ ಹೇಮಾ  ಗಿರೀಶ್ ಆಯ್ಕೆಯಾದರು. ಸದಸ್ಯರುಗಳಾಗಿ  ಶ್ರೀಮತಿ ಗಾಯತ್ರಿ ಮುಂಡಾಜೆ, ಶ್ರೀಮತಿ ಪದ್ಮಾವತಿ ಕಲ್ಲೇ ಮಠ, ಶ್ರೀಮತಿ ವೀಣಾ ಶರತ್, ಶ್ರೀಮತಿ ಗಿರಿಜಾ ಗುಂಡಿಹಿತ್ಲು, ಮತ್ತು ಗೀತಾ ಮುಂಡಾಜೆ ಆಯ್ಕೆಯಾದರು. ಈ ಸಂದರ್ಭದಲ್ಲಿ ಅನುಷ್ಠಾನ ಸಮಿತಿಯ...

ಮಾ.16; ಕೇಂದ್ರ ಚುನಾವಣಾ ಆಯೋಗದಿಂದ ಪತ್ರಿಕಾಗೋಷ್ಠಿ

ಲೋಕಸಭೆ ಚುನಾವಣೆ 2024 ಇದರ ವತಿಯಿಂದ ಕೇಂದ್ರ ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯು ಮಾ.16ರಂದು ಸಂಜೆ 3ಗಂಟೆಗೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎರಡು ವಾರಗಳಿಂದ ಗಾಂಧಿನಗರ ಸುತ್ತಮುತ್ತಲು ಗಬ್ಬು ವಾಸನೆ_ ಪರಿಸರವಾಸಿಗಳಿಗೆ ಆತಂಕ!

ಗಾಂಧಿನಗರದ ಯೂನಿಯನ್ ಬ್ಯಾಂಕ್ ಪಕ್ಕದಲ್ಲಿರುವ ಡೆಲ್ಮಾ ಕಾಂಪ್ಲೆಕ್ಸ್ ಎದುರು ಒಳಚರಂಡಿಯ ಹಾಸುಗಲ್ಲು ಜಾರಿ ಚರಂಡಿಯೊಳಗೆ ಬಿದ್ದು ಒಳಚರಂಡಿ ತೆರೆದುಕೊಂಡ ಸ್ಥಿತಿಯಲ್ಲಿದೆ. ಇಲ್ಲಿನ ಪರಿಸರವಾಸಿಗಳಿಗೆ ಹಾಗೂ ಓಡಾಡುವ ಜನರಿಗೆ ಗಬ್ಬು ವಾಸನೆಯಿಂದ ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಪರಿಸ್ಥಿತಿಯುಂಟಾಗಿದೆ. ಇಲ್ಲಿ ನೊಣ,ಸೊಳ್ಳೆ, ನಾಯಿಗಳ ಕೇಂದ್ರವಾಗಿ ಮಾರ್ಪಟ್ಟಿದ್ದರಿಂದ ರೋಗಗಳು ಬರುವ ಸಾದ್ಯತೆ ಹೆಚ್ಚಾಗಿದೆ. 2 ವಾರಗಳಿಂದ ಒಳಚರಂಡಿಯ ಹಾಸುಗಲ್ಲು ಜಾರಿದ...

ಎರಡು ವಾರಗಳಿಂದ ಗಾಂಧಿನಗರ ಸುತ್ತಮುತ್ತಲು ಗುಬ್ಬು ವಾಸನೆ- ಪರಿಸರವಾಸಿಗಳಿಗೆ ಆತಂಕ!

ಗಾಂಧಿನಗರದ ಯೂನಿಯನ್ ಬ್ಯಾಂಕ್ ಪಕ್ಕದಲ್ಲಿರುವ  ಡೆಲ್ಮಾ ಕಾಂಪ್ಲೆಕ್ಸ್  ಎದುರು ಒಳಚರಂಡಿಯ ಹಾಸುಗಲ್ಲು ಜಾರಿ ಚರಂಡಿಯೊಳಗೆ ಬಿದ್ದು ಒಳಚರಂಡಿ ತೆರೆದುಕೊಂಡ ಸ್ಥಿತಿಯಲ್ಲಿದೆ. ಇಲ್ಲಿನ ಪರಿಸರವಾಸಿಗಳಿಗೆ ಹಾಗೂ ಓಡಾಡುವ ಜನರಿಗೆ ಗಬ್ಬು ವಾಸನೆಯಿಂದ ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಪರಿಸ್ಥಿತಿಯುಂಟಾಗಿದೆ. ಇಲ್ಲಿ ನೊಣ, ಸೊಳ್ಳೆ, ನಾಯಿಗಳ ಕೇಂದ್ರವಾಗಿ ಮಾರ್ಪಟ್ಟಿದ್ದರಿಂದ ರೋಗಗಳು ಬರುವ ಸಾದ್ಯತೆ ಹೆಚ್ಚಾಗಿದೆ.  2 ವಾರಗಳಿಂದ ಒಳಚರಂಡಿಯ ಹಾಸುಗಲ್ಲು...

