Ad Widget

ಸುಳ್ಯ : ಸ. ಪ್ರ.ದರ್ಜೆ ಕಾಲೇಜಿನಲ್ಲಿ ಹೆಚ್ ಐ ವಿ ಮತ್ತು ಯುವಜನತೆ  ಕುರಿತು ಉಪನ್ಯಾಸ ಕಾರ‍್ಯಕ್ರಮ


ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿಯ ರಾಷ್ಟೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಕ್ಲಬ್ ಇದರ ವತಿಯಿಂದ ಹೆಚ್ ಐ ವಿ ಮತ್ತು ಯುವಜನತೆ  ಕುರಿತು ಉಪನ್ಯಾಸ ಕಾರ‍್ಯಕ್ರಮವು ಮಾ-೨೫ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಉಪನ್ಯಾಸ ಕರ‍್ಯಕ್ರಮವನ್ನು ತಾಲೂಕು ಆಸ್ಪತ್ರೆ ಸುಳ್ಯ ಇಲ್ಲಿಯ ಐಸಿಟಿಸಿ ಸಮಾಲೋಚಕರಾದ ಬಾಲಕೃಷ್ಣ ಕೆ ಇವರು ನಡೆಸಿಕೊಟ್ಟರು. ಕರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ ಜಯಶ್ರೀ, ಕೆ, ರಾಷ್ಟೀಯ ಸೇವಾ ಯೋಜನೆಯ ಘಟಕಾಧಿಕಾರಿಗಳಾದ ರಾಮಕೃಷ್ಣ ಕೆ.ಎಸ್, ಡಾ. ಲತಾ ಕೆ ಎನ್, ಘಟಕ ನಾಯಕರುಗಳಾದ ಸಾಕೇತ್ ಕೆ ಕೆ, ಸ್ಪೂರ್ತಿ ರೈ ಬಿ, ಪೃಥ್ವಿರಾಜ್ ಟಿ, ತೃಪ್ತಿ ಕೆ ಎಂ, ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕರ‍್ಯಕ್ರಮ ಆರಂಭಗೊಂಡಿತು. ವೀಣಾ ಎಸ್ ದ್ವಿತೀಯ ಬಿ.ಕಾಂ ಸ್ವಾಗತಿಸಿ, ಹಿತೇಶ್ ಕೆ ಡಿ ಪ್ರಥಮ ಬಿ.ಎ ವಂದಿಸಿದರು. ಭರತ್ ಕುಮಾರ್ ದ್ವಿತಿಯ ಬಿ.ಕಾಂ ಅತಿಥಿಗಳನ್ನು ಪರಿಚಯಯಿಸಿದರು. ಸ್ವಾತಿ ಪ್ರಥಮ ಬಿ.ಕಾಂ ಕರ‍್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!