Ad Widget

ಹರಿಹರ ಪಲ್ಲತ್ತಡ್ಕ : ಬಡ ಕುಟುಂಬದ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠ ನಿವಾಸಿಗಳಾದ ಶಿವರಾಮ ಹಾಗೂ ಅವರ ಸಹೋದರಿ ರತ್ನಾವತಿ ಅವರು ಅಶಕ್ತರಾಗಿದ್ದು, ಅವರು ವಾಸಿಸುವ ಮನೆ ಶಿಥಿಲಗೊಂಡು ವಾಸಿಸಲು ಯೋಗ್ಯವಿಲ್ಲದೇ ಇದ್ದು, ಇದನ್ನು ಗಮನಿಸಿದ ಹರಿಹರ ಪಲ್ಲತ್ತಡ್ಕದ ಸಚಿನ್ ಕ್ರೀಡಾ ಸಂಘ ಪ್ರಮುಖ ದಾನಿಗಳ ಸಹಕಾರದಿಂದ ಅವರಿಗೆ ನೂತನ ಮನೆ ನಿರ್ಮಿಸಿ ಕೊಡಲು ನಿರ್ಧರಿಸಿದ್ದು, ಮಾ.13 ರಂದು ಭೂಮಿ ಪೂಜೆ ನೆರವೇರಿಸಲಾಯಿತು.

ಗಿರೀಶ್ ಆಚಾರ್ಯ ಪೈಲಾಜೆ ಭೂಮಿ ಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಚಿನ್ ಕ್ರೀಡಾ ಸಂಘದ ಅಧ್ಯಕ್ಷರಾದ ಪ್ರದೀಪ್ ಕಜ್ಜೋಡಿ ಹಾಗೂ ಸಂಘದ ಸದಸ್ಯರು ಮತ್ತು ದಾನಿಗಳು ಉಪಸ್ಥಿತರಿದ್ದರು.

Related Posts

error: Content is protected !!