ಸೋಣಂಗೇರಿ; ಶಾಸಕಿ ಭಾಗೀರಥಿ ಮುರುಳ್ಯ ಭೇಟಿ- “ಸ್ಥಳೀಯ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ”

ಜಾಲ್ಸೂರು ಗ್ರಾಮದ ಸೋಣಂಗೇರಿಗೆ ಭೇಟಿ ನೀಡಿದ ಶಾಸಕಿ ಭಾಗೀರಥಿ ಮುರುಳ್ಯರವರು ಸ್ಥಳೀಯ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಶಾಸಕಿ ಭಾಗೀರಥಿ ಮುರುಳ್ಯರವರಿಗೆ ಸನ್ಮಾನ: ಮಾ.14ರಂ ದು ಸೋಣಂಗೇರಿ ಅಂಗನವಾಡಿ ಕೇಂದ್ರದಲ್ಲಿ ಸ್ಥಳೀಯ ಸ್ತ್ರೀಶಕ್ತಿ ಸಂಘಗಳಾದ ಬೆಳಕು ಮತ್ತು ಸ್ವರ್ಣಶ್ರೀ ಗುಂಪು ಹಾಗೂ ಸ್ಥಳೀಯ ಶ್ರೀಕೃಷ್ಣ ಭಜನಾ ಮಂದಿರದ ವತಿಯಿಂದ ಶಾಸಕಿ ಭಾಗೀರಥಿ ಮುರುಳ್ಯ...

ಅರಂತೋಡು: ಕೊಡೆಂಕಿರಿ – ಉದಯನಗರ ಬಂಡಡ್ಕ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

ಅರಂತೋಡು ಗ್ರಾ. ಪಂ. ವ್ಯಾಪ್ತಿಯ ಕೊಡೆಂಕಿರಿ – ಉದಯನಗರ – ಬಂಡಡ್ಕ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಾ.13ರಂದು   ಶಾಸಕಿ ಭಾಗೀರಥಿ ಮುರುಳ್ಯ ಅವರು ನೆರವೇರಿಸಿದರು.ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಆಡ್ತಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಶ್ರೀಮತಿ ಮಾಲಿನಿ ವಿನೋದ್, ಪುಷ್ಪರಾಜ್ ಕೊಡೆಂಕಿರಿ, ವೆಂಕಟ್ರಮಣ ಪೆತ್ತಾಜೆ, ಆರಂತೋಡು -ತೊಡಿಕಾನ ಸಹಕಾರಿ...

ಅಪ್ರಾಪ್ತೆಯ ಮೇಲೆ ಖಾಸಗಿ ಬಸ್ಸ್ ನಿರ್ವಾಹಕನಿಂದ ತಡರಾತ್ರಿ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ , ಯುವಕನ ಬಂಧನ.‌

ಸುಳ್ಯದ ಮಂಡೆಕೋಲಿನಲ್ಲಿ ತಡರಾತ್ರಿ ಯುವಕನೊಬ್ಬ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕುರಿತು ದೂರು ದಾಖಲಾದ ಘಟನೆ ವರದಿಯಾಗಿದೆ. ಮಾ13ರ ತಡರಾತ್ರಿ ಸುಮಾರು ಒಂದು ಗಂಟೆಯ ಆಸುಪಾಸಿನಲ್ಲಿ ಈ ಘಟನೆ ನಡೆದಿದೆ. ಯುವಕನು ಅಪ್ರಾಪ್ತೆ ಯುವತಿಯ ಮನೆಯೊಳಗೆ ಪ್ರವೇಶಿಸಿ ದೌರ್ಜನ್ಯ ಕೃತ್ಯ ಎಸಗಲು ಯತ್ನಿಸಿದಾಗ ಯುವತಿ ಬೊಬ್ಬೆ ಹೊಡೆದುದರಿಂದ ಮನೆಯವರೆಲ್ಲ ಎಚ್ಚರಿಕೆಯಾಗಿ ಯುವತಿಯ ಕೊಠಡಿಗೆ ಬಂದಾಗ...

ಸುಳ್ಯ : ಮೆಸ್ಕಾಂ ಶಾಖಾ ಕಛೇರಿ ಕೇರ್ಪಳಕ್ಕೆ ಸ್ಥಳಾಂತರ

ಸುಳ್ಯದ ಅಂಬಟೆಡ್ಕ ಬಳಿಯಿಂದ ಮೆಸ್ಕಾಂ ನ ಸುಳ್ಯ ಶಾಖಾ ( sullia section office) ಕಛೇರಿಯನ್ನು ಕೇರ್ಪಳದಲ್ಲಿರುವ ಮೆಸ್ಕಾಂ ಕಾಟ್ರಾಸ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. 110 ಕೆವಿ ಕಾಮಗಾರಿ ಆರಂಭಗೊಂಡಿರುವುದರಿಂದ ಹಳೆಯ ಕಾಟ್ರಾಸ್ ಕಟ್ಟಡ, ಸುಳ್ಯ ಸೆಕ್ಷನ್ ಆಫೀಸ್ ಕಟ್ಟಡ ತೆರವುಗೊಳಿಸುವ ಉದ್ದೇಶದಿಂದ ಕೇರ್ಪಳಕ್ಕೆ ಸ್ಥಳಾಂತರಗೊಳಿಸಲಾಗಿದೆ.
Loading posts...

All posts loaded

No more posts

error: Content is protected !